ಜೆದ್ದಾ: ಈದ್ ಮಿಲನ್ ಆಚರಿಸಿದ ಭಟ್ಕಳದ ಜೆದ್ದಾ ಅಸೋಸಿಯೇಶನ್ |
ಪ್ರಕಟಿಸಿದ ದಿನಾಂಕ : 2008-10-09
ಇಸ್ಲಾಂ ಪ್ರವಚನಗಳು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಬೇಕು - ಮೌಲಾನಾ ಇಕ್ಬಾಲ್ ನಕ್ವಿ
ಜೆದ್ದಾ, ಅಕ್ಟೋಬರ್ 9: ಕಳೆದ ಅಕ್ಟೋಬರ್ ಆರನೆಯ ತಾರೀಖಿನಂದು ನಗರದ ರಮಾದಾ ಇಂಟರ್ ಕಾಂಟಿನೆಂಟಲ್ ಹೋಟೆಲಿನ ಸಭಾಂಗಣದಲ್ಲಿ ಜೆದ್ದಾ ಭಟ್ಕಳದ ನವಾಯತರ ಸಮುದಾಯ ಈದ್ ಮಿಲನ್ ಕಾರ್ಯಕ್ರಮ ವನ್ನು ಹಮ್ಮಿಕೊಂಡಿತ್ತು. ಸುಮಾರು ಇನ್ನೂರೈವತ್ತಕ್ಕೂ ಹೆಚ್ಚು ಜನರು ಉಪಸ್ಥಿತರಿದ್ದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರುಕ್ನುದ್ದೀನ್ ಜಾಹಿದ್ ಅವರು ವಹಿಸಿದ್ದರು. ಸೌದಿ ಅರೇಬಿಯಾಕ್ಕೆ ಉಮ್ರಾ ನಿರ್ವಹಿಸಲು ಆಗಮಿಸಿರುವ ಖ್ಯಾತ ಇಸ್ಲಾಮಿಕ್ ವಿದ್ವಾಂಸರಾದ ಮೌಲಾನ ಮುಲ್ಲಾ ಇಕ್ಬಾಲ್ ನಕ್ವಿಯವರು ವಿಶೇಶ ಅತಿಥಿಗಳಾಗಿ ಆಮಂತ್ರಿಸಲ್ಪಟ್ಟಿದ್ದರು. ಇನ್ನೋರ್ವ ವಿದ್ವಾಂಸರಾದ ಮೌಲಾನಾ ಅನ್ಸಾರ್ ಖತೀಬ್ ನದ್ವಿಯವರೂ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಮೌಲಾನಾ ಮೊಹಮ್ಮದ್ ಇಝ್ಹಾರ್ ರುಕ್ನುದ್ದೀನ್ ಅವರ ಕುರಾನ್ ಪಠಣದೊಂದಿಗೆ ಕಾರ್ಯಕ್ರಮವ್ ಪ್ರಾರಂಭವಾಯಿತು. ಜೆದ್ದಾ ಅಸೋಸಿಯೇಶನ್ ಸಂಘಟನೆಯ ಕಾರ್ಯದರ್ಶಿಗಳಾದ ಮೊಹಮ್ಮದ್ ಮುಕೀಮ್ ಹಲ್ಲಾರಿಯವರು ಕಾರ್ಯಕ್ರಮಕ್ಕೆ ಅತಿಥಿಗಳನ್ನು ಅಹ್ವಾನಿಸಿ ದರು. ಆ ಬಳಿಕ ಉಸಾಮಾ ಫಜ್ಲುರ್ ರಹಮಾನ್ ಅವರು ಹಲವು ನಾಅತ್ ಪದ್ಯಗಳನ್ನು ಸುಶ್ರಾವ್ಯವಾಗಿ ಹಾಡಿ ಎಲ್ಲರ ಮನಗೆದ್ದರು. ಸಂಘಟನೆಯ ನಿಕಟಪೂರ್ವ ಅಧ್ಯಕ್ಷರಾದ ಇಶಾಖ್ ಶಾಬಂದರಿಯವರೂ ಉಪಸ್ಥಿತರಿದ್ದು ಹಬ್ಬದ ಸಂತೋಷವನ್ನು ತಮ್ಮ ಮಾತುಗಳಲ್ಲಿ ವರ್ಣಿಸಿದರು.
ಆ ಬಳಿಕ ಮಾತನಾಡಿದ ಅತಿಥಿಗಳಾದ ಮೌಲಾನಾ ಇಕ್ಬಾಲ್ ನಕ್ವಿ ಯವರು ಇಸ್ಲಾಮ್ ಪ್ರವಚನಗಳು ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಬೇಕು, ಇಸ್ಲಾಮಿನ ತತ್ವಗಳನ್ನು ಜೀವನದಲ್ಲಿ ಅಳವಡಿಸಿ ಕೊಳ್ಳದೇ ಕೇವಲ ಪಠಣ ಮಾಡುವುದರಿಂದ ಪ್ರಯೋಜನವಿಲ್ಲ ಎಂದು ತಿಳಿಸಿದರು.
ಅವರ ಮಾತುಗಳಿಗೆ ತಮ್ಮ ಸಮರ್ಥನೆ ನೀಡುತ್ತಾ ಮೌಲಾನಾ ಅನ್ಸಾರ್ ಖತೀಬ್ ನಕ್ವಿಯವರು ಭಟ್ಕಳದ ಜಾಮಿಯಾ ಇಸ್ಲಾಮಿಯಾ ಸಂಘಟನೆಗೆ ಎಲ್ಲರನ್ನೂ ಆಹ್ವಾನಿಸಿದರು.
ಆ ಬಳಿಕ ಹಲವು ಮನರಂಜನಾ ಹಾಗೂ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು ಕೋಟೇಶ್ವರ್ ಶೋಯೆಬ್ ಅವರು ಲವಲವಿಕೆಯಿಂದ ನಡೆಸಿಕೊಟ್ಟರು. ಹಲವು ಅದೃಷ್ಟಶಾಲಿಗಳು ಬಹುಮಾನಗಳನ್ನು ಗೆದ್ದರು. ಮಹಿಳೆಯರಿಗಾಗಿ ಇಷಾಖ್ ಶಾಬಂದರಿಯವರ ಪುತ್ರಿ ಇಸ್ರಾ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಮಹಿಳೆಯರ ಮನಗೆದ್ದಿತು. ರಾಫೆಲ್ ಡ್ರಾ ಮೂಲಕ ಹಲವು ಬಹುಮಾನಗಳನ್ನು ವಿತರಿಸಲಾಯಿತು. ರಾಫೆಲ್ ಡ್ರಾ ಬಹುಮಾನಗಳನ್ನು ಯಾಸೀನ್ ಅಸ್ಕರಿಯವರು ಆಯೋಜಿಸಿದ್ದರು.
ಸ್ವಾದಿಷ್ಟ ಭೋಜನದೊಂದಿಗೆ ಕಾರ್ಯಕ್ರಮ ಸುಖಾಂತ್ಯ ಕಂಡಿತು.
ವರದಿಯ ವಿವರಗಳು |
 |
ಕೃಪೆ : ಭಟ್ಕಲೀಸ್ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-10-09
|
|
| Vikram Bhat, Dubai | 2008-11-10 | | ನಿಮ್ಮ ಸಲಹೆಗೆ ದನ್ಯವಾದಗಳು - ಸಂಪಾದಕ |
|