ಉಡುಪಿ, ಅ.೧೨: ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಡಿ.೧೧ರಿಂದ ೧೩ರವರೆಗೆ ನಡೆಯುವ ವಿಶ್ವ ತುಳು ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ಉಡುಪಿಯಲ್ಲಿ ನ.೨೧ರಂದು ನಡೆಯುವ ಪ್ರಾದೇಶಿಕ ಸಮ್ಮೇಳನ ನಡೆಯಲಿದೆ. ಇದರ ರೂಪುರೇಷೆಗಳನ್ನು ನಿರ್ಧರಿಸಲು ಅ.೧೪ರಂದು ಎಂಜಿಎಂ ಕಾಲೇಜಿನ ನೂತನ ರಂದ್ರ ಮಂಟಪದಲ್ಲಿ ಸಮಾಲೋಚನಾ ಸಭೆ ನಡೆಯಲಿದೆ.
ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥ ರ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ರೇಂದ್ರ ಹೆಗ್ಗಡೆ ಪಾಲ್ಗೊಳ್ಳುವರು ಎಂದು ಪ್ರಾದೇಶಿಕ ಉತ್ಸವ ಸಮಿತಿ ತಿಳಿಸಿದೆ.