ಬುಧವಾರ, 07-01-2009

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ರಾಜ್ಯದ ಅಭಿವೃದ್ಧಿಗೆ ಕೈಜೋಡಿಸಲು ಕರೆ ಷಿಕಾಗೊದಲ್ಲಿ ಐದನೇ ವಿಶ್ವಕನ್ನಡ ಸಮ್ಮೇಳನ ಉದ್ಘಾಟನೆ

ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೆ ನೆರವಾಗಲು ಮುಂದಾಗುವಂತೆ ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ಕರೆ ನೀಡಿದರು. ಅಮೆರಿಕಾದ ಕನ್ನಡ ಕೂಟಗಳ ಒಕ್ಕೂಟ (ಅಕ್ಕ) ಇಲ್ಲಿ ಆಯೋಜಿಸಿರುವ 5 ನೇ ವಿಶ್ವ ಕನ್ನಡ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಷಿಕಾಗೊ: ‘ಅಮೆರಿಕಾದಲ್ಲಿ ಗಳಿಸಿದ ಸಂಪತ್ತನ್ನು ಮಾತ್ರ ತನ್ನಿ ಎಂದು ನಾನು ಹೇಳುತ್ತಿಲ್ಲ. ಇಲ್ಲಿ ನೀವು ಪಡೆದ ಅನುಭವದ ಸಾರವನ್ನೂ ಕರ್ನಾಟಕಕ್ಕೆ ಧಾರೆ ಎರೆಯಿರಿ. ನಾವು- ನೀವು ಸೇರಿ ಸಮೃದ್ಧ ಕರ್ನಾಟಕ ಕಟ್ಟೋಣ. ಉಜ್ವಲ ಭವಿಷ್ಯಕ್ಕೆ ಹೊಸ ಭಾಷ್ಯ ಬರೆಯೋಣ’ ಎಂದು ಅವರು ಕರೆ ನೀಡಿದರು.

‘ಇದು ನನ್ನ ಅಕ್ಕರೆಯ ಕರೆ. ನನ್ನ ಈ ಪ್ರಾಂಜಲ ಕರೆಯನ್ನು ಉಪಸ್ಥಿರಲ್ಲಿದ ಇತರ ಅನಿವಾಸಿ ಕನ್ನಡಿಗರಿಗೂ ತಿಳಿಸಬೇಕು. ಇದು ನನ್ನ ವಿನಂತಿ’ ಎಂದೂ ಅವರು ನುಡಿದರು.

ನೀವು ಓದಿದ ನಿಮ್ಮೂರಿನ ಶಾಲೆಗೆ ಸೂಕ್ತ ಕಟ್ಟಡ ಇಲ್ಲವೆ - ನಾಲ್ಕು ಕೊಠಡಿ ಕಟ್ಟಿಸಿಕೊಡಿ, ಬೇಕಾದರೆ ಅದಕ್ಕೆ ನಿಮ್ಮ ಹಿರಿಯರ ಹೆಸರಿಡಿ, ಶಾಲೆಗೊಂದು ಪ್ರಯೋಗಶಾಲೆ ರೂಪಿಸಿಕೊಟ್ಟರೆ ಇನ್ನಷ್ಟು ಮಕ್ಕಳು ನಿಮ್ಮಂತೆ ವಿಜ್ಞಾನಿಗಳಾಗಿ ರೂಪುಗೊಳ್ಳಬಹುದು.

ನಿಮ್ಮ ಹಳ್ಳಿಗೆ ನಿಮ್ಮಿಂದ ಕುಡಿಯುವ ನೀರಿನ ಯೋಜನೆ ಬಂದರೆ ಇಡೀ ಹಳ್ಳಿಯ ಹೆಣ್ಣುಮಕ್ಕಳು ನಿಮ್ಮನ್ನು ಹರಸುತ್ತಾರೆ. ನಿಮ್ಮ ಊರಿಗೆ ಒಂದು ಸುಸಜ್ಜಿತ ಆಸ್ಪತ್ರೆ ಬಂದರೆ ಎಲ್ಲ ತಲೆಮಾರುಗಳು ಆರೋಗ್ಯ ಪಡೆಯುತ್ತವೆ.

ನಿಮ್ಮ ಹಳ್ಳಿಗೆ ವಿದ್ಯುತ್ ದೀಪಗಳ ವ್ಯವಸ್ಥೆ ಬಂದರೆ ಎಲರ ಬಾಳು ಬೆಳಗುತ್ತದೆ. ನಿಮ್ಮ್ಲಲಿ ಅನೇಕರು ರೈತ ಕುಟುಂಬದಿಂದ ಬಂದವರು, ಕೃಷಿ ತರಬೇತಿ ಕೇಂದ್ರಗಳ ಸ್ಥಾಪನೆಗೆ ನೆರವಾದರೆ ನಿಮ್ಮ ಹಳ್ಳಿಯ ತರುಣ ರೈತರಲ್ಲಿ ಪ್ರಗತಿಯ ಕನಸು ಬಿತ್ತಿದಂತಾಗುತ್ತದೆ’ ಎಂದರು.

ಸಮಿತಿ

ಹಿಂದೆ ಬಿದ್ದಿಲ್ಲ: ‘ಕರ್ನಾಟಕ ರಾಜ್ಯ ಕೈಗಾರಿಕೆ ಬೆಳವಣಿಗೆಯಲ್ಲಿ ಎಂದೂ ಹಿಂದೆ ಬಿದ್ದಿಲ್ಲ. ಆದರೆ ಅಭಿವೃದ್ಧಿಯ ವೇಗ ಹೆಚ್ಚಿಸಲು ಆಗಬೇಕಾದ್ದು ಇನ್ನೂ ಬಹಳ ಉಳಿದಿದೆ. ಆಧುನಿಕ ಕಾಲದ ಉದ್ಯಮಗಳು ಸಾಹಸಿಗಳನ್ನು ಕೈಬೀಸಿ ಕರೆಯುತ್ತಿವೆ.

ಮಾಹಿತಿ ತಂತ್ರಜ್ಞಾನ ಕ್ಷೇತ್ರದ್ಲಲಿ ಬೆಂಗಳೂರು ಅತ್ಯಂತ ಪ್ರಸಿದ್ಧವಾಗಿದೆ. ಜೈವಿಕ ತಂತ್ರಜ್ಞಾನ ಕ್ಷೇತ್ರವೂ ಬೆಂಗಳೂರನ್ನೇ ಮೆಚ್ಚಿದೆ.

‘ಸಾಂಸ್ಕೃತಿಕ ರಂಗದಲ್ಲಿ ನೀವು ಮಾಡಬೇಕಾದ ಕೆಲಸವೂ ಬಹಳ ಇದೆ. ಮಕ್ಕಳಲ್ಲಿ ಆಸಕ್ತಿ ಬೆಳೆಸಲು, ಯುವಜನರನ್ನು ಪ್ರೋತ್ಸಾಹಿಸಲು ಕಲೆ-ಸಂಗೀತ ತರಬೇತಿ ಕೇಂದ್ರಗಳ ಸ್ಥಾಪನೆ ಅಗತ್ಯ ಇದೆ.

‘ಇದಕ್ಕೆ ನಿಮ್ಮೆಲ್ಲರ ಬೆಂಬಲ, ಧನಸಹಾಯ ಬೇಕು ಎಂಬುದನ್ನು ಹೇಳಬೇಕಿಲ್ಲ. ಇಷ್ಟೇ ಅಲ, ಅಮೆರಿಕದಲ್ಲಿ ನೀವು ನಡೆಸುತ್ತಿರುವ ಕನ್ನಡಪರ ಚಟುವಟಿಕೆಗಳಿಗೆ ಸಮರ್ಥ ನಾಯಕತ್ವ ಒದಗಿಸಲು, ಚಿಕಾಗೋ ವಿಶ್ವವಿದ್ಯಾಲಯದ್ಲಲಿ ಕನ್ನಡ ಆಧ್ಯಯನ ಪೀಠವನ್ನು ಸ್ಥಾಪಿಸಲು ನಮ್ಮ ಸರ್ಕಾರ ಸಿದ್ಧವಿದೆ. ಅದಕ್ಕೆ ಬೇಕಾದ ಅನುಮತಿಯನ್ನು ವಿಶ್ವವಿದ್ಯಾಲಯದಿಂದ ಕೊಡಿಸಲು ನೀವ್ಲೆಲರೂ ಪ್ರಯತ್ನಿಸಬೇಕು’ ಎಂದು ಮನವಿ ಮಾಡಿದರು.

‘ವಿದೇಶದಲ್ಲಿರುವ ಬಹುತೇಕ ಮಂದಿ ರೈತ ಕುಟುಂಬದಿಂದ ಬಂದವರು. ಅನ್ನದಾತ ರೈತನ ನೋವು ನಲಿವನ್ನು ಹತ್ತಿರದಿಂದ ಬಲ್ಲವರು. ನೀವು ದೂರದ ದೇಶದಲ್ಲಿದ್ದರೂ ನಿಮ್ಮ ಬಂಧುಗಳೊಡನೆ ಸಂಪರ್ಕದಲ್ಲಿರುತ್ತೀರಿ. ಭಾರತದಲ್ಲಿ ಇಂದು ರೈತರು ಅನುಭವಿಸುತ್ತಿರುವ ಕಷ್ಟನಷ್ಟಗಳ ಪರಿಚಯ ನಿಮಗಿದೆ. ಹೀಗಾಗಿ ಅವರಿಗೆ ನೆರವಾಗುವಂತಹ ಕೆಲಸ ಮಾಡಿ’ ಎಂದು ವಿನಂತಿ ಮಾಡಿದರು.

ದಸರಾಕ್ಕೆ ಆಹ್ವಾನ: ಈ ಬಾರಿಯ ಮೈಸೂರು ದಸರಾ ಮಹೋತ್ಸವಕ್ಕೆ ಆಗಮಿಸುವಂತೆ ಎಲ್ಲ ಅನಿವಾಸಿ ಕನ್ನಡಿ ಗರಿಗೂ ಮುಖ್ಯಮಂತ್ರಿ ಈ ಸಂದರ್ಭದಲ್ಲಿ ಮುಕ್ತ ಆಹ್ವಾನ ನೀಡಿದರು.

ಡಿಸೆಂಬರ್ ತಿಂಗಳಲ್ಲಿ ಬೆಳಗಾವಿಯಲ್ಲಿ ಎರಡನೇ ವಿಶ್ವ ಕನ್ನಡ ಸಮ್ಮೇಳನ ನಡೆಸುತ್ತಿದ್ದು, ಅದರಲ್ಲಿಯೂ ಭಾಗವಹಿಸುವಂತೆ ಅವರು ಕೋರಿದರು.

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಪ್ರಜಾವಾಣಿ ವಾರ್ತೆ
ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-08-30

ಇತರ ಸಂಭಂದಪಟ್ಟ ವರದಿಗಳು
»
»ಅಕ್ಕ ಸಮ್ಮೇಳನದಲ್ಲಿ ಭಾಗವಹಿಸುವ ಗಣ್ಯರಿವರು
»ಅಕ್ಕನ ಚಾಳಿ ಮನೆಮಂದಿಗೆಲ್ಲ ಹರಡೋದು ಹೇಗೆ?
»ಅಕ್ಕ ಸಮ್ಮೇಳನ - ಶಾಸಕರಿಗೆ ಹೈಕೋರ್ಟ್ ಗ್ರೀನ್ ಸಿಗ್ನಲ್
»
»'ಅಕ್ಕ' ಸಮ್ಮೇಳನಕ್ಕೆ ಬಿ.ಎಸ್.ಯಡಿಯೂರಪ್ಪ
»ಆ.29ರಿಂದ ಅಕ್ಕ ವಿಶ್ವ ಕನ್ನಡ ಸಮ್ಮೇಳನ
»ಶಿಕಾಗೊ 'ಅಕ್ಕ' ವಿಶ್ವಕನ್ನಡ ಸಮ್ಮೇಳನದ ವಿಶೇಷಗಳು
»

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಎನ್.ಆರ್.ಕ-ಎನ್.ಆರ್.ಐ]

»ಅಮೆರಿಕದಲ್ಲಿ ಭಾರತ ಸ್ವಾತಂತ್ರ್ಯ ಪೆರೇಡ್‌ಗೆ ದೀಪಿಕಾ ಪಡುಕೋಣೆ
»ಜರ್ಮನಿಯ ವಿದ್ವಾಂಸರಿಗೆ ಪ್ರಾಕೃತ ಜ್ಞಾನಭಾರತಿ ಪ್ರಶಸ್ತಿ
»ನ್ಯೂಜೆರ್ಸಿಯಲ್ಲಿ ‘ರಾಜ್‌ಕುಮಾರ್ ದಿ ಇನ್ಮಿಟಬಲ್ ಆಕ್ಟರ್ ವಿಥ್ ಗೋಲ್ಡನ್ ವಾಯ್ಸ್’ ಕೃತಿ ಬಿಡುಗಡೆ
»2500 ಕೋಟಿ ವಂಚಿಸಿದ 3ಎನ್‌ಆರ್‌ಐಗಳಿಗೆ ಜೈಲು
»ಸೂರ್ಯ ಮುಳುಗದ ನಾಡಿನಲ್ಲಿ ಜೂನ್‌ನಲ್ಲಿ ಕನ್ನಡ ಕಲರವ
»ಚಿಕಾಗೋ: ಮಂಗಳೂರು ಕೊಂಕಣ್ಸ್ ಆಯೋಜಿಸಿರುವ ಕೊಂಕಣ್ ಫೆಸ್ಟ್-2008
»ಸ್ಕಾಟ್ಲೆಂಡ್‌ನಲ್ಲಿ ಅಪಘಾತ: ಕರ್ನಾಟಕ ಮಹಿಳೆ ಸಾವು
»ಆಕ್ಲೆಂಡಿನಲ್ಲಿ ಸಂಗೀತೋಲ್ಲಾಸದ ಹೂಮಳೆ
»ಉದಯರವಿಯ ನಾಡಿನಲ್ಲಿ ಕನ್ನಡ ಕಲರವ
»ಚಿಕಾಗೋದಲ್ಲಿ ಡಾ. ಆಸ್ಟಿನ್ ಪ್ರಭು ರವರಿಗೆ ೫-ಡೈಮಂಡ್ ಎಂ.ಜೆ.ಎಫ್. (ಮೆಲ್ವಿನ್ ಜೋನ್ಸ್ ಫೆಲೋ) ಪ್ರಶಸ್ತಿ
»ಉಪಾಧ್ಯಕ್ಷ ಹುದ್ದೆಗೆ ಬಾಬ್ಬಿ ಜಿಂದಲ್ ಸ್ಪರ್ಧೆ?
»ನಯಾಗರ ಫಾಲ್ಸ್ಗ್ ಗೆ ತೆರಳುವಾಗ ಅಪಘಾತ - 6 ಭಾರತಿಯರ ಮರಣ
»ಅಂಧ್ರ ವಿದ್ಯಾರ್ಥಿನಿ ಕೊಲೆ ಪ್ರಕರಣ: ಭಾರತೀಯನ ವಿಚಾರಣೆ
»ಹಿಲರಿ ಕ್ಲಿಂಟನ್‌ಗೆ ಬೆಳಗಾವಿಯ ಫಂಡ್‌ರೈಸರ್!: ಕನ್ನಡಿಗನ ಸಾಧನೆ
»ಇಬ್ಬರು ಅಪ್ರಾಪ್ತ ಮಕ್ಕಳ ಶವ ಕಾರಿನಲ್ಲಿ ಪತ್ತೆ
»ಶಿಕಾಗೊ 'ಅಕ್ಕ' ವಿಶ್ವಕನ್ನಡ ಸಮ್ಮೇಳನದ ವಿಶೇಷಗಳು
»ಲಂಡನ್ ಬ್ಯಾಂಕ್‌ಗೆ 564 ಕೋಟಿ ವಂಚಿಸಿದ ಭಾರತೀಯನ ಬಂಧನ
»ಉಪಾಧ್ಯಕ್ಷ ಪಟ್ಟ ಬೇಡ: ಜಿಂದಾಲ್
»ಲಕ್ಷ್ಮಿ ಮಿತ್ತಲ್‌ಗೆ ಸತತ ನಾಲ್ಕನೇ ವರ್ಷ ಬ್ರಿಟನ್ ಶ್ರೀಮಂತ ಉದ್ಯಮಿ ಪಟ್ಟ
»ಇಂಗ್ಲೆಂಡಿನಲ್ಲೊಂದು ಯುಗಾದಿ ಆಚರಣೆ
»ಆಕ್ಲೆಂಡ್ ಕನ್ನಡ ಕೂಟದಲ್ಲಿ ಸಂಭ್ರಮದ ಯುಗಾದಿ
»ಸ್ವತಃ ಜ್ಯೋತಿ ಓಟ ಆಯೋಜಿಸಿದ ಟಿಬೆಟಿಯನ್ನರು
»ಅಮೆರಿಕದಲ್ಲಿದ್ದ ಎಂಜಿನಿಯರ್ ಚುನಾವಣೆ ಕಣಕ್ಕೆ
»ರೋಬಿನ್ ಹುಡ್‌ನ ನಾಟಿಂಗ್‌ಹ್ಯಾಮ್‌ನಲ್ಲಿ `ಯಕ್ಷಗಾನ'
»ನ್ಯೂಜಿಲೆಂಡ್‌ನಲ್ಲೂ ಬಸವಣ್ಣನ ಪ್ರಭಾವ: ಸಚಿವ ಕ್ರಿಸ್ ಕಾರ್ಟರ್
»ಮೀರಾ ನಾಯರ್‌ಗೆ `ವರ್ಷದ ವ್ಯಕ್ತಿ' ಪ್ರಶಸ್ತಿ
»ಇಂದ್ರಾ ನೂಯಿ ವೇತನ 14.74 ದಶಲಕ್ಷ ಡಾಲರ್
»ಕಂಬನಿ: ರೋಸ್ ಡಿ’ಸೋಜ ನಮ್ಮನ್ನಗಲಿದರು
»ಲಂಡನ್ ನಗರದಲ್ಲಿ ಒಂಟಿ ಬಾಲಕ ಯಾರೀತ?
»ಎನ್.ಆರ್.ಐ ಗಳು ವರ್ಷಕ್ಕೆ 27 ಬಿಲಿಯನ್ ಡಾಲರನ್ನು ಮಾತ್ರಭೂಮಿಗೆ ಕಳಿಸುತ್ತಾರೆ
»ಇಂದ್ರಾ ನೂಯಿ ಆದರ್ಶ ಮಹಿಳೆ
»ಅಮೇರಿಕಾ: ರಾಷ್ಟ್ರೀಯ ವಿದ್ಯಾರ್ಥಿವೇತನ ಪಡೆದ ಭಾರತೀಯ ವಿದ್ಯಾರ್ಥಿನಿ
»ಭಾರತ ಮೂಲದ 'ಡಾ.ಡೆತ್' ಅಮೆರಿಕದಲ್ಲಿ ಬಂಧನ
»ಅಮೆರಿಕದಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿಯ ಹತ್ಯೆ
»ಮುಂಬೈ ಬೆಡಗಿ ಶಗುನ್ ಭಾರತೀಯ ಭುವನಸುಂದರಿ
»ಯುನಿವರ್ಸಿಟಿಯಲ್ಲಿ ಮಾರಕ ಕೊಲೆ!
»ಕೆನಡಾದ ೪ನೇ ದೊಡ್ಡ ಭಾಷೆ ಪಂಜಾಬಿ
»ಬಾಬಿ ಜಿಂದಾಲ್ ಅಮೆರಿಕ ಉಪಾಧ್ಯಕ್ಷ ಹುದ್ದೆ ಅಭ್ಯರ್ಥಿ?
»ಸಿಲಿಕಾನ್ ವ್ಯಾಲಿಯಲ್ಲಿ ಜೋಕುಮಾರನ ಮೋಡಿ
»`ಜೂನಿಯರ್ ನೊಬೆಲ್' ಫೈನಲ್‌ಗೆ ೭ ಭಾರತೀಯ ಮೂಲದ ವಿದ್ಯಾರ್ಥಿಗಳು
»ಮಲ್ಲಿಗೆ ಚಪ್ಪರದ ಕೆಳಗೆ ಸಂಕ್ರಾಂತಿ ಹಾಡು
»ಹಲವು ರಾಷ್ಟ್ರಗಳ್ಲಲಿ ಗಣರಾಜ್ಯೋತ್ಸವ ಆಚರಣೆ
»ಭಾರತೀಯ ಉದ್ಯಮಿ ರಾಬರ್ಟ್ ಸಾವು
»ಇಂಟರ್‌ನೆಟ್‌ನಲ್ಲಿ ಪ್ರವಾಸಿ ಭಾರತೀಯ ದಿವಸ ನೇರಪ್ರಸಾರ
»ಗುಜರಾತಿಗಳನ್ನುರಕ್ಷಿಸಿ:ಮೋದಿ
»ಭಾರತೀಯ ವೈದ್ಯ ವಿದ್ಯಾರ್ಥಿ ಹಂತಕರ ಸುಳಿವು ನೀಡಿದವರಿಗೆ ೫,೦೦೦ ಡಾಲರ್ ಬಹುಮಾನ
»ನಥಾಲ್ ಫೆಸ್ಟ್-೨೦೦೭; ನೈಸರ್ಗಿಕ ಅಡ್ಡಿಗಳ ನಡುವೆಯೂ ಸಂಭ್ರಮದ ಆಚರರಣೆ
»ಲೂಸಿಯಾನ ಸ್ಟೇಟ್ ಯೂನಿವರ್ಸಿಟಿಯ ಇಬ್ಬರು ಭಾರತೀಯ ವಿದ್ಯಾರ್ಥಿಗಳು ಗುಂಡೇಟಿನಿಂದ ಸಾವು: ನರಹಂತಕನ ಭೀತಿ
»ಅಕ್ಕ ಸಮ್ಮೇಳನ 2008 : ಕತೆ,ಕವನ,ಲೇಖನ ಆಹ್ವಾನ
»ಭಾರತ ಸಂಜಾತೆ, ವಿಜ್ಞಾನ ಸ್ಪರ್ಧೆಯಲ್ಲಿ ಪ್ರಥಮ
»ಉ.ಕ್ಯಾಲಿಫೋರ್ನಿಯಾದ ಸಾಹಿತ್ಯಗೋಷ್ಠಿಗೆ ಆರರ ಸಡಗರ
»ಥೇಮ್ಸ್ ನದಿಯಲ್ಲಿ ಕಣ್ಣೀರಿನ ಪ್ರವಾಹ
»ನೆದರ್ ಲ್ಯಾಂಡಿನಲ್ಲಿ ಕನ್ನಡ ಡಿಂಡಿಮ
»ಸಿಡ್ನಿ ಕನ್ನಡ ಸಂಘದಲ್ಲಿ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ
»ಹೊಸ್ಟನ್ ವಿವಿ ಕುಲಪತಿಯಾಗಿ ಭಾರತೀಯ ಮೂಲದ ಖಾತೂರ್ ಆಯ್ಕೆ
»ನವಂಬರ್ 1 ರಿಂದ 18 ರವರೆಗೆ ಅಮೆರಿಕಾದಲ್ಲಿ ಹಾಸ್ಯದ ಹೊನಲು
»ನವೆಂಬರ ೧ರಂದು ವಿಕಿಪೀಡಿಯಾದ ಮುಖ್ಯಪುಟದಲ್ಲಿ ಕರ್ನಾಟಕ
»ಲ್ಯೂಸಿಯಾನಾ ಗವರ್ನರ್ ಆಗಿ ಭಾರತೀಯ ಮೂಲದ ಜಿಂದಾಲ್ ಆಯ್ಕೆ
»ನಗೆಗನ್ನಡಂ ಗೆಲ್ಗೆ ; ಅನಿವಾಸಿ ಕನ್ನಡಿಗರಿಗೆ ಥ್ಯಾಂಕ್ಸ್!
»ಸಿಂಗಪುರ ಕನ್ನಡಿಗರ ರಂಜಿಸಿದ ಹೈಟೆಕ್ ಹಯವದನಾಚಾರ್
»ಕೊಡಲು ಬೇರೇನಿದೆ ಬಾಳಲಿ?: ಬ್ರಿಟನ್ ಯುವತಿಯ ಮಡಿಕೇರಿ ಹಾಡು!
»ನ್ಯೂಜಿಲೆಂಡನಲ್ಲಿ ಕನ್ನಡದ ಪತಾಕೆ...
»ಕೆರೊಲಿನಾ ಕನ್ನಡಿಗರು ಕೃಷ್ಣನ ಕಂಡು ಮೂಕರಾದರಯ್ಯಾ
»ನ್ಯೂಜೆರ್ಸಿ : ಎಲ್ಲಿ ನಿನ್ನ ಭಕ್ತರೋ ಅಲ್ಲೇ ಮಂತ್ರಾಲಯ
»ಸಿಡ್ನಿಯಲ್ಲಿ ಸ್ವಾತಂತ್ರ ಷಷ್ಟಿಪೂರ್ತಿ ಶಾಂತಿ
»ನನ್ನಿಂದ ಸಾಧ್ಯ ಅಂದುಕೊಂಡರೆ,ಅರ್ಧ ಕೆಲಸ ಪೂರ್ಣ!
»ಅನಿವಾಸಿ ಕನ್ನಡಿಗ,ಲೇಖಕ ಡಾ.ಪ್ರಸನ್ನ ಕುಮಾರ್ ನಿಧನ

 

©2007 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri