ಶನಿವಾರ, 13-03-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಮಂಗಳೂರು: ನಗರದಲ್ಲಿ ಮುಸ್ಲಿಮ್ ಮೀಸಲಾತಿಗೆ ಅಗ್ರಹಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಬ್ರಹತ್ ಸಾರ್ವಜನಿಕ ಸಮಾವೇಶ.
Latest news item ಮಂಗಳೂರು: ನಂತೂರ್ ಅಪಘಾತದಲ್ಲಿ ವಿಧ್ಯಾರ್ಥಿ ಸಾವು ಹಿನ್ನೆಲೆ : ರಸ್ತೆ ಸುರಕ್ಷಾ ಕ್ರಮಗಳಿಗೆ ಒತ್ತಾಯಿಸಿ ವೆಸ್ಟರ್ನ್ ಇನ್‌ಸ್ಟಿಟ್ಯೂಟ್ ವಿಧ್ಯಾರ್ಥಿಗಳಿಂದ ಪ್ರತಿಭಟನೆ - ರಸ್ತೆತಡೆ.
Latest news item ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ: ಮೋದಿಗೆ ಸಿಟ್ ಸಮನ್ಸ್
Latest news item ಮಂಗಳೂರು: ಬೋಟ್ ಮುಳುಗಿ 45 ಲಕ್ಷ ರೂ. ನಷ್ಟ: 10 ಮಂದಿ ಪಾರು
Latest news item ಚರ್ಚ್ ದಾಳಿ ಮುಂದುವರಿದ ವಿಚಾರಣೆ: ಪೊಲೀಸರಿಗೆ ಗಾಯವಾಗಿದ್ದು ಮಾತ್ರ ಗೊತ್ತು; ಪಾಟೀ ಸವಾಲಿಗೆ ಎ‌ಎಸ್‌ಐ ಉತ್ತರ
Latest news item ಮಂಗಳೂರು: ಕೊಂಕಣಿ ಕೋಗಿಲೆ ವಿಲ್ಫಿ ರೆಬಿಂಬಸ್ ಅವರ ಅಂತಿಮ ಯಾತ್ರೆ : ಅಂತಿಮ ದರ್ಶನದಲ್ಲಿ ಪಾಲ್ಗೊಂಡ ಸಾವಿರಾರು ಅಭಿಮಾನಿಗಳು.
Latest news item ಕಾಮಿಸ್ವಾಮಿಗೆ ರಂಜಿತಾ ಮಸಾಜ್; ಹೊಸ ಚಿತ್ರಗಳು ಬಹಿರಂಗ
Latest news item ಮಂಗಳೂರು: ವಿವಿಧ ಬೇಡಿಕೆಗಳಿಗೆ ಅಗ್ರಹಿಸಿ ಖಾಸಗಿ ಐ.ಟಿ.ಐ ಸಿಬ್ಬಂದಿಗಳಿಂದ ನಗರದಲ್ಲಿ ಜಾಥಾ - ಸತ್ಯಾಗ್ರಹ.
Latest news item ಮಂಗಳೂರು: ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪುರಭವನದಲ್ಲಿ ಚಪ್ಪರ ಮುಹೂರ್ತ
Latest news item ಮಂಗಳೂರು: ನಂತೂರು ಬಳಿ ಬಸ್ಸು - ರಿಕ್ಷಾ ಡಿಕ್ಕಿ : ಒರ್ವ ವಿದ್ಯಾರ್ಥಿ ಸಾವು. ಇಬ್ಬರಿಗೆ ಗಂಭೀರ ಗಾಯ.
Latest news item `ಕನ್ನಡ ಪ್ರಭ ಲೇಖನ ನನ್ನದಲ್ಲ' : ತಸ್ಲೀಮಾ | ದೇವೇಗೌಡರ ಅಮೇಧ್ಯ ತಿಂದು ಕೋಮು ಗಲಭೆಗೆ ಮುನ್ನುಡಿ ಬರೆದ ಕನ್ನಡಪ್ರಭ
Latest news item ದಿಲ್ಲಿಯಲ್ಲಿ ಗೌಡರ ಗದ್ದಲ: ನೈಸ್ ಯೋಜನೆ ವಿರುದ್ಧ ಮೊಳಗಿದ ರೈತರ ಕಹಳೆ
Latest news item ಟ್ರಾನ್ಸ್‌ಫಾರ್ಮರ್ ಸ್ಪರ್ಶ: ಯುವಕನ ಬಲಿ: ಮೆಸ್ಕಾಂ ನಿರ್ಲಕ್ಷ ಆರೋಪಿಸಿ ಸಾರ್ವಜನಿಕರಿಂದ ಉಳ್ಳಾಲ ಪುರಸಭೆಗೆ ಮುತ್ತಿಗೆ; ಕಠಿಣ ಕ್ರಮಕ್ಕೆ ಖಾದರ್ ಆಗ್ರಹ
Latest news item ಉಡುಪಿ: ಮಠ, ಟ್ರಸ್ಟ್‌ಗಳಿಗೆ ಹಂಚುವ ಹಣ-ಭೂಮಿ ಯಾರ ಸೊತ್ತು?: ಪ್ರೊ.ರಾಮದಾಸ್
Latest news item ನಿಮಗೆ ಏಳು ಪುತ್ರಿಯರು, ನೆನಪಿರಲಿ; ಲಾಲೂಗೆ ಸೋನಿಯಾ
Latest news item ಮಂಗಳೂರು: ಸಾರಿಗೆ ವ್ಯವಸ್ಥೆ ಸುಧಾರಣೆಗೆ ಜಿಲ್ಲಾಡಳಿತದ ಜೊತೆಗೆ ಸಾರ್ವಜನಿಕರ ಸಹಕಾರ ಅಗತ್ಯ; ಪಂಪ್‌ವೆಲ್‌ನಲ್ಲಿ ಹೊಸ ಬಸ್ ಟ್ರಾನ್ಸ್‌ಪೋರ್ಟೇಶನ್ ಹಬ್ ಹಬ್ ಶೀಘ್ರ ಟೆಂಡರ್, -- ಜಿಲ್ಲಾಧಿಕಾರಿ ಪೊನ್ನುರಾಜ್.
Latest news item ಮಂಗಳೂರು: 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಹೋರಾತ್ರಿ ಸಾಂಸ್ಕ್ರತಿಕ ಪ್ರತಿಭಾ ಸಂಭ್ರಮ : ಪ್ರದೀಪ್ ಕುಮಾರ್ ಕಲ್ಕೂರ.
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ
Latest news item ಗಲ್ಫ್ ಜೀವನಕ್ಕೆ ಸುಜಯ