ಮ೦ಗಳೂರು: 25 ದಿನ ಕಳೆದರೂ ಇನ್ನೂ ಪತ್ತೆಯಾಗಿಲ್ಲ ನಾಪತ್ತೆಯಾದ ದೋಣಿ, ಮತ್ತು ಮೀನುಗಾರರು |
ಪ್ರಕಟಿಸಿದ ದಿನಾಂಕ : 2009-11-07
ಮಂಗಳೂರು, ನ. ೬: ಇಲ್ಲಿನ ಹಳೆ ಬಂದರಿನಿಂದ ಅ. ೧೧ ಮತ್ತು ಅ. ೧೩ ರಂದು ಮೀನು ಗಾರಿಕೆಗೆ ತೆರಳಿದ್ದ ಎರಡು ಮೀನುಗಾರಿಕೆ ದೋಣಿಗಳು ಮತ್ತು ಅದರಲ್ಲಿದ್ದ ೧೫ ಮಂದಿ ಮೀನುಗಾರರ ಬಗ್ಗೆ ಇನ್ನೂ ಯಾವುದೇ ಸುಳಿವು ಇಲ್ಲ.
ಅವರು ಅಪಘಾತಕ್ಕೆ ಸಿಲುಕಿದರೇ. ಯಾರಾದರೂ ಅಪಹರಿಸಿದರೇ, ಗಡಿ ದಾಟಿ ಹೋದ ಪ್ರಯುಕ್ತ ಯಾರಾದರೂ ಹಿಡಿದಿಟ್ಟರೇ ಅಥವಾ ದೋಣಿ ಚಾಲಕನೇ ದೋಣಿಯನ್ನು ಅಪ ಹರಿಸಿಕೊಂಡು ಹೋದನೇ ಎಂಬ ಹಲವು ಸಂಶಯಗಳು ಮೀನುಗಾರರನ್ನು ಕಾಡಲಾ ರಂಭಿಸಿವೆ.
ತಮಿಳುನಾಡಿದ ದಿಂಡಿಗಲ್ ಜಿಲ್ಲೆಯ ಅಮಲನಾಥನ್ ಅ. ೧೧ ರಂದು ‘ಸೀಮಾ ರೇಖೆ’ ಎಂಬ ದೋಣಿಯನ್ನು ಮತ್ತು ಅ. ೧೩ರಂದು ‘ಲಿಖಿತಾ’ ಎಂಬ ದೋಣಿಯನ್ನು ಮಂಗಳೂ ರು ಹಳೆ ಬಂದರಿನಿಂದ ಮೀನುಗಾರಿಕೆಗೆಂದು ಚಲಾಯಿಸಿಕೊಂಡು ಹೋಗಿದ್ದ. ಎರಡೂ ದೋಣಿಗಳಲ್ಲಿ ತಲಾ ೭ ಮಂದಿ ಸಿಬಂದಿ ಇದ್ದರು.
ಇವೆರಡೂ ಆಳ ಸಮುದ್ರ ಮೀನುಗಾರಿಕಾ ದೋಣಿಗಳಾಗಿದ್ದು, ಸಾಮಾನ್ಯವಾಗಿ ಮೀನು ಗಾರಿಕೆಗೆ ಹೋಗಿ ಬರುವಾಗ ೧೫ರಿಂದ ೨೦ ದಿನಗಳಾಗುತ್ತವೆ. ಹಾಗಾಗಿ ದೋಣಿ ನಾಪ ತ್ತೆ ಕುರಿತು ಅಷ್ಟು ಬೇಗನೆ ದೂರು ನೀಡಲು ದೋಣಿ ಮಾಲಕರು ಮುಂದಾಗಿಲ್ಲ.
‘ಸೀಮಾ ರೇಖೆ’ ದೋಣಿ ಮೀನುಗಾರಿಕೆಗೆ ತೆರಳಿ ೧೯ ದಿನಗಳಾದರೂ ಹಿಂತಿರುಗಿ ಬಾರದೆ ಮತ್ತು ಯಾವುದೇ ಸಂಪರ್ಕವೂ ಇಲ್ಲದೆ ಇದ್ದ ಕಾರಣ ಸಂಶಯಗೊಂಡು ಕಳೆದ ಅ. ೩೧ ರಂದು ಅದರ ಮಾಲಕ ಎಮ್ಮೆಕೆರೆಯ ಮಹಮದ್ ನಜೀರ್ ಮತ್ತು ‘ಲಿಖಿತ’ ದೋಣಿಯ ಮಾಲಕ ಅನಿಲ್ ಕುಮಾರ್ ಸುವರ್ಣ ಅವರು ಪಾಂಡೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ.
ಮಂಗಳೂರಿನ ಹಳೆ ಬಂದರಿನಲ್ಲಿ ಇರುವ ಆಳ ಸಮುದ್ರ ಮೀನುಗಾರಿಕಾ ದೋಣಿಗಳಲ್ಲಿ ಮೀನುಗಾರರಾಗಿ ಕೆಲಸ ಮಾಡುವವರಲ್ಲಿ ಶೇ. ೯೫ ರಷ್ಟು ಮಂದಿ ಹೊರ ರಾಜ್ಯದವರು. ಸ್ಥಳೀಯರು ಬಹಳ ಕಡಿಮೆ. ‘ಸೀಮಾ ರೇಖೆ’ ಮತ್ತು ‘ಲಿಖಿತಾ’ ದೋಣಿಗಳಲ್ಲಿ ಇದ್ದ ಸಿಬಂ ದಿಗಳೆಲ್ಲರೂ ತಮಿಳುನಾಡು ಅಥವಾ ಕೇರಳ ರಾಜ್ಯದವರು. ಎರಡೂ ದೋಣಿಗಳನ್ನು ಚಾಲಕ ತಮಿಳುನಾಡಿನ ಅಮಲನಾಥನ್ ಚಲಾಯಿಸಿಕೊಂಡು ಹೋಗಿದ್ದಾನೆ.
ಈ ದೋಣಿಗಳಲ್ಲಿ ಯಾರೆಲ್ಲಾ ಹೋಗಿರುತ್ತಾರೆ ಎಂಬ ಸ್ಪಷ್ಟವಾದ ವಿವರ ದೋಣಿ ಮಾಲ ಕರಲ್ಲಿ ಇರುವುದಿಲ್ಲ. ಮೀನುಗಾರಿಕೆ ಮುಗಿಸಿ ವಾಪಸ್ ಬಂದಾಗ ಅವರಿಗೆ ಸಂಬಳವನ್ನು ಹಂಚಿಕೊಡುವಾಗಲೇ ಅದರಲ್ಲಿ ಎಷ್ಟು ಮಂದಿ ಹೋಗಿದ್ದರು ಮತ್ತು ಅವರು ಯಾರು ಎಂ ಬ ವಿವರ ದೋಣಿ ಮಾಲಕರಿಗೆ ಲಭ್ಯವಾಗುತ್ತದೆ ಎಂದು ಮೀನಗಾರಿಕಾ ಮೂಲಗಳು ತಿಳಿಸಿವೆ.
ಹಾಗಾಗಿ ‘ಸೀಮಾ ರೇಖೆ’ ಬೋಟ್ ನಲ್ಲಿ ಹೋದವರ ವಿವರ ಮಾತ್ರ ಇದ್ದು, ‘ಲಿಖಿತಾ’ ದೋಣಿಯಲ್ಲಿ ಹೋಗಿರುವ ಮೀನುಗಾರರ ವಿವರ ಲಭ್ಯವಿಲ್ಲ.
ಮಂಗಳೂರು ಬಂದರಿನಿಂದ ಈ ಹಿಂದೆ ಮೀನುಗಾರಿಕೆಗೆ ಹೋಗಿದ್ದ ಸಣ್ಣ ಗಿಲ್ನೆಟ್ ಬೋಟ್ಗಳು ನಾಪತ್ತೆಯಾಗಿ ಬಳಿಕ ಅವುಗಳು ತಮಿಳು ನಾಡು ಮತ್ತಿತರ ರಾಜ್ಯಗಳಲ್ಲಿ ಪತ್ತೆಯಾದ ಉದಾಹರಣೆಗಳಿವೆ. ಆದರೆ ಈ ರೀತಿ ಆಳ ಸಮುದ್ರ ಮೀನುಗಾರಿಕೆಗೆ ಹೋ ದ ಬೋಟ್ಗಳು ಅದರಲ್ಲೂ ೨ ಬೋಟ್ಗಳು ಮತ್ತು ಅದರಲ್ಲಿದ್ದ ಎಲ್ಲಾ ಸಿಬಂದಿ ನಾಪತ್ತೆ ಯಾಗಿರುವ ಪ್ರಕರಣ ಇದೇ ಮೊದಲು ಎಂದು ಮೂಲಗಳು ವಿವರಿಸಿವೆ.
ಇಲ್ಲಿ ದೋಣಿ ಚಾಲಕ ಅಮಲ ನಾಥನ್ ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಎಂಬ ಸಂಕೇತ ಬರುತ್ತಿದೆ. ವೈರ್ಲೆಸ್ ಸಂಪರ್ಕ ಸಿಗುತ್ತಿಲ್ಲ.
ದೋಣಿ ಮಾಲಕರು ಪಾಂಡೇಶ್ವರ ಪೊಲೀಸ್ ಠಾಣೆಗೆ ಮಾತ್ರ ದೂರು ನೀಡಿದ್ದು, ಟ್ರಾಲ್ ಬೋಟ್ ಮೀನುಗಾರರ ಸಂಘಕ್ಕೆ ಮತ್ತು ಮೀನು ಗಾರಿಕಾ ಇಲಾಖೆಗೆ ಇದುವರೆಗೆ ದೂರು ನೀಡಿಲ್ಲ. ಈ ಬಗ್ಗೆ ಹೇಳಿ ಕಳುಹಿಸಿದ್ದರೂ ದೂರು ನೀಡಲು ಮುಂದಾಗಿಲ್ಲ ಎಂದು ಮೀನು ಗಾರಿಕಾ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.
ಪಾಂಡೇಶ್ವರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಬಗ್ಗೆ ಶೋಧ ನಡೆಸಲು ಈಗಾ ಗಲೇ ಪೊಲೀಸರನ್ನು ಕೇರಳ ಮತ್ತು ತಮಿಳುನಾಡಿಗೆ ಕಳುಹಿಸಿ ಕೊಡಲಾಗಿದೆ ಎಂದು ಪೊಲೀಸರು ತಿಳಿಸಿದರು.
ವರದಿಯ ವಿವರಗಳು |
 |
ಕೃಪೆ : ಉದಯವಾಣಿ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2009-11-07
|
|
|