ಆದಿತ್ಯವಾರ, 05-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಜನತಾ ನ್ಯಾಯಾಲಯದ ಮೂಲಕ 5154 ಪ್ರಕರಣ ಇತ್ಯರ್ಥ : ಲೋಕ್ ಅದಾಲತ್ ಸಮಾರೋಪದಲ್ಲಿ ನರೇಂದ್ರ ಕುಮಾರ್ ಗುಣಕಿ
Latest news item ಸೃಜನ ಶೀಲತೆ ಇಲ್ಲದಿದ್ದಾಗ ಶಿಕ್ಷಣದ ಬೆಳವಣಿಗೆಗೆ ಕೊರತೆ | ಅಶೋಕ್ ಕುಮಾರ್ ಶೆಟ್ಟಿ, ಎಂ.ಎಸ್.ನಾಗರಾಜ್ ರಾವ್ ಹಾಗೂ ಡಾ.ಚಂದ್ರಶೇಖರ್ ದಾಂಬ್ಲೆಯವರಿಗೆ ಸನ್ಮಾನ
Latest news item ದುಬಾಯಿಯಲ್ಲಿ ’ಗಮ್ಮತ್ ಕಲಾವಿದೇರ್’ ಪ್ರಥಮ ಪ್ರದರ್ಶನ: ನಟನಾ ಚಾತುರ್ಯದಲ್ಲಿ ಮಿಂಚಿದ ’ಈ ಪೊರ್ಲು ದಾಯೇ’ ತುಳು ನಾಟಕ
Latest news item ಸುಶಿಕ್ಷಿತರ ಸಂಖ್ಯೆ ಹೆಚ್ಚಾದಂತೆ ಕೃಷಿಯತ್ತ ಒಲವು ಕಡಿಮೆ : ಉಡುಪಿ ರೈತ ಸಮಾವೇಶದಲ್ಲಿ ಶಾಸಕ ರಘುಪತಿ ಭಟ್
Latest news item ಉಡುಪಿ ಲಯನ್ಸ್ ಗೆ ಜಿಲ್ಲಾ ಲಯನ್ಸ್ ಗವರ್ನರ್ ಇಂದ್ರಾಳಿ ಜಯಕರ್ ಶೆಟ್ಟಿ ಅಧಿಕೃತ ಭೇಟಿ
Latest news item ಸುಬ್ರಮಣಿಯನ್ ಸ್ವಾಮಿ ಅರ್ಜಿ ವಜಾ: ಚಿದಂಬರಂ ನಿರಾಳ
Latest news item ಇಲ್ರಿ.. ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿಲ್ಲ: ಯಡ್ಡಿ
Latest news item ಚೆನ್ನೈ ತೆಕ್ಕೆಗೆ ಜಡೇಜಾ; 9.70 ಕೋಟಿಗೆ ಖರೀದಿ; ವಿನಯ ಕುಮಾರ್ ಗೆ 4.86ಕೋಟಿ ಕೊಟ್ಟ ರೋಯಲ್ ಚ್ಯಾಲೇಂಜರ್ಸ್ | ಯಾವ ಯಾವ ಫ್ರಾಂಚೈಸಿ ತೆಕ್ಕೆಗೆ?
Latest news item ಗೂಳಿ ಹೊರಕ್ಕೆ: ಕಳಂಕಿತ ಸಭಾಧ್ಯಕ್ಷರೇ ಎಂದಿದ್ದಕ್ಕೆ ಸದನದಿಂದ ಒಂದು ದಿನ ಅಮಾನತು (Updated)
Latest news item ಜೈನ ಸಾಹಿತಿಗಳಿಂದ ಕನ್ನಡ ಸಾಹಿತ್ಯದ ಬೆಳವಣಿಗೆ: ಡಾ.ಶಾಂತಿನಾಥ ದಿಬ್ಬದ
Latest news item ವೈದ್ಯರಲ್ಲಿ ಮಾನವೀಯತೆ ಮುಖ್ಯ: ನ್ಯಾ. ಸಂತೋಷ್ ಹೆಗ್ಡೆ
Latest news item ಪಡುಬಿದ್ರೆಯಲ್ಲಿ ಎಸಿಸಿ ಸಿಮೆಂಟ್ ಕಂಪೆನಿ ಸ್ಥಾಪನೆ: ರಸ್ತೆ ಕಾಮಗಾರಿಗೆ ಬೂದಿ ಬಳಸಬಹದು : ಡಿಸಿ | ಫೆ. 4ರಂದು ಪ್ರತಿಭಟನೆ
Latest news item ಉಡುಪಿ ಶೇಮ್, ಶೇಮ್ !: ಸೈಂಟ್ ಮೇರೀಸ್ ದ್ವೀಪದಲ್ಲಿ ಜಿಲ್ಲಾಡಳಿತ ಕೃಪಕಟಾಕ್ಷದಲ್ಲಿ ರೇವ್ ಪಾರ್ಟಿ: ವಿದೇಶಿ ಸಂಸ್ಕೃತಿ ಆನಾವರಣ, ಮದ್ಯ, ಡ್ರಗ್ಸ್ ಗಳದ್ದೇ ಕಾರುಬಾರು
Latest news item ಅಪಘಾತಕ್ಕೆ ತುತ್ತಾಗಿ ಕಾಮಿಡಿ ನಟ ಕರಿ ಬಸವಯ್ಯ ಅಕಾಲಿಕ ಮರಣ { VIEW VIDEO of HIS EMOTIONAL LIFE STORY }.
Latest news item ಬಯಲುಸೀಮೆ ಆರು ಜಿಲ್ಲೆಗಳಿಗೆ ಕುಡಿಯುವ ನೀರು; ತಿಂಗಳಲ್ಲಿ ಎತ್ತಿನಹೊಳೆ ನಿರ್ಧಾರ. ನೇತ್ರಾವತಿ ತಿರುವು ಇಲ್ಲ..ಹೆಚ್ಚಿನ ನೀರನ್ನು ಬಳಸಿಕೊಳ್ಳುವ ಯೋಜನೆ
Latest news item ಕುಸಿಯುವ ಭೀತಿಯಲ್ಲಿ ಕುದಿ ಗ್ರಾಮದ ಕೋಂಟು ಸೇತುವೆ : ಆತಂಕದಲ್ಲಿ ಗ್ರಾಮಸ್ಥರು : ಸೂಕ್ತ ಪರಿಹಾರಕ್ಕೆ ಒತ್ತಾಯ
Latest news item ಡಿವಿಜಿಯವರ ಕಾವ್ಯಗಳು ಜನಸ್ವಾರ್ಥ : ಡಾ. ಹೆಚ್. ಶಾಂತರಾಮ್
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ಶುಭಾಶಯಗಳು! ಕರಾವಳಿ ಕನ್ನಡಿಗರ ಬಹುದಿನಗಳ ಬೇಡಿಕೆ ಈಡೇರಿಕೆ: ನಾಳೆಯಿಂದ ಬೆಂಗಳೂರು-ಮಂಗಳೂರು ಹಗಲು ರೈಲು

ಬೆಂಗಳೂರು - ಮಂಗಳೂರು- ಊಡುಪಿ- ಕುಂದಾಪುರ-ಕಾರವಾರ ಯಾವಾಗ?

ನವದೆಹಲಿ, ಆ.೨೭. ಬೆಂಗಳೂರು- ಮಂಗಳೂರು ನಡುವೆ ಹಗಲು ರೈಲು ಸಂಚಾರ ಆರಂಭಿಸಬೇಕು ಎಂಬ ದಕ್ಷಿಣ ಕನ್ನಡದ ಜನರ ಬಹುದಿನಗಳ ಬೇಡಿಕೆ ಶನಿವಾರ ಈಡೇರಲಿದೆ.

ಬೆಂಗಳೂರು- ಮಂಗಳೂರು ನಡುವಣ ಹಾಲಿ ರಾತ್ರಿ ರೈಲಿನ ಸಂಚಾರವನ್ನು ಕೇರಳದ ಕಣ್ಣೂರಿನ ತನಕ ವಿಸ್ತರಿಸುವ ಘೋಷಣೆಯನ್ನು ಕೇಂದ್ರ ಸರ್ಕಾರ ಇನ್ನೂ ಜಾರಿಗೆ ತಂದಿಲ್ಲ.

ಎರಡು ವರ್ಷಗಳ ಹಿಂದೆಯೇ ಘೋಷಣೆ ಮಾಡಿದ್ದರೂ ಬಾಕಿ ಉಳಿದಿದ್ದ ಹಗಲು ರೈಲಿನ ಸಂಚಾರವನ್ನು ಆರಂಭಿಸಿ ಮಂಗಳೂರು ಪ್ರದೇಶದ ಜನರನ್ನು ‘ಸಾಂತ್ವನ’ಗೊಳಿಸಿದ ನಂತರ ರಾತ್ರಿ ರೈಲಿನ ಸಂಚಾರವನ್ನು ಕಣ್ಣೂರಿನ ತನಕ ವಿಸ್ತರಿಸುವ ಉದ್ದೇಶ ಕೇಂದ್ರ ಸರ್ಕಾರಕ್ಕಿದೆ.

ರಾತ್ರಿ ರೈಲಿನ ಬರ್ತ್‌ಗಳನ್ನು ಮಂಗಳೂರಿನ ತನಕ ಮತ್ತು ಕಣ್ಣೂರಿನ ತನಕ ಎಂದು ಎರಡು ಕೋಟಾಗಳಲ್ಲಿ ವಿಭಜಿಸಿ ಹಂಚಿಕೆ ಮಾಡಲಾಗುವುದು. ಮಂಗಳೂರಿಗೆ ಸಿಂಹಪಾಲು ಕೋಟಾ ದೊರೆಯಲಿದೆ ಎಂಬ ಇಂಗಿತವನ್ನು ರೇಲ್ವೆ ಮೂಲಗಳು ವ್ಯಕ್ತಪಡಿಸಿವೆ.

ಆದರೆ ಇದೇ ರೈಲಿನ ಜನರಲ್ ಕಂಪಾರ್ಟ್‌ಮೆಂಟ್‌ನಲ್ಲಿ ಪ್ರಯಾಣ ಮಾಡುವ ಮಂಗಳೂರಿಗರು ಕಣ್ಣೂರಿಗೆ ಹೋಗುವ ಕೇರಳಿಗರ ಜೊತೆ ಸ್ಪರ್ಧೆ ಮಾಡಲೇಬೇಕು. ಜನರಲ್ ಕಂಪಾರ್ಟ್‌ಮೆಂಟ್‌ನಲ್ಲಿ ಮೀಸಲು ಅಥವಾ ಕೋಟಾ ಹಂಚಿಕೆ ಮಾಡಲು ಬರುವುದಿಲ್ಲ ಎಂಬುದು ಈ ಮೂಲಗಳ ಅಂಬೋಣ.

ಅಂದ ಹಾಗೆ ಹೊಸ ರೈಲಿನ ಸಂಚಾರವನ್ನು ಇದೇ ಶನಿವಾರ ಬೆಳಗ್ಗೆ ಬೆಂಗಳೂರಿನಲ್ಲಿ ಕೇಂದ್ರ ರೇಲ್ವೆ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ಮತ್ತು ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹಸಿರು ಬಾವುಟ ತೋರಿ ಉದ್ಘಾಟನೆ ಮಾಡಲಿದ್ದಾರೆ.

ದಿನ ಬಿಟ್ಟು ದಿನ ಸಂಚಾರ: ಸದ್ಯಕ್ಕೆ ದಿನಬಿಟ್ಟು ದಿನ ಸಂಚರಿಸುವ ಈ ಹೊಸ ರೈಲು ಬೆಂಗಳೂರಿನಿಂದ ಬೆಳಗ್ಗೆ ೭.೩೦ಕ್ಕೆ ಹೊರಟು ಸಂಜೆ ೬.೪೦ಕ್ಕೆ ಮಂಗಳೂರು ತಲುಪ ಲಿದೆ.

ಮಂಗಳೂರಿನಿಂದ ಬೆಳಗ್ಗೆ ೮.೪೦ಕ್ಕೆ ಹೊರಟು ರಾತ್ರಿ ೭.೩೦ಕ್ಕೆ ಬೆಂಗಳೂರು ತಲುಪಲಿದೆ.

ಈ ಹೊಸ ಹಗಲು ರೈಲು ಅರಸೀಕೆರೆ ಹಾಸನ ಸಕಲೇಶಪುರದ ಮಾರ್ಗವಾಗಿ ಸಂಚರಿಸಲಿದೆ. ರಾತ್ರಿ ರೈಲಿನಂತೆ ಮೈಸೂರನ್ನು ಹಾದು ಹೋಗುವುದಿಲ್ಲ.

ಪರಿಣಾಮವಾಗಿ ಪ್ರಯಾಣದ ಅವಧಿ ಕೂಡ ಸುಮಾರು ಮೂರು ಗಂಟೆಗಳಷ್ಟು ತಗ್ಗಲಿದೆ ಎಂದು ರೇಲ್ವೆ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ಗುರುವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಬೆಂಗಳೂರಿನಿಂದ ಮಂಗಳವಾರ, ಗುರುವಾರ ಹಾಗೂ ಶನಿವಾರ ಮತ್ತು ಮಂಗಳೂರಿ ನಿಂದ ಸೋಮವಾರ, ಬುಧವಾರ ಹಾಗೂ ಶುಕ್ರವಾರದಂದು ಈ ರೈಲು ಸಂಚರಿಸಲಿದೆ.

ಈ ಮಾರ್ಗದಲ್ಲಿ ಹಗಲು ವೇಳೆ ಈಗಾಗಲೆ ಮೂರು ಸರಕು ಸಾಗಣೆ ರೈಲುಗಾಡಿಗಳು ಸಂಚರಿಸುತ್ತಿವೆ. ಈ ಪೈಕಿ ಒಂದರ ಸಂಚಾರವನ್ನು ಸ್ಥಗಿತಗೊಳಿಸಿ ಪ್ರಯಾಣಿಕರ ರೈಲು ಸಂಚಾರ ಆರಂಭಿಸುತ್ತಿದ್ದೇವೆ. ಪ್ರಯಾಣಿಕರ ಅನುಕೂಲಕ್ಕಾಗಿ ಲಕ್ಷಾಂತರ ರುಪಾಯಿ ನಷ್ಟವನ್ನು ರೇಲ್ವೆ ಇಲಾಖೆ ಭರಿಸಲು ಹಿಂಜರಿದಿಲ್ಲ ಎಂದು ಸಚಿವರು ತಿಳಿಸಿದರು.

ಸರಕು ಸಾಗಣೆ ರೈಲುಗಾಡಿಯನ್ನು ಮಾರ್ಗಮಧ್ಯದಲ್ಲಿ ನಿಲ್ಲಿಸಿಕೊಂಡು ಪ್ರಯಾಣಿಕರ ಗಾಡಿಗೆ ದಾರಿ ಮಾಡಿಕೊಡಲು ಸೂಕ್ತ ಸ್ಥಳವೊಂದನ್ನು ಗುರುತಿಸಲಾಗಿದೆ. ಈ ಸ್ಥಳದಲ್ಲಿ ‘ಲೂಪ್’ಗಳನ್ನು ಹಾಕಿ ನಿಲ್ದಾಣ ನಿರ್ಮಿಸುವ ಕಾರ್ಯವನ್ನು ಮುಂದಿನ ಆರು ತಿಂಗಳಲ್ಲಿ ಪೂರ್ಣಗೊಳಿಸಲಿದ್ದೇವೆ. ಆಗ ಸರಕು ಸಾಗಣೆಯ ಗಾಡಿಗಳೂ ಪೂರ್ಣ ಪ್ರಮಾಣದಲ್ಲಿ ಸಂಚರಿಸುವುದು ಸಾಧ್ಯ ಎಂದು ಅವರು ವಿವರಿಸಿದರು.

ಸೆಪ್ಟೆಂಬರಲ್ಲಿ ಶಿವಮೊಗ್ಗ- ಬೆಂಗಳೂರು ಇಂಟರ್‌ಸಿಟಿ

ಇತ್ತೀಚಿನ ರೇಲ್ವೆ ಬಜೆಟ್‌ನಲ್ಲಿ ಪ್ರಕಟಿಸಲಾದ ಶಿವಮೊಗ್ಗ- ಬೆಂಗಳೂರು ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲು ಸಂಚಾರ ಮುಂದಿನ ತಿಂಗಳು (ಸೆಪ್ಟೆಂಬರ್) ಆರಂಭ ಆಗಲಿದೆ.

ಮೈಸೂರು- ತಿರುಪತಿ ನಡುವಣ ರೈಲುಗಾಡಿಯ ಸಂಚಾರವನ್ನು ಚಾಮರಾಜನಗರದ ತನಕ ವಿಸ್ತರಿಸುವ ಘೋಷಣೆಯೂ ಮುಂದಿನ ತಿಂಗಳು ಈಡೇರಲಿದೆ. ರೇಲ್ವೆ ಸಚಿವೆ ಮಮತಾ ಬ್ಯಾನರ್ಜಿಯವರೇ ರಾಜ್ಯಕ್ಕೆ ಭೇಟಿ ನೀಡಿ ಈ ಎರಡೂ ಘೋಷಣೆಗಳನ್ನು ಕಾರ್ಯರೂಪಕ್ಕೆ ತರಲಿದ್ದಾರೆ ಎಂದು ರೇಲ್ವೆ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ.

2012 ಕ್ಕೆ ಬೆಂಗಳೂರು-ಮೈಸೂರು ಜೋಡಿ ಮಾರ್ಗ

ಬೆಂಗಳೂರು- ಮೈಸೂರು ನಡುವೆ ಜೋಡಿ ರೈಲು ಮಾರ್ಗ (ಡಬ್ಲಿಂಗ್) ನಿರ್ಮಾಣ ಕಾರ್ಯ ಮುಂಬರುವ ಎರಡೂವರೆ ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ರೇಲ್ವೆ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ಗುರುವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಬೆಂಗಳೂರಿನಿಂದ ರಾಮನಗರದ ತನಕ ಡಬ್ಲಿಂಗ್ ಕಾರ್ಯ ಈಗಾಗಲೆ ಪೂರ್ಣ ಗೊಂಡಿದೆ. ರಾಮನಗರದಿಂದ ಮೈಸೂರಿನ ನಡುವಣ ಕಾಮಗಾರಿಯನ್ನು ಚುರುಕುಗೊಳಿಸಲು ಎಲ್ಲ ಕ್ರಮ ಕೈಗೊಳ್ಳಲಾಗಿದೆ.

ಈ ಮಾರ್ಗದಲ್ಲಿ ಹಲವಾರು ನದಿಗಳು ಕಾಲುವೆಗಳು ಎದುರಾಗುವ ಕಾರಣ ೪೨ ದೊಡ್ಡ ಸೇತುವೆಗಳು ಸೇರಿದಂತೆ ಒಟ್ಟು ೧೨೬ ಸೇತುವೆಗಳನ್ನು ನಿರ್ಮಿಸಬೇಕಿದೆ. ಸೇತುವೆ ನಿರ್ಮಾಣ ದೀರ್ಘ ಸಮಯ ಹಿಡಿಯುವ ಕಾಮಗಾರಿ. ಸೇತುವೆ ನಿರ್ಮಾಣದ ಟೆಂಡರ್‌ ಗಳನ್ನು ಅಂತಿಮಗೊಳಿಸಿದ್ದು ಮುಂಬರುವ ಅಕ್ಟೋಬರ್‌ನಲ್ಲಿ ಕಾಮಗಾರಿ ಆರಂಭ ಆಗಲಿದೆ. ಈ ಕಾಮಗಾರಿ ಪೂರ್ಣಗೊಳ್ಳಲು ಎರಡೂವರೆ ವರ್ಷಗಳು ಬೇಕು. ಆದರೆ ಈ ಕಾಮಗಾರಿಯ ಜೊತೆ ಜೊತೆಗೇ ಉಳಿದ ಭಾಗದಲ್ಲಿ ಹಳಿ ನಿರ್ಮಿಸುವ ಕಾರ್ಯ ಆರಂಭಿಸಿ ಪೂರ್ಣಗೊಳಿಸಲಿದ್ದೇವೆ ಎಂದು ಅವರು ವಿವರಿಸಿದರು.

ಡಬ್ಲಿಂಗ್ ಜೊತೆ ಜೊತೆಗೆ ವಿದ್ಯುದೀಕರಣದ ಕೆಲಸವೂ ಪೂರ್ಣಗೊಳ್ಳಲಿದೆ. ಈ ಕಾರ್ಯ ಮುಗಿದ ನಂತರ ಬೆಂಗಳೂರು- ಮೈಸೂರು ನಡುವೆ ತಡೆರಹಿತ ವೇಗದ ರೈಲುಗಾಡಿಗಳ ಸಂಚಾರ ಆರಂಭಸಲಿದ್ದೇವೆ. ಅಲ್ಲಿಯ ತನಕ ಎಲ್ಲ ಮುಖ್ಯ ನಿಲ್ದಾಣಗಳಲ್ಲಿ ನಿಲುಗಡೆ ಅನಿವಾರ್ಯ. ಮಹಾರಾಜರ ಕಾಲದ ಮೈಸೂರು ರೇಲ್ವೆ ವರ್ಕ್‌ಷಾಪ್‌ನ ಪುನರುದ್ಧಾರದ ಕುರಿತು ಇದೇ ೨೯ರಂದು ಮೈಸೂರಿನಲ್ಲಿ ವಿಮರ್ಶಾ ಸಭೆ ನಡೆಸಲಿದ್ದೇವೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ದಾವಣಗೆರೆ- ಚಿತ್ರದುರ್ಗ; ಕುಡಚಿ- ಬಾಗಲಕೋಟೆ: ಬಾಗಲಕೋಟೆ- ಕುಡಚಿ ಮತ್ತು ದಾವಣಗೆರೆ- ಚಿತ್ರದುರ್ಗದ ನಡುವೆ ರೈಲು ಮಾರ್ಗ ನಿರ್ಮಿಸಬೇಕೆಂಬ ಬಹುಕಾಲದ ಬೇಡಿಕೆಯನ್ನು ತೀವ್ರ ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳಲು ಅಧಿಕಾರಿಗಳಿಗೆ ಆದೇಶ ನೀಡಿದ್ದೇನೆ. ಈ ಮಾರ್ಗಗಳ ಸಮೀಕ್ಷೆಗಳು ಈಗಾಗಲೆ ಮುಗಿದಿವೆ. ಬಂಗಾರಪೇಟೆ- ಯಲಹಂಕ ನಡುವಣ ಕಾಮಗಾರಿ ೨೦೧೦ರ ಜೂನ್ ವೇಳೆಗೆ ಪೂರ್ಣಗೊಳ್ಳಲಿದೆ.

ಶಿವಮೊಗ್ಗ- ಹರಿಹರದ ನಡುವೆ ರೈಲು ಮಾರ್ಗ ನಿರ್ಮಾಣವನ್ನು ಕೈಗೆತ್ತಿಕೊಂಡರೆ ಶೇ.೫೦ರಷ್ಟು ವೆಚ್ಚವನ್ನು ಭರಿಸಲು ರಾಜ್ಯ ಸರ್ಕಾರ ಸಿದ್ಧವಿದೆ ಎಂಬ ಪ್ರಸ್ತಾವವನ್ನು
ಮುಖ್ಯಮಂತ್ರಿಗಳು ಲಿಖಿತವಾಗಿ ಶೀಘ್ರ ಕೇಂದ್ರಕ್ಕೆ ಸಲ್ಲಿಸಲಿದ್ದಾರೆ. ನೆಲಮಂಗಲ- ಶ್ರವಣ ಬೆಳಗೊಳದ ನಡುವಣ ರೈಲು ಮಾರ್ಗ ನಿರ್ಮಾಣವನ್ನು ಆದಷ್ಟು ತ್ವರಿತವಾಗಿ ಪೂರ್ಣ ಗೊಳಿಸಲಿದ್ದೇವೆ. ಬೆಂಗಳೂರು- ಹುಬ್ಬಳ್ಳಿ- ಧಾರವಾಡ ವಿಸ್ತರಣೆಯ ಕಾಮಗಾರಿ ಯನ್ನು ಆದ್ಯತೆಯ ಮೇಲೆ ನಡೆಸಲಾಗುವುದು ಎಂದರು

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಕನ್ನಡಪ್ರಭ
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2009-08-28 00:00:00

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕರಾವಳಿ]

»ಬಂಟ್ವಾಳ: ಹೊಳೆಗೆ ವಿಷ; ಮೀನುಗಳ ಸಾವು
»ರಾಜ್ಯಮಟ್ಟದ ಕಿಶೋರ ಪ್ರತಿಭಾ ಸ್ಪರ್ಧೆ: ಉಡುಪಿಯ ದೀಕ್ಷಾಗೆ ಮೊದಲ ಸ್ಥಾನ
»ಪ್ರೊ.ಎಸ್. ಶೆಟ್ಟರ್‌ಗೆ ಎಸ್‌ವಿಪಿ ಪ್ರಶಸ್ತಿ
»ವೀರರಾಣಿ ಅಬ್ಬಕ್ಕ ಪ್ರಶಸ್ತಿ ಪ್ರಕಟ
»‘ಮಾಸ್ಟರ್ ಚೆಫ್’ ವಿಕಾಸ್ ಖನ್ನರೊಂದಿಗೆ ಕೆಲಹೊತ್ತು...
»ತೋನ್ಸೆ ಪುಷ್ಕಳ ಕುಮಾರ್‌ಗೆ ‘ಸ್ಕಂದಶ್ರೀ’ ವರ್ಷದ ಪ್ರಶಸ್ತಿ
»ಹೆದ್ದಾರಿ ಕಾಮಗಾರಿಗೆ ಯುಪಿಸಿಎಲ್ ಬೂದಿ: ರಸ್ತೆ ತಡೆ, ಪ್ರತಿಭಟನೆ
»ಉಡುಪಿ: ಹಳೆ ಆರೋಪಿಯ ಬಂಧನ
»ಕಳವು ಆರೋಪಿಯ ಸೆರೆ: ಚಿನ್ನಾಭರಣ ವಶ
»ದಾಖಲೆಗಿಳಿಲ್ಲದೆ ಸಿಮ್ ಮಾರಾಟ: ಮೂವರ ಸೆರೆ
»ಅಕ್ರಮ ಮರ ಸಾಗಾಟ: ಇಬ್ಬರ ಬಂಧನ; ಲಾರಿ ವಶ
»ರೈತ ಸಮಾವೇಶದಲ್ಲಿ ರೈತರ ಜೊತೆ ತಹಶೀಲ್ದಾರ್ ನೇರ ಸಂವಾದ : ಕೃಷಿ ಹಾನಿ ಬಗ್ಗೆ ಪರಿಹಾರ ನೀಡುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ : ರೈತರ ಅಳಲು
»ಜನತಾ ನ್ಯಾಯಾಲಯದ ಮೂಲಕ 5154 ಪ್ರಕರಣ ಇತ್ಯರ್ಥ : ಲೋಕ್ ಅದಾಲತ್ ಸಮಾರೋಪದಲ್ಲಿ ನರೇಂದ್ರ ಕುಮಾರ್ ಗುಣಕಿ
»ಸೃಜನ ಶೀಲತೆ ಇಲ್ಲದಿದ್ದಾಗ ಶಿಕ್ಷಣದ ಬೆಳವಣಿಗೆಗೆ ಕೊರತೆ | ಅಶೋಕ್ ಕುಮಾರ್ ಶೆಟ್ಟಿ, ಎಂ.ಎಸ್.ನಾಗರಾಜ್ ರಾವ್ ಹಾಗೂ ಡಾ.ಚಂದ್ರಶೇಖರ್ ದಾಂಬ್ಲೆಯವರಿಗೆ ಸನ್ಮಾನ
»ಸುಶಿಕ್ಷಿತರ ಸಂಖ್ಯೆ ಹೆಚ್ಚಾದಂತೆ ಕೃಷಿಯತ್ತ ಒಲವು ಕಡಿಮೆ : ಉಡುಪಿ ರೈತ ಸಮಾವೇಶದಲ್ಲಿ ಶಾಸಕ ರಘುಪತಿ ಭಟ್
»ಉಡುಪಿ ಲಯನ್ಸ್ ಗೆ ಜಿಲ್ಲಾ ಲಯನ್ಸ್ ಗವರ್ನರ್ ಇಂದ್ರಾಳಿ ಜಯಕರ್ ಶೆಟ್ಟಿ ಅಧಿಕೃತ ಭೇಟಿ
»ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸದ್ಯದ ಉದ್ಯೋಗಾವಕಾಶಗಳ ತರಬೇತಿ ಕಾರ್ಯಕ್ರಮ
»ಜೈನ ಸಾಹಿತಿಗಳಿಂದ ಕನ್ನಡ ಸಾಹಿತ್ಯದ ಬೆಳವಣಿಗೆ: ಡಾ.ಶಾಂತಿನಾಥ ದಿಬ್ಬದ
»ಡಿವಿಜಿ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ: ‘ಡಿವಿಜಿಯನ್ನು ಜನ ಎಂದಿಗೂ ಮರೆಯಲ್ಲ’
»ವೈದ್ಯರಲ್ಲಿ ಮಾನವೀಯತೆ ಮುಖ್ಯ: ನ್ಯಾ. ಸಂತೋಷ್ ಹೆಗ್ಡೆ
»ಪರಪ್ಪೆ ಬಳಿ ಭೀಕರ ಬಸ್ ಅಪಘಾತ: ಕ್ಲೀನರ್ ಮೃತ್ಯು, 35 ಮಂದಿಗೆ ಗಾಯ, ಹಲವರು ಗಂಭೀರ
»‘ಸಹೀಹ್ ಬುಖಾರಿ’ ಗ್ರಂಥ ಬಿಡುಗಡೆ
»ಪಡುಬಿದ್ರೆ: ರಸ್ತೆ ಕಾಮಗಾರಿಗೆ ಮತ್ತೆ ತಳಬೂದಿ ಬಳಕೆ; ಫೆ. 4ರಂದು ಪ್ರತಿಭಟನೆ
»ಭಟ್ಕಳ ಎಜುಕೇಶನ್ ಟ್ರಸ್ಟ್‌ಗೆ 75ರ ಸಂಭ್ರಮ: ಸಮಾರೋಪ ಸಮಾರಂಭ: ಕಠಿಣ ಪರಿಶ್ರಮದಿಂದ ಮಹತ್ತರ ಸಾಧನೆ ಸಾಧ್ಯ: ಡಾ.ದಾಸ್
»ಪಡುಬಿದ್ರೆಯಲ್ಲಿ ಎಸಿಸಿ ಸಿಮೆಂಟ್ ಕಂಪೆನಿ ಸ್ಥಾಪನೆ: ರಸ್ತೆ ಕಾಮಗಾರಿಗೆ ಬೂದಿ ಬಳಸಬಹದು : ಡಿಸಿ | ಫೆ. 4ರಂದು ಪ್ರತಿಭಟನೆ
»ಉಡುಪಿ ಶೇಮ್, ಶೇಮ್ !: ಸೈಂಟ್ ಮೇರೀಸ್ ದ್ವೀಪದಲ್ಲಿ ಜಿಲ್ಲಾಡಳಿತ ಕೃಪಕಟಾಕ್ಷದಲ್ಲಿ ರೇವ್ ಪಾರ್ಟಿ: ವಿದೇಶಿ ಸಂಸ್ಕೃತಿ ಆನಾವರಣ, ಮದ್ಯ, ಡ್ರಗ್ಸ್ ಗಳದ್ದೇ ಕಾರುಬಾರು
»ಕಳಂಕಿತ ಅಧ್ಯಕ್ಷರೇ? ಎಂದು ಸಂಬೋಧಿಸಿ..ಸಭಾಧ್ಯಕ್ಷರ ವಿರುದ್ಧ ವಾಗ್ದಾಳಿ: ಗೂಳಿ ಹಟ್ಟಿ ಅಮಾನತು
»ಕುಸಿಯುವ ಭೀತಿಯಲ್ಲಿ ಕುದಿ ಗ್ರಾಮದ ಕೋಂಟು ಸೇತುವೆ : ಆತಂಕದಲ್ಲಿ ಗ್ರಾಮಸ್ಥರು : ಸೂಕ್ತ ಪರಿಹಾರಕ್ಕೆ ಒತ್ತಾಯ
»ಡಿವಿಜಿಯವರ ಕಾವ್ಯಗಳು ಜನಸ್ವಾರ್ಥ : ಡಾ. ಹೆಚ್. ಶಾಂತರಾಮ್
»ಯಶವಂತಪುರ - ಕಾರವಾರ ರೈಲು ಸುರತ್ಕಲ್‌ನಲ್ಲಿ ನಿಲುಗಡೆ; ಸುದುಪಯೋಗಪಡಿಸಿ: ಅಸ್ಕರ್‌
»ಮಂಗಳೂರಿನಲ್ಲೀಗ ಕೆಟಿಎಂ 200 ಡ್ಯೂಕ್ ಬೈಕ್
»ಭಟ್ಕಳ: ಸುವರ್ಣ ಮಹೋತ್ಸವ ಸಂಭ್ರಮದಲ್ಲಿ ಜಾಮಿಯಾ ಇಸ್ಲಾಮಿಯಾ: ಮಾ.18ರಿಂದ 21ರವರೆಗೆ ಶೈಕ್ಷಣಿಕ ಹಾಗೂ ಸೌಹಾದರ್ ಸಮಾವೇಶ
»ಮಂಗಳೂರಿನಲ್ಲಿ ಸಮಸ್ತ ಸಮ್ಮೇಳನ ವಾಹನ ಪ್ರಚಾರ ಜಾಥಾ, ಬೈಕ್ ರ್ಯಾಲಿ
»ಆದಿವಾಸಿ ಕೊರಗ ವಿದ್ಯಾರ್ಥಿನಿ ಗೀತಾ ಸಾವು ಪ್ರಕರಣ: ತನಿಖೆ ವಿಳಂಬ ವಿರೋಧಿಸಿ ಜಿಲ್ಲಾ ಕೊರಗ ಸಂಘದ ಪ್ರತಿಭಟನೆ
»ಆರಾಧನಾಲಯಗಳನ್ನು ಉಳಿಸಿಕೊಂಡೇ ರಾ.ಹೆ. ಅಭಿವೃದ್ಧಿ: ಇಬ್ರಾಹೀಂ ಕುಂಞಿ
»ಪಡುಬಿದ್ರೆ: ಹೆದ್ದಾರಿ ಕಾಮಗಾರಿಗೆ ತಳಬೂದಿ ಬಳಕೆ; ಸ್ಥಳೀಯರ ತಡೆ
»ನಕಲಿ ಚಿನ್ನ ಮಾರಾಟ ಯತ್ನ: ಇಬ್ಬರ ಸೆರೆ
»ಡಾ.ಗುರುರಾಜ್ ಭಟ್ಟ ಸ್ಮಾರಕ ಪ್ರಶಸ್ತಿ: ಡಾ.ಎನ್. ಜಯರಾಂ ಆಯ್ಕೆ : ಫೆ.11ರಂದು ರಾಜಭವನದಲ್ಲಿ ರಾಜ್ಯಪಾಲರಿಂದ ಪ್ರಶಸ್ತಿ ಪ್ರದಾನ
»ಭೂ ಹಗರಣ ಪ್ರಕರಣ: ಯಡಿಯೂರಪ್ಪ ವಿರುದ್ಧ ವಿಚಾರಣೆ ಆರಂಭ
»ಕಾರು-ಬೈಕ್ ಡಿಕ್ಕಿ: ಪೋಲೀಸ್ ಕಾನ್ ಸ್ಟೇಬಲ್ ವರದರಾಜ್ ಬಲಿ; ಕಾರಿನೊಡನೆ ಚಾಲಕ ಪರಾರಿ
»ಜಾಗೋಭಾರತ್ ಭಾರತ್ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಣೆ: ವಿದ್ಯಾರ್ಥಿಗಳಿಂದ ಬಲವಂತದ ತರಗತಿ ಬಹಿಷ್ಕಾರ
»ಉಡುಪಿ ಕಿದಿಯೂರ್ ಹೋಟೆಲ್ ನ ರಜತ ಸಂಭ್ರಮ : ಸ್ಥಳ ದೇವ ನಾಗರಾಜನಿಗೆ ಅಷ್ಟಪವಿತ್ರ ನಾಗಮಂಡಲೋತ್ಸವ
»ಹುಟ್ಟು ಅಂಧನಾದರೂ ವಿಶಿಷ್ಟ ಸಾಧನೆಯ ಮೂಲಕ ನಿರಂತರ ಬೆಳಕಿನ ಸೇವೆ !
»ರೊಸಾರಿಯೊ: ಚಿನ್ನದ ಪದಕ ವಿಜೇತ ವಿದ್ಯಾರ್ಥಿಗೆ ಸನ್ಮಾನ
»ಪುತ್ತೂರು: ನೆಕ್ಕಿಲಾಡಿ ಜಲವಿದ್ಯುತ್ ಸ್ಥಾವರ ನಿರ್ಮಾಣ; ಸಮೀಕ್ಷೆ ನಡೆಸದೆ ಕಾಮಗಾರಿ ಆರಂಭ: ರೈತ ಸಂಘ
»ತೊಕ್ಕೊಟ್ಟು ಪ್ರಕರಣ: ಗೃಹ ಸಚಿವರಿಗೆ ಶಾಸಕ ಖಾದರ್ ಮನವಿ
»ಪುತ್ತೂರು: ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಿಪಿಎಂ ಧರಣಿ
»ಇಂಪ್ರಿಂಟ್ಸ್ -2012ಕ್ಕೆ ಚಾಲನೆ: ಅಂತರ್ ಕಾಲೇಜು ವಾಣಿಜ್ಯ ಸ್ಪರ್ಧಾ ಸಮ್ಮೇಳನ ‘ಆ್ಯಕ್ಮೆ’ಗೆ ಚಾಲನೆ
»ಸರಣಿ ಹತ್ಯಾ ಪ್ರಕರಣದ ವಿಚಾರಣೆ: ಮೋಹನ್‌ಕುಮಾರ್‌ನ ಹಸ್ತಾಕ್ಷರದ ಸಾಮ್ಯತೆಯ ಸಾಕ್ಷ
»ತೊಕ್ಕೊಟ್ಟು: ಅಪಾಯದ ಅಂಚಿನಲ್ಲಿ ಬಸ್ ತಂಗುದಾಣ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri