ಮ೦ಗಳೂರು: ಮು೦ದಿನ ದಿನಗಳಲ್ಲಿ ದಿನ೦ಪ್ರತಿ ಹಗಲು ರೈಲು :ಮುನಿಯಪ್ಪ |
ಪ್ರಕಟಿಸಿದ ದಿನಾಂಕ : 2009-08-29
ರೈಲ್ವೆ ಸಹಾಯಕ ಸಚಿವ ಕೆ.ಎಚ್. ಮುನಿಯಪ್ಪ ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಮಂಗಳೂರು, ಆ. ೨೮: ಬೆಂಗಳೂರು-ಮಂಗಳೂರು ರೈಲನ್ನು ಕಣ್ಣೂರಿಗೆ ವಿಸ್ತರಿಸುವ ನಿರ್ಧಾರದಿಂದ ಹಿಂದೆ ಸರಿಯುವ ಯಾವುದೇ ಪ್ರಶ್ನೆ ಇಲ್ಲ ಎಂದು ರೈಲ್ವೆ ಸಹಾಯಕ ಸಚಿವ ಕೆ.ಎಚ್. ಮುನಿಯಪ್ಪ ಸ್ಪಷ್ಟೀಕರಿಸಿದರು.
ಶನಿವಾರ ಮಂಗಳೂರು-ಬೆಂಗಳೂರು ಹಗಲು ರೈಲು ಉದ್ಘಾಟನೆಗೆ ನಗರಕ್ಕೆ ಆಗಮಿಸಿ ರುವ ಸಚಿವರು ಶುಕ್ರವಾರ ರಾತ್ರಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ರೈಲು ಸಂ ಚಾರ ಯಾವುದೇ ನಗರಗಳ ನಡುವೆ ಸೀಮಿತವಲ್ಲ. ಹಾಗಾಗಿ ಅದು ಎಲ್ಲ ಕಡೆಗಳಿಗೂ ವಿಸ್ತರಿಸುತ್ತಲೇ ಇರಬೇಕು, ಸಂಚರಿಸುತ್ತಲೇ ಇರಬೇಕು. ಅದನ್ನು ಕೇವಲ ಒಂದು ರಾಜ್ಯ ಕ್ಕೆ ಸೀಮಿತಗೊಳಿಸಲು ಸಾಧ್ಯವಿಲ್ಲ. ಹಾಗಾಗಿ ಕಣ್ಣೂರಿಗೆ ವಿಸ್ತರಿಸುವ ನಿರ್ಧಾರವನ್ನು ಈಗಾಗಲೇ ಕೈಗೊಳ್ಳಲಾಗಿದೆ. ಅದನ್ನು ಜಾರಿಗೊಳಿಸಬೇಕಾಗುತ್ತದೆ ಎಂದು ಅವರು ವಿವರಿಸಿದರು.
ಕಣ್ಣೂರಿಗೆ ರೈಲು ವಿಸ್ತರಿಸಿದರೂ ಮಂಗಳೂರಿನ ಜನರಿಗೆ ಇದುವರೆಗೆ ಸಿಗುತ್ತಿದ್ದ ಸವಲ ತ್ತುಗಳನ್ನು ಹೇಗೆ ಮುಂದುವರಿಸಬಹುದು ಎಂಬುದನ್ನು ಸದ್ಯದಲ್ಲೇ ತೀರ್ಮಾನಿಸಲಾಗು ವುದು. ಇಲ್ಲಿನ ಜನರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸೂಪರ್ ಫಾಸ್ಟ್ ವಿಸ್ತರಣೆ: ಚಿಂತನೆ
ಈಗಾಗಲೇ ಪ್ರಕಟಿಸಲಾಗಿರುವ ಮುಂಬೈ- ಕಾರವಾರ ಸೂಪರ್ಫಾಸ್ಟ್ ರೈಲನ್ನು ಕಾಲ ಕ್ರಮೇಣ ಟ್ರಾಫಿಕ್ ಗಮನಿಸಿ ಮಂಗಳೂರಿಗೂ ವಿಸ್ತರಿಸುವ ಬಗ್ಗೆ ಚಿಂತಿಸಲಾಗುವುದು ಎಂದರು.
ಮುಂದೆ ದಿನಂಪ್ರತಿ ರೈಲು
ಹಗಲು ರೈಲನ್ನು ಸದ್ಯ ವಾರದಲ್ಲಿ ಮೂರು ದಿನ ಓಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪ್ರತಿ ದಿನ ಸಂಚರಿಸುವಂತೆ ಕ್ರಮ ಕೈಗೊಳ್ಳಲಾಗುವುದು. ಸಕಲೇಶಪುರದಿಂದ ಕೆಳಭಾಗ ದಲ್ಲಿ ಎದುರಿನಿಂದ ಬರುವ ರೈಲು ನಿಲುಗಡೆಗೆ ವ್ಯವಸ್ಧೆಯನ್ನು ಕಲ್ಪಿಸಬೇಕಾಗಿದೆ. ಆ ಕಾರ್ಯವನ್ನು ಮುಂದಿನ ೬ ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು. ನಂತರ ಯಾವುದೇ ಸಮಸ್ಯೆಗಳಿಲ್ಲದೆ ಪ್ರತಿ ದಿನ ರೈಲು ಸಂಚರಿಸಬಹುದು ಎಂದರು.
