ರಿಯಾದ್: ಭಾರತೀಯರಿಗೆ ಕಾನೂನು ಸಲಹಾ ಘಟಕ ಒದಗಿಸಲು ಪ್ರಸ್ತಾಪ ಮಂಡನೆ |
ಪ್ರಕಟಿಸಿದ ದಿನಾಂಕ : 2008-08-22
ಸೌದಿ ಅರೇಬಿಯಾದಲ್ಲಿ ಕಾನೂನು ಉಲ್ಲಂಘನೆಯ ಕುರಿತಾದ ಘಟಕವೊಂದವೊಂದನ್ನು ಪ್ರಾರಂಭಿಸಲು ಸಿದ್ಧತೆ
ರಿಯಾದ್, ಆಗಸ್ಟ್ 22: ಸೌದಿ ಅರೇಬಿಯಾದಲ್ಲಿರುವ ಭಾರತೀಯರಿಗೆ ಕಾನೂನು ಉಲ್ಲಂಘನೆಗಳ ಕುರಿತಾಗಿ ನೆರವು ನೀಡುವ ವಿಶೇಷ ಘಟಕವೊಂದನ್ನು ಸ್ಥಾಪಿಸಲು ಭಾರತೀಯ ದೂತಾವಾಸ ಪ್ರಯತ್ನಿಸುತ್ತಿದೆ.
ಈಗಾಗಲೇ ಈ ಪ್ರಸ್ತಾಪವನ್ನು ಭಾರತ ಕೇಂದ್ರ ಸರಕಾರಕ್ಕೆ ಸಲ್ಲಿಸಿದ್ದು ಕಾನೂನು ಕುರಿತಾದ ಸಹಾಯವನ್ನು ನೀಡುವ ಘಟಕವೊಂದನ್ನು ಸ್ಥಾಪಿಸಲು ನಿಧಿಯನ್ನು ಅಪೇಕ್ಷಿಸಲಾಗಿದೆ ಎಂದು ಸೌದಿ ಅರೇಬಿಯಾದಲ್ಲಿ ಭಾರತೀಯ ರಾಯಭಾರಿಯಾಗಿರುವ ಎಮ್.ಒ. ಹೆಚ್ ಫಾರೂಕ್ ಅವರು ತಿಳಿಸಿದ್ದಾರೆ.
ಕಳೆದ ವಾರ ನಡೆದ ಸಭೆಯೊಂದರಲ್ಲಿ ಅನಿವಾಸಿ ಭಾರತೀಯರನ್ನುದ್ದೇಶಿಸಿ ಅವರು ಈ ವಿಷಯವನ್ನು ತಿಳಿಸಿದ್ದಾರೆ. ಈ ಘಟಕವನ್ನು ಸ್ಥಾಪಿಸಲು ಸೂಕ್ತ ನಿಧಿಯ ಕೊರತೆಯಿದ್ದು ಸಂಸ್ಥೆಸಂಘಗಳು ಸಹಕಾರ ನೀಡಬೇಕಾಗಿದೆ ಎಂದು ಕರೆನೀಡಿದರು.
ಈ ಘಟಕ ನಿರ್ಮಿಸಲು ಸಮಿತಿಯೊಂದನ್ನು ನೇಮಿಸಲಾಗಿದ್ದು ಸೌದಿ ಅರೇಬಿಯಾದಲ್ಲಿರುವ ಪ್ರಮುಖ ಅನಿವಾಸಿ ಭಾರತೀಯರಾದ ಲತೀಫ್ ಥೇಶಿ, ಹರಿಕೃಷ್ಣನ್, ಮಾಲಾ ಮೊಹಿಯುದ್ದೀನ್, ರಫ್ ಪಾಂಗೋಡು, ಆರ್ ಮುರಳೀಧರನ್ ಹಾಗೂ ಕೇರಳ ಅಸೋಸಿಯೇಶನ್ಸ್ ಆಫ್ ಸೌದಿ ಅರೇಬಿಯಾದ ಇಪ್ಪತ್ತು ಸಂಘಗಳ ಸದಸ್ಯರನ್ನು ಒಳಗೊಂಡಿದೆ.
ವರದಿಯ ವಿವರಗಳು |
 |
ಕೃಪೆ : ಅರಬ್ ಟೈಮ್ಸ್ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-08-22
|
|
|