ಜನ, ವಾಹನ ದಟ್ಟಣೆಯ ಸುಳಿಯಲ್ಲಿ ಕೆಆರ್ ಮಾರ್ಕೆಟ್ ಸದಾ ಗಜಿಬಿಜಿ, ಗೌಜು ಗ್ದದಲ, ಗಲೀಜಿನ ವಾತಾವರಣ |
ಪ್ರಕಟಿಸಿದ ದಿನಾಂಕ : 2008-08-09
ಮೈಸೂರು ಮಹಾರಾಜರ ಕಾಲದಲ್ಲಿ ನಿರ್ಮಾಣಗೊಂಡು ಇತಿಹಾಸ ಪ್ರಸಿದ್ಧಿ ಹೊಂದಿರುವ ಕೃಷ್ಣರಾಜೇಂದ್ರ ಮಾರುಕಟ್ಟೆ ಪ್ರದೇಶವನ್ನು ನೆನೆಸಿಕೊಂಡರೆ ಸಾಕು; ಸದಾ ಗಜಿಬಿಜಿ, ಗೌಜು ಗದ್ದಲ, ಗಲೀಜಿನ ವಾತಾವರಣ ಕಣ್ಮುಂದೆ ಸುಳಿಯುತ್ತದೆ.
ಬೆಂಗಳೂರು: ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ರಾಜಧಾನಿ ಎಂಬ ಹಿರಿಮೆ ಗರಿಮೆಗಳ ಮೂಲಕ ಬೆಂಗಳೂರು ಜಾಗತಿಕ ನಗರವಾಗಿ ರೂಪುಗೊಳ್ಳುವ ಹಾದಿಯಲ್ಲಿದೆ. ಆದರೆ ಈ ಬದಲಾವಣೆಗೂ ತನಗೂ ಸಂಬಂಧವೇ ಇಲ್ಲವೇನೋ ಎಂಬಂತೆ ನಗರದ ಕೆಲವು ಹಳೆಯ ಪ್ರಮುಖ ಪ್ರದೇಶಗಳು ಹಿಂದುಳಿದಿವೆ. ಅಂತಹವುಗಳ ಪೈಕಿ ಕೆ.ಆರ್.ಮಾರ್ಕೆಟ್ ಪ್ರದೇಶ ಪ್ರಮುಖವಾದುದು.
ಮೈಸೂರು ಮಹಾರಾಜರ ಕಾಲದಲ್ಲಿ ನಿರ್ಮಾಣಗೊಂಡು ಇತಿಹಾಸ ಪ್ರಸಿದ್ಧಿ ಹೊಂದಿರುವ ಕೃಷ್ಣರಾಜೇಂದ್ರ ಮಾರುಕಟ್ಟೆ ಪ್ರದೇಶವನ್ನು ನೆನೆಸಿಕೊಂಡರೆ ಸಾಕು; ಸದಾ ಗಜಿಬಿಜಿ, ಗೌಜು ಗ್ದದಲ, ಗಲೀಜಿನ ವಾತಾವರಣ ಕಣ್ಮುಂದೆ ಸುಳಿಯುತ್ತದೆ. 1928 ರಲ್ಲಿ ಆಗಿನ ಮೈಸೂರು ಸಂಸ್ಥಾನದ ದಿವಾನರಾದ ಮಿರ್ಜಾ ಇಸ್ಮಾಯಿಲ್ ಅವರಿಂದ ಕೆ.ಆರ್.ಮಾರ್ಕೆಟ್ ಉದ್ಘಾಟನೆಗೊಂಡಿತು.
ಈ 80 ವರ್ಷಗಳಲ್ಲಿ ಬೆಂಗಳೂರು ಆಗಾಧವಾಗಿ ಬೆಳೆದಿದೆ. ಜನಸಂಖ್ಯೆಯೂ ಭಾರಿ ಪ್ರಮಾಣದ್ಲಲಿಯೇ ಹೆಚ್ಚಾಗಿದೆ. ಮಾರ್ಕೆಟ್ಗೆ ಬಂದು ಹೋಗುವವರ ಸಂಖ್ಯೆ ಸಹ ನೂರಾರು ಪಟ್ಟು ಹೆಚ್ಚಾಗಿದೆ. ಆದರೆ ಮಾರ್ಕೆಟ್ಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಗಲ ಮಾತ್ರ ಇದಷ್ಟೇ ಇದೆ. ಪರಿಣಾಮ ನಿತ್ಯ ಜನ ಮತ್ತು ವಾಹನ ದಟ್ಟಣೆಯಿಂದ ಮಾರ್ಕೆಟ್ ಪ್ರದೇಶ ತುಂಬಿ ತುಳುಕುತ್ತದೆ.
ಕೇಂದ್ರ ಬಸ್ ನಿಲ್ದಾಣ ಮತ್ತು ರೈಲು ನಿಲ್ದಾಣಗಳಿಗೆ ಪ್ರಯಾಣಿಕರು ಮಾತ್ರ ಬಂದು ಹೋಗುತ್ತಾರೆ. ಆದರೆ ಈ ಮಾರ್ಕೆಟ್ ಮತ್ತು ಅದರ ಸುತ್ತಲಿನ ಪ್ರದೇಶಗಳಲ್ಲಿ ವೈವಿಧ್ಯಮಯ ಸಗಟು ಪದಾರ್ಥಗಳ ವ್ಯಾಪಾರ ವಹಿವಾಟು ಭರ್ಜರಿಯಾಗಿ ನಡೆಯುವುದರಿಂದ ಈ ಪ್ರದೇಶಕ್ಕೆ ನಗರದ ವಿವಿಧ ಭಾಗಗಳಿಂದಷ್ಟೇ ಅಲ್ಲದೆ ಹೊರ ಊರುಗಳಿಂದಲೂ ಭಾರಿ ಸಂಖ್ಯೆಯ್ಲಲಿ ಜನರು ಬಂದು ಹೋಗುತ್ತಾರೆ.
ಅನೇಕ ಬಡಾವಣೆಗಳ್ಲಲಿ ದೊಡ್ಡ ದೊಡ್ಡ ವಾಣಿಜ್ಯ ಸಂಕೀರ್ಣಗಳು ವ್ಯಾಪಾರ ಮತ್ತು ವಿಹಾರ ತಾಣಗಳಾಗಿ ಜನರನ್ನು ಆಕರ್ಷಿಸುತ್ತಿದ್ದರೂ ಕೆ.ಆರ್.ಮಾರ್ಕೆಟ್ ಪ್ರದೇಶದ ವ್ಯಾಪಾರ ವಹಿವಾಟಿಗೆ ಭಂಗ ಬಂದಿಲ್ಲ.
ದೊಡ್ಡಾಸ್ಪತ್ರೆ ಎಂದೇ ಹೆಸರಾದ ವಿಕ್ಟೋರಿಯಾ ಆಸ್ಪತ್ರೆ, ಮಿಂಟೋ ಕಣ್ಣಾಸ್ಪತ್ರೆ, ವಾಣಿ ವಿಲಾಸ ಆಸ್ಪತ್ರೆ, ಬೆಂಗಳೂರು ವೈದ್ಯಕೀಯ ಮತ್ತು ದಂತ ವೈದ್ಯ ಕಾಲೇಜುಗಳಲ್ಲದೆ ಸರ್ಕಾರಿ ಮತ್ತು ಖಾಸಗಿ ಶಾಲಾ ಕಾಲೇಜುಗಳು ಈ ಭಾಗದಲ್ಲಿದ್ದು ಅವು ಸಹ ಸಂಚಾರ ದಟ್ಟಣೆಗೆ ತಮ್ಮದೇ ಆದ ಕೊಡುಗೆ ನೀಡಿವೆ.
ನಗರದ ಉತ್ತರ- ದಕ್ಷಿಣ, ಪೂರ್ವ- ಪಶ್ಚಿಮ ಭಾಗಗಳನ್ನು ಬೆಸೆಯುವ ಈ ಮಾರ್ಕೆಟ್ ಜಂಕ್ಷನ್ಅನ್ನು ಪ್ರತಿನಿತ್ಯ ನೂರಾರು ಬಸ್ಗಳು ಸಾವಿರಾರು ಸಲ ಹಾದು ಹೋಗಬೇಕಾಗಿರುವುದರಿಂದ ಬಸ್ಗಳ ಸಂಚಾರವೂ ವಿಳಂಬವಾಗುತ್ತಿದೆ.
‘20-30 ವರ್ಷಗಳಿಂದಲೂ ಈ ಮಾರ್ಕೆಟ್ಗೆ ಬಂದು ಹೋಗ್ತಾ ಇdದೇನೆ. ಸಿಟಿ ಬೇರೆ ಬೇರೆ ಕಡೆ ತುಂಬಾ ಇಂಪ್ರೂವ್ ಆಗಿದೆ. ಆದರೆ ಇಲ್ಲಿ ಮಾತ್ರ ಎಲ್ಲ ಇದಂಗ್ಗೆ ಇದೆ. ಅದೇ ರಶ್ಸು, ಅದೇ ಕೊಳಕು. ಇದು ಬದಲಾಗುವುದೇ ಇಲವೇನೋ?’ ಎಂದು ನೆಲಮಂಗಲ ಕಡೆಯ ಲಿಂಗರಾಜ ಬೇಸರ ವ್ಯಕ್ತಪಡಿಸಿದರು.
ಬಂದು ಹೋಗುವ ಜನರು ಮತ್ತು ವಾಹನಗಳ ದಟ್ಟಣೆಯನ್ನು ತಡೆದುಕೊಳ್ಳುವ ಶಕ್ತಿ ಈ ಪ್ರದೇಶಕ್ಕಿಲ್ಲ. ವಾಹನ ಸಂಚಾರ ದಟ್ಟಣೆ ತಡೆಯಲು ಮಾರ್ಕೆಟ್ ಸಮೀಪದಿಂದ ಮೈಸೂರು ರಸ್ತೆಯ ಸಿರ್ಸಿ ವೃತ್ತದವರೆಗೆ ಎರಡೂವರೆ ಕಿಲೋ ಮೀಟರ್ ಉದ್ದದ ಮೇಲ್ಸೇತುವೆಯನ್ನು ನಿರ್ಮಿಸಿ ಹತ್ತು ವರ್ಷಗಳ ಮೇಲಾಯಿತು. ಆದರೂ ಮಾರ್ಕೆಟ್ ಆಸುಪಾಸಿನ ರಸ್ತೆಗಳ್ಲಲಿ ವಾಹನ ಸಂಚಾರ ದಟ್ಟಣೆ ಕಡಿಮೆಯಾಗಲೇ ಇಲ್ಲ.
ಪಾದಚಾರಿಗಳಿಗಾಗಿ ಹೊಸ ಸುರಂಗ ಮಾರ್ಗ ನಿರ್ಮಾಣ ಕಾರ್ಯ ಕುಂಟುತ್ತಾ ಸಾಗಿದೆ. ಈ ಸುರಂಗ ಮಾರ್ಗ ಸಿದ್ಧವಾದರೂ ಈ ಪ್ರದೇಶದ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ದೊರಕುವ ಸಾಧ್ಯತೆ ಇದ್ದಂತ್ಲಿಲ.
ಈ ಪ್ರದೇಶದಲ್ಲಿರುವ ಸಗಟು ವ್ಯಾಪಾರ ವಹಿವಾಟನ್ನು ಹೊರ ವಲಯಕ್ಕೆ ಸ್ಥಳಾಂತರಿಸುವ ಬಗ್ಗೆ ಹತ್ತಾರು ವರ್ಷಗಳಿಂದ ಚಿಂತನೆ ನಡೆದಿದೆ. ಆದರೆ ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ. ಅವ್ಯವಸ್ಥೆಗೆ ಮತ್ತೊಂದು ಹೆಸರಾಗಿರುವ ಕಲಾಸಿಪಾಳ್ಯದ ಬಸ್ ನಿಲ್ದಾಣದ ಜಾಗದಲ್ಲಿ ಹೈಟೆಕ್ ಬಸ್ ನಿಲ್ದಾಣದ ಜತೆ ವಿವಿದ್ದೋದೇಶ ಸಂಕೀರ್ಣ ನಿರ್ಮಿಸುವ ಯೋಜನೆಯೂ ನೆನೆಗುದಿಗೆ ಬಿದ್ದಿದೆ.
ಸಗಟು ವರ್ತಕರೊಂದಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಸರ್ಕಾರ ಮಾತುಕತೆ ನಡೆಸಿ ಮಾರ್ಕೆಟ್ ಪ್ರದೇಶದ ದಟ್ಟಣೆ ಸಮಸ್ಯೆಗಳ ನಿವಾರಣೆಗೆ ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕಾಗಿದೆ. ಕೆಲ ಬಗೆಯ ಸಗಟು ವಹಿವಾಟುಗಳನ್ನು ಸ್ಥಳಾಂತರಿಸಬಹುದು.
ಇನ್ನು ಕೆಲ ಬಗೆಯ ವಹಿವಾಟನ್ನು ಸಮಾನ ಮನಸ್ಕ ವ್ಯಾಪಾರೋದ್ಯಮಿಗಳು ಸಹಕಾರ ತತ್ವದಡಿಯಲ್ಲಿ ತಾವಿರುವ ಸ್ಥಳಗಳಲ್ಲಿಯೇ ಬೃಹತ್ ಸಂಕೀರ್ಣಗಳನ್ನು ನಿರ್ಮಿಸಿಕೊಂಡು ಸಂಚಾರ ದಟ್ಟಣೆ ಪರಿಹಾರಕ್ಕೆ ಯತ್ನಿಸಬಹುದು. ಎಲ್ಲ ಕಡೆ ರಸ್ತೆ ವಿಸ್ತರಣೆ ಸಾಧ್ಯ ವಾಗದೇ ಇದರೆ ಅಂಡರ್ಪಾಸ್, ಮೇಲ್ಸೇತುವೆ ಸೇರಿದಂತೆ ವಿವಿಧ ಹಂತದ ರಸ್ತೆಗಳನ್ನು ನಿರ್ಮಿಸಿ ಸಂಚಾರ ದಟ್ಟಣೆಯನ್ನು ನೀಗಬೇಕಾಗಿದೆ.
ವರದಿಯ ವಿವರಗಳು |
 |
ಕೃಪೆ : ಎನ್.ಸ್ದಿದೇಗೌಡ | ಪ್ರಜಾವಾಣಿ ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-08-09
|
|
|