ಗುರುವಾರ, 08-01-2009

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ಕುವೈಟ್: ಅನಧಿಕೃತ ಅನಿವಾಸಿಗಳಿಗೆ ಸ್ವದೇಶಕ್ಕೆ ಮರಳಲು ಆಗ್ರಹ

ಕ್ಷಮಾದಾನದ ಅವಧಿಯ ಸದುಪಯೋಗ ಪಡಿಸಿಕೊಳ್ಳಲು ಕರೆ

ಕುವೈಟ್, ಅಕ್ಟೋಬರ್ 8:  ರಾಷ್ಟ್ರದಲ್ಲಿರುವ ಅನಧಿಕೃತ ಅನಿವಾಸಿಗಳಿಗೆ ಸ್ವದೇಶಗಳಿಗೆ ಮರಳಲು ಅಕ್ಟೋಬರ್ 15 ರ ವರೆಗೆ ಗಡುವನ್ನು ನೀಡಲಾಗಿದ್ದು ಈ ಅವಧಿಯೊಳಕ್ಕೆ ಕುವೈಟಿನಿಂದ ತಮ್ಮ ಸ್ವದೇಶಗಳಿಗೆ ಮರಳುವಂತೆ ಇಮ್ಮಿಗ್ರೇಶನ್ ವಿಭಾಗದ ಉಪನಿರ್ವಾಹಕರಾದ ಕರ್ನಲ್ ಖಾಲಿದ್ ಅಲ್ ಕಂದಾರಿಯವರು ಆಗ್ರಹಪಡಿಸಿದ್ದಾರೆ. ಕುವೈಟ್ ಅಮೀರ್ ಅವರು ನೀಡಿರುವ ಈ ಕ್ಷಮಾದಾನದ ಗಡುವು ಅಕ್ಟೋಬರ್ 15ಕ್ಕೆ ಮುಗಿಯಲಿದ್ದು ಆ ಬಳಿಕ ಯಾರಿಗೂ ಕೃಪೆ ತೋರಿಸಲಾಗುವುದಿಲ್ಲ ಹಾಗೂ ಅವರ ಮೇಲೆ ಉಗ್ರ ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಲ್ ಕಂದಾರಿಯವರು ತಿಳಿಸಿದ್ದಾರೆ.

ಈ ಅವಧಿಯಲ್ಲಿ ಹಲವಾರು ಅನಧಿಕೃತ ಅನಿವಾಸಿಗಳು ತಮ್ಮ ವಾಸ್ತವ್ಯವನ್ನು ಅಧಿಕೃತವಾಗಿಸಿದ್ದು ಇನ್ನೂ ಸಾವಿರಾರು ಜನರು ಅನಧಿಕೃತವಾಗಿಯೇ ಉಳಿದಿದ್ದಾರೆ.  ಅನಧಿಕೃತ ಅನಿವಾಸಿಗಳನ್ನು ಕೆಲಸಕ್ಕೆ ತೆಗೆದುಕೊಂಡವರಿಗೆ ವೀಸಾ ನೀಡಲಾಗುವುದಿಲ್ಲ ಹಾಗೂ ಇವರಿಗೆ ಕೆಲಸ ಕೊಡಿಸಿದ ಸಂಸ್ಥೆಯ ಲೈಸನ್ಸ್ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಕರ್ನಲ್ ಕಂದಾರಿ ಸ್ಪಷ್ಟಪಡಿಸಿದ್ದಾರೆ.

ಕುವೈಟಿನಲ್ಲಿ ಹಲವಾರು ಕಾರಣಗಳಿಂದ ತಮ್ಮ ಮಾಲಿಕರನ್ನು ತ್ಯಜಿಸಿ ಅನಧಿಕೃತ ಜೀವನ ನಡೆಸುವವರು ಇನ್ನೂ ಸಾವಿರಾರು ಜನರಿದ್ದಾರೆ.

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಕುವೈಟ್ ಟೈಮ್ಸ್
ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-10-08


ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕುವೈತ್]

 

 

 

©2007 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri