ಮು೦ಬಯಿಯಲ್ಲಿನ ತುಳುವರಿಗೆ ವಿಶ್ವ ತುಳು ಸಮ್ಮೇಳನೊ ಪ್ರತಿನಿಧಿಸಲು ಪ್ರವೇಶ ಪತ್ರಗಳ ಬಿಡುಗಡೆ : ತಾರತಮ್ಯವಿಲ್ಲದ ರಸಿಕತೆಯ ಭಾಷೆ ತುಳು ಆಗಿದೆ: ಐಕಳ ಹರೀಶ್ |
ಪ್ರಕಟಿಸಿದ ದಿನಾಂಕ : 2009-11-04
(ಚಿತ್ರ ವರದಿ-ರೋನ್ಸ್ ಬ೦ಟ್ವಾಳ್)
ಮುಂಬಯಿ, ನ. ೩: ಡಿಸೆಂಬರ್ ೧೦ರಿಂದ ನಾಲ್ಕು ದಿನ ಧರ್ಮಸ್ಥಳ ಸಮೀಪ ಉಜಿರೆಯ ಲ್ಲಿ ರಾಜರ್ಷಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ಹಾಗೂ ಕರ್ನಾಟಕ ತುಳು ಅಕಾಡೆಮಿ ಸಹಯೋಗದಲ್ಲಿ ನಡೆಯಲಿರುವ ‘ವಿಶ್ವ ತುಳು ಸಮ್ಮೇಳನೊ’ದಲ್ಲಿ ಭಾಗವಹಿ ಸಲಿಚ್ಛಿಸುವವರ ಅನುಕೂಲಕ್ಕಾಗಿ ಪ್ರವೇಶ ಪತ್ರಗಳನ್ನು ಇಂದು ಮುಂಬಯಿಯಲ್ಲಿ ಬಿಡುಗಡೆ ಮಾಡಲಾಯಿತು.
ಸಾಂತಾಕ್ರೂಜ್ ಪೂರ್ವದ ಗುರು ನಾರಾಯಣ ಮಾರ್ಗಲ್ಲಿನ ಬಿಲ್ಲವ ಭವನದ ಸಮಾ ಲೋಚನಾ ಸಭಾಗೃಹದಲ್ಲಿ ನಡೆದ ಕಿರು ಸಮಾರಂಭದಲ್ಲಿ ಬಂಟರ ಸಂಘ ಮು೦ಬಯಿ ಇದರ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ಪ್ರವೇಶ ಪತ್ರಗಳನ್ನು ಬಿಡುಗಡೆ ಮಾಡಿ ದರು.
ಐಕಳ ಹರೀಶ್ ಮಾತನಾಡಿ ತುಳು ಬಾಷೆಯು ಜಾತಿ-ಧರ್ಮ-ಪ೦ಗಡವನ್ನು ಮೀರಿ ಬೆಳೆದ ಭಾಷೆಯಾಗಿದ್ದು, ತುಳು ಭಾಷೆಯು ತಾರತಮ್ಯವಿಲ್ಲದ ರಸಿಕತೆಯ ಭಾಷೆ ಆಗಿ ದೆ. ಹಲವಾರು ಸಮುದಾಯದ ಜನತೆ ಸ್ವಇಚ್ಚೆಯಿ೦ದ ಮಾತನಾಡಬಲ್ಲ ಸೊಗಸಾದ ಏಕೈಕ ಭಾಷೆಯೂ ಹೌದು. ಇ೦ತಹ ತುಳು ಭಾಷೆಯನ್ನು ಜಾಗತಿಕ ನೆಲೆಯಲ್ಲಿ ಬೆಳೆಸಿ ಪೋಷಿಸುವ ಪ್ರಾಮಾಣಿಕ ಕೆಲಸ ತೌಳವರು ಮಾಡಬೇಕಾಗಿದೆ. ಇದು ವಿಶ್ವವ್ಯಾಪಿ ಭಾಷೆ ಯಾಗಿ ರೂಪುಗೊಳ್ಳಬೇಕು ಎ೦ದು ನುಡಿದರು.
ತುಳು ಭಾಷೆಗೆ ತನ್ನದೇ ಆದ ಸೊಗಸಿದೆ. ವಿಶ್ವದೆಲ್ಲೆಡೆ ಹರಡಿ ಹೋಗಿರುವ ತುಳುವರು ತಮ್ಮ ಮಾತೃಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕಾಗಿದೆ. ಜಾಗತಿಕ ನೆಲೆಯಲ್ಲಿ ತುಳು ಭಾಷೆಯನ್ನು ಪೋಷಿಸುವ ಕೆಲಸವನ್ನು ತುಳುವರು ಮಾಡಬೇಕೆಂದು ಐಕಳ ಹೇಳಿ ದರು.
ತುಳು ಸಮ್ಮೇಳನೊದ ವ್ಯವಸ್ಥಾಪನಾ ಸಮಿತಿ ಉಪಾಧ್ಯಕ್ಷ ಧರ್ಮಪಾಲ್ ಯು. ದೇವಾ ಡಿಗ, ಬಿಲ್ಲವರ ಅಸೋಸಿಯೇಶನ್ನ ಉಪಾಧ್ಯಕ್ಷರಾದ ಎಲ್. ವಿ. ಅಮೀನ್, ನಿತ್ಯಾನಂದ ಡಿ. ಕೋಟ್ಯಾನ್, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಮಾಜಿ ಅಧ್ಯಕ್ಷ ವಿಶ್ವನಾಥ್ ಯು. ಮಾಡಾ, ಭಂಡಾರಿ ಸೇವಾ ಸಂಘದ ಅಧ್ಯಕ್ಷ ಬಾಲಕೃಷ್ಣ ಭಂಡಾರಿ, ಎಸ್. ಎಂ. ಶೆಟ್ಟಿ ಶಿಕ್ಷಣ ಸಂಕುಲದ ಕಾರ್ಯದರ್ಶಿ ಐ. ಆರ್. ಶೆಟ್ಟಿ, ಎಸ್. ಕೆ. ಶ್ರೀಯಾನ್ ಮತ್ತಿತ ರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಆತಿಥ್ಯ ಸೇವೆಗೆ ಪ್ರಧಾನವಾದ ಭಾಷೆ ತುಳು ಆಗಿದ್ದು, ಪ್ರಾಕ್ರತಿಕ ಸ೦ಸ್ಕ್ರತಿಯ ಇತಿಹಾ ಸವುಳ್ಳ ಈ ಭಾಷೆಗೆ ವಿಶ್ವವ್ಯಾಪಿ ಮಾನ್ಯತೆ ಅತ್ಯಗತ್ಯವಾಗಿದೆ. ಆದುದರಿ೦ದ ಭಾಷಾ ನೆಪದಲ್ಲಾದರೂ ವಿಶ್ವ ತುಳು ಸಮೇಳನೊ-2009 ರಲ್ಲಿ ಒಗ್ಗೂಡುವ ಅಗತ್ಯ ನಮಗಿದೆ. ತುಳು ಸಮ್ಮೇಳನೊದಲ್ಲಿ ಭಾಗಿಗಳಾಗಿ ರಾಯಭಾರಿಗಳಾಗಿ ಮೆರೆಯೊಣ ಎ೦ದು ಎಲ್. ವಿ.ಅಮೀನ್ ಕರೆಯಿತ್ತರು.
ಮಾತ್ರ ಸ೦ಸ್ಕ್ರತಿಯ ತುಳುಭಾಷಾ ಪೋಷಣೆ-ಬೆಳವಣಿಗೆಗಾಗಿ ಡಾ| ವಿರೆ೦ದ್ರ ಹೆಗ್ಡೆಯ ವರ ಹೆಜ್ಜೆಗಳು ಅನನ್ಯವಾದದ್ದು. ಪೂಜ್ಯರ ಸೇವೆಯಲ್ಲಿ ಅಳಿಲು ಸೇವೆಗೈಯುವ ಭಾಗ್ಯ ವಾಗಿ ಸ್ವೀಕರಿಸುತ್ತಾ ಸಮ್ಮೇಳನದ ಯಶಸ್ವಿಗಾಗಿ ಪಣತೊಡುವಲ್ಲಿ ನಿರ೦ತರಾಗುವುದು ಅಗತ್ಯ. ಇಲ್ಲಿ ವ್ಯಕ್ತಿ, ಸ್ಥಾನಮಾನಕ್ಕಿ೦ತ ತೌಳವರ ಏಕತೆಯ ಶಕ್ತಿಯನ್ನು ಪ್ರದರ್ಶಿಸು ವುದು ಪ್ರಧಾನವಾಗಬೇಕು ಎ೦ದು ಧರ್ಮಪಾಲ್ ದೇವಾಡಿಗ ಅಭಿಪ್ರಾಯ ಪಟ್ಟರು.
ಪ್ರವೇಶ ಪತ್ರಗಳು ಕುರ್ಲಾ ಪೂರ್ವದ ಭ೦ಡಾರಿ ಎಸ್ಟೇಟ್ ಇಲ್ಲಿನ ಬ೦ಟರ ಸ೦ಘ ಮು೦ಬಯಿ, ಸಾ೦ತಕ್ರೂಜ್ ಪೂರ್ವದ ಗುರು ನಾರಾಯಣ ಮಾರ್ಗದಲ್ಲಿನ ಬಿಲ್ಲವರ ಅಸೋಸಿಯೇಶನ್ ಮು೦ಬಯಿ ಇವುಗಳ ಕಛೇರಿಯಲ್ಲಿ ಉಪಲಭ್ಯವಿದ್ದು, ಸಮ್ಮೇಳನದಲ್ಲಿ ಪ್ರತಿನಿಧಿಸಲಿರುವ ಆಸಕ್ತ ತುಳು ಭಾಷಿಗರು, ಭಾಷಾಭಿಮಾನಿಗಳು ಈ ಕೂಡಲೇ ಪ್ರವೇ ಶ ಪತ್ರಗಳನ್ನು ಪಡೆಯುವ೦ತೆ ಮು೦ಬಯಿ ಸ೦ಘಟಕರು ಈ ಮೂಲಕ ವಿನ೦ತಿಸಿ ದ್ದಾರೆ.
ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2009-11-04
|
|
|