ರಾಜ್ಯದಲ್ಲಿ ಏಳು ರೈಲ್ವೇ ಯೋಜನೆಗಳನ್ನು ರಾಜ್ಯ ಸರಕಾರ ಹಾಗೂ ರೈಲ್ವೇ ಇಲಾಖೆ ಜಂಟಿ ಸಹಯೋಗದಲ್ಲಿ ನಿರ್ಧರಿಸಿದೆ. ರಾಜ್ಯ ಸರಕಾರ ಇದೇ ರೀತಿಯ ಪ್ರಸ್ತಾವನೆ ಮುಂದಿಟ್ಟಲ್ಲಿ ಅದನ್ನು ಇಲಾಖೆ ಸಕ ರಾತ್ಮಕವಾಗಿ ಪರಿಗಣಿಸಲಿದೆ ಎಂದರು.
ಮಂಗಳೂರು - ಶೋರ್ನೂರು ನಡುವೆ ಅವಳಿ ಮಾರ್ಗ ನಿರ್ಮಾಣ ಕಾರ್ಯ ೨೦೧೦ ಮಾರ್ಚ್ಗೆ ಪೂರ್ಣಗೊಳ್ಳುವುದು ಎಂದವರು ಹೇಳಿದರು.
ರೈಲ್ವೆಯ ಅಧಿಕಾರಿಗಳಾದ ನರೇಶ್ ಗೋಯಲ್, ಭಾನು ತಯಾರ್, ವಿ. ಪಿ. ಸಿಂಗ್, ದ.ಕ. ಜಿಲ್ಲಾಧಿಕಾರಿ ವಿ. ಪೊನ್ನುರಾಜ್, ಕಾಂಗ್ರೆಸ್ ನಾಯಕರಾದ ಮೊದೀನ್ ಬಾವ, ಬೊಂಡಾಲ ಜಗ್ನನಾಥ ಶೆಟ್ಟಿ, ಅರುಣ ಕುವೆಲ್ಲೊ ಮತ್ತಿತರರು ಉಪಸ್ಥಿತರಿದ್ದರು.
ವರದಿಯ ವಿವರಗಳು |
 |
ಕೃಪೆ : ಉದಯವಾಣಿ/ಮ೦ಗಲೋರಿಯನ್ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2009-08-29 00:00:00
|
|
| Mohan H Naik, Mangaluru | 2009-08-29 | | "ರೈಲು ಸಂಚಾರ ಯಾವುದೇ ನಗರಗಳ ನಡುವೆ ಸೀಮಿತವಲ್ಲ. ಹಾಗಾಗಿ ಅದು ಎಲ್ಲ ಕಡೆಗಳಿಗೂ ವಿಸ್ತರಿಸುತ್ತಲೇ ಇರಬೇಕು, ಸಂಚರಿಸುತ್ತಲೇ ಇರಬೇಕು. ಅದನ್ನು ಕೇವಲ ಒಂದು ರಾಜ್ಯ ಕ್ಕೆ ಸೀಮಿತಗೊಳಿಸಲು ಸಾಧ್ಯವಿಲ್ಲ. ಹಾಗಾಗಿ ಕಣ್ಣೂರಿಗೆ ವಿಸ್ತರಿಸುವ ನಿರ್ಧಾರವನ್ನು ಈಗಾಗಲೇ ಕೈಗೊಳ್ಳಲಾಗಿದೆ. ಅದನ್ನು ಜಾರಿಗೊಳಿಸಬೇಕಾಗುತ್ತದೆ.":-
ಮುನಿಯಪ್ಪನವರೆ,
ನಿಮ್ಮ ಮಾತು ಸತ್ಯದ ತಲೆಮೇಲೆ ಹೊಡೆದಂತಿದೆ. ಆದರೇ, ಸ್ವಾಮಿ ಸ್ವಾತಂತ್ರ ಬಂದಾಗಿನಿಂದ ಭಾರತೀಯ ರೈಲ್ವೆ ಕೆಲವೇಕೆಲವು ರಾಜ್ಯಗಳ "ಪಿತ್ರಾರ್ಜಿತ ಆಸ್ತಿ " ಆಗಿದ್ದು ಸುಳ್ಳೇ ?.
"ಕಣ್ಣೂರಿಗೆ ರೈಲು ವಿಸ್ತರಿಸಿದರೂ ಮಂಗಳೂರಿನ ಜನರಿಗೆ ಇದುವರೆಗೆ ಸಿಗುತ್ತಿದ್ದ ಸವಲತ್ತುಗಳನ್ನು ಹೇಗೆ ಮುಂದುವರಿಸಬಹುದು ಎಂಬುದನ್ನು ಸದ್ಯದಲ್ಲೇ ತೀರ್ಮಾನಿಸಲಾಗು ವುದು. ಇಲ್ಲಿನ ಜನರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.":- ಸ್ವಾಮಿ ಮಂತ್ರಿ ಮಂತ್ರಿಮಹೋದಯರೇ ಮೊದಲು ಈ ಕೆಲಸ ಮಾಡಿ ನಂತರ , ಕೇರಳಕ್ಕೆ ರೈಲು ತಳ್ಳಿ, ಕೇರಳಿಗರ ಸೇವೆ ಮಾಡಬಹುದಲ್ಲವೆ? |
|