ಆದಿತ್ಯವಾರ, 05-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಜನತಾ ನ್ಯಾಯಾಲಯದ ಮೂಲಕ 5154 ಪ್ರಕರಣ ಇತ್ಯರ್ಥ : ಲೋಕ್ ಅದಾಲತ್ ಸಮಾರೋಪದಲ್ಲಿ ನರೇಂದ್ರ ಕುಮಾರ್ ಗುಣಕಿ
Latest news item ಸೃಜನ ಶೀಲತೆ ಇಲ್ಲದಿದ್ದಾಗ ಶಿಕ್ಷಣದ ಬೆಳವಣಿಗೆಗೆ ಕೊರತೆ | ಅಶೋಕ್ ಕುಮಾರ್ ಶೆಟ್ಟಿ, ಎಂ.ಎಸ್.ನಾಗರಾಜ್ ರಾವ್ ಹಾಗೂ ಡಾ.ಚಂದ್ರಶೇಖರ್ ದಾಂಬ್ಲೆಯವರಿಗೆ ಸನ್ಮಾನ
Latest news item ದುಬಾಯಿಯಲ್ಲಿ ’ಗಮ್ಮತ್ ಕಲಾವಿದೇರ್’ ಪ್ರಥಮ ಪ್ರದರ್ಶನ: ನಟನಾ ಚಾತುರ್ಯದಲ್ಲಿ ಮಿಂಚಿದ ’ಈ ಪೊರ್ಲು ದಾಯೇ’ ತುಳು ನಾಟಕ
Latest news item ಸುಶಿಕ್ಷಿತರ ಸಂಖ್ಯೆ ಹೆಚ್ಚಾದಂತೆ ಕೃಷಿಯತ್ತ ಒಲವು ಕಡಿಮೆ : ಉಡುಪಿ ರೈತ ಸಮಾವೇಶದಲ್ಲಿ ಶಾಸಕ ರಘುಪತಿ ಭಟ್
Latest news item ಉಡುಪಿ ಲಯನ್ಸ್ ಗೆ ಜಿಲ್ಲಾ ಲಯನ್ಸ್ ಗವರ್ನರ್ ಇಂದ್ರಾಳಿ ಜಯಕರ್ ಶೆಟ್ಟಿ ಅಧಿಕೃತ ಭೇಟಿ
Latest news item ಸುಬ್ರಮಣಿಯನ್ ಸ್ವಾಮಿ ಅರ್ಜಿ ವಜಾ: ಚಿದಂಬರಂ ನಿರಾಳ
Latest news item ಇಲ್ರಿ.. ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿಲ್ಲ: ಯಡ್ಡಿ
Latest news item ಚೆನ್ನೈ ತೆಕ್ಕೆಗೆ ಜಡೇಜಾ; 9.70 ಕೋಟಿಗೆ ಖರೀದಿ; ವಿನಯ ಕುಮಾರ್ ಗೆ 4.86ಕೋಟಿ ಕೊಟ್ಟ ರೋಯಲ್ ಚ್ಯಾಲೇಂಜರ್ಸ್ | ಯಾವ ಯಾವ ಫ್ರಾಂಚೈಸಿ ತೆಕ್ಕೆಗೆ?
Latest news item ಗೂಳಿ ಹೊರಕ್ಕೆ: ಕಳಂಕಿತ ಸಭಾಧ್ಯಕ್ಷರೇ ಎಂದಿದ್ದಕ್ಕೆ ಸದನದಿಂದ ಒಂದು ದಿನ ಅಮಾನತು (Updated)
Latest news item ಜೈನ ಸಾಹಿತಿಗಳಿಂದ ಕನ್ನಡ ಸಾಹಿತ್ಯದ ಬೆಳವಣಿಗೆ: ಡಾ.ಶಾಂತಿನಾಥ ದಿಬ್ಬದ
Latest news item ವೈದ್ಯರಲ್ಲಿ ಮಾನವೀಯತೆ ಮುಖ್ಯ: ನ್ಯಾ. ಸಂತೋಷ್ ಹೆಗ್ಡೆ
Latest news item ಪಡುಬಿದ್ರೆಯಲ್ಲಿ ಎಸಿಸಿ ಸಿಮೆಂಟ್ ಕಂಪೆನಿ ಸ್ಥಾಪನೆ: ರಸ್ತೆ ಕಾಮಗಾರಿಗೆ ಬೂದಿ ಬಳಸಬಹದು : ಡಿಸಿ | ಫೆ. 4ರಂದು ಪ್ರತಿಭಟನೆ
Latest news item ಉಡುಪಿ ಶೇಮ್, ಶೇಮ್ !: ಸೈಂಟ್ ಮೇರೀಸ್ ದ್ವೀಪದಲ್ಲಿ ಜಿಲ್ಲಾಡಳಿತ ಕೃಪಕಟಾಕ್ಷದಲ್ಲಿ ರೇವ್ ಪಾರ್ಟಿ: ವಿದೇಶಿ ಸಂಸ್ಕೃತಿ ಆನಾವರಣ, ಮದ್ಯ, ಡ್ರಗ್ಸ್ ಗಳದ್ದೇ ಕಾರುಬಾರು
Latest news item ಅಪಘಾತಕ್ಕೆ ತುತ್ತಾಗಿ ಕಾಮಿಡಿ ನಟ ಕರಿ ಬಸವಯ್ಯ ಅಕಾಲಿಕ ಮರಣ { VIEW VIDEO of HIS EMOTIONAL LIFE STORY }.
Latest news item ಬಯಲುಸೀಮೆ ಆರು ಜಿಲ್ಲೆಗಳಿಗೆ ಕುಡಿಯುವ ನೀರು; ತಿಂಗಳಲ್ಲಿ ಎತ್ತಿನಹೊಳೆ ನಿರ್ಧಾರ. ನೇತ್ರಾವತಿ ತಿರುವು ಇಲ್ಲ..ಹೆಚ್ಚಿನ ನೀರನ್ನು ಬಳಸಿಕೊಳ್ಳುವ ಯೋಜನೆ
Latest news item ಕುಸಿಯುವ ಭೀತಿಯಲ್ಲಿ ಕುದಿ ಗ್ರಾಮದ ಕೋಂಟು ಸೇತುವೆ : ಆತಂಕದಲ್ಲಿ ಗ್ರಾಮಸ್ಥರು : ಸೂಕ್ತ ಪರಿಹಾರಕ್ಕೆ ಒತ್ತಾಯ
Latest news item ಡಿವಿಜಿಯವರ ಕಾವ್ಯಗಳು ಜನಸ್ವಾರ್ಥ : ಡಾ. ಹೆಚ್. ಶಾಂತರಾಮ್
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ಸಂಗೀತಮಯ, ನೃತ್ಯ ಸಂಯೋಜಿತ ಹಾಗೂ ಖ್ಯಾತ ತಾರೆಗಳಿಂದ ಪ್ರಜ್ವಲಗೊಂಡ ಶಾರ್ಜಾ ಕರ್ನಾಟಕ ಸಂಘದ ವಾರ್ಷಿಕೋತ್ಸವ

ಚಿತ್ರ: ಬಿ.ಜಿ.ಮೋಹನದಾಸ್ ಅವರಿಗೆ ಮಯೂರ ಪ್ರಶಸ್ತಿ ಪ್ರದಾನ

ಶಾರ್ಜಾ, ಡಿಸೆಂಬರ್ ೨೨: ಶಾರ್ಜಾ ಕರ್ನಾಟಕ ಸಂಘದ ಐದೆನೆಯ ವಾರ್ಷಿಕೋತ್ಸವ ಕಳೆದ ರಾತ್ರಿ ವಿಭಿನ್ನ ರೀತಿಯಲ್ಲಿ ನಡೆದು ಅಭೂತಪೂರ್ವ ಯಶಸ್ಸು ಕಂಡಿತು. ಯು.ಎ.ಇ.ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಕನ್ನಡಪರ ಕಾರ್ಯಕ್ರಮವೊಂದು ತೆರೆದ ಕ್ರೀಂಡಾಂಗಣದಲ್ಲಿ ನಡೆಸಿರುವುದಲ್ಲದೇ ಇನ್ನೂ ಹಲವಾರು -ಯು.ಎ.ಇ. ಯಲ್ಲಿ ಪ್ರಥಮ ಬಾರಿಗೆ- ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿತು. ಪ್ರಖರ ಹೊನಲು ಬೆಳಕು, ಸುಸಜ್ಜಿತ ವೇದಿಕೆ, ಸ್ವಾದಿಷ್ಠ ಉಪಾಹಾರ ಸಹಿತ ಹಚ್ಚಹಸುರಿನ ಶಾರ್ಜಾ ವಾಂಡರರ್ಸ್ ಕ್ಲಬ್ ಕ್ರೀಡಾಂಗಣದಲ್ಲಿ ನಡೆದ ಸಮಾರಂಭ ನೆರೆದ ಐನೂರಕ್ಕೂ ಹೆಚ್ಚಿನ ಕನ್ನಡಿಗರಲ್ಲಿ ರೋಮಾಂಚನ ಮೂಡಿಸಿತ್ತು.

ಈ ಕಾರ್ಯಕ್ರಮಕ್ಕೆಂದೇ ವಿಶೇಷವಾಗಿ ಆಗಮಿಸಿದ್ದ ಕನ್ನಡದ ಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕಿ ಶ್ರೀಮತಿ ಬಿ.ಆರ್. ಛಾಯಾ ಹಾಗೂ ಖ್ಯಾತ ರಂಗಕಲಾವಿದ ಶ್ರೀ ಕಾಸರಗೋಡು ಚಿನ್ನಾ (ಶ್ರೀನಿವಾಸ ರಾವ್ ಎಸ್) ಅವರು ವೇದಿಕೆಯಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಕಾರ್ಯಕ್ರಮವನ್ನು ಅವಿಸ್ಮರಣೀಯವನ್ನಾಗಿಸುವಲ್ಲಿ ತಮ್ಮ ಕಾಣಿಕೆ ನೀಡಿದರು. ಕಾರ್ಯಕ್ರಮದಲ್ಲಿ ಇದೇ ಪ್ರಥಮ ಬಾರಿಗೆ ಕಿಶೋರಿಯೊಬ್ಬಳು (ಕುಮಾರಿ ಪ್ರಶೋಭಿತ) ವೇದಿಕೆಯಲ್ಲಿ ಸ್ಪಷ್ಟಕನ್ನಡದಲ್ಲಿ ನಿರೂಪಣೆ ನೀಡುವ ಮೂಲಕ ಯು.ಎ.ಇ.ಯಲ್ಲಿ ಪ್ರಥಮ ಬಾರಿಗೆ ಕನ್ನಡದ ನಿರೂಪಕಿಯಾದ ಅತಿ ಕಿರಿಯ ಬಾಲಕಿ ಎಂದು ಗುರುತಿಸಲ್ಪಟ್ಟಿದ್ದಾರೆ. ತನ್ನ ಪ್ರತಿಭೆಯನ್ನು ಸುಲಲಿತವಾಗಿ ಧಾರೆ ಎರೆದ ಕಿಶೋರಿ ಮುಂದೆ ಸಮರ್ಥವಾಗಿ ಕಾರ್ಯಕ್ರಮ ನಿರೂಪಿಸುವ ಎಲ್ಲಾ ಭರವಸೆಗಳನ್ನು ನೀಡಿದ್ದಾಳೆ. ಯು.ಎ.ಇ.ಯಲ್ಲಿ ಪ್ರಥಮ ಬಾರಿಗೆ ಕರ್ನಾಟಕದ ಯಕ್ಷಗಾನದ ಪ್ರಮುಖ ವಾದ್ಯವಾದ ಚಂಡೆ ಬಾರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ನವಪೀಳಿಗೆಗೆ ಕನ್ನಡ ಕಲಿಸಿ ಎಂಬ ಸಂದೇಶವನ್ನು ಹೊತ್ತ ಸುಂದರವೇದಿಕೆ ಬರುವ ಪೀಳಿಗೆಯು ಕನ್ನಡದಿಂದ ವಂಚಿತರಾಗಬಾರದೆಂಬ ಸಂದೇಶವನ್ನು ಸಾರುವ ಫಲಕವೂ ಪ್ರಥಮ ಬಾರಿಯಾಗಿದೆ.

 ಕು.ಪ್ರಶೋಭಿತಾ ಮತ್ತು ಅಶ್ವಿನ್ ಸುಭ್ರಹ್ಮಣ್ಯ  ಹಾಡಿದ  ಸ್ವಾಗತಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು.

ಮನಸೂರೆಗೊಂಡ ನೃತ್ಯಗಳು, ಸಂಘದ ಅಧ್ಯಕ್ಷರಾದ ಶ್ರೀ ಪ್ರಭಾಕರ ಅಂಬಲ್ತೆರೆ ಹಾಗೂ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಗಣೇಶ್ ರೈ ಯವರ ಭಾಷಣಗಳು, ಕಿರುನಾಟಕಗಳು, ವಿಶೇಷವಾಗಿ ರೂಪಾ ಹಾಗೂ ದಿವ್ಯಾ ನಡೆಸಿಕೊಟ್ಟ ಭಾಗ್ಯದ ಬಳೆಗಾರ ನೃತ್ಯ ಮತ್ತು ಕಾಸರಗೋಡು ಚಿನ್ನಾ ಮತ್ತು ಸ್ಥಳೀಯ ಕಲಾವಿದರಿಂದ ಪ್ರದರ್ಶಿಸಲ್ಪಟ್ಟ ಮೂಕಾಭಿನಯ ಆರು ಘಂಟೆಗಳಿಗೂ ಹೆಚ್ಚು ನಡೆದು ನಿರೀಕ್ಷಿಸಿದ್ದಕ್ಕಿಂತಲೂ ಹೆಚ್ಚಿನ ಯಶಸ್ಸು ಕಂಡಿತು.

ಶಾರ್ಜಾ ಕರ್ನಾಟಕ ಸಂಘದ ಪ್ರತಿವರ್ಷ ಸನ್ಮಾನಿಸುತ್ತಾ ಬಂದಿರುವ ಪ್ರತಿಷ್ಠಿತ -ಮಯೂರ ಪ್ರಶಸ್ತಿ-ಯನ್ನು ದುಬೈ ಕರ್ನಾಟಕ ಸಂಘದ ಪೂರ್ವ ಅಧ್ಯಕ್ಷರಾಗಿದ್ದ ಶ್ರೀ ಬಿ.ಜಿ.ಮೋಹನದಾಸ್ ಅವರಿಗೆ ಅರ್ಹವಾಗಿ ಪ್ರದಾನಿಸಲಾಯಿತು. ಬೀಜಿ ಎಂದೇ ಆತ್ಮೀಯರಲ್ಲಿ ಹಾಸುಹೊಕ್ಕಾಗಿರುವ ಶ್ರೀ ಮೋಹನದಾಸ್ ಅವರ ಇಪ್ಪತ್ತಕ್ಕೂ ಹೆಚ್ಚಿನ ವರ್ಷಗಳ ಕನ್ನಡ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಗಾಗಿ ಅವಿರೋಧವಾಗಿ ಅವರ ಆಯ್ಕೆಯಾಗಿತ್ತು.  ಈ ಪ್ರಶಸ್ತಿಯನ್ನು ಶ್ರೀ ಮೋಹನದಾಸ್ ದಂಪತಿಗಳಿಗೆ ವೇದಿಕೆಯಲ್ಲಿ ಪ್ರದಾನಿಸಿದ ಗಣ್ಯರಲ್ಲಿ ಸಂಘದ ಪೋಷಕರಾದ ಶ್ರೀ ಮಾರ್ಕ್ ಡೆನ್ನಿಸ್, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಸರ್ವೋತ್ತಮ ಶೆಟ್ಟಿ, ಶ್ರೀ ಶೇಖರ್ ಬಾಬು ಶೆಟ್ಟಿ, ಶ್ರೀ ಅಶೋಕ್ ಶೆಟ್ಟಿ ಹಾಗೂ ಇತರರು ಪ್ರಸ್ತುತರಿದ್ದರು.  ಶ್ರೀ ಮಾರ್ಕ್ ಡೆನ್ನಿಸ್ ಅವರು ಪ್ರಶಸ್ತಿ ವಿಜೇತರಿಗೆ ಕನ್ನಡದ ಪೇಟ ತೊಡಿಸಿ ಸನ್ಮಾನಿಸಿದರು. ಶ್ರೀ ಸರ್ವೋತ್ತಮ ಶೆಟ್ಟಿಯವರು ಶಾಲು ಹೊದಿಸಿ, ಶ್ರೀ ಸುಜಯ್ ಬೆಂದೂರ್ ದಂಪತಿಗಳು ಹಾರ ತೊಡಿಸಿ, ಸಂಘದ ಕಾರ್ಯದರ್ಶಿಯಾಗಿರುವ ಶ್ರೀ ಶಾಂತಾರಾಮ್ ಆಚಾರ್ ಅವರು ಸನ್ಮಾನ ಪತ್ರ ವಿಷದಪಡಿಸಿ, ಸಂಘದ ಅಧ್ಯಕ್ಷರಾದ ಶ್ರೀ ಪ್ರಭಾಕರ ಅಂಬಲ್ತೆರೆಯವರು -ಮಯೂರ ಪ್ರಶಸ್ತಿ ಫಲಕ-ವನ್ನು ಪ್ರದಾನಿಸಿದರು. 

ತಮ್ಮ ಭಾಷಣದಲ್ಲಿ ಮಯೂರ ಪ್ರಶಸ್ತಿ ವಿಜೇತರಾದ ಶ್ರೀ ಬಿ.ಜಿ.ಮೋಹನದಾಸ್ ಅವರು ತಮಗೆ ಸಿಕ್ಕ ಈ ಪ್ರಶಸ್ತಿ ತಮಗೆ ಮಾತ್ರವಲ್ಲದೆ ತಮ್ಮ ಕೆಲಸಗಳಿಗೆ ಸರಿಸಮನಾಗಿ ಹೆಗಲುಕೊಟ್ಟು ಸಹಕರಿಸಿದ ಅರ್ಧಾಂಗಿಯವರಿಗೂ ಸಲ್ಲಬೇಕೆಂದು ಭಾವುಕರಾಗಿ ನುಡಿದರು.

ಕಾರ್ಯಕ್ರಮಕ್ಕೆ ಇನ್ನೂ ಹಲವಾರು ಕನ್ನಡದ ಕಾರ್ಯಗಳಲ್ಲಿ ಸಾಧನೆ ಮಾಡಿದವರ ಇತರರನ್ನೂ ಸನ್ಮಾನಿಸಲಾಯಿತು.  ಪ್ರಮುಖವಾಗಿ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಶ್ರೀ ಶೇಖರ್ ಬಾಬು ಶೆಟ್ಟಿ, ರೋಟೇರಿಯನ್ ಪಿ.ಎಚ್.ಎಫ್ ಹಾಗೂ ಖ್ಯಾತ ಪತ್ರಕರ್ತ ಶ್ರೀ ಪುಂಡಲೀಕ ಮರಾಠೆ, ಗಲ್ಫ್ ಯಕ್ಷಗಾನ ಕಲಾವಿದ ಚಿದಾನಂದ ಪೂಜಾರಿ ದಂಪತಿಗಳು, ಬ್ಯಾರಿ ಕವಿ ಹನೀ ಪರ್ಲಿಯಾರ್, ಕರ್ನಾಟಕದಿಂದ ಆಗಮಿಸಿರುವ ಕಲಾವಿದರಾದ ಶ್ರೀ ಕಾಸರಗೋಡು ಚಿನ್ನಾ ಮತ್ತು ಶ್ರೀಮತಿ ಬಿ.ಆರ್. ಛಾಯಾ ಮತ್ತು ಪದ್ಮಪಾಣಿ ದಂಪತಿಗಳಿಗೆ ಸಂಘದ ಸಂಪ್ರದಾಯದಂತೆ ಫಲ, ಪುಷ್ಪ, ಸನ್ಮಾನಪತ್ರ, ಹಾಗೂ ಫಲಕಗಳೊಂದಿಗೆ ಸನ್ಮಾನಿಸಲಾಯಿತು.

ತಮ್ಮ ಅಧ್ಯಕ್ಷಭಾಷಣದಲ್ಲಿ ಶ್ರೀ ಪ್ರಭಾಕರ ಅಂಬಲ್ತೆರೆಯವರು ಯು.ಎ.ಇ.ಯಲ್ಲಿರುವ ಎಲ್ಲಾ ಕನ್ನಡ ಸಂಘಗಳು ಜೊತೆಗೂಡಿ ಒಂದಾಗಿ ಕಾರ್ಯನಿರ್ವಹಿಸುವಂತೆ ಕರೆನೀಡಿದರು.  ಅನಿವಾಸಿ ಕನ್ನಡಿಗರಿಗೆ ಕರ್ನಾಟಕ ಸರ್ಕಾರ ನೀಡಬೇಕಾದ ಸವಲತ್ತುಗಳಿಗೆ ಆದ್ಯತೆ ನೀಡುವಲ್ಲಿ ಸರ್ಕಾರದ ಗಮನ ಸೆಳೆಯಬೇಕು ಎಂದು ಭಾವುಕರಾಗಿ ನುಡಿದರು.

ಎಂದಿನ ತಮ್ಮ  ಆತ್ಮೀಯ ಶೈಲಿಯಲ್ಲಿ ಸಂಘದ ಕಾರ್ಯದರ್ಶಿಯಾಗಿರುವ ಶ್ರೀ ಶಾಂತಾರಾಮ್ ಆಚಾರ್ ರವರು ಸಂಘದ ವಾರ್ಷಿಕ ಕಲಾಪಗಳ ವಿವರಣೆ ನೀಡಿದರು.

ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಉಪಸ್ಥಿತರಿದ್ದು ಪ್ರಮುಖವಾಗಿ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಾಗೂ ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಸರ್ವೋತ್ತಮ ಶೆಟ್ಟಿ, ಹಿರಿಯ ಕೊಂಕಣಿ ನಾಯಕ ಬಸ್ತಿ ವಾಮನ ಶಣೈ, ಉದ್ಯಮಿ ಶ್ರೀ ಅಶೋಕ್ ಶೆಟ್ಟಿ, ಡಾ. ಶ್ಯಾಮ್ ಸುಂದರ್, ಹೋಟೆಲ್ ಉದ್ಯಮಿ ಪ್ರವೀಣ್ ಕುಮಾರ್ ಹಾಗೂ ಮೈಸೂರ್ ಪ್ಯಾಲೇಸ್ ರೆಸ್ಟೋರೆಂಟ್ ಮಾಲಿಕರಾದ ಶ್ರೀ ಎಸ್.ಎಸ್.ರಾವ್ ಪ್ರಸ್ತುತರಿದ್ದರು.

ಸ್ಥಳೀಯ ಪ್ರತಿಭೆ ಹಾಗೂ ಕಾಸರಗೋಡು ಚಿನ್ನಾ ಅವರ ಅನುಭವೀ ನಿರ್ದೇಶನ ಸೇರಿದರೆ ಏನಾಗಬಹುದೆಂಬುದಕ್ಕೆ  ನಡೆದ ಮನರಂಜನಾ ಕಾರ್ಯಕ್ರಮಗಳೇ ಸಾಕ್ಷಿ.  ಕಾಸರಗೋಡು ಚಿನ್ನಾ ಹಾಗೂ ಸ್ಥಳೀಯರಿಂದ ಅಲ್ಪಕಾಲದ ತರಬೇತಿಯಿಂದ ಪ್ರದರ್ಶಿಸಲ್ಪಟ್ಟ ಮೂಕಾಭಿನಯ ಎಲ್ಲರ ಮನಸೆಳೆಯಿತು. ಕನ್ನಡ ಕಾರ್ಯಕ್ರಮಗಳಲ್ಲಿ ಕನ್ನಡ ಹಾಡುಗಳನ್ನು ಖ್ಯಾತ ಗಾಯಕರಷ್ಟೇ ಸಮರ್ಥವಾಗಿ ಹಾಡಬಲ್ಲ ಶ್ರೀ ರವಿರಾಜ್ ತಂತ್ರಿಯವರು ಅನೇಕ ಹಾಡುಗಳನ್ನು ಹಾಡಿ ರಂಜಿಸಿದರು. ಅದರಲ್ಲೂ ಬಭ್ರುವಾಹನ ಚಿತ್ರದ ಆರಾಧಿಸುವೆ ಮತ್ತು ಇಂದಿನ ಜಯಪ್ರಿಯ ಅನಿಸುತಿದೆ ಯಾಕೋ ಇಂದು.... ಹಾಡುಗಳು ವೀಕ್ಷಕರನ್ನು ಜಯಂತ ಕಾಯ್ಕಿಣಿಯವರ ಹಾಡನ್ನು ಗುನುಗುನಿಸುವಂತೆ ಮೋಡಿ ಮಾಡಿತ್ತು.

ಇನ್ನೋರ್ವ ಸ್ಥಳೀಯ ಗಾಯಕರಾದ ಶ್ರೀ ಡೋನಾಲ್ಡ್ ಅವರೂ ತಮ್ಮ ಪ್ರತಿಭೆ ಮೆರೆದರು. ಬಿ.ಆರ್. ಛಾಯಾ ಅವರೊಡನೊಡಗೂಡಿ ನೀಡಿದ ಸುಗಮ ಸಂಗೀತ, ಹಾಗೂ ಇನ್ನಿತರ ಹಾಡುಗಳು ವೀಕ್ಷಕರ ಮನಸೂರೆಗೊಂಡವು. ಭಾಗ್ಯದ ಬಳೆಗಾರ ಹಾಡನ್ನು ನೃತ್ಯರೂಪಕ ನೀಡಿದ ರೂಪಾ ಹಾಗೂ ದಿವ್ಯಾ ಅವರೂ ತಮ್ಮ ಪ್ರತಿಭೆ ಮೆರೆದರು.  ಕಿಶೋರರಾದ ಜತಿನ್, ತನ್ವಿ, ಕೃತಿ ಹಾಗೂ ಖುಷಿ ಯವರಿಂದ ನಡೆದ ಚಂದಾಮಾಮಾ ಬಾ ನೃತ್ಯರೂಪಕವೂ ಜನಮನಸೆಳೆಯಿತು. ಶೈಲಜಾ ಯಾದವ ಕೋಟ್ಯಾನ್, ರಕ್ಷಾ ಶಿವಚಂದ್ರ, ಸುಪ್ರಿಯಾ ವಿನೋದ ಕಾಂಚನ್, ನಂದಿತಾ ಸುನಿಲ್, ಸುಚೇತಾ ದೀಪಕ್ ಆಮೀನ್ ಹಾಗೂ ಶಶಿಕಲಾ ಸುಂದರ್ ಕಾಂಚನ್ ಅವರ ತಂಡವು ಲವಲವಿಕೆಯಿಂದ ನರ್ತಿಸಿದ ತೇರು ನೃತ್ಯರೂಪಕ ಅತ್ಯಂತ ಸುಂದರವಾಗಿ ಮೂಡಿಬಂದಿತು.

ಕಾರ್ಯಕ್ರಮದ ನಿರೂಪಣೆ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಗಣೇಶ್ ರೈ ಯವರು ನಡೆಸಿಕೊಟ್ಟರು. ಇವರಿಗೆ ನಿರೂಪಣೆಯಲ್ಲಿ ಕಿಶೋರಿ ಪ್ರಶೋಭಿತಾ ಅಂಬಲ್ತೆರೆ, ಪ್ರಭಾಕರ ಶೆಣೈ ಹಾಗೂ ಸ್ವರ್ಣ ಸತೀಶ್ ಪೂಜಾರಿಯವರು ಬೆಂಬಲ ನೀಡಿದರು. ಶ್ರೀ ಪ್ರಭಾಕರ ಶೆಣೈಯವರು ವಂದನಾರ್ಪಣೆ ಸಲ್ಲಿಸಿದರು.

ಡಿಸೆಂಬರ್ ತಿಂಗಳ ಚುಮು ಚುಮು ಚಳಿಯಲ್ಲಿಯೂ ಆಗಮಿಸಿದ್ದ ಐನೂರಕ್ಕೂ ಹೆಚ್ಚಿನ ಸಂಖ್ಯೆಯ ಕನ್ನಡಿಗರು ಕಾರ್ಯಕ್ರಮದಲ್ಲಿ ಕಡೆಯವರೆಗೂ ಪ್ರಸ್ತುತರಿದ್ದು ಯಶಸ್ವಿಗೊಳಿಸಿದರು.

ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷರು ಮತ್ತು ಸದಸ್ಯರ ಸಹಿತ ಪರೋಕ್ಷವಾಗಿ ನೆರವಾದ ಎಲ್ಲರೂ ಈ ಯಶಸ್ಸಿಗಾಗಿ ಅಭಿನಂದನಾರ್ಹರು. ಮನರಂಜನಾ ಕಾರ್ಯಕ್ರಮಗಳ ಉಸ್ತುವಾರಿ ವಹಿಸಿದ್ದ ಶ್ರೀ ವಿಶ್ವನಾಥ ಶೆಟ್ಟಿಯವರು ಕಾಸರಗೋಡು ಚಿನ್ನಾ ಮೂಕಾಭಿನಯನದ ತಂಡದಲ್ಲಿಯೂ ಪಾತ್ರ ವಹಿಸಿ ತಮ್ಮ ಪ್ರತಿಭೆ ಮೆರೆದರು.

ಶ್ರೀಮತಿ ಬಿ.ಆರ್. ಛಾಯಾ ಅವರ ಅನೇಕ ಕನ್ನಡ ಹಾಡುಗಳು ನೆರೆದವರ ಮನಸೂರೆಗೊಂಡವು.  ಶ್ರೀ ಕಾಸರಗೋಡು ಚಿನ್ನಾ ಅವರ ಮೂಕಾಭಿನಯ, ಹಾಸ್ಯಲಹರಿ ನೆರೆದವರನ್ನು ನಗೆಗಡಲಿನಲ್ಲಿ ಮುಳುಗಿಸಿದವು.  ಇತ್ತೀಚೆಗೆ ಉಡುಪಿಯಲ್ಲಿ ನಡೆದ ೭೪ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶ್ರೀ ಪುಂಡಲೀಕ ಮರಾಠೆಯವರು ಉಡುಪಿಯಿಂದ ಆಗಮಿಸಿದ್ದು ಶಾರ್ಜಾ ಕನ್ನಡ ಸಂಘ ಈ ಹಿಂದೆ ಪ್ರಸ್ತಾವಿಸಿದ್ದ ಅನಿವಾಸಿ ಕನ್ನಡಿಗರ ಸಮಸ್ಯೆಗಳ ಪರಿಶೀಲನೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂಬ ಸಿಹಿಸುದ್ದಿಯನ್ನು ಪ್ರಕಟಿಸಿದರು. ಉಡುಪಿಯಿಂದ ವಿಶೇಷವಾಗಿ ತನ್ನೊಂದಿಗೆ ತಂದಿದ್ದ ನೆನಪಿನ ಕಾಣಿಕೆಯನ್ನೂ ಅವರು ಶ್ರೀ ಶೇಖರಶೆಟ್ಟಿಯವರ ಮುಖಾಂತರ ಸಂಘದ ಅಧ್ಯಕ್ಷರಿಗೆ ನೀಡಿದರು.

ಒಟ್ಟಾರೆ ಸಂತೋಷ ಸಂಜೆಯಾಗಿ ಮಾರ್ಪಟ್ಟ -ಕುಟುಂಬ ಉತ್ಸವ- ಸಂಭ್ರಮ, ಸಡಗರ ಹಾಗೂ ಉಲ್ಲಾಸಕರವಾಗಿ ನಡೆದು ಆಗಮಿಸಿದ್ದವರನ್ನು ಹಲಕಾಲ ನೆನಪಿನಲ್ಲಿಡುವಂತೆ ಮಾಡಿತು. ಶ್ರೀ ಗಣೇಶ್ ರೈಯವರು ತಮ್ಮ ಭಾಷಣದಲ್ಲಿ ತಿಳಿಸಿದಂತೆ  ಚಳಿಯ ನೆಪ ಹೂಡಿ ಕಂಬಳಿ ಹೊದ್ದು ಮಲಗಿ ಈ ಕಾರ್ಯಕ್ರಮಕ್ಕೆ ಬರದೇ ಇದ್ದವರು ನತದೃಷ್ಟರು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಗಲ್ಫ್ ಕನ್ನಡಿಗ ತಂಡ
ವರದಿಗಾರರು : ಅರ್ಶದ್ ಹುಸೈನ್
ಪ್ರಕಟಿಸಿದ ದಿನಾಂಕ : 2007-12-22 00:00:00

Tell a Friend
ಇತರ ಸಂಭಂದಪಟ್ಟ ವರದಿಗಳು
»
»ಕಾಸರಗೋಡು ಚಿನ್ನಾ ಅವರೊಂದಿಗೆ ಗಲ್ಫ್ ಕನ್ನಡಿಗ ವಿಶೇಷ ಸಂದರ್ಶನ
»
»ಪ್ರತಿಷ್ಠಿತ 'ಮಯೂರ ಪ್ರಶಸ್ತಿ’ ಗೆ ಶ್ರೀ ಬಿ.ಜಿ. ಮೋಹನದಾಸ ರವರ ಆಯ್ಕೆ
»
»ವೈಭವದ ಹಾಗೂ ಸಂಗೀತಮಯ =ಕುಟುಂಬ ಉತ್ಸವ= ಆಚರಿಸಲು ಶಾರ್ಜಾ ಕನ್ನಡ ಸಂಘ ಸಜ್ಜು.
»
»

ಪ್ರತಿಸ್ಪಂದನ
Harish, Bangalore
2007-12-22
Dear Arshad Hussain, Thank you that you are reaching all Kannadigas with this mail. Yesterday I have attended the function, it was nice to see such Kannada speaking people getting toghether. I have got the information thruogh your mail Gulf Kannadiga only so thanks for that. The programme was nice but only thing was it was little bit dragging. Or we felt like that since it was arranged out side in cold weather. But I have a feeling that this Karnataka Sangha is becoming a Mangalooreans sangha as I am seeing all people from Mangalore side only- maximum Tulu speaking. Why I am pointing it out is I have gone through the 'Sadhane' book where 95% people and whom this sangha given awards are from South Kanara only. Hence totaly it is becoming a pure south kanara angha as I see!.Why this feeling is like in Dubai I heard that only Kannada speaking people started their own sangha called Kannada Balaga, in which they have celebrated their Rajyotsava function in Karam Hotel a week after Dubai Kannada sangha clebrated their Rajyotsava. If these things are happening, first of all we don't have unity as pointed out by Mr.Kasaragodu Chinna in his interview, where will we go making so many small small sanghas. As per my knowelgde becasue of this area wise sahga people hesitate to join these sanghas, basically for this regional importance not to the State...
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಯುಎಇ]

»ದುಬಾಯಿಯಲ್ಲಿ ’ಗಮ್ಮತ್ ಕಲಾವಿದೇರ್’ ಪ್ರಥಮ ಪ್ರದರ್ಶನ: ನಟನಾ ಚಾತುರ್ಯದಲ್ಲಿ ಮಿಂಚಿದ ’ಈ ಪೊರ್ಲು ದಾಯೇ’ ತುಳು ನಾಟಕ
»ದುಬೈಯಲ್ಲಿ ಹೊಸ ಗುರುದ್ವಾರ: ದುಬೈ ಆಡಳಿತಗಾರರಿಗೆ ಸಿಖ್ ಸಮುದಾಯದ ಕೃತಜ್ಞತೆ
»ಪೆ.10ರಂದು ಪಾಂಬೂರು ಕ್ರಿಕೆಟ್ ಟೂರ್ನಮೆಂಟ್: 26 ತಂಡಗಳು ಸರದಿಯಲ್ಲಿ
»ಫೆ.10: ಬಹು ನಿರೀಕ್ಷಿತ 8ನೇ ಜೆ.ಎಮ್.ಸಿ ಅಜ್ಮಾನ್ ಫನ್ ರನ್; ಈ ಪ್ರಸಿದ್ಧ ಓಟದಲ್ಲಿ ಭಾಗವಹಿಸಿ ಬಹುಮಾನ ಪಡೆಯಿರಿ...!
»ಅಬುಧಾಬಿಯಲ್ಲಿ ಕುವೆಂಪು ಕಲಾಉತ್ಸವ ಮತ್ತು ವಿಶ್ವ ಕನ್ನಡ ಸಮ್ಮೇಳನ - ಕೊಲ್ಲಿ ನಾಡಿನಲ್ಲಿ ಪ್ರತಿಧ್ವನಿಸಿದ ಕನ್ನಡ ದಿಂಡಿಮ....
»ಅಬುಧಾಬಿಯಲ್ಲಿ 'ವಿಶ್ವಮಾನವ ಕುವೆಂಪು ಕಲಾ ಉತ್ಸವ 'ಮತ್ತು ೨ನೇ ವಿಶ್ವಕನ್ನಡ ಸಮ್ಮೇಳನ: ಭರ್ಜರಿ ಸಾಂಪ್ರದಾಯಿಕ ಉದ್ಘಾಟನೆ....ಸಮ್ಮೇಳನಕ್ಕೆ ಚಾಲನೆ
»ಜನವರಿ ೨೭: ಅಬುಧಾಬಿಯಲ್ಲಿ ' ವಿಶ್ವಮಾನವ ಕುವೆಂಪು ಕಲಾ ಉತ್ಸವ 'ಮತ್ತು ೨ನೇ ವಿಶ್ವಕನ್ನಡ ಸಮ್ಮೇಳನ: ಕರ್ನಾಟಕದ ಮಾನ್ಯ ಮುಖ್ಯಮಂತ್ರಿ ಸನ್ಮಾನ್ಯ ಡಿ.ವಿ.ಸದಾನಂದ ಗೌಡರಿಂದ ಉದ್ಘಾಟನೆ....
»ಯು.ಎ.ಇ ಒಕ್ಕಲಿಗರ ಸಂಘದ ಆಶ್ರಯದಲ್ಲಿ ಮಕರ ಸಂಕ್ರಾತಿ ಸಂಭ್ರಮ
»ದುಬೈ ದೇವಾಡಿಗ ಸಂಘ ೨೦ನೇ ವಷಕ್ಕೆ ಪಾದಾರ್ಪಣೆ : ಹೊಸ ಕಾರ್ಯಕಾರೀ ಸಮಿತಿ ರಚನೆ; ಹರೀಶ್ ಶೇರಿಗಾರ್ ಅದ್ಯಕ್ಷ
»Death toll from scaffolding collapse in UAE rises to three
»ಯು ಎ ಇ ಹವಾಮಾನ ವರದಿ: ಹೆಚ್ಚಿದ ಶೀತಗಾಳಿ ... ತಾಪಮಾನ ಶೂನ್ಯಕ್ಕೆ?
»ಪೆ.3 ರಂದು ದುಬಾಯಿಯಲ್ಲಿ ತುಳು ಸಾಮಾಜಿಕ ನಾಟಕ ಈ..ಪೊರ್ಲು.....ದಾಯೆ....?
»ಅಬುಧಾಬಿ: ಮಂಗಳೂರು ಕೊಂಕಣ್ಸ್ ಗೆ ಕೂಸಮ್ಮ ಶಂಬು ಶೆಟ್ಟಿ ಸ್ಮಾರಕ ಸಮಗ್ರ ಥ್ರೋ ಬಾಲ್ ಟ್ರೋಫಿ
»ಉಮಲ್ ಮೌಮಿನಿನ್ ಆಸೋಸಿಯೇಶನ್ ಮತ್ತು ಗಲ್ಪ್ ಮೆಡಿಕಲ್ ಯುನಿರ್ವಸಿಟಿ ಅಜ್ಮಾನ್ ವತಿಯಿಂದ ಜೀವನ ಪದ್ದತಿ ಮತ್ತು ಕೌಟುಂಬಿಕ ಆರೋಗ್ಯ ಕುರಿತ ಕಾರ್ಯಗಾರ
»ದುಬೈ: ಕನ್ನಡ ಕೂಟ ಯು.ಎ.ಇ. ಯಿಂದ ಸಂಭ್ರಮದ ಸಂಕ್ರಾಂತಿ ಆಚರಣೆ: ಲೇಖಕಿ ಸುಧಾ ಸರಣೋಮತ್ ಉಪಸ್ಥಿತಿ - ಹಲವು ಆಟೋಟಗಳಲ್ಲಿ ಮಕ್ಕಳಾದ ಹಿರಿಯರು
»ದುಬಾಯಿ: ನಾರಾಯಣ ಸೇವಾ ಸಮಿತಿಯ ವತಿಯಿಂದ ನಡೆದ ಅಖಂಡಾ ಭಜನಾ ಮಹೋತ್ಸವ
»Divine intervention: 'An angel saved my life'
»Dubai: How genuine are DSF discounts?
»Police deny woman confessed to helping kill her daughter; Suicide survivor suffers from amnesia, moved to psychiatric ward
»ಜ.೨೭. ಕುವೆಂಪು ಕಲಾ ಉತ್ಸವ ಮತ್ತು ಎರಡನೇ ವಿಶ್ವ ಕನ್ನಡ ಸಮ್ಮೇಳನ,ಅಬುಧಾಬಿ-೨೦೧೨: ಮುಖ್ಯ ಅತಿಥಿಯಾಗಿ ಮಾನ್ಯ ಮುಖ್ಯಮಂತ್ರಿ ಶ್ರೀ.ಡಿ.ವಿ.ಸದಾನಂದ ಗೌಡ
»ಉತ್ಸುಕರಾಗಿ ನಿರೀಕ್ಷಿಸಿರಿ.....! ದುಬೈಯಲ್ಲಿ 'ಆಷಾಡದ ಒಂದು ದಿನ'.....
»ಜ.20: ಕ್ರೀಡಾಭಿಮಾನಿಗಳು ಉತ್ಸುಕರಾಗಿ ನಿರೀಕ್ಷಿಸುತ್ತಿರುವ ಪ್ರಖ್ಯಾತ ಕೂಸಮ್ಮ ಶಂಬುಶೆಟ್ಟಿ ಸ್ಮಾರಕ ಥ್ರೋಬಾಲ್ ಪಂದ್ಯಾವಳಿ
»ಯು.ಎ.ಇ ಒಕ್ಕಲಿಗರ ಸಂಘ ಇದರ ವತಿಯಿಂದ ಜನವರಿ 20ರಂದು ಮಕರ ಸಂಕ್ರಾತಿ ಆಚರಣೆ
»ಉತ್ತೇಜನದಿಂದ ಜರುಗಿದ ಬ್ಯಾರಿಸ್ ಕಲ್ಚರಲ್ ಪೊರಂ ನ 2012 ರ ವಾರ್ಷಿಕ ಕ್ರೀಡೋತ್ಸವ
»ದುಬೈ: ಗಾಳಿಪಟ ಹಾರಿಸುವ ಸ್ಪರ್ದೆ: ಜನಪ್ರಿಯತೆ ಪಡೆದ ಟೀಂ ಮಂಗಳೂರಿನ ಬಣ್ನ ಬಣ್ನದ ಸಾಂಸ್ಕೃತಿಕ ವಿನ್ಯಾಸದ ಗಾಳೀ ಪಟಗಳು
»ನಿರ್ದೇಶನದಲ್ಲಿ ಹೊಸತನ ಹಾಗೂ ಮತ್ತು ಪನ್ಚಿಂಗ್ ಹಾಸ್ಯ ಸಂವಾದ - ನಟನೆಗಳಿಂದ ಮನಸೆಳೆದ ತುಳುನಾಟಕ ’ಆಯೆ ಸುಬಗ”; ನಕ್ಕು ನಲಿದ ಪ್ರೇಕ್ಷಕ ವರ್ಗ, ನಮ ತುಳುವೆರ್ ದಾಖಲೆ
»ದುಬೈ: ಜ 20 ರಂದು ಕನ್ನಡ ಕೂಟ ಯು.ಎ.ಇ. ಆಚರಿಸಲಿರುವ ಸಂಕ್ರಾಂತಿ - 2012 ಕಾರ್ಯಕ್ರಮ
»ನಮ ತುಳುವೆರ್ ಸಂಘಟನೆ ವತಿಯಿಂದ ನಾಳೆ ಜನವರಿ 13ರಂದು ನಡೆಯಲಿರುವ ’ಅಯೆ ಸುಬಗೆ’ ತುಳು ನಾಟಕ: ರಂಗತರಂಗ ತಂಡದ ಕಲಾವಿದರ ಆಗಮನ
» ಶಾರ್ಜಾ ಕರ್ನಾಟಕ ಸಂಘದ 2012 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿ : ಅಧ್ಯಕ್ಷರಾಗಿ ಶ್ರೀ ಸತೀಶ್ ಪೂಜಾರಿ ಆಯ್ಕೆ
»ಸಮಸ್ತ ಸಮ್ಮೇಳನದ ಪ್ರಚಾರ ಹಾಗೂ C M ಉಸ್ತಾದರ ಅನುಸ್ಮರಣಾ ಸಮಾರಂಭ
»ಯು.ಎ.ಇ ಪೋಲಿಸ್ ವರದಿಗಳು...
»Sharjah: Indian woman murdered, government to bring back body
»ಪೆ.10ರಂದು ಪಾಂಬೂರು ಕ್ರಿಕೆಟ್ ಟೂರ್ನಮೆಂಟ್
»ದುಬಾಯಿಯಲ್ಲಿ ಜನವರಿ13ರಂದು ಅಖಂಡ ಭಜನಾ ಮಹೋತ್ಸವ
»ನಮ್ಮ ತುಳುವೆರ್ ಸಂಘಟನೆ ವತಿಯಿಂದ ಜನವರಿ 13ರಂದು ದುಬಾಯಿಯಲ್ಲಿ ಅಯೆ ಸುಬಗೆ ನಾಟಕ ಪ್ರದರ್ಶನ
»ಕುಂದಾಪುರ ದೇವಾಡಿಗ ಮಿತ್ರರ ವೇದಿಕೆ ’ಕದಮ್’ ತನ್ನ ಪ್ರಥಮ ವರ್ಷಾಚರಣೆಯ ಸಂಭ್ರಮದಲ್ಲಿ...’ದೇವಾಡಿಗ ಸಾಧಕ ಪ್ರಶಸ್ತಿ’ ಶ್ರೀ ಬಿ. ಜಿ. ಮೋಹನ್ ದಾಸ್ ರವರ ಮಡಿಲಿಗೆ
»Govt clears proposal for providing insurance, pension benefits to overseas Indian workers
»ದುಬೈಗೆ ಬೇಟಿ ನೀಡಿದ ಎಸ್ಸೆಸ್ಸೆಫ್ ದಕ್ಷಿಣ ಭಾರತ ಅಧ್ಯಕ್ಷ ಅಬ್ದುರ್ರಶೀದ್ ಝೈನಿ ಕಾಮಿಲ್ ರವರಿಗೆ ದುಬೈ ವಿಮಾನ ನಿಲ್ಧಾಣದಲ್ಲಿ ಭವ್ಯ ಸ್ವಾಗತ
»ಯು.ಎ.ಇ.ಬಂಟ್ಸ್ ವಿಹಾರ ಕೂಟ: ಸಫಾ ಉಧ್ಯಾನವನದ ಆಹ್ಲಾದಕರ ವಾತವರಣದಲ್ಲಿ ನಕ್ಕು ನಲಿದಾಡಿದ ಬಂಟ ಬಾಂಧವರು.
»ಬಾಲಕನಿಂದ ಕಾರು ಚಾಲನೆ: ಇಬ್ಬರು ಮೃತ್ಯು
»ರಾಮಕ್ಷತ್ರೀಯ ಸಂಘ ಯು.ಎ.ಇ.ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿಪೂರ್ವಕವಾಗಿ ನಡೆದ 7ನೇ ವರ್ಷದ ಶ್ರೀ ಸತ್ಯನಾರಾಯಣ ಪೂಜೆ
»ಫೆ 10: ಪಂಬೂರ್ ಸೆವೆನ್ ಕ್ರಿಕೆಟ್ ಟೂರ್ನಮೆಂಟ್: ವಿನ್ನಿ’ಸ್ ಟ್ರೋಫಿ ಗೆಲ್ಲಲು ತಂಡಗಳ ಸಜ್ಜು
»ಮೊಗವೀರ್ ಯುಏಯಿ ಅವರ ನಾಲ್ಕನೇ ವಾರ್ಷಿಕೋತ್ಸವ ಮತ್ತು ಕ್ರೀಡಾಕೂಟ
»ಅಬುದಾಬಿ ಕರ್ನಾಟಕ ಸಂಘದ ವತಿಯಿಂದ ವಾರ್ಷಿಕ ಪ್ರವಾಸ
»ನಮ್ಮ ತುಳುವೆರ್ ಸಂಘಟನೆ ವತಿಯಿಂದ ಜನವರಿ 13ರಂದು ದುಬಾಯಿಯಲ್ಲಿ ಅಯೆ ಸುಬಗೆ ನಾಟಕ ಪ್ರದರ್ಶನ
»ಮೊಗವೀರ ಸಂಘಟನೆಯು 4ನೇ ವಾರ್ಷಿಕೋತ್ಸವ: ಡಿ.23ರಂದು ಶಾರ್ಜಾದ ವಂಡರರ್ಸ್ ಸ್ಪೋಟ್ಸ್ ಕ್ಲಬ್ ನಲ್ಲಿ ಕ್ರೀಡಾಕೂಟ
»ಅರಬ್ ಉಡುಪಿ ರೆಸ್ಟೊರೆಂಟ್ ಅಜ್ಮಾನ್; ಗೌ| ಶೇಖ್ ಡಾ. ಮಜಿದ್ ಬಿನ್ ಸಹೀದ್ ಅಲ್ ನುವೈಮಿ ಯವರಿಂದ ಉದ್ಘಾಟನೆ
»ಕಾಞಂಗಾಡ್ ಯುವಕ ಅಬುಧಾಬಿಯಲ್ಲಿ ಸಾವು
»ಯು.ಎ.ಇ ಯ 40ನೇ ವಾರ್ಷಿಕೋತ್ಸವ : ಬ್ಯಾರೀಸ್ ವೆಲ್ ಫೇರ್ ಫೋರಂ ವತಿಯಿಂದ ಪಿಕ್ ನಿಕ್ ಆಯೋಜನೆ
»ಅಬುಧಾಬಿ: ಸುರಂಗದಲ್ಲಿ ಸಿಲುಕಿ ಕಾಞಂಗಾಡ್ ಯುವಕನ ಸಾವು

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri