ಬೇಹುಗಾರಿಕೆ ಸಂಸ್ಥೆಯ ಕುಟುಕು ಕಾರ್ಯಾಚರಣೆ;ಅಮೆರಿಕದಲ್ಲಿ ಜೈಲು ಸೇರಿರುವ ಚಿತ್ರದುರ್ಗ ಎಂಜಿನಿಯರ್ |
ಪ್ರಕಟಿಸಿದ ದಿನಾಂಕ : 2008-08-07
12 ವರ್ಷದ ಬಾಲಕಿಯನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಸಂಚು ರೂಪಿಸಿದ ಮತ್ತು ಅಸಭ್ಯವಾಗಿ ಸಂವಹನ ನಡೆಸಿದ ಆರೋಪಗಳನ್ನು ಅವರ ಮೇಲೆ ಹೊರೆಸಲಾಗಿದ್ದು, ಕಳೆದ ಒಂಬತ್ತು ತಿಂಗಳಿನಿಂದ ಅವರು ಜೈಲಿನಲ್ಲಿದ್ದಾರೆ.
ಬೆಂಗಳೂರು: ಅಮೆರಿಕ ಪೊಲೀಸರು ಮತ್ತು ಬೇಹುಗಾರಿಕೆ ಸಂಸ್ಥೆ ಜೊತೆಗೂಡಿ ನಡೆಸಿದ ಕುಟುಕು ಕಾರ್ಯಾಚರಣೆಯಿಂದ ಚಿತ್ರದುರ್ಗ ಮೂಲದ ನವೀನ್ ನಿಂಗಪ್ಪ ಎಂಬುವರು ಜೈಲು ಸೇರಿದ್ದಾರೆ. 12 ವರ್ಷದ ಬಾಲಕಿಯನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಸಂಚು ರೂಪಿಸಿದ ಮತ್ತು ಅಸಭ್ಯವಾಗಿ ಸಂವಹನ ನಡೆಸಿದ ಆರೋಪಗಳನ್ನು ಅವರ ಮೇಲೆ ಹೊರೆಸಲಾಗಿದ್ದು, ಕಳೆದ ಒಂಬತ್ತು ತಿಂಗಳಿನಿಂದ ಅವರು ಜೈಲಿನಲ್ಲಿದ್ದಾರೆ.
ಹಾಸನದ ಕಾಲೇಜಿನಲ್ಲಿ ಎಂಜಿನಿಯರಿಂಗ್ ಅಧ್ಯಯನ ಮಾಡಿದ ನವೀನ್ ಎಚ್ಸಿಎಲ್ ಸಂಸ್ಥೆಯ ಉದ್ಯೋಗಿಯಾಗಿ ಚೆನ್ನೈಯಲ್ಲಿ ಕೆಲಸ ಮಾಡುತ್ತಿದ್ದರು. ಕಾರ್ಯದ ನಿಮಿತ್ತ ಕಳೆದ ವರ್ಷ ಏಪ್ರಿಲ್ನಲ್ಲಿ ಅವರನ್ನು ನ್ಯೂಜೆರ್ಸಿಗೆ ಕಳುಹಿಸಲಾಗಿತ್ತು.
ಚಿತ್ರದುರ್ಗದಲ್ಲಿರುವ ತಮ್ಮ ಪೋಷಕರಿಗೆ ಜೈಲಿನಿಂದ ನವೀನ್ ಪತ್ರ ಬರೆದ್ದಿದು, ‘12 ವರ್ಷದ ಬಾಲಕಿಯೊಂದಿಗೆ ಚಾಟಿಂಗ್ ಮಾDidದೇ ಇಷ್ಟೆಲ್ಲ ಅವಾಂತರಕ್ಕೆ ಕಾರಣವಾಯಿತು. ಕುಟುಕು ಕಾರ್ಯಾಚರಣೆಯಿಂದ ನಾನು ಜೈಲು ಪಾಲಾಗ್ದಿದೇನೆ’ ಎಂದು ತಿಳಿಸಿದ್ದಾರೆ. ‘ತಾನು 12 ವರ್ಷದ ಬಾಲಕಿಯೆಂದು ಹೇಳಿಕೊಂಡು ಒಬ್ಬಾಕೆ ಚಾಟಿಂಗ್ ಮಾಡುತ್ತಿದ್ದಳು. ನಾರಿಸ್ಟೌನ್ ಪ್ರದೇಶದಲ್ಲಿ ಭೇಟಿಯಾಗುವಂತೆ ಒತ್ತಾಯಿಸುತ್ತಿದ್ದಳು. ಆದರೆ ಒಂದು ವಾರದವರೆಗೆ ಭೇಟಿಯಾಗುವುದನ್ನು ಮುಂದೂಡಿದೆ. ಆದರೆ ಆಕೆಯ ಒತ್ತಡ ಹೆಚ್ಚಿದ ಕಾರಣ ಆಕೆಯನ್ನು ಭೇಟಿಯಾಗಲು ಸ್ಥಳಕ್ಕೆ ಹೋದಾಗ, ನಾರಿಸ್ಟೌನ್ ಪೊಲೀಸರು ನನ್ನನು ಬಂಧಿಸಿದರು’ ಎಂದು ಅವರು ತಿಳಿಸಿದ್ದಾರೆ.
‘ಬಾಲಕಿಯ ಹೆಸರಿನಲ್ಲಿ ಮಹಿಳೆಯೊಬ್ಬರು ಚಾಟಿಂಗ್ ಮಾಡುತ್ತಿದ್ದರು. ಇಂಟರ್ನೆಟ್ ಮೂಲಕ ಮಕ್ಕಳೊಂದಿಗೆ ಸಂಬಂಧ ಸಾಧಿಸಲು ಯತ್ನಿಸುವವರನ್ನು ಪತ್ತೆ ಹಚ್ಚಿ ಪೊಲೀಸರಿಗೆ ತಿಳಿಸುವ ಕೌಂಟಿ ಬೇಹುಗಾರಿಕೆ ಸಂಸ್ಥೆಯಲ್ಲಿ ಆ ಮಹಿಳೆ ಕೆಲಸ ಮಾಡುತ್ತಿದ್ದರು. ಅವರು ನಿತ್ಯ ನಡೆಸುವ ಕುಟುಕು ಕಾರ್ಯಾಚರಣೆ ನಡೆಸಿ, ನನ್ನ ಬಂಧನಕ್ಕೆ ಕಾರಣವಾದರು’ ಎಂದು ಅವರು ಹೇಳಿಕೊಂಡ್ದಿದಾರೆ.
‘ಪ್ರಾರಂಭಿಕ ವಿಚಾರಣೆ ಸಂದರ್ಭಅಲ್ಲಿ ಜಾಮೀನು ಪಡೆಯಲು 1.5ಲಕ್ಷ ಅಮೆರಿಕನ್ ಡಾಲರ್ ನಿಗದಿಪಡಿಸಲಾಗಿತ್ತು. ನಂತರ ಇದನ್ನು ಐದು ಲಕ್ಷ ಡಾಲರ್ಗೆ ಏರಿಸಲಾಯಿತು. ಇಷ್ಟೊಂದು ಹಣವನ್ನು ಹೊಂದಿಸುವುದು ಕಷ್ಟಸಾಧ್ಯ. ಶಿಕ್ಷೆ ಪೂರ್ಣಗೊಳಿಸಿದ ನಂತರವಷ್ಟೇ ಪೊಲೀಸರು ನನ್ನನ್ನು ಬಿಡುಗಡೆ ಮಾಡಬಹುದು.
ಆಮೇಲೆಯಷ್ಟೇ ನನ್ನನ್ನು ಭಾರತಕ್ಕೆ ಕಳುಹಿಸಬಹುದು. ಕೆಲ ವರ್ಷಗಳ ಕಾಲ ನನ್ನನ್ನು ಮರೆತುಬಿಡಿ’ ಎಂದು ನವೀನ್ ನೊಂದು ಪತ್ರ ಬರೆದಿದ್ದಾರೆ.
‘ಮಹಿಳೆಯೊಂದಿಗೆ ಚಾಟಿಂಗ್ ಮಾಡಿ ನಾನು ತಪ್ಪು ಮಾಡಿದೆ. ನನ್ನ ಜೀವನ ಹಾಳಾಯಿತು’ ಎಂದು ಬೇಸರ ವ್ಯಕ್ತಪಡಿಸಿರುವ ಅವರು, ‘ನಾನು ಸಸ್ಯಾಹಾರಿಯಾದ ಕಾರಣ ನನಗೆ ಬ್ರೆಡ್ ಮತ್ತು ಸಲಾಡ್ ಕೊಡುತ್ತಾರೆ. ಟಿ.ವಿ ನೋಡುತ್ತ, ಚೆಸ್ ಆಡುತ್ತ ಮತ್ತು ಪುಸ್ತಕಗಳನ್ನು ಓದುತ್ತ ಕಾಲ ಕಳೆಯುತ್ತಿದ್ದೇನೆ’ ಎಂದು ಅವರು ಹೇಳಿದ್ದಾರೆ.
ಬೆಂಗಳೂರಿನ್ಲಲಿ ಎಂ.ಟೆಕ್ ಅಧ್ಯಯನ ಸಹೋದರ ಶ್ರೀಧರ್ ಅವರಿಗೆ ಬರೆದ ಪತ್ರದಲ್ಲಿ, ಚೆನ್ನಾಗಿ ಓದಿ ಶಿಕ್ಷಣ ಪೂರೈಸಿ, ತಂದೆ-ತಾಯಿಯರನ್ನು ಚೆನ್ನಾಗಿ ನೋಡಿಕೊಳ್ಳುವಂತೆ ತಿಳಿಸ್ದಿದಾರೆ. ‘ನಿಮ್ಮೆಲ್ಲರ ನೆನಪು ಸದಾ ಕಾಡುತ್ತದೆ. ದುಃಖ ತಡೆಯಲಾಗದೇ ಅಳುತ್ತೇನೆ’ ಎಂದು ತಿಳಿಸಿದ್ದಾರೆ.
‘ನವೀನ್ ಬಂಧನದ ಸುದ್ದಿ ಕೇಳಿ ನನಗೆ ಆಘಾತವಾಗಿದೆ. ಆರೋಪಗಳನ್ನು ಸಾಬೀತುಪಡಿಸದೇ ಆತನನ್ನು ಬಂಧಿಸಲಾಗಿದೆ’ ಎಂದು ನವೀನ್ ತಂದೆ ನಿಂಗಪ್ಪ ಆತಂಕ ವ್ಯಕ್ತಪಡಿಸಿದ್ದಾರೆ. ಅವರು ಚಿತ್ರದುರ್ಗದ ದೊಡ್ಡಸ್ದಿದವನಹಳ್ಳಿಯ ಸರ್ಕಾರಿ ಪ್ರೌಢಶಾಲೆಯ್ಲಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸ್ಲಲಿಸುತ್ತಿದ್ದಾರೆ.
ನವೀನ್ ಅವರನ್ನು ಬಿಡುಗಡೆಗೆ ಕುಟುಂಬ ಸದಸ್ಯರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೆರವು ಪಡೆಯಲು ನಿರ್ಧರಿಸಿದ್ದಾರೆ. ವಿಧಾನ ಪರಿಷತ್ ಸದಸ್ಯ ಎಂ.ವಿ.ರಾಜಶೇಖರನ್ ಅವರ ಸಹಾಯ ಯಾಚಿಸಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ಪ್ರಜಾವಾಣಿ ವಾರ್ತೆ ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-08-07
|
|
|