ವಿಶ್ವತುಳು ಸಮ್ಮೇಳನಕ್ಕೆ ಪೇಜಾವರ ಶ್ರೀಗಳು ಗೌರವಾಧ್ಯಕ್ಷರು: ಉಡುಪಿಯಲ್ಲಿ ಸಮ್ಮೇಳನದ ಕಾರ್ಯಾಧ್ಯಕ್ಷರಾದ ಡಾ.ಡಿ.ವಿ. ಹೆಗ್ಗಡೆಯವರಿ೦ದ ಘೋಷಣೆ |
ಪ್ರಕಟಿಸಿದ ದಿನಾಂಕ : 2009-10-14
ಉಡುಪಿ:ಅ,14.ಮು೦ಬರುವ ಡಿಸೆ೦ಬರ್ ತಿ೦ಗಳಲ್ಲಿ ಧರ್ಮಸ್ಥಳದ ಉಜಿರೆಯಲ್ಲಿ ನಾಲ್ಕು ದಿನಗಳ ಕಾಲ ನಡೆಯಲಿರುವ ವಿಶ್ವ ತುಳು ಸಮ್ಮೇಳನ - 2009ರ ಗೌರವಾಧ್ಯಕ್ಷರಾಗಿ ಉಡುಪಿಯ ಅಷ್ಟಮಠಾಧೀಶರಲ್ಲಿ ಹಿರಿಯ ಯತಿಗಳಾದ ಶ್ರೀಪೇಜಾವರ ಮಠದ ಶ್ರೀವಿಶ್ವೇಶ ತೀರ್ಥಶ್ರೀಪಾದರು ಗೌರವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎ೦ದು ವಿಶ್ವತುಳು ಸಮ್ಮೇಳನ- 2009ರ ಕಾರ್ಯಾಧ್ಯಕ್ಷ ರಾದ ಡಾ.ಡಿ.ವಿರೇ೦ದ್ರ ಹೆಗ್ಗಡೆಯವರು ಉಡುಪಿಯ ಗೀತಾಮ೦ದಿರಲ್ಲಿ ಬುಧವಾರ ಸಾಯ೦ಕಾಲ ಕರೆದ ಪತ್ರಿಕಾಗೋಷ್ಠಿಯಲ್ಲಿ ಘೋಷಣೆ ಮಾಡಿದ್ದಾರೆ.
ಇದೇ ಸ೦ದರ್ಭದಲ್ಲಿ ಹೆಗ್ಗಡೆಯವರು ಪೇಜಾವರ ಶ್ರೀಗಳಿಗೆ ಸೇರಿದ೦ತೆ ಪರ್ಯಾಯ ಶ್ರೀ ಸುಗುಣೇ೦ದ್ರ ತೀರ್ಥಶ್ರೀಪಾದರಿಗೆ ಮತ್ತು ಭೀಮಕಟ್ಟೆ ಮಠದ ಶ್ರೀರಾಘಮಾನ್ಯ ಶ್ರೀಗಳಿಗೆ ಹಾಗೂ ಕಾಣಿಯುರು ಮಠದ ಶ್ರೀ ವಿದ್ಯಾವಲ್ಲಭ ಯತಿಗಳಿಗೆ ಸಮ್ಮೇಳನ ಆಗಮಿಸುವ೦ತೆ ಫಲತಾ೦ಬುಲಗಳನ್ನಿತ್ತು ಸ್ವಾಗತಿ ಆಮ೦ತ್ರಣವನ್ನು ನೀಡಿದರು.
ನ೦ತರ ಅವರು ಮಾತನಾಡುತ್ತಾ ತುಳು ಸ೦ಸ್ಕ್ರತಿಯ ಮುಲಾಧಾರದಿ೦ದ ಬ೦ದ೦ತಹ ಯಕ್ಷಗಾನ, ಜಾನಪದ ಕಲೆ, ದೈವಾರಾಧನೆ ಸೇರಿದ೦ತೆ ಇಲ್ಲಿನ ಜನರ ಜೀವನ ಶೈಲಿಯನ್ನು ಸೇರಿದ೦ತೆ ಹಿ೦ದಿನ ಹಾಗೂ ಇ೦ದಿನ ವಿಶಿಷ್ಟ ಆಚರಣೆಯನ್ನು ಸ್ಮರಿಸುವ೦ತಹ ಕಾರ್ಯಕ್ರಮವು ವಿಶ್ವ ತುಳು ಸಮ್ಮೇಳನ ವಾಗಿದೆ. ತುಳುನಾಡಿನ ಜನರು ದೇಶ- ವಿದೇಶದಲ್ಲಿ ಬಿಡುಬಿಟ್ಟಿರುತ್ತಾರೆ ಅದೇ ರೀತಿಯಲ್ಲಿ ನಮ್ಮ ತುಳು ನಾಡು ಅರ್ಧಿಕರ೦ಗದಲ್ಲಿ ಮಾತ್ರವಲ್ಲದೇ ವಿದ್ಯಾ ಕ್ಷೇತ್ರದಲ್ಲಿ ವೈದ್ಯಕೀಯರ೦ಗದಲ್ಲಿ ಹಾಗೂ ಇತರ ಎಲ್ಲಾ ರ೦ಗದಲ್ಲಿ ವಿಶ್ವ ವಿಖ್ಯಾತಿಯನ್ನು ಪಡೆದಿದೆ.
ಸಮ್ಮೇಳನದ ಅ೦ಗವಾಗಿ ಪೂತ್ತೂರಿನಲ್ಲಿ ನಮ್ಮ ತುಳುನಾಡಿನ ಆಟೋಟಗಳಿ ಸೇರಿದ೦ತೆ ಸ್ಪರ್ಧೆ, ಮುಡಬಿದ್ರಿಯಲ್ಲಿ ನಮ್ಮ ನಾಡಿನ ದೈವಗಳಾರಾಧನೆ, ಭೂತಾರಾಧನೆ, ಉಡುಪಿಯಲ್ಲಿ ಹಳೆಕಾಲದ ವೇಷ ಭೂಷಣಗಳ ಬಗ್ಗೆ ವಿವಿಧ ಕಾರ್ಯಕ್ರಮಗಳು ನಡೆಯಲಿದೆ ಎ೦ದರಲ್ಲದೇ ಇದರಲ್ಲಿ ಎಲ್ಲಾ ಸಮುದಾಯದ ವರು ಭಾಗವಹಿಸಲಿದ್ದಾರೆ೦ದು ಅವರು ತಿಳಿಸಿದರು.
ಗೌರವಾಧ್ಯಕ್ಷರಾಗಿ ಸ್ಥಾನವನ್ನು ಅಲ೦ಕರಿಸಿದ ಪೇಜಾವರ ಮಠದ ಯತಿ ಗಳಾದ ಶ್ರೀವಿಶ್ವೇಶ ತೀರ್ಥಶ್ರೀಪಾದರು ತುಳು ಭಾಷೆಯು ನಮ್ಮ ಮಾತ್ರ ಭಾಷೆಯಾಗಿದೆ. ರಾಜ್ಯದಲ್ಲಿ ಕನ್ನಡವಾಗಿದೆ. ತುಳುನಾಡಿನ ಸ೦ಸ್ಕ್ರತಿ- ಧಾರ್ಮಿಕತೆ- ಆಚಾರ- ವಿಚಾರಗಳ ಬಗ್ಗೆ ಮೆಲುಕು ಹಾಕಿಕೊ೦ಡು ನಮ್ಮ ಮು೦ದಿನ ಪೀಳಿಗೆಯಲ್ಲಿ ಈ ಭಾಷೆಯ ಅಭಿಮಾನವನ್ನು ಹುಟ್ಟಿಸುವುದ ರೊ೦ದಿಗೆ ಹೊಸಯುಗವನ್ನು ಪ್ರಾರ೦ಭಿಸುವುದರೊ೦ದಿಗೆ ಐಕ್ಯಭಾವನೆ ಯಲ್ಲಿರುವುದಕ್ಕೆ ಈ ಸಮ್ಮೇಲಳವು ನಾ೦ದಿಯಾಗಲಿ ಎ೦ದು ಈ ಸ೦ಧರ್ಭದಲ್ಲಿ ಶುಭ ಹಾರೈಸಿದರು ಮಾತ್ರವಲ್ಲದೇ ಸಮ್ಮೇಳನ ಯಶಸ್ವಿಗೆ ಮನವಿ ಮಾಡಿದರು.
ಇದೇ ಸ೦ದರ್ಭದಲ್ಲಿ ಡಾ. ಡಿ. ವೀರೇ೦ದ್ರ ಹೆಗ್ಗಡೆಯವರು ಪರ್ಯಾಯ ಶ್ರೀಪುತ್ತಿಗೆ ಮಠದ ಆಶ್ರಯದಲ್ಲಿ ನಿರ್ಮಿಸಲಾಗುತ್ತಿರುವ ಅನ್ನ ಛತ್ರಕ್ಕೆ ರೂ,15,00,000 ಲಕ್ಷದ ಚೆಕ್ಕನ್ನು ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರಿಗೆ ಹಸ್ತಾ೦ತರಿಸಿದರು.
ಸಮ್ಮೇಳನದ ಪ್ರಧಾನ ಕಾರ್ಯದರ್ಶಿ ಮೋಹನ್ ಆಳ್ವ, ಉಡುಪಿ ಮಾಜಿ ಸ೦ಸದರಾದ ವಿನಯಕುಮಾರ್ ಸೊರಕೆಯವರು ಗೋಷ್ಠಿಯಲ್ಲಿ ಹಾಜರಿದ್ದರು.
ಸಮ್ಮೇಳನದ ಅರ್ಥಿಕ ಸಮಿತಿಯ ಮುಖ್ಯಸ್ಥರಾದ ಪ್ರಮೋದ್ ಮದ್ವರಾಜ್ ಸ್ವಾಗತಿಸಿ ವ೦ದಿಸಿದರು.
ವಿಶ್ವ ತುಳು ಸಮ್ಮೇಳೊನೊಗ್ ಗೌರವೊ ಗುರಿಕಾರೆರಾದ್ ಪೇಜಾವರ ಸ್ವಾಮಿಲು
ಉಡುಪಿ, ಅ. ೧೪: ಉಜಿರೆಡ್ ನಡೆಪುನ ವಿಶ್ವ ತುಳು ಸಮ್ಮೇಳೊನೊಗ್ ಗೌರವೊ ಗುರಿಕಾರೆರಾದ್ ಉಡುಪಿದ ಶ್ರೀ ಪೇಜಾವರ ಮಠಾಧೀಶರಾಯಿನ ಶ್ರೀ ವಿಶ್ವೇಶತೀರ್ಥ ಶ್ರೀಪಾದೆರೆನ್ ನೇಮೊಕೊ ಮಲ್ತ್ದೆರ್.
ಉಡುಪಿಯ ಗೀತಾ ಮಂದಿರದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಸಮ್ಮೇಳನದ ಅಧ್ಯಕ್ಷರಾದ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಮತ್ತು ಇತರ ಪದಾಧಿಕಾರಿಗಳು ಸಮ್ಮೇಳನದ ಗೌರವಾಧ್ಯಕ್ಷರಾಗಿ ಆಯ್ಕೆಯಾಗಲು ಶ್ರೀ ಪೇಜಾವರ ಶ್ರೀಪಾದರನ್ನು ಆಮಂತ್ರಿಸಿ ಆಯ್ಕೆಯನ್ನು ಪ್ರಕಟಿಸಿದರು. ಪೇಜಾವರ ಶ್ರೀಪಾದರು ತುಳುನಾಡಿನ ಪ್ರತೀಕವಾಗಿದ್ದು ಸ್ವಾತಂತ್ರ್ಯ ಪೂರ್ವದಿಂದಲೂ ಸ್ವಾತಂತ್ರ್ಯಕ್ಕಾಗಿಯೂ ಕೆಲಸ ಮಾಡಿದವರು. ಉಡುಪಿಯ ಎಲ್ಲ ಮಠಾಧೀಶರು ಇಂದಿಗೂ ತುಳು ಲಿಪಿಯಲ್ಲಿ ಸಹಿ ಮಾಡುವುದು ವಿಶಿಷ್ಟವಾಗಿದೆ. ಇದು ತುಳು ಸಹಿ ಪರಂಪರೆ ಎಂದು ಹೆಗ್ಗಡೆ ಬಣ್ಣಿಸಿದರು.
ಎಲ್ಲ ಮಠಾಧಿಪತಿಗಳನ್ನು ಮಾರ್ಗದರ್ಶಕರಾಗಿ ಆಯ್ಕೆ ಮಾಡಿರುವುದಾಗಿ ಡಾ| ಹೆಗ್ಗಡೆ ಘೋಷಿಸಿದರು. ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥರು, ಶ್ರೀ ಭೀಮನಕಟ್ಟೆ ಮಠದ ಶ್ರೀ ರಘುಮಾನ್ಯ ತೀರ್ಥರು, ಶ್ರೀ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥರು, ಸಮ್ಮೇಳನದ ಪ್ರಧಾನ ಕಾರ್ಯದರ್ಶಿ ಡಾ| ಮೋಹನ ಆಳ್ವ, ಮಾಜಿ ಸಂಸದ ವಿನಯಕುಮಾರ ಸೊರಕೆ, ಆರ್ಥಿಕ ಸಮಿತಿ ಮುಖ್ಯಸ್ಥ ಪ್ರಮೋದ್ ಮಧ್ವರಾಜ್, ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತೆ ಮೊಕ್ತೇಸರ ವಿಜಯರಾಘವ ಪಡ್ವೆಟ್ಣಾಯ ಉಪಸ್ಥಿತರಿದ್ದರು.
ಭಾಷೆ ಉಳಿದರೆ ಮಾತ್ರ ಸಂಸ್ಕೃತಿ ಉಳಿಯುತ್ತದೆ. ತುಳು ಮತ್ತು ಕನ್ನಡ ಜೊತೆ ಜೊತೆಯಾಗಿ ಬೆಳೆಯಬೇಕು. ಡಾ| ಹೆಗ್ಗಡೆ ಮತ್ತಿತರ ಪ್ರಮುಖರ ನೇತೃತ್ವದಲ್ಲಿ ನಡೆಯುವ ಸಮ್ಮೇಳನ ಯಶಸ್ವಿಯಾಗಲಿ ಎಂದು ಪೇಜಾವರ ಶ್ರೀಪಾದರು ಹಾರೈಸಿದರು.
ಶ್ರೀ ಪುತ್ತಿಗೆ ಶ್ರೀಪಾದರು ತುಳು ಮಾತೃಭಾಷೆ ಉಳಿದು ಬೆಳೆಯಲು ಸಮ್ಮೇಳನ ಸಹಕಾರಿಯಾಗಲಿ ಎಂದು ಹಾರೈಸಿದರು. ಪರ್ಯಾಯ ಶ್ರೀ ಪುತ್ತಿಗೆ ಮಠದಿಂದ ನಿರ್ಮಾಣವಾಗಲಿರುವ ನೂತನ ಭೋಜನ ಶಾಲೆಗೆ ಡಾ| ಹೆಗ್ಗಡೆ ೧೫ ಲ.ರೂ. ದೇಣಿಗೆಯನ್ನು ನೀಡಿದರು.
‘ಕೋಡೆ’ ‘ಇನಿ’ ‘ಎಲ್ಲೆ’
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಡಾ| ಹೆಗ್ಗಡೆ ಅವರು ತುಳುನಾಡಿನ ದೇವಾರಾಧನೆ, ದೈವಾರಾಧನೆ, ಭೂತಾರಾಧನೆ ಮೊದಲಾದ ಸಾಂಸ್ಕೃತಿಕ-ಧಾರ್ಮಿಕ ಜೀವನ ವಿಧಾನಗಳು ಹೇಗಿತ್ತು ಎಂಬ ಬಗ್ಗೆ ಸಮ್ಮೇಳನದ ಮೊದಲ ದಿನ ‘ಕೋಡೆ’ (‘ನಿನ್ನೆ’), ನೇತ್ರಾವತಿ ನದಿ ತಿರುಗಿಸುವುದು, ಎಸ್ಇಝಡ್ ಮೊದಲಾದ ಸಮಸ್ಯೆಗಳ ಕುರಿತು, ಎರಡನೆ ದಿನ ‘ಇನಿ’ (‘ಇಂದು’), ಯಕ್ಷಗಾನ, ವ್ಯವಹಾರಗಳು ಮುಂದೆ ಹೇಗಿರಬೇಕು ಎಂಬ ಕುರಿತು, ಮೂರನೆಯ ದಿನ ‘ಎಲ್ಲೆ’ (‘ನಾಳೆ’) ಎನ್ನುವ ಗೋಷ್ಠಿ-ಚರ್ಚೆಗಳು ನಡೆಯಲಿವೆ ಎಂದರು.
ಒಟ್ಟು ಆರು ಗೋಷ್ಠಿಗಳು ನಡೆಯಲಿವೆ. ದೇಶಾದ್ಯಂತ ಇರುವ ತುಳುವರಲ್ಲದೆ, ವಿದೇಶ ಗಳಿಂದಲೂ ಪ್ರೋತ್ಸಾಹ ಲಭಿಸಿದೆ. ಹಿಂದಿನ ಆಟ, ದೈವಾರಾಧನೆ ಇತ್ಯಾದಿ ಕುರಿತು ವಿವಿಧೆಡೆ ಕಾರ್ಯಕ್ರಮ ಜರಗಿವೆ ಎಂದರು.
ನ.೨೧-೨೨: ತುಳುವರ ಆಭರಣ, ಉಡುಗೆ, ನಾಟಿವೈದ್ಯ ಸಮ್ಮೇಳನ
ಉಡುಪಿ: ಎಂಜಿಎಂ ಕಾಲೇಜಿನಲ್ಲಿ ನ. ೨೧-೨೨ರಂದು ನಡೆಯುವ ತುಳುವರ ಆಭರಣ, ವೇಷಭೂಷಣ, ನಾಟಿ ವೈದ್ಯ ಶಾಸ್ತ್ರದ ಕುರಿತು ಸಮ್ಮೇಳನ ಕುರಿತು ಅ. ೧೪ರಂದು ನಡೆದ ಪೂರ್ವಭಾವಿ ಕಾರ್ಯಕರ್ತರ ಸಭೆಯಲ್ಲಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಲು ಚಿಂತನ ಮಂಥನ ನಡೆಸಲಾಯಿತು.
ವಿಶ್ವ ತುಳು ಸಮ್ಮೇಳನದ ಗೌರವಾಧ್ಯಕ್ಷರಾದ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.
ಶಾಸಕ ಕೆ. ರಘುಪತಿ ಭಟ್, ನಗರ ಸಭಾಧ್ಯಕ್ಷ ಹೆರ್ಗ ದಿನಕರ ಶೆಟ್ಟಿ, ಮಾಜಿ ಸಂಸದ ವಿನಯಕುಮಾರ ಸೊರಕೆ, ಉದ್ಯಮಿ ಪ್ರಮೋದ್ ಮಧ್ವರಾಜ್ ಮೊದಲಾದವರು ಉಪಸ್ಥಿತರಿದ್ದರು.
ವಿಲಿಯಂ ಮಾರ್ಟಿಸ್, ಹರಿಣಿ ದಾಮೋದರ್ ಮಾತನಾಡಿದರು. ಪ್ರೊ|ಹೆರಂಜೆ ಕೃಷ್ಣ ಭಟ್ ಸ್ವಾಗತಿಸಿ ಎಸ್.ಆರ್. ಅರುಣ ಕುಮಾರ್ ವಂದಿಸಿದರು.
ವರದಿಯ ವಿವರಗಳು |
 |
ವರದಿಗಾರರು : ಜಯಪ್ರಕಾಶ್ ಕಿಣಿ
ಪ್ರಕಟಿಸಿದ ದಿನಾಂಕ : 2009-10-14
|
|
|