|
|
|
ರಾಮ ಕ್ಷತ್ರಿಯ ಸಂಘ, ಕುವೈಟ್-ಗಣೇಶ ಚತುರ್ಥಿ ಆಚರಣೆ |
ಪ್ರಕಟಿಸಿದ ದಿನಾಂಕ : 2008-09-29
ಕುವೈಟ್, ಸೆಪ್ಟೆಂಬರ್ ೨೯: ರಾಮ ಕ್ಷತ್ರಿಯ ಸಂಘ (RK Sangha, Kuwait ) ಸಮಾಜ ಬಾಂಧವರು ಗಣೇಶ ಚತುರ್ಥಿಯನ್ನು, ಇಲ್ಲಿನ ಜಿಲೀಬ್ ಅಲ್ ಶುಯೋಕ್ನಲ್ಲಿ ಕಿರಣ್ ನಾಯ್ಕ್ ಇವರ ಮನೆಯಲ್ಲಿ ವಿಜೃಂಭಣೆ ಯಿಂದ ಆಚರಿಸಿದರು.
ಪೂಜಾ ಕಾರ್ಯವನ್ನು ಸುರೇಶ್ ಶ್ಯಾಮರಾವ್ ನೇರಂಬಳ್ಳಿ ಇವರು ನೆರವೇರಿಸಿದರು. ಪೂಜೆಯ ಅಂಗವಾಗಿ ಭಜನೆ ಹಾಗೂ ಸಾಮೂಹಿಕ ಗಣೇಶ ಸ್ತೋತ್ರ ವನ್ನು ಜಪಿಸಲಾಯಿತು. ಅತಿಥಿಗಳಾಗಿ ಡಾ|ಸುರೇಂದ್ರ ನಾಯಕ್ ಹಾಗೂ ಪ್ರದೀಪ್ ದೇಸಾಯಿ ಕುಟುಂಬದವರು ಆಗಮಿಸಿದ್ದರು.
ಸತೀಶ್ ಮಲ್ಲಿಗೆಮಾಡು ಇವರಿಂದ ಕಾರ್ಯಕ್ರಮ ಆಯೋಜನೆ, ಏಮ್. ರವೀಂದ್ರ ಹಾಗೂ ದೇವರಾಜ್ ರಿಂದ ಕಾರ್ಯಕ್ರಮ ನಿರ್ವಹಣೆ, ಹಾಗೂ ಶ್ರೀಮತಿ ಪೂರ್ಣಿಮಾ ಕಿರಣ್ ನಾಯ್ಕ್ ಇವರು ಸಹಕರಿಸಿದರು.
ಚಿತ್ರ, ವರದಿ: ಮಂಜೇಶ್ವರ ಮೋಹನದಾಸ್ ಕಾಮತ್,
ವರದಿಯ ವಿವರಗಳು |
 |
ಕೃಪೆ : ಮೋಹನದಾಸ್ ಕಾಮತ್, ಕುವೈಟ್ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-09-29
|
|
|
|
|