ಶನಿವಾರ, 11-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಕಾಂಗ್ರೆಸ್ಸಿಗರಿಂದ ವಿನಾ ಕಾರಣ ನನ್ನ ಟಾರ್ಗೆಟ್ : ರಾಜೀನಾಮೆ ನೀಡಲು ನಾನೇನು ಅಶ್ಲೀಲತೆಯಲ್ಲಿ ತೊಡಗಿಲ್ಲ : ಕಾಂಗ್ರೆಸ್ ಆರೋಪಕ್ಕೆ ರಘುಪತಿಭಟ್ ಅಸಮಾಧಾನ
Latest news item ಅಶುದ್ದವಾದ ಸೇಂಟ್ ಮೇರಿಸ್ ದ್ವೀಪಕ್ಕೆ ಕಾಂಗ್ರೇಸ್ ನಿಂದ ಗಣಹೋಮ
Latest news item ಹೀಗೂ ಸಮರ್ಥನೆ; ಸಚಿವರು ಸೆಕ್ಸ್ ನೋಡಿದ್ದಾರೆ ಅಷ್ಟೆ 'ಮಾಡಿಲ್ಲ'
Latest news item ಸೆಕ್ಸ್ ಫಿಲ್ಮ್ ಸವದಿ ನೋಡುವುದಕ್ಕೂ ಮುನ್ನ ಹಲವು ಶಾಸಕರು ನೋಡಿದ್ದರಂತೆ. ನೋಡಿ ಮೂರ್ಛೆ ಹೋದ ಶಾಸಕ ಯಾರು?
Latest news item ವಿಜೃಂಬಣೆಯಿಂದ ಸಂಪನ್ನಗೊಂಡ ಹೆರ್ಗ ಶ್ರೀ ದುರ್ಗಾಪರಮೇಶ್ವರಿ ದೇವಳದ ವಾರ್ಷಿಕ ಜಾತ್ರಾ ಮಹೋತ್ಸವ
Latest news item `ಹಾಲ್ ಆಫ್ ಫೇಮ್'ಗೆ ಗಾವಸ್ಕರ್
Latest news item ಅಶ್ಲೀಲ ದೃಶ್ಯ ವೀಕ್ಷಣೆ; ನಿಲುವಳಿ ಸೂಚನೆಗೆ ಪ್ರತಿಪಕ್ಷಗಳ ಪಟ್ಟು; ಪರಿಷತ್ ಕಲಾಪ ಅನಿರ್ದಿಷ್ಟಾವಧಿ ಮುಂದೂಡಿಕೆ; ಗದ್ದಲ ಕೋಲಾಹಲದ ನಡುವೆ ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಅಂಗೀಕಾರ
Latest news item ನಾಪತ್ತೆಯಾಗಿದ್ದ ವಜ್ರಾಭರಣ ವ್ಯಾಪಾರಿ ಭೀಕರ ಕೊಲೆ!; ಮೂವರು ಆರೋಪಿಗಳ ಸೆರೆ | ನಿರ್ಲಕ್ಷ್ಯ ಮುಳುವಾಯಿತೇ?(updated)
Latest news item ಬ್ಲೂಫಿಲಂ ವೀಕ್ಷಣೆ: ಸಚಿವರು ರಾಜೀನಾಮೆ ನೀಡಿದ್ದೇ ತಪ್ಪು: ಈಶ್ವರಪ್ಪ | ಚಿಲ್ಲರೆ ರಾಜಕೀಯ: ಸದಾನಂದ ಗೌಡ - ತ್ರಿವಳಿಗಳ ಬೆಂಬಲಕ್ಕೆ ನಿಂತ ಬಿಜೆಪಿ
Latest news item ಬ್ಲೂಫಿಲಂ ವೀಕ್ಷಣೆ: ವಿಪಕ್ಷಗಳಿಂದ ರಾಜ್ಯಪಾಲರ ಭೇಟಿ; ತಕ್ಷಣವೇ ಬಿಜೆಪಿ ಸರಕಾರವನ್ನು ವಜಾಗೊಳಿಸುವಂತೆ ಮನವಿ
Latest news item ಕಿದಿಯೂರ್ ಹೋಟೆಲ್ ರಜತ ಸಂಭ್ರಮ: ವೈಭವದಿಂದ ನಡೆದ ನಾಗಮಂಡಲೋತ್ಸವ
Latest news item ಕರಾವಳಿ ಕಾಲೇಜು ಕ್ರೀಡೋತ್ಸವ - ವಿಧ್ಯಾರ್ಥಿಗಳಿಗೆ ತಂತ್ರಜ್ಞಾನ ಸೌಲಭ್ಯಗಳ ಸದುಪಯೋಗಕ್ಕೆ ಎಸ್.ಗಣೇಶ್ ರಾವ್ ಕರೆ.
Latest news item ಸಚಿವರ ನೀಲಿ ಖಯಾಲಿಗೆ ಆಕ್ರೋಶ : ಉಡುಪಿಯಲ್ಲಿ ಕಾಂಗ್ರೆಸ್ ವಿನೂತನ ಪ್ರತಿಭಟನೆ
Latest news item ಸಂವಿಧಾನವನ್ನು ಅಪಮಾನಿಸಿರುವ ಇಂತಹವರನ್ನು ಜೈಲಿಗಟ್ಟಿ’: ಅಣ್ಣಾ ಹಜಾರೆ
Latest news item ಸಚಿವರ ಸೆಕ್ಸ್ ಫಿಲಂ ವೀಕ್ಷಣೆ: 'ತ್ರಿ ಡರ್ಟಿ' ಮಂತ್ರಿಗಳ ಬಗ್ಗೆ ಬಾಲಿವುಡ್ ಪ್ರತಿಕ್ರಿಯೆ
Latest news item "ಛಲಪತ್ತಿನ ಕಿತಾಪತಿ" ನಾಟಕ ಮುಹೂರ್ತ
Latest news item ಹೆಸರಾಂತ ಬ್ಯಾಂಕರ್ ಟಿ.ಜೆ.ಎ ಗಾಣಿಗ ದುಬಾಯಿಗೆ ಭೇಟಿ
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ಕುವೈತ್ ಕನ್ನಡ ಕೂಟದ ರಜತ ಮಹೋತ್ಸವ ಹಾಗೂ ಕರ್ನಾಟಕ ರಾಜ್ಯೋತ್ಸವ ಜೋಡಿ ಸಮಾರಂಭ { Updated with more pics }

{ಚಿತ್ರ ವರದಿ: ಮೋಹನ್ ದಾಸ್ ಕಾಮತ್ ಮಂಜೇಶ್ವರ್)

ರಜತ ಕಂಡ ಕುವೈತ್ ಕನ್ನಡ ಕೂಟ

ಕುವೈತ್, ನವಂಬರ್ ೧೩: ಕುವೈತ್ ಕನ್ನಡ ಕೂಟದ ರಜತ ಮಹೋತ್ಸವ ಹಾಗೂ ಕ ರ್ನಾಟಕ ರಾಜ್ಯೋತ್ಸವದ ಜೋಡಿ ಸಮಾರಂಭವನ್ನು ಇಲ್ಲಿನ ಅಮೇರಿಕನ್ ಇಂಟರ್‌ ನ್ಯಾಷನಲ್ ಸ್ಕೂಲಿನಲ್ಲಿ ಆಚರಿಸಲಾಯಿತು.

ಬೆಳಿಗ್ಗೆ ೯ ಘಂಟೆಗೆ ಆಗಮಿಸಿದ ಮಹಾಮಹಿಮ ಕುವೈತಿನಲ್ಲಿರುವ ಭಾರತದ ರಾಯಭಾರಿ ಶ್ರೀ ಅಜಯ್ ಮಲ್ಹೋತ್ರ ಮತ್ತು ಕರ್ನಾಟಕದಿಂದ ಆಗಮಿಸಿದ ಅನಿವಾಸಿ ಭಾರತೀಯ ವೇದಿಕೆಯ ಉಪಾಧ್ಯಕ್ಷರಾದ ಶ್ರೀ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರವರನ್ನು ಮಂಗಳ ಕುಂ ಭದೊಂದಿಗೆ ಸುಮಂಗಲಿಯರು ಚಂಡೆ-ಮದ್ದಳೆ ಮೊಳಗಿವಿಕೆಯ ನಡುವೆ ಮುನ್ನಡೆಸಿದ ರು.

ಕೂಟದ ಅಧ್ಯಕ್ಷರಾದ ಶ್ರೀ ಸತೀಶ್ ಚ೦ದ್ರ ಶೆಟ್ಟರು, ಕೂಟದ ಕಾರ್ಯಕಾರಿ ಸಮಿತಿಯ ಸದಸ್ಯರು, ಪೂರ್ವ ಅಧ್ಯಕ್ಷರುಗಳು ಮತ್ತು ಸರ್ವ ಸದಸ್ಯರು ಮುಖ್ಯ ಅತಿಥಿಗಳನ್ನು ಆತ್ಮೀ ಯವಾಗಿ ಬರಮಾಡಿಕೊಂಡು ಶಾಲೆಯ ಆವರಣದಲ್ಲಿ ಮೆರವಣಿಗೆಯ ಮೂಲಕ ಸಭಾಂಗ ಣಕ್ಕೆ ಕರೆತಂದರು.

ಕೂಟದ ಸದಸ್ಯರು ಹಾಡಿದ ‘ಜಯಭಾರತ ಜನನಿಯ ತನುಜಾತೆ’ ನಾಡಗೀತೆಗೆ ನಾಡಿ ನ ವಿವಿಧ ಕಾಲದ ಗಣ್ಯರ ವೇಷದಲ್ಲಿದ್ದ ಕೂಟದ ಮಕ್ಕಳು ವಿಶೇಷ ಮೆರಗನ್ನಿತ್ತರು. ತದ ನಂತರದ ನಮನ ನೃತ್ಯ ಕೂಟದ ಹೆಣ್ಣುಮಕ್ಕಳಿಂದ ನ್ರತ್ಯ ಕಾರ್ಯಕ್ರಮವು ಮನಮೋ ಹಕವಾಗಿ ಮೂಡಿಬಂತು. ಹಚ್ಚೇವು ಕನ್ನಡದ ದೀಪ ಗೀತೆಯ ಹಿನ್ನೆಲೆಯಲ್ಲಿ ಕೂಟದ ರಜ ತಮಹೋತ್ಸವ ವರ್ಷದ ಕಾರ್ಯಕಾರಿ ಮತ್ತಿತರ ಸಮಿತಿ ಸದಸ್ಯರು ದೀಪಾರಾಧನೆ ಯನ್ನು ಮಾಡಿದರು.

ಕೂಟದ ನಡೆದುಬಂದ ಹಾದಿ ಎಂಬ ಶೀರ್ಷಿಕೆಯಡಿ ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಕೂಟ ನಡೆಸಿಕೊಂಡು ಬಂದ ವಿವಿಧ ಕಾರ್ಯಕ್ರಮಗಳ ಒಂದು ಪಕ್ಷಿನೋಟವನ್ನು ಪರದೆ ಯಮೇಲೆ ಪ್ರದರ್ಶಿಸಲಾಯಿತು.

ರಜತಮಹೋತ್ಸವ ಮತ್ತು ಕರ್ನಾಟಕ ರಾಜ್ಯೋತ್ಸವ ಸಮಾರಂಭದ ಸಂಚಾಲನೆಯನ್ನು ಪ್ರಾರಂಭಿಸಿದ ಶ್ರೀಮತಿ ಶಶಿಕಲಾ ರಮೇಶ್ ರವರು ದಿನದ ಕಾರ್ಯಕ್ರಮಗಳ ಪರಿಚಯ ನೀಡಿದರು. ಸಮಾರಂಭಕ್ಕೆ ಮಹಾಮಹಿಮರನ್ನು ಸ್ವಾಗತಿಸಿದ ಅಧ್ಯಕ್ಷ ಶ್ರೀ ಸತೀಶ್ಚಂದ್ರ ಶೆಟ್ಟರು, ಕೂಟದ ರಜತಮಹೋತ್ಸವದ ಸ್ಥೂಲ ಪರಿಚಯದ ಮೂಲಕ ಮುಖ್ಯ ಅತಿಥಿ ಗಳನ್ನು ಮತ್ತು ಎಲ್ಲಾ ಆಮಂತ್ರಿತರನ್ನು ಸ್ವಾಗತಿಸಿದರು.

ಶ್ರೀ ಅಜಯ್ ಮಲ್ಹೋತ್ರರವರು ಮಾತನಾಡಿ ಇಪ್ಪತ್ತೈದು ವರ್ಷ ಪೂರೈಸಿದ ಕೂಟಕ್ಕೆ ಶುಭ ಹಾರೈಸಿ ಕಲೆ ಸಂಸ್ಕೃತಿ ಆಧಾರಿತ ಕಾರ್ಯಕ್ರಮಗಳಲ್ಲದೇ ಕುವೈತಿನಲ್ಲಿರುವ ಭಾರತೀಯರ ಮತ್ತು ನಾಡಿನಜನತೆಯ ಒಳಿತಿಗಾಗಿ ಸಾಮಾಜಿಕ ಕಾರ್ಯಕ್ರಮಗಳನ್ನೂ ನಡೆಸುತ್ತಾ ಬಂದಿರುವ ಕುವೈತ್ ಕನ್ನಡ ಕೂಟಕ್ಕೆ ಎಲ್ಲ ಸಹಕಾರದ ಭರವಸೆಯನ್ನು ನೀಡಿದರು.

ಕುವೈತ್ ಕನ್ನಡ ಕೂತದ ರಜತ ಮಹೋತ್ಸವ ನೆನಪಿನ ಸಂಚಿಕೆಯನ್ನು ಬಿಡುಗಡೆ ಮಾಡಿದ ಮುಖ್ಯ ಅತಿಥಿಗಳಾದ ಕ್ಯಾ. ಗಣೇಶ್ ಕಾರ್ಣಿಕ್‌ರವರು ಕೂಟದ ಉತ್ಸಾಹೀ ಚಟುವಟಿಕೆಗಳನ್ನು ಪ್ರಶಂಸಿಸಿ ಇದೊಂದು ತನ್ನ ಜೀವನದ ಅವಿಸ್ಮರಣೀಯ ದಿನವೆಂ ದರು. ತಮ್ಮ ಜೀವನ ಮತ್ತು ತಮ್ಮವರ ಏಳಿಗೆಗಾಗಿ ಪರದೇಶಕ್ಕೆ ಬಂದು ನೆಲೆಸಿ ಕನ್ನಡ ಸೇವೆಯನ್ನು ಮಾಡುವುದರ ಜೊತೆಗೆ ನಾಡಿನ ಸಾಮಾಜಿಕ ಬೇಕುಗಳಿಗೆ ಸ್ಪಂದಿಸುತ್ತಿ ರುವುದು ಕೂಟದ ಹಿರಿಮೆ ಎಂದರು.

ಅನಿವಾಸಿ ಭಾರತೀಯ ವೇದಿಕೆಯ ಪಾತ್ರವನ್ನು ವಿವರಿಸುತ್ತಾ ಕರ್ನಾಟಕ ಹೇಗೆ ದೇಶ ದಲ್ಲೇ ಮಾದರಿಯಾಗಿ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ ಎಂಬುದನ್ನು ಸಭಿಕರಿಗೆ ವಿವರಿಸಿದರು. ಹೊರ ದೇಶ, ಅದರಲ್ಲೂ ಕೊಲ್ಲಿ ರಾಷ್ಟ್ರಗಳಿಗೆ ತೆರಳುವ ನಾಡಿನ ಜನತೆಗೆ ಸಹಾಯಕವಾಗುವ, ಅವರಲ್ಲಿ ಆ ದೇಶದ ಬಗ್ಗೆ ಪೂರ್ವ ತಿಳುವಳಿಕೆಗಳನ್ನು ಮೂಡಿಸುವ ತರಬೇತು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಕರ್ನಾಟಕ ಸರ್ಕಾರದ ಯೋಜನೆ ಗಳ ಮಾಹಿತಿ ನೀಡಿದರು.

ಅನಿವಾಸಿ ಭಾರತೀಯ ವೇದಿಕೆಯ ಭವಿಷ್ಯದ ಯೋಜನೆಗಳು ಜ್ಜಾನಾಧಾರಿತ ಮಾನವ ಸಂಪನ್ಮೂಲದ ವಿಶೇಷ ಬಳಕೆಯನ್ನು ಅವಲಂಬಿಸಿರುತ್ತವೆ ಎಂದೂ ತಿಳಿಸಿದರು. ಕೂಟದ ಕಾರ್ಯಕ್ರಮಗಳಿಗೆ ನೆರವಾಗಲು ಮತ್ತು ವಿಶೇಷ ಕಾರ್ಯಕ್ರಮ ಪ್ರಸ್ತುತಿಗೆ ಕರ್ನಾಟಕ ದಿಂದ ಆಗಮಿಸಿದ್ದ ಪ್ರಭಾತ್ ಕಲಾವಿದರನ್ನು ‘ಪ್ರಭುದ್ಧ ಕಲಾವಿದರು’ ಎಂದು ಬಣ್ಣಿಸಿದರು.

ಕರ್ನಾಟಕದಲ್ಲಿರುವ ಮತ್ತು ಕುವೈತಿನಲ್ಲಿರುವ ವಿಶೇಷ ಆಮಂತ್ರಿತ ಕೂಟದ ಪೂರ್ವ ಅಧ್ಯಕ್ಷರುಗಳು ತಮ್ಮ ಅನುಭವ ಮತ್ತು ಅನಿಸಿಕೆಗಳನ್ನು ಹಂಚಿಕೊಂಡರು. ಅದರಲ್ಲೂ ಇಪ್ಪತ್ತೈದು ವರ್ಷಕ್ಕೆ ಪೂರ್ವದಲ್ಲಿ ಕನ್ನಡ ಕೂಟವನ್ನು ಕುವೈತಿನಲ್ಲಿ ಹುಟ್ಟುಹಾಕಿದ ದಿನ ಗಳನ್ನು ಇಂದಿನ ರಜತ ಸಂಭ್ರಮದಲ್ಲಿರುವ ಕೂಟದೊಂದಿಗೆ ತಾಳೆಹಾಕಿ ನೆನೆದು ಡಾ. ತಾರಕನಾಥರು ಮನತುಂಬಿ ಆಡಿದ ಅನುಭವದ ಮಾತುಗಳು ಸಭಿಕರ ಮನಮುಟ್ಟು ವಂತಿದ್ದವು.

ಈ ಸಂದರ್ಭದಲ್ಲಿ ಪೂರ್ವಾಧ್ಯಕ್ಷ ಶ್ರೀಯುತರುಗಳಾದ ಗೋಪೀನಾಥ್, ಶ್ರೀನಿವಾಸ ಮೂ ರ್ತಿ ಮತ್ತು ಎಮ್.ಎನ್.ರೈ ಸಹ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾ ಕೂಟಕ್ಕೆ ಶುಭಕೋರಿದರು. ಕೂಟದ ವಿಶೇಷ ಆಮಂತ್ರಿತ ಅತಿಥಿಯಾಗಿ ಉದಯವಾಣಿ ಪತ್ರಿಕೆಯ ಸುದ್ದಿಸಂಪಾದಕರಾದ ಶ್ರೀ ಮನೋಹರ್ ಪ್ರಸಾದ್ ರವರು ಆಗಮಿಸಿ ಕೂಟದ ಕಾರ್ಯ ಕ್ರಮಗಳ ಚೊಕ್ಕ ಪ್ರಸ್ತುತಿ ಮತ್ತು ಕೂಟದ ಕಳೆದ ಇಪ್ಪತ್ತೈದು ವರ್ಷಗಳ ಚಟುವಟಿಕೆ ಗಳನ್ನು ಪ್ರಶಂಸಿದರು.

ಡಿ.ವಿ.ಜಿ. ಯವರ ‘ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು..’ ಎಂಬುದ ನ್ನು ಕುವೈತ್ ಕನ್ನಡ ಕೂಟದ ಪೂರ್ವ ಅಧ್ಯಕ್ಷರ ಅನುಭವ ಹೇಗೆ ವರ್ತಮಾನದ ಯುವ ಕೂಟ ಸದಸ್ಯ ಬಳಗ ಉಪಯೋಗಿಸಿಕೊಂಡು ಹೆಮ್ಮರವಾಗಿದೆ ಎಂಬುದನ್ನು ವಿಶ್ಲೇಷಿಸಿ ದರು.

ಕೂಟದ ಸಾಂಸ್ಕೃತಿಕ ಸಂಜೆಯ ಬಗ್ಗೆ ಮತ್ತು ಕೂಟದ ಸದಸ್ಯರು ಹಾಗೂ ಮಕ್ಕಳ ಮನ ರಂಜನಾ ಕಾರ್ಯಕ್ರಮಗಳ ಬಗ್ಗೆ ಮಾತನಾಡಿ ತಾನೂ ಕುವೈತಿನಲ್ಲೊಂದು ಉದ್ಯೋಗ ಮಾಡುತ್ತಿದ್ದಿದ್ದರೆ ಚೆನ್ನಿತ್ತು ಅನ್ನುವ ಮನೋಭಿಲಾಶೆಯನ್ನು ವ್ಯಕ್ತಪಡಿಸಿದರು. ಈ ಸಂದ ರ್ಭದಲ್ಲಿ ನೆನಪಿನ ಕಾಣಿಕೆ ನೀಡುವ ಮೂಲಕ ಎಲ್ಲ ಆಮಂತ್ರಿತರನ್ನು ಕೂಟವು ಸನ್ಮಾನಿ ಸಿತು.

ಸಾಂಸ್ಕೃತಿಕ ಸಂಜೆಯ ಕಾರ್ಯಕ್ರಮಗಳನ್ನು ಪ್ರಭಾತ್ ಕಲಾವಿದರು ತಮ್ಮ‘ಹಾಸ್ಯ’ ದ ಮೂಲಕ ಪ್ರಾರಂಭಿಸಿದರು. ಆನಂತರ ಕೂಟದ ಮಹಿಳೆಯರ ಅಷ್ಟಲಕ್ಷ್ಮಿ ನೃತ್ಯರೂಪಕ ಎಂಟು ಗುಣವಿಶೇಷಗಳ ಲಕ್ಷ್ಮಿಯ ರೂಪಗಳನ್ನು ದರ್ಶಿಸುವ ಪ್ರಯತ್ನವಾಗಿತ್ತು. ಬೇಲೂ ರಿನ ಶಿಲಾಬಾಲಿಕೆಯರನ್ನು ನೆನಪಿಸುವ ‘ಶಿವಾಮೃತ’ ನೃತ್ಯವನ್ನು ಕೂಟದ ಶ್ರೀಮತಿ ರಂಗಶ್ರೀ ಮಲ್ಲೂರ್ ರವರು ಪ್ರಸ್ತುತಪಡಿಸಿದರು.

ಗುಬ್ಬಿ ಬೆಳಗಿನ ಚಿಲಿಪಿಲಿಯನ್ನು ಮಕ್ಕಳಲ್ಲಿ ಎಂತಹ ಮನದ ಮುದಕ್ಕೆ ಕಾರಣವಾಗುತ್ತದೆ ಎಂಬುದನ್ನು ‘ಗುಬ್ಬಿ-ಗುಬ್ಬಿ’ ಹಾಡಿಗೆ ನರ್ತಿಸುವ ಮೂಲಕ ಕೂಟದ ಪುಟಾಣಿಗಳು ಪ್ರದ ರ್ಶಿಸಿ ಸಭಿಕರ ಮೆಚ್ಚುಗೆಗೆ ಪಾತ್ರರಾದರು. ಹೀಗೆಯೇ ಕೋಲಾಟ, ನವಿಲು ನೃತ್ಯ, ಮಕ್ಕಳ ಸೂತ್ರದ ಬೊಂಬೆ ನೃತ್ಯ ಕೂಟದ ಕಲಾವಿದರಿಂದ ಪ್ರಸ್ತುತವಾಯಿತು. ನಾಗರಹೊಳೆಯ ಅಮ್ಮಾಲೆ ಚಲನಚಿತ್ರ ಗೀತೆಗೆ ಮನಮೋಹಕವಾಗಿ ಕುಣಿದು ಕೂಟದ ಮಕ್ಕಳು ಎಲ್ಲರ ಮನಸೂರೆಗೊಂಡರು.

ಪ್ರಭಾತ್ ಕಲವಾದರು ಪ್ರಸ್ತುತ ಪಡಿಸಿದ ಕೃಷ್ಣಲೀಲೆ ಕೃಷ್ಣನ ಗೋಕುಲವಾಸದ ವಿವಿಧ ಘಟನಾವಳಿಗಳ ರಮ್ಯ ನೃತ್ಯರೂಪಕವಾಗಿತ್ತು. ಪ್ರಭಾತ್ ಕಲಾವಿದರು ಮತ್ತು ಕೂಟದ ಸದಸ್ಯರು ಕೂಡಿ ಜಂಟಿಯಾಗಿ ಪ್ರಸ್ತುತ ಪಡಿಸಿದ ಕುವೆಂಪುರವರ ಕೃತಿ ಅಧಾರಿತ ನೃತ್ಯ ರೂಪಕ ಬೊಮ್ಮನ ಹಳ್ಳಿಯ ಕಿಂದರಿಜೋಗಿ ಮರೆಯಲಾರದ ಅನುಭವವಾಗಿತ್ತು. ನಂತ ರ ವಿವಿಧ ಕಾರ್ಯಕ್ರಮಗಳ ಕೂಟದ ನಿರ್ದೇಶಕರನ್ನು ಸನ್ಮಾನಿಸಿ ನೆನೆಪಿನ ಕಾಣಿಕೆಯ ನ್ನು ನೀಡಲಾಯಿತು.

ರಾತ್ರಿ ಆಕರ್ಷಣೆಯಾಗಿ ಪ್ರಭಾತ್ ಕಲಾವಿದರ ಧರ್ಮ ಭೂಮಿ ಭಾರತದ ಅಲೆಕ್ಸಾಂಡರ್ ಭೇಟಿಯ ಕಾಲದ ವೈಭವನ್ನು, ಪೌರಸ್ಸನ ಶೌರ್ಯ, ಆತ್ಮಾಭಿಮಾನ ಮತ್ತು ದೇಶಪ್ರೇಮ ವನ್ನು ಪ್ರದರ್ಶಿಸಿದ್ದೇ ಅಲ್ಲದೇ ಭಾರತದ ಧರ್ಮ, ಸಂಸ್ಕೃತಿಗಳನ್ನು ಅಲೆಕ್ಸಾಂಡರಿನಿಗೆ ಪರಿಚಯಿಸುವ ಮನೋಜ್ಜ ನಾಟಕವಾಗಿ ಪ್ರದರ್ಶಿತವಾಯಿತು. ಇದೇ ಕಲಾವಿದರ ದಶಾ ವತಾರ ವಿವಿಧ ವಿಷ್ಣುವಿನ ಅವತಾರಗಳನ್ನು ನೃತ್ಯರೂಪಕ ಮಾಧ್ಯಮದಲ್ಲಿ ಪ್ರದರ್ಶಿಸುವ ಪ್ರಯತ್ನವಾಗಿತ್ತು.

ಎಲ್ಲ ಕಾರ್ಯಕ್ರಮಗಳ ಕಳಸಪ್ರಾಯವಾಗಿ ಮೂಡಿಬಂದ ಕಾರ್ಯಕ್ರಮ ಕನ್ನಡನಾಡಿನ ಸುಪ್ರಸಿದ್ಧ ಪುಣ್ಯಕೋಟಿಯ ಕಥೆ. ಕೂಟದ ಸದಸ್ಯರೊಂದಿಗೆ ಒಂದು ವಾರಕಳೆದ ಪ್ರಭಾ ತ್ ಕಲಾವಿದರ ಶ್ರೀ ಹರೀಶ್ ಮತ್ತು ಶ್ರೀಮತಿ ದೀಪಶ್ರೀ ಹರೀಶ್ ಮಕ್ಕಳು ಮತ್ತು ಹಿರಿಯ ಕೂಟದ ಸದಸ್ಯರಿಗೆ ತರಬೇತಿ ನೀಡಿದ್ದಲ್ಲದೇ, ಕಿಂದರಿಜೋಗಿ, ರಾಮ ಮತ್ತು ಕೃಷ್ಣನ ಪಾತ್ರದಲ್ಲಿ ಹರೀಶ್ ಎಲ್ಲರ ಮನಸುರೆಗೊಂಡರು.

ದೀಪಶ್ರೀಯವರ ಜಾನಕಿ ಮತ್ತು ಪುಣ್ಯಕೋಟಿ ಪಾತ್ರಗಳಿಗೆ ಜೀವತುಂಬಿ, ಪುಣ್ಯಕೋಟಿ ಯಾಗಿ ಕಂದನನ್ನು ಬೀಳ್ಕೊಡುವ ದೃಶ್ಯದಲ್ಲಿ ಸಭಿಕರು ಕಣ್ತುಂಬಿ ಬರುವಂತಹ ಮನೋ ಜ್ಜ ಅಭಿನಯ ನೀಡಿದರು.

ಕಾರ್ಯಕ್ರಮದ ಕಡೆಯಲ್ಲಿ ಪ್ರಭಾತ್ ಕಲಾವಿದರ ಶ್ರಮ ಮತ್ತು ಸಹಾಯವನ್ನು ಶ್ಲಾಘಿಸಿ, ನೆನಪಿನ ಕಾಣಿಕೆಯನ್ನು ನೀಡಿ ಸನ್ಮಾನಿಸಲಾಯಿತು.

ದಿನವಿಡೀ ಪ್ರೇಕ್ಷಕಗಣದ ಮನಸೂರೆಗೊಂಡ ಕಾರ್ಯಕ್ರಮಗಳ ನಂತರ ಕೂಟದ ಕಾರ್ಯ ಕಾರಿ ಸಮಿತಿಯ ಪಧಾನ ಕಾರ್ಯದರ್ಶಿಗಳಾದ ಶ್ರೀ ಸಂತೋಷ ಕುಲಕರ್ಣಿಯವರು ವಂದನಾರ್ಪಣೆ ಮಾಡಿದರು, ಸಮಾರಂಭ ರಾಷ್ಟ್ರಗೀತೆಯೊಂದಿಗೆ ಸಮಾಪ್ತಿಯಾಯಿತು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಮೋಹನ್ ದಾಸ್ ಕಾಮತ್
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2009-11-16 00:00:00

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕುವೈತ್]

»ದಾಸ ಜಯಂತಿಯಂದು ಕುವೈತ್ ಲ್ಲಿ ಖ್ಯಾತ ಹಿಂದೂಸ್ತಾನಿ ಗಾಯಕ ಶಂಕರ್ ಶ್ಯಾನುಭಾಗ್ ರಿಂದ ಸಂಕೀರ್ತನ ಕಾರ್ಯಕ್ರಮ
»ತುಳುಕೂಟ ಕುವೈತ್ ವತಿಯಿಂದ ಎ.ಕೆ ರವೀಂದ್ರರಿಗೆ ಸನ್ಮಾನ
»ಕವನ ಬರೆದು ಗೆಳೆಯರ ಕಣ್ಣಾಲಿ ತುಂಬಿಸಿದ್ದ ದೀಪಾಲಿ
»ಕುವೈತ್: ರಸ್ತೆ ಅಪಘಾತ: ಭಾರತದ ಹಾಡುಗಾರ್ತಿ ದೀಪಾಲಿ ವಿಧಿವಶ
»ತುಳುಕೂಟ ಕುವೈತ್- ’ಕ್ಯಾಲೆಂಡರ್ 2012' ಬಿಡುಗಡೆ
»ಕುವೈತ್ ಕನ್ನಡ ಕೂಟದ ನೂತನ ಕಾರ್ಯಕಾರಿ ಸಮಿತಿ - ಅದ್ಯಕ್ಷರಾಗಿ ಡಾ.ಸುರೇಂದ್ರ ನಾಯಕ್ ಕಟಪಾಡಿ ಆಯ್ಕೆ
»ಕುವೈಟ್‌ನಲ್ಲಿ ನವಚೇತನ ಯುವಕ ಮಂಡಲ ಕುವೈಟ್ ಇದರ ವತಿಯಿಂದ ಕ್ರಿಸ್‌ಮಸ್ ಹಬ್ಬ ಮತ್ತು ಹೊಸ ವರ್ಷ-2012ರ ಆಚರಣೆ ಸಮಾರಂಭ
»ಕುವೈಟ್ ಕೇರಳ ಮುಸ್ಲಿಂ ಅಸೋಸಿಯೇಶನ್ (KKMA)ದಕ್ಷಿಣ ಕನ್ನಡ ಶಾಖೆ ವತಿಯಿಂದ ಕುಟುಂಬ ವಿಹಾರ ಕೂಟ
»ಕುಟುಂಬ ಕಲ್ಯಾಣ ಯೋಜನೆ ಅಡಿಯಲ್ಲಿ ಕುವೈತ್ ಕೇರಳ ಮುಸ್ಲಿಂ ಅಸೋಸಿಯೇಶನ್ (KKMA). ದಕ್ಷಿಣ ಕನ್ನಡ ಘಟಕದ ಮ್ರತ ಸದಸ್ಯರ ಕುಟುಂಬಕ್ಕೆ ಸಹಾಯ ಧನ ಬಿಡುಗಡೆ
»ಕುವೈಟ್ ತುಳುಕೂಟದ ಅಧ್ಯಕ್ಷರಾಗಿ ರಮೇಶ್ ಕಿದಿಯೂರು ಅವಿರೋಧ ಆಯ್ಕೆ
»ತುಳುಕೂಟ ಕುವೈಟ್ - ರಕ್ತದಾನ ಶಿಬಿರ 11-11-11
»ಬಂಟರ ಸಂಘ ಕುವೈಟ್-ಯಕ್ಷಗಾನ ವೈಭವ ಹಾಗೂ ವೈವಿಧ್ಯಮಯ ಕಾರ್ಯಕ್ರಮ ’ಬಂಟಾಯನ-2011’
» ಬಂಟ ಹಿತಚಿಂತಕರ ಸ್ನೇಹಕೂಟ
» ಕುವೈಟ್ ಬಂಟ ಹಿತಾಶಕ್ತಿಗಳಿಂದ ಬಂಟ ಕುಟುಂಬಕ್ಕೆ ಆರ್ಥಿಕ ಸಹಾಯ
»ಕುವೈಟ್: ಸ್ಫೋಟ-ತಮಿಳುನಾಡಿನ ನಾಲ್ವರು ಬಲಿ
»ಏರಿಂಡಿಯಾ ವಿಮಾನ ಟೈರ್‌ ಸ್ಫೋಟ: ಅಪಾಯವಿಲ್ಲ
»KD500 salary for dependent visa?
»ಕಿರಿಯ ವಯಸ್ಸಿನ ಬ್ಲ್ಯಾಕ್ ಬೆಲ್ಟ್ ವಿಜೇತೆ ರಾನಿಯಾ
»ಕುವೈತ್‌ನಲ್ಲಿ ಕರ್ನಾಟಕ ರಾಜ್ಯ ವಾಲಿಬಾಲ್ ಟೂರ್ನಮೆಂಟ್
»ಕುವೈಟ್ : ಏ. 29 ರ೦ದು ತುಳುಕೂಟದ ವತಿಯಿ೦ದ ರಸಮ೦ಜರಿ ಕಾರ್ಯಕ್ರಮ
»ಅನ್ಸಾರಿಯ ಅನಾಥಾಲಯದ ಕುವೈತ್ ಯುನಿಟ್ ತುರ್ತು ಸಭೆ ಮತ್ತು ಪ್ರಧಾನ ಕಾರ್ಯದರ್ಶಿ ಅಶ್ರಫ್ ಸುಳ್ಯ ರವರಿಗೆ ಬೀಳ್ಕೊಡುಗೆ ಸಮಾರಂಭ
»ಕುವೈಟಿನಲ್ಲಿ ಪೂರ್ವಜನ್ಮಯಾನ ಶಿಬಿರ
»ಕುವೈತ್ : ಮು೦ದಿನ ಆರ್ಥಿಕ ವರ್ಷದಲ್ಲಿ ನೇರ ತೆರಿಗೆ ನಿಯಮ ಜಾರಿ : ಎನ್‌ಆರ್‌ಐಗಳ ಮೇಲೆ ಪರಿಣಾಮ
»ಕೆ.ಕೆ.ಎಸ್.ಎ. ವತಿಯಿಂದ ಕುವೈತಿನಲ್ಲಿ ಧಾರ್ಮಿಕ ಅಧ್ಯಯನ ಶಿಬಿರ
»ಕೆ ಕೆ ಎಸ್ ಎ: ಕುವೈತಿನಲ್ಲಿ ಬ್ರಹತ್ ಮೀಲಾದ್ ಸಮಾವೇಶ
»ಕುವೈಟ್ ತುಳುಕೂಟದ ವತಿಯಿ೦ದ ಸ೦ಭ್ರಮದಿ೦ದ ಜರುಗಿದ ಕುಟು೦ಬ ವಿಹಾರಕೂಟ
»ಅನ್ಸಾರಿಯ ಯತೀಂಖಾನ ಸುಳ್ಯ ಕುವೈತ್ ಘಟಕ ಇದರ 2011 ರ ಪದಾದಿಕಾರಿಗಳ ಆಯ್ಕೆ : ಅಧ್ಯಕ್ಷರಾಗಿ ಕಮಾಲ್ ಅಜ್ಜಾವರ ಸುಳ್ಯ
»ಕುವೈಟ್ : ಅರಬ್ ರಾಷ್ಟ್ರಗಳಿಗೆ ಭಾರತ ಕಾಟಾಚಾರದ ಸಲಹೆ ನೀಡುವುದಿಲ್ಲ : ಎಸ್.ಎಂ. ಕೃಷ್ಣ
»ಮ೦ಗಳೂರು : ದಾರುಲ್ ಇರ್ಷಾದ್ ಮಾಣಿ ಕುವೈತ್ ಕಮಿಟಿಯ ಪದಾಧಿಕಾರಿಗಳು
»ಕುವೈತ್ ಬ೦ಟರ ಸ೦ಘದ ಅಧ್ಯಕ್ಷರಾಗಿ ಶ್ರೀ ಐಕಳ ಸುಧಾಕರ ಶೆಟ್ಟಿ ಅವಿರೋಧ ಆಯ್ಕೆ
»ಫೆ. 25 : ಕುವೈತ್ ನಲ್ಲಿ ಕೆ. ಕೆ. ಸ್. ಏ (K.K.S.A.) ಬ್ರಹತ್ ಮಿಲಾದ್ ಕಾನ್ಫೆರೆನ್ಸ್
»ರಾಮಕ್ಷತ್ರಿಯ ಸಂಘ, ಕುವೈಟ್ ಕಾರ್ಯಕಾರಿ ಮಂಡಳಿ 2010-11 : ಸಂಘದ ಅಧ್ಯಕ್ಷರಾಗಿ ಕೆ.ಎಸ್.ಚಂದ್ರಶೇಕರ್ ಸೂರ್ಲು ಆಯ್ಕೆ
»ಕುವೈತ್ ಪ್ರಜೆಗಳಿಗೆ 4 ಬಿಲಿಯ ಡಾಲರ್, ಉಚಿತ ಆಹಾರ ವಿತರಣೆ- ಕುವೈತಿ ಆಡಳಿತದ ಅಭೂತಪೂರ್ವ ಕೊಡುಗೆ
»ಕುವೈತ್: ಜ 12 ಪತ್ರಿಕಾ ವರದಿಗಳು
»ಮರುಭೂಮಿಯಲಿ ಮಳೆ ಮತ್ತು ಹೊಳೆ....... ಕುವೈತ್ ಕನ್ನಡ ಕೂಟದ ವತಿಯಿಂದ ವಾರ್ಷಿಕ ಸರ್ವ ಸದಸ್ಯರ ಸಭೆ, ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆ
»ವಿಶ್ವ ಕೊಂಕಣಿ ಸಾಂಸ್ಕೃತಿಕ ಸಮ್ಮೇಳನ :ಕುವೈಟ್‌ ಕೊಂಕಣಿಗರ ದಿನ ಆಚರಣೆ
»ರಾಜ್ಯೋತ್ಸವ ಸಂಭ್ರಮದಲ್ಲಿ ಕುವೈತ್ ಕನ್ನಡಕೂಟ
»ಸ೦ಭ್ರಮದಿ೦ದ ಜರುಗಿದ ಕುವೈಟ್ ಬ೦ಟರ ಸ೦ಘದ ಕರ್ನಾಟಕ ಮೈತ್ರಿ ಕುಟು೦ಬ ವಿಹಾರಕೂಟ
»ಕುವೈಟ್ ಬ೦ಟರ ಸ೦ಘದ ವತಿಯಿ೦ದ ‘ಕರ್ನಾಟಕ ಮೈತ್ರಿ ಕುಟು೦ಬ ವಿಹಾರಕೂಟ-2010’
»ಕುವೈಟ್ ತುಳುಕೂಟ - ದಶಮಾನ ಸಂಭ್ರಮ : ಜನಮನ ರಂಜಿಸಿದ ಹಿನ್ನೆಲೆ ಗಾಯಕಿ ಅನೂರಾಧ ಭಟ್ ಅವರ ಸುಮಧುರ ಗಾಯನ
»ಕುವೈಟ್ : ಬಸ್ತಿ ವಾಮನ್ ಶೆಣೈ ಮತ್ತು ಡಾ. ಪಿ. ದಯಾನಂದ್ ಪೈ ಯವರಿಗೆ ಕುವೈಟ್ ಜಿ.ಎಸ್.ಬಿ ಸಮಾಜದ ಸನ್ಮಾನ
»ಕುವೈಟ್ : ಸನ್ಮಾನ್ಯ ಶ್ರೀ ನಾಗರಾಜ ಶೆಟ್ಟಿ MLA ಯವರಿಗೆ ಸ್ನೇಹಕೂಟ ಬಳಗದವರಿಂದ ಸನ್ಮಾನ
»ಮ೦ಗಳೂರು : ಕುವೈಟ್‌ನಲ್ಲಿ ಅತ್ಯಾಧುನಿಕ ಶಿಕ್ಷಣ ಸಂಸ್ಥೆ ಸ್ಥಾಪನೆಗೆ ಡಾ| ದಯಾನಂದ ಪೈ ಅವರ ಸಿದ್ಧತೆ
»ಕುವೈತ್ ತುಳುಕೂಟಕ್ಕೆ ಹತ್ತರ ಹರೆಯ: ರಂಜಿಸಿದ ಮಂಗಳೂರು ಕಲಾವಿದರು
»ನವಂಬರ್ 12ರಂದು ಕುವೈತ್ ಕನ್ನಡ ಕೂಟದ ರಾಜ್ಯೋತ್ಸವ
»'ಯುನಾಯ್ಟೆಡ್ ಮೆಂಗ್ಲೂರಿಯನ್ಸ್ ಕುವೇಯ್ಟ್' (UMK) 'ಮನೋರಂಜನಾ ಸಂಜೆ 2010'
»ಅಕ್ಟೋಬರ್‌ 14 ಮತ್ತು 15ರಂದು ತುಳುಕೂಟ ಕುವೈಟ್‌ ದಶಮಾನೋತ್ಸವ
»ಕುವೈತ್: ಐಎಂಡಬ್ಲುಎನಿಂದ ಇಫ್ತಾರ್ ಕೂಟ
»ಕುವೈಟ್: ಅಕ್ಟೋಬರ್ ನಲ್ಲಿ ‘ತುಳು ಪರ್ಬ ದಶಮಾನೋತ್ಸವ ಸಮಾರ೦ಭದ ಸಂಭ್ರಮ- ತಯಾರಿ ಪೂರ್ವ ಸಭೆ
»ರೋವಿಟಾ......ಪುತ್ತೂರಿನ ಅಪೂರ್ವ ಮುತ್ತು

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri