ನ್ಯಾನೋ ಕಾರು ಘಟಕಕ್ಕೆ ರಾಜ್ಯದಲ್ಲಿ ಅವಕಾಶ |
ಪ್ರಕಟಿಸಿದ ದಿನಾಂಕ : 2008-08-28
ಬೆಂಗಳೂರು, 27 ಆಗಸ್ಟ್ 2008 ಪಶ್ಚಿಮಬಂಗಾಳದ ಸಿಂಗುರ್ನಲ್ಲಿ ವಿವಾದದಿಂದಾಗಿ ಟಾಟಾ ಸಣ್ಣ ಕಾರು ಯೋಜನೆಯನ್ನು ಧಾರವಾಡಕ್ಕೆ ಆಹ್ವಾನಿಸಲು ಕರ್ನಾಟಕದ ಬಿಜೆಪಿ ಬುಧವಾರ ನಿರ್ಧರಿಸಿದೆ. ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವೆ ಶೋಭಾ ಕರಾಂದ್ಲಜೆ, ಕರ್ನಾಟಕದಲ್ಲಿ ಘಟಕ ಸ್ಥಾಪಿಸುವಂತೆ ಟಾಟಾ ಸಮೂಹದ ಅಧ್ಯಕ್ಷ ರತನ್ ಟಾಟಾ ಅವರಿಗೆ ಆಹ್ವಾನಿಸಿರುವುದಾಗಿ ಹೇಳಿದರು.
ಧಾರವಾಡದಲ್ಲಿ 900 ಎಕರೆ ನಿವೇಶದೊಂದಿಗೆ ಟಾಟಾ ಈಗಾಗಲೇ ಎರಡು ಘಟಕಗಳನ್ನು ಹೊಂದಿದೆ. ಸಿಂಗುರ್ನಿಂದ ಯೋಜನೆಯನ್ನು ಸ್ಥಳಾಂತರಿಸಲು ನಿರ್ಧರಿಸಿದರೆ ಧಾರವಾಡದಲ್ಲಿ ಇನ್ನಷ್ಟು ನಿವೇಶನ ನೀಡಲು ಸಿದ್ಧವಿರುವುದಾಗಿ ಅವರು ಹೇಳಿದರು.ನ್ಯಾನೊ ಯೋಜನೆ ಸ್ಥಾಪಿಸಲು ಟಾಟಾ ಸಮೂಹವನ್ನು ಆಹ್ವಾನಿಸಿದ ರಾಜ್ಯಗಳ ಪೈಕಿ ಕರ್ನಾಟಕ ಐದನೆಯದಾಗಿದೆ.
ಛತ್ತೀಸ್ಗಢದಲ್ಲಿ 5000 ಕೋಟಿ ರೂ.ವೆಚ್ಚದ ಉಷ್ಣವಿದ್ಯುತ್ ಸ್ಥಾವರ ಯೋಜನೆಯ ಒಡಂಬಡಿಕೆಗೆ ಕೂಡ ಕ್ಯಾಬಿನೆಟ್ ತನ್ನ ಅನುಮೋದನೆ ನೀಡಿದೆ. ರಾಯಪುರದ ಬಳಿ ಶಿರೋಯಿನಾರಾಯಣ್ನಲ್ಲಿ 1000 ಮೆಗಾವಾಟ್ ಯೋಜನೆಯನ್ನು ಸ್ಥಾಪಿಸಲು ಒಡಂಬಡಿಕೆಗೆ ಎರಡು ತಿಂಗಳಲ್ಲಿ ಸಹಿ ಹಾಕಲಾಗುವುದು.
ವರದಿಯ ವಿವರಗಳು |
 |
ಕೃಪೆ : ವೆಬ್ದುನಿಯಾ ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-08-28
|
|
| Ronald, Udupi | 2008-09-03 | | Beware of environmentalists and fundamentalists!! They may demand free cars for them and their supports inorder to give up agitations!!! |
|