ದಮ್ಮಾಂ : ಸೌದಿ ಅರೇಬಿಯಾದಲ್ಲಿರುವ ಭಾರತೀಯರಲ್ಲಿ ಆತ್ಮಹತ್ಯಾ ಪ್ರಕರಣ ಏರಿಕೆ : ಕಾಳಜಿ ಅಭಿಯಾನ |
ಪ್ರಕಟಿಸಿದ ದಿನಾಂಕ : 2008-07-17
ಹಲವು ಭಾರತೀಯರ ಆತ್ಮಹತ್ಯೆಯೆಡೆ ಒಲವು : ಧನಾತ್ಮಕ ಮನೋಭಾವ ಬೆಳೆಸಲು ಭಾರತೀಯ ಸಂಘಟನೆಗಳ ಯತ್ನ
ದಮ್ಮಾಂ, ಜುಲೈ 17: ಸೌದಿ ಅರೇಬಿಯಾದಲ್ಲಿ ಲಕ್ಷಾಂತರ ಭಾರತೀಯರು ಉದ್ಯೋಗದಲ್ಲಿದ್ದು ಅವರಲ್ಲಿಯ ಅಸಮಾಧಾನ ಆತ್ಮಹತ್ಯೆಗೆ ಪ್ರೇರಣೆ ನೀಡುತ್ತಿದ್ದು ಹಲವು ಭಾರತೀಯ ಸಂಘಟನೆಗಳು ಈ ಕುರಿತು ಚಿಂತೆ ವ್ಯಕ್ತಪಡಿಸಿವೆ.
ಭಾರತೀಯ ಕಾರ್ಮಿಕರಲ್ಲಿ ಈ ಬಗ್ಗೆ ಅರಿವು ಮೂಡಿಸಲು ಪೂರ್ವ ಸಂಸ್ಥಾನದ ಹಲವು ಭಾರತೀಯ ಸಂಘಟನೆಗಳು ಒಗ್ಗೂಡಿ ಕಾರ್ಮಿಕರಲ್ಲಿ ಧನಾತ್ಮಕ ಭಾವನೆಯನ್ನು ತುಂಬಿ ಜೀವನವನ್ನರಳಿಸುವ ಯತ್ನದಲ್ಲಿ ಅಭಿಯಾನವೊಂದನ್ನು ಹಮ್ಮಿಕೊಳ್ಳುವ ಹುನ್ನಾರದಲ್ಲಿವೆ. ಈ ಅಭಿಯಾನಕ್ಕೆ ರಿಯಾದ್ ನಲ್ಲಿರುವ ಭಾರತೀಯ ದೂತಾವಾಸವೂ ತನ್ನ ಬೆಂಬಲ ಸೂಚಿಸಿದೆ.
ಕಾರ್ಮಿಕರಲ್ಲಿ, ಅದರಲ್ಲೂ ಕಡಿಮೆ ವೇತನ ಪಡೆಯುತ್ತಿರುವ ಭಾರತೀಯರು ಹಲವು ಕಾರಣಗಳಿಂದಾಗಿ ಜೀವನದಲ್ಲಿ ಸೋತು ಹೋಗಿ ಆತ್ಮಹತ್ಯೆಗೆ ಶರಣಾಗುತ್ತಿರುವುದು ಚಿಂತೆಗೆ ಕಾರಣವಾಗಿದೆ. ಈ ವಾರದ ಪ್ರಾರಂಭಿಕ ದಿನಗಳಲ್ಲಿ ಕೇರಳದ ೩೪ ವರ್ಷ ವಯಸ್ಸಿನ ಫ್ಯಾನ್ ರಿಪೇರಿ ಅಂಗಡಿಯ ಮಾಲಿಕರಾದ ಐಚಮಳ್ ವೀಟ್ಟಿಲ್ ಪ್ರಸಾದ್ ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಊರಿನಲ್ಲಿ ಏರುತ್ತಿರುವ ಬೆಲೆಗಳು, ವೇತನದಲ್ಲಿ ಆಗದ ಏರಿಕೆ, ಮಾಲಿಕರ ದಬ್ಬಾಳಿಕೆ ಮೊದಲಾದ ಹಲವು ಸನ್ನಿವೇಶಗಳು ಆತನನ್ನು ಹಾತಾಶೆಗೆ ದೂಡಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದಿಸುತ್ತಿದೆ.
ಪ್ರಸ್ತುತ ಎಲ್ಲಾ ಸಂಘಟನೆಗಳು ಒಂದಾಗಿ ಅಭಿಯಾನವನ್ನು ಪ್ರಾರಂಭಿಸುವ ಮೂಲಕ ಭಾರತೀಯರಲ್ಲಿ ಜೀವನುತ್ಸಾಹ ಹೆಚ್ಚಿಸುವ ಪ್ರಯತ್ನ ನಡೆಸಿವೆ. ಇದರಲ್ಲಿ ಭಾರತೀಯ ದೂತಾವಾಸವೂ ಆಸಕ್ತಿ ತೋರಿರುವುದರಿಂದ ಉತ್ತಮ ಫಲಿತಾಂಶ ಸಿಗಬಹುದೆಂಬ ನಿರೀಕ್ಷೆಯಿದೆ.
ವರದಿಯ ವಿವರಗಳು |
 |
ಕೃಪೆ : ಸೌದಿ ಗೆಜೆಟ್ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-07-17
|
|
|