ಗುರುವಾರ, 09-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಹೊನ್ನಾವರ ಬಳಿ ಮರಕ್ಕೆ ಕಾರು ಢಿಕ್ಕಿ: ಉಡುಪಿ ಡಿಸಿಐಬಿ ನಿರೀಕ್ಷಕರಿಗೆ ತೀವ್ರ ಗಾಯ
Latest news item ಜಿಲ್ಲೆಯನ್ನು ಮುಜುಗರಕ್ಕೀಡು ಮಾಡಿದ ಪಾಲೆಮಾರ್ ; ಯಾಕಿಂಥ ಕೆಲಸ ಮಾಡಿದರು? | ಬಿಜೆಪಿಯ ಹಗರಣಗಳು ಮತ್ತು ಕಳಂಕಿತ ಮಿನಿಸ್ಟರುಗಳು | ವಾಜಪೇಯಿ, ಅಡ್ವಾಣಿ ಬೆಳೆಸಿದ ಪಕ್ಷ ಇದೇನಾ?
Latest news item ಯು. ಎ. ಇ. ಬಂಟ್ಸ್ ಡೈರೆಕ್ಟರಿ - 2012 | UAE BUNTS DIRECTORY -2012
Latest news item ಸದನದಲ್ಲಿ ಸಚಿವರ ಸೆಕ್ಸ್ ಫಿಲಂ ವೀಕ್ಷಣೆಯ ರದ್ದಾಂತ : ಉಡುಪಿಯಲ್ಲಿ ಎಸ್.ಡಿ.ಪಿ.ಐ ಪ್ರತಿಭಟನೆ
Latest news item ಯುಪಿಸಿ‌ಎಲ್ ವಿರುದ್ದ ಹೈಕೋರ್ಟ್ ನಲ್ಲಿ ದಾವೆ ಹೂಡಲು ಸಿದ್ದ : ಪತ್ರಿಕಾಗೋಷ್ಠಿಯಲ್ಲಿ ಜಯಶ್ರೀ ಕೃಷ್ಣ ಶೆಟ್ಟಿ
Latest news item ಹೋಟೆಲ್ ಕಿದಿಯೂರಿನ ರಜತ ಸಂಭ್ರಮ : ಪೇಜಾವರ ಶ್ರೀಗಳಿಗೆ ತುಲಾಭಾರ
Latest news item ರೇವ್ ಪಾರ್ಟಿ ಕುರಿತು ಗ್ರಾ.ಪಂ.ಗೆ ಗೊತ್ತೇ ಇಲ್ಲ! ಇನ್ನೊಂದು ವಿವಾದದತ್ತ ಜಿಲ್ಲಾಡಳಿತ
Latest news item ಸದನದಲ್ಲಿ ಸಚಿವತ್ರಯರ ‘ಕಾಮಹರಣ’ : ರಾಜ್ಯದಾದ್ಯಂತ ಆಕ್ರೋಶ : ಉಡುಪಿಯಲ್ಲಿ ನಾಗರೀಕರ ಸಮಿತಿಯ ವಿಶಿಷ್ಟ ಪ್ರತಿಭಟನೆ
Latest news item ಮಲೆನಾಡಿನ ಕವಿ, ಉಪ್ಪುಕಡಲಿನ ರವಿ- ಪ್ರೊ.ಎಸ್.ವಿ.ಪರಮೇಶ್ವರ ಭಟ್ಟರು
Latest news item ದುಬೈ:ಕೆ.ಎಮ್.ಡಬ್ಲು.ಎ ವತಿಯಿಂದ ಕ್ರಿಕೆಟ್ ಟೂರ್ನಮೆಂಟ್
Latest news item ಸದನದಲ್ಲಿ ಮೊಬೈಲ್ ಫೋನ್‌ ಅಶ್ಲೀಲ ದೃಶ್ಯಗಳನ್ನು ವೀಕ್ಷಿಸಿದ ಸಚಿವರುಗಳ ತಲೆದಂಡ: ಸವದಿ, ಸಿಸಿ, ಮತ್ತು ಪಾಲೇಮಾರ್‌ ಮಂತ್ರಿ ಸ್ಥಾನಕ್ಕೆ ರಾಜಿನಾಮೆ
Latest news item SHAME ON YOU! ..ಇದು ಸರೀನಾ?...ವಿಧಾನಸಭೆಯಲ್ಲೇ ಸೆಕ್ಸ್ ಫಿಲ್ಮ್ ವೀಕ್ಷಿಸಿದ ಸಚಿವ ಸವದಿ!; ರಾಜ್ಯಾದ್ಯಂತ ತೀವ್ರ ಆಕ್ರೋಶ | ಅವರ ಜತೆ ಅಶ್ಲೀಲಚಿತ್ರ ಹಂಚಿಕೊಂಡ ಸಚಿವರು ಯಾರ್ಯಾರು? ರಾಜ್ಯ ಸರ್ಕಾರಕ್ಕೆ ಮತ್ತೊಂದು ಮುಜುಗರ!!
Latest news item ಕಲಾಪದಲ್ಲೂ ಪ್ರತಿಧ್ವನಿಸಿದ 'ಮಲ್ಪೆ ಸೈಂಟ್ ಮೇರಿಸ್ ಕಾಮಕೇಳಿ ಪ್ರಕರಣ'; ತನಿಖೆ ಆದೇಶಿಸಿದ ಸಿ.ಎಮ್
Latest news item ರೇವ್ ಪಾರ್ಟಿ ಪಶು ಸಂಸ್ಕೃತಿಯ ಪ್ರತೀಕ : ಅಶೋಕ್ ಸಿಂಘಾಲ್ ಖಂಡನೆ | ರಾಜ್ಯ ಸರ್ಕಾರಕ್ಕೆ ತೀವ್ರ ಮುಜುಗರ
Latest news item ಮಲ್ಪೆ ರೇವ್ ಪಾರ್ಟಿ ಪ್ರಕರಣ : ಜೆಡಿ‌ಎಸ್ ವಿನೂತನ ಪ್ರತಿಭಟನೆ
Latest news item ರೇವ್ ಪಾರ್ಟಿಯಿಂದ ಪವಿತ್ರ ಕ್ಷೇತ್ರ ಅಪವಿತ್ರ: ಇಂತಹ ವಿಕೃತಿ ಎಲ್ಲಿಯೂ ನಡೆಯಬಾರದು : ಪೇಜಾವರ ಶ್ರೀ ಪ್ರತಿಕ್ರೀಯೆ
Latest news item ಕಿದಿಯೂರ್ ಹೋಟೆಲ್ ನ ನೂತನ ಶಿಲಾದೇಗುಲದಲ್ಲಿ ನಾಗದೇವರ ಪುನ:ಪ್ರತಿಷ್ಠೆ : ವಿಶೇಷ ಪೂಜಿತ ನಾಗರಕ್ಷಾದಾರ ಧಾರಣೆ
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ಪ್ರಕೃತಿ ವೈಭವದೊಳಗೆ ಸಂತಸದ ಪಯಣ ...

ಸಕಲೇಶಪುರ *೫೭ ಸುರಂಗಗಳು * ೨೪೧ ಸೇತುವೆಗಳು * ೧೧೦ ತಿರುವುಗಳು *೨ ಗಂಟೆ ಪ್ರಯಾಣ

ಮಂಗಳೂರು, ಆ. ೨೯: ಇದು ಬರೇ ರೈಲು ಪ್ರಯಾಣವಲ್ಲವಣ್ಣ, ಪ್ರಕೃತಿ ಸೊಬಗಿನ ಸೌಂದರ್ಯಾರಾಧನೆ.

ಗಗನಕ್ಕೆ ಮುತ್ತಿಡುವ ಗಿರಿಬೆಟ್ಟಗಳು, ಅದನ್ನು ಹೊದ್ದು ಮಲಗಿದ ಹಸಿರು ಕಾನನ. ಮಧ್ಯೆ ಝುಳು ಝಳು ನಿನಾದದೊಂದಿಗೆ ಹಾಲ್ನೊರೆಯೊಂದಿಗೆ ಹರಿಯುವ ಹಳ್ಳ ತೊರೆಗಳು. ಅಗಾಗ ಮಿಂಚಿ ಮಾಯವಾಗುವ, ಕೈಗೆ ಸಿಕ್ಕಂತೆ ಭಾಸವಾಗುವ ಬೆಳ್ಳಿಮೋಡಗಳು, ಮಳೆಯ ಹನಿಯೊಂದಿಗೆ ಮಿನುಗುವ ಹುಲ್ಲಿನ ಸಾಲು. ಇವೆಲ್ಲರ ನಡುವೆ ಬಳುಕುತ್ತಾ, ಬಾಗುತ್ತಾ , ತಿರುಗುತ್ತಾ ಮೇಲೇರುತ್ತದೆ ಸಾಗುತ್ತದೆ ನಮ್ಮೂರಿನ ಹೊಸ ಚಿಕುಪುಕು ರೈಲು.ಇನ್ನೇನು ಗಿರಿಶಿಖರ ಏರಿದೆವು ಎನ್ನುವಾಗ ಇನ್ನೊಂದು ತಿರುವು. ಮತ್ತೊಂದು ಬೆಟ್ಟದತ್ತ ಬಂಡಿ ನಡೆ.

ಈ ಪ್ರಯಾಣದಿಂದ ಕಣ್ಣಿಗೆ ಹಬ್ಬ, ಮನಸ್ಸಿಗೆ ಆನಂದೋಲ್ಲಾಸ. ಅಕ್ಷರಗಳಲ್ಲಿ ಬಣ್ಣಿಸು ವುದು, ಛಾಯಾಚಿತ್ರಗಳಲ್ಲಿ ಸೆರೆ ಹಿಡಿಯುವುದು ಅಸಾಧ್ಯವೆನ್ನುವ ರೀತಿಯಲ್ಲಿ ಕ್ಷಣ ಕ್ಷಣಕ್ಕೂ ಬದಲಾದ ಚಿತ್ರಣ. ಕಣ್ಣರಪ್ಪೆ ತೆರೆಯುವಷ್ಟರಲ್ಲಿ ಹೊಸ ಬೆಡಗು ಸಿದ್ಧ.

ಮಂಗಳೂರು- ಬೆಂಗಳೂರು ನಡುವಿನ ಹಗಲು ರೈಲಿನಲ್ಲಿ ಪ್ರಯಾಣಿಸಿದರೆ ಮಾತ್ರ ಈ ಪ್ರಕೃತಿ ವೈಭವವನ್ನು ಸವಿಯಲು ಸಾಧ್ಯ. ಜೀವನದಲ್ಲಿ ನೋಡು ಒಮ್ಮೆ ಜೋಗದ ಗುಂಡಿ ಎಂದು ರಾಜರತ್ನಂ ಹೇಳಿದ್ದರು. ಆದರೆ ಅದನ್ನು ಸ್ವಲ್ವ ತಿದ್ದುಪಡಿಸಿದರೆ ಜೀವನದಲ್ಲಿ ಒಮ್ಮೆಯಾದರೂ ಈ ರೈಲಿನಲ್ಲಿ ಪ್ರಯಾಣಿಸಿ ಪ್ರಕೃತಿ ಸೌಂದರ್ಯ ಸವಿಯಬೇಕು.

ಮಂಗಳೂರಿನಿಂದ ಹಸಿರು ಗದ್ದೆ, ಅಡಿಕೆ ತೋಟಗಳ ನಡುವೆ ಹಾದು ಹೋಗುವ ರೈಲು ಸುಬ್ರಹ್ಮಣ್ಯ ರೋಡ್ ನಂತರ ಪ್ರಕೃತಿ ಪ್ರಿಯರಿಗೆ ರಸದೌತಣ ನೀಡಲು ಆರಂಭಿಸುತ್ತದೆ. ಸುಬ್ರಹ್ಮಣ್ಯದಿಂದ ಸಕಲೇಶಪುರದ ವರೆಗೆ ೫೫ ಕಿ.ಮೀ. ದೂರ. ಪ್ರಯಾಣದ ಸಮಯ ಸುಮಾರು ೨.೧೫ ಗಂಟೆ. ೧೧ ಗಂಟೆಗೆ ಸುಬ್ರಹ್ಮಣ್ಯ ತಲುಪುವ ರೈಲು ಮಧ್ಯಾಹ್ನ ೧ ಗಂಟೆ ಆಸುಪಾಸಿನಲ್ಲಿ ಸಕಲೇಶಪುರಕ್ಕೆ ಹೋಗುತ್ತದೆ. ಈ ಅವಧಿಯೇ ಈ ಪ್ರಯಾಣದ ಹೈಲೈಟ್.

೫೭ ಸುರಂಗಗಳು, ೨೪೧ ಸೇತುವೆಗಳು, ೧೧೦ ತಿರುವುಗಳು. ಇವುಗಳ ಮಧ್ಯೆ ರೈಲು ಮೇಲೇರುತ್ತಾ ಸಾಗುವುದು ಅದ್ಭುತ ರಮ್ಯ ಅನುಭವ. ಇಲ್ಲಿ ಪ್ರಕೃತಿ ರಮಣೀಯ ಸೌಂದರ್ಯ ಜೊತೆಯಲ್ಲಿ ರುದ್ರತೆಯ ಅನುಭವವೂ ದೊರೆಯುತ್ತದೆ. ವನಸಿರಿಯ ನಡುವಿನ ಸೇತುವೆಗಳ ಮೇಲೆ ರೈಲು ಹರಿಯುತ್ತಿದ್ದಂತೆ ಕೆಳಗೆ ನೋಡಿದರೆ ಎದೆ ‘ಡವಡವ’ ಎನ್ನುವುದು ಖಂಡಿತ. ಮೇಲೆ ಕಾನನ ಛಾವಣಿ, ಕೆಳಗೆ ಪ್ರಪಾತ. ಏಕಕಾಲದಲ್ಲಿ ವಿಭಿನ್ನ ಅನುಭವ ಪ್ರಯಾಣಿಕರಿಗೆ.

ಘಾಟಿ ಶ್ರೇಣಿಯುದ್ಧಕ್ಕೂ ಅಲ್ಲಲ್ಲಿ ಧುಮುಕುವ ಜಲಧಾರೆಗಳು ಮನಕ್ಕೆ, ಕಣ್ಣಿಗೆ ಹಬ್ಬ ವನ್ನುಂಟು ಮಾಡುತ್ತವೆ. ಮುಗಿಲು ಚುಂಬಿಸುವ ಮರಗಳು. ಅವುಗಳನ್ನು ಅಪ್ಪಿ ಕೊಂಡಿ ರುವ ಬಳ್ಳಿಗಳು. ದಾರಿಯುದ್ದಕ್ಕೂ ಶೃಂಗಾರ ಮಾಡಿರುವ ಕಾನನ ಹೂಗಳು. ಗಾಳಿಗೆ ಅತ್ತಿತ್ತ ಬಳುಕುವ ಹುಲ್ಲು. ಸೊಗಸಾಗಿ ಬೆಳೆದು ನಿಂತಿರುವ ಕಾಫಿ, ಏಲಕ್ಕಿ ಗಿಡಗಳು. ಮಧ್ಯೆ ಮಧ್ಯೆ ಸುತ್ತಿಬೆಳೆಯುತ್ತಿರುವ ಕರಿ ಮೆಣಸು. ಎಲ್ಲವೂ ಖುಷಿ ನೀಡುತ್ತದೆ. ಕಣ್ಣು ರೆಪ್ಪೆ ಕ್ಷಣವೂ ಮುಚ್ಚದಂತೆ ಹುಚ್ಚಾಗಿಸುತ್ತದೆ.

ಸದ್ಯ ಮಳೆಗಾಲ. ಆಗಾಗ ಮಳೆ ಸಿಂಚನವಾಗುವ ಸಾಧ್ಯತೆಗಳು ಜಾಸ್ತಿ. ಮಳೆ, ಬಿಸಿಲು ಆಟವಾಟವಾಡಿದರಂತೂ ಸ್ವರ್ಗಕ್ಕೆ ಮೂರೇ ಗೇಣು. ರೈಲಿನಲ್ಲೇ ಕುಣಿದು ಕುಪ್ಪಳಿಸೋಣ ಎನ್ನುವಷ್ಟು ಸಂತಸ ಉಂಟಾಗುತ್ತದೆ. ಶನಿವಾರ ಮೊದಲ ದಿನದ ಪ್ರಯಾಣದಲ್ಲಿ ಪ್ರಯಾಣಿಕರಿಗೆ ಈ ಅನುಭವ ದೊರೆತಿದೆ. ನಿಮಿಷಕ್ಕೊಮ್ಮೆ ಹನಿಯುತ್ತಿದ್ದ ಮಳೆ, ಗಳಿಗೆ ಗೊಮ್ಮೆ ಕಾಣಿಸಿಕೊಳ್ಳುತ್ತಿದ್ದ ಸೂರ್ಯ. ಇದು ಗಿರಿಶಿಖರಗಳ ಸಾಲಿನಲ್ಲಿ ಅತ್ಯಾಕರ್ಷಕ ಚಿತ್ತಾರ ಮೂಡಿಸಿತ್ತು.

ಸುಬ್ರಹ್ಮಣ್ಯದಿಂದ ಸಕಲೇಶಪುರ ನಡುವಿನ ರೈಲು ನಿಲ್ದಾಣಗಳಲ್ಲಿ ಜನ ಸಂಪರ್ಕವಿಲ್ಲ. ಜೊತೆಯಲ್ಲಿ ವಿದ್ಯುತ್ ಸಂಪರ್ಕವಿಲ್ಲ. ಸದ್ಯ ಜನರೇಟರ್ ಹಾಗೂ ಸೌರವಿದ್ಯುತ್ ಮಾತ್ರ. ಸುರಂಗಗಳಲ್ಲೂ ಕತ್ತಲೆ.

ನನ್ನತ್ತರಕ್ಕೆ ಏರಬಲ್ಲೆಯಾ ಎಂದು ಸವಾಲೊಡ್ಡುವ ಈ ಘಾಟಿ ಶ್ರೇಣಿಯಲ್ಲಿ ಹಳಿಗಳನ್ನು ನಿರ್ಮಿಸಿದ ತಂತ್ರಜ್ಞರ ಕೌಶಲ್ಯ, ಸಾಧನೆ ನಿಜಕ್ಕೂ ಅತ್ಯದ್ಭುತ.

ರೈಲು ಸಂಚಾರ ವೃತ್ತಾಂತ

೧೯೭೯ರಲ್ಲಿ ಮಂಗಳೂರು- ಬೆಂಗಳೂರು ಮಧ್ಯೆ ಮೀಟರ್‌ಗೇಜ್ ರೈಲು ಪ್ರಾರಂಭ ವಾಯಿತು. ಬಳಿಕ ೧೯೯೬ ರಲ್ಲಿ ಬ್ರಾಡ್‌ಗೇಜ್ ಪರಿವರ್ತನೆಗೆ ಸಂಚಾರ ಸ್ಥಗಿತಗೊಂಡಿತು.

೨೦೦೩ ರ ಡಿಸೆಂಬರ್ ೨೮ ರಂದು ಮಂಗಳೂರು-ಕಬಕ- ಪುತ್ತೂರುವರೆಗೆ ಪರಿವರ್ತಿತ ಮಾರ್ಗದಲ್ಲಿ ಮತ್ತೆ ಸಂಚಾರ ಆರಂಭ. ಅಲ್ಲಿಂದ ಮುಂದೆ ೪ ವರ್ಷಗಳ ಕಾಲ ರೈಲು ಓಡಲೇ ಇಲ್ಲ. ಜನರು ಹೋರಾಟ ಹಾದಿಯನ್ನು ಹಿಡಿದರು.

ಹೋರಾಟ ತೀವ್ರಗೊಳ್ಳತೊಡಗಿದಾಗ ೨೦೦೭ ರ ಡಿ.೮ ರಂದು ಮಂಗಳೂರು- ಬೆಂಗಳೂರು ಮಧ್ಯೆ ರಾತ್ರಿ ರೈಲು ಪ್ರಾರಂಭವಾಯಿತು. ಆಗಿನ ರೈಲ್ವೆ ಸಚಿವ ಲಾಲೂ ಪ್ರಸಾದ್ ಯಾದವ್ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದ್ದರು. ಆ ಸಂದರ್ಭದಲ್ಲಿ ಎರಡು ತಿಂಗಳೊಳಗೆ ಹಗಲು ರೈಲು ಪ್ರಾರಂಭಿಸುವ ಭರವಸೆ ನೀಡಲಾಗಿತ್ತು. ಇದು ಕೇವಲ ಭರವಸೆಯಾಗಿಯೇ ಉಳಿದಾಗ , ಎರಡು ತಿಂಗಳು ಕಳೆದು ಎರಡು ವರ್ಷಗಳಾಗುತ್ತಾ ಬಂದರೂ ಹಗಲು ರೈಲು ಪ್ರಾರಂಭವಾಗದಿದ್ದಾಗ ಮತ್ತೆ ಜನತೆ ಹೋರಾಟಕ್ಕಿಳಿಯುವುದು ಅನಿವಾರ್ಯವಾಯಿತು.

ಇದೀಗ ಹಗಲು ರೈಲು ಪ್ರಾರಂಭಗೊಂಡಿದೆ. ಆದರೆ ಇದು ಯಶವಂತಪುರದವರೆಗೆ ಮಾತ್ರ ಓಡುತ್ತದೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಸುರೇಂದ್ರ ಎಸ್.ವಾಗ್ಳೆ| ಉದಯವಾಣಿ
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2009-08-30 00:00:00

Tell a Friend
ಇತರ ಸಂಭಂದಪಟ್ಟ ವರದಿಗಳು
»ಮಂ-ಬೆಂ ರೈಲು ಕಾರವಾರಕ್ಕೆ ಓಡೀತೇ?
»ಪ್ರಕೃತಿ ಸೌಂದರ್ಯ ನಡುವೆ ಬೆಂಗಳೂರಿಗೆ ಪಯಣ; ಹಗಲು ರೈಲಿಗೆ ದಾರಿಯುದ್ದಕ್ಕೂ ಹಾರತುರಾಯಿಗಳ ಸ್ವಾಗತ
»ಮ೦.-ಬೆ೦.ಹಗಲು ರೈಲು ಪ್ರಯಾಣಕ್ಕೆ ಹಸಿರು ನಿಶಾನೆ
»ಮ೦ಗಳೂರು: ಮು೦ದಿನ ದಿನಗಳಲ್ಲಿ ದಿನ೦ಪ್ರತಿ ಹಗಲು ರೈಲು :ಮುನಿಯಪ್ಪ
»ಶುಭಾಶಯಗಳು! ಕರಾವಳಿ ಕನ್ನಡಿಗರ ಬಹುದಿನಗಳ ಬೇಡಿಕೆ ಈಡೇರಿಕೆ: ನಾಳೆಯಿಂದ ಬೆಂಗಳೂರು-ಮಂಗಳೂರು ಹಗಲು ರೈಲು

ಪ್ರತಿಸ್ಪಂದನ
MANJUNATH, bangalore
2010-01-29
its so buaitfull
ಗಣೇಶ್ ರೈ, ಕೊಡಗು / ಶಾರ್ಜಾ
2009-08-30
ನಿತ್ಯ ಹರಿದ್ವರ್ಣ ಕಾನನ, ಮೇಘರಾಜನನ್ನು ಮುತ್ತಿಕ್ಕುವ ಮರಗಳ ಸಾಲು, ಧುಮ್ಮಿಕ್ಕಿ ಹರಿಯುವ ಜಲಧಾರೆಗಳು... ವರ್ಣನೆಗೆ ಶಬ್ಧಗಳು ಅಲಭ್ಯ.... ಪ್ರತ್ಯಕ್ಷವಾಗಿ ವನಸಿರಿಯ ಸೌಂದರ್ಯವನ್ನು ಅಸ್ವಾಧಿಸುವ ಆ ಅನುಭವ ಕೇವಲ ಕೆಲವೇ ಚಿತ್ರದಲ್ಲಿ ಪಡೆದಿದ್ದೇವೆ. ಧನ್ಯವಾದಗಳು! ಗಲ್ಫ್ ಕನ್ನಡಿಗಕ್ಕೆ. ಪ್ರಕೃತಿ ಪ್ರಿಯರಿಗೆ ಒಮ್ಮೆಯಾದರೂ ಪ್ರಕೃತಿ ಮಾತೆಯ ವಿರಾಟ ವಿಶ್ವರೂಪ ದರ್ಶನ ವೀಕ್ಷಿಸುವ ಅವಕಾಶ ಲಭ್ಯವಾಗಲಿ.
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ವಿಶಿಷ್ಟ ಬರಹ]

»ಈ ಗುಲಾಬಿ ಇರುವುದು ನಿನಗಾಗಿ...
»ನಿಮ್ಮ ಪ್ರೇಮ ಚಿರಾಯುವಾಗಲಿ...
»ಶಂಕರ್ ಸಾವಿಗೆ ಕಾರಣಳಾದ ಆ ಮಾಯಾವಿ ಯಾರು?
»ಮನಃಶಾಸ್ತ್ರಕ್ಕೆ ವೇದಾಂತದ ಅಡಿಗಲ್ಲು...
»ಪಳೆಯುಳಿಕೆಗಳಾಗುತ್ತಿರುವ ಗ್ರಾಮೀಣ ಪರಿಕರಗಳು: ಸಾಂಪ್ರದಾಯಿಕ ಪರಿಕರಗಳು ಆಧುನಿಕತೆಯ ಸೋಗಿನಲ್ಲಿ ಕಣ್ಮರೆ
»ಕೋಮುವಾದದತ್ತ ಜಾರುತ್ತಿದೆಯೇ ಭಾರತ?...
»ವಿದೇಶದಲ್ಲಿದ್ದವನ ಭಾರತದ ಮೆಲುಕುಗಳು..!
»ಮಾತು ಬೇರೆ ಬೇಕೆ ಗೆಳೆಯ ...
»ಕೋಡಗನ ಕೋಳಿ ನುಂಗಿತ್ತಾ....
»ರಾಜಕೀಯ ನನಗೆ ಆಶ್ರಯ ತಾಣ ಅಲ್ಲ!
» ಜರ್ಮನಿಯಲ್ಲಿ ದೇವುಪೂಂಜ, ಜುಮಾದಿ : ಕಟ್ಟ್ ನಿಘಂಟುಗಳ ಕೋಲ ನೇಮಗಳಲ್ಲಿ ಪದಭೂತಗಳ ನಲಿಕೆ
»ಮನೆಯ ಪರಿಸರ ಚೆನ್ನಾಗಿರ್ಬೇಕಂದ್ರೆ ಕುಡಿತ ಬಿಡಬೇಕು:ಸಾಲುಮರದ ತಿಮ್ಮಕ್ಕ
» ಸುಗ್ಗಿಯ ಕಾಲದ ಹಬ್ಬ: ಉತ್ತರಾಯಣದ ಪುಣ್ಯಕಾಲ ಮಕರ ಸಂಕ್ರಾಂತಿ
»ಪ್ರಕೃತಿ-ಚಾರಣ ಪ್ರಿಯರ ಸ್ವರ್ಗ ಕುಮಾರಪರ್ವತ...
»ಫ್ರೀಲಾನ್ಸ್ ಪತ್ರಕರ್ತನಾಗುವುದು ಹೇಗೆ?...
»ಹೊಸವರ್ಷದಲ್ಲಿ ನಾವೂ ಹೊಸಬರಾಗೋಣ...
»ಕನ್ನಡಪ್ರೇಮಿ ಕರ್ನಾಟಕ ಕ್ರೈಸ್ತರಿಗೆ ಜಯಹೆ
»ಸುತ್ತೂರಿನಲ್ಲೊಂದು ಕೃಷಿ ಬ್ರಹ್ಮಾಂಡ...
»ಆತನೂ ಅನಿವಾರ್ಯ. . .
»ಜವರಾಯನ ಲೋಕಕ್ಕೆ `ಪತ್ತೇದಾರ'ನ ಪಯಣ ( ಪರಿಷ್ಕ್ತತ ವರದಿ )
»ಸುರೇಶ್ ಗೌಡ ಮಾತ್ರ ಯಾಕೆ ಉಡುಗೊರೆಗೆ ಯೋಗ್ಯ!
»ಅಟಲ್‌ಜೀ ಒಡನಾಟದ ಝಲಕು-ಮೆಲುಕು
»ಶೂನ್ಯ ಬಂಡವಾಳ ಪ್ರತಿಪಾದಕ ಬಡಗರ ಸಿದ್ದಾಶ್ರಮದ ಶ್ರೀ. ಮೋಹನಕುಮಾರ್ ಸ್ವಾಮೀಜಿ
»ಮದ್ಯಪಾನದ ಮೋಜಲ್ಲಿ ಆರೋಗ್ಯ ಮರೆಯದಿರಿ
»ಮಡಿಕೇರಿಯಲ್ಲಿ ಮಂಜಿನ ಚಿತ್ತಾರ...
»ಮಲೇರಿಯಾ ತಡೆಯೋದಕ್ಕೆ ಕೆರೆ ಮುಚ್ಚಿದ್ರು, ಗೊತ್ತಾ?
»ಕರ್ಮವೀರ ಪುರಸ್ಕಾರ ಪ್ರಶಸ್ತಿ ವಿಜೇತ ಕೊಡಕ್ಕಲ್ ಶಿವಪ್ರಸಾದ್
» ಕoದ....
»ಸರ್ಕಾರವೇ ಭೂ ದಲ್ಲಾಳಿಯಾದರೆ ಜನರ ಗತಿ ಏನು?
»ಸುಳ್ಯದ ಸಮ್ಮೇಳನದಲ್ಲಿ ಕನ್ನಡ ನಾಡಗೀತೆ ಹಾಡಿದ ಸ್ವೀಡನ್ನಿನ ಸಿಸಿಲಿಯಾ
»ಗೋಬಿ ಮಂಚೂರಿ : ಎಚ್ಚರ !
»ಶಾಲೆ ಮುಚ್ಚುವ ನಿರ್ಧಾರದಲ್ಲಿ ಗೊಂದಲಗಳಿವೆ : ಮುಖ್ಯಮ೦ತ್ರಿ ಚ೦ದ್ರು ಅವರೊ೦ದಿಗೆ ಸ೦ದರ್ಶನ
»ಮೈಕ್ರೋ ವೇವ್ ಕುಕ್ಕಿಂಗ್
»ಹೆಣ್ಣೇ ನಿನಗೆ ನಮೋ ನಮಃ...
»ಮಡೆಸ್ನಾನ: ತಿಳಿಹೇಳುವುದನ್ನು ಬಿಟ್ಟು ನಂಬಿಕೆ ನೆಪವೇಕೆ? ...
»ಸಾಮಾಜಿಕ ತಾಣಗಳಲ್ಲೂ ಬೇಕಲ್ಲವೇ ಸ್ವಾಸ್ಥ್ಯದ ಪರಿಕಲ್ಪನೆ?...
»ಮೂಲಭೂತ ಸೌಕರ್ಯವಿಲ್ಲದೆ ನರಳುತ್ತಿರುವ ರೆಡ್‌ಕ್ರಾಸ್ ಶಾಲಾ ವಿದ್ಯಾರ್ಥಿಗಳು: 17 ತಿಂಗಳಿನಿಂದ ಸಂಬಳವಿಲ್ಲದೆ ಕಂಗಾಲಾದ ಸಿಬ್ಬಂದಿ
»ಹಾಲಿ - ಮಾಜಿ ಮುಖ್ಯ ಮಂತ್ರಿಗಳಿಗೊಂದು ಬಹಿರಂಗ ಪತ್ರ...
»ನೂರೆಂಟು ನೋಟ: ಪ್ರೇಮ ಚಲನೆಯ ಸಂಕೇತ, ಮದುವೆ ನಿಶ್ಚಲದ ಪ್ರತೀಕ!
»ಎಲ್ಲಕ್ಕೂ ಒಂದು ಕೊನೆಯಿದೆ, ಮಡೆಸ್ನಾನಕ್ಕೂ ಇರಲಿ
»ಪುಣ್ಯಕೋಟಿಯ ಹಾಡು....
» ಪೌರಾಣಿಕ ಹಿನ್ನಲೆಯಲ್ಲೂ ಪ್ರಸಿದ್ದ: ಅದ್ಬುತ ಪ್ರವಾಸಿ ತಾಣ; ಶಿರಸಿಯ ಯಾಣ
»ಒಂದು ಕ್ಷಣದ ಆತುರದಿಂದ ತನ್ನ ಜೀವವನ್ನೇ ತೆತ್ತ ಆ ಚಿಕ್ಕ ಹುಡುಗ.
»ಭಾಷಾ ದುರಾಭಿಮಾನಿಗಳನ್ನು ಕನ್ನಡದ ನೆಲದಿಂದ ದೂರವಿಡಿ..!
»ಪರಮಾತ್ಮ ಸ್ವರೂಪ ...
»ಕಣ್ಣಾಲಿಗಳು ತೇವವಾಗುತ್ತದೆ...
»ಕನಕದಾಸರ ಜನ್ಮದಿನದ ಜಿಜ್ಞಾಸೆ : ಆಧ್ಯಾತ್ಮ ಕ್ಷೇತ್ರ: ಕನಕದಾಸರ ಕೊಡುಗೆ ಅಪಾರ
»ಕುಂಬಾರರೀಗ ಕುಲಕಸುಬು ನೆಚ್ಚಿಕೊಳ್ಳುವಂತಿಲ್ಲ...
»ಕಳಪೆ ರಸ್ತೆ ಕಾಮಗಾರಿ ಮತ್ತು ಮಾಹಿತಿ ಹಕ್ಕು ಕಾನೂನು............
»ನ್ಯಾ ಸುಧೀಂದ್ರರಾವ್ : ಬಂಗಾರಪೇಟೆಯ ಸ್ಟಾಂಪ್ ವೆಂಡರ್ ಮಗ ಇಂದಿಗೂ ಮನೆ ಸಾಲ ಕಟ್ಟುತ್ತಿರುವ ನ್ಯಾಯಾಧೀಶ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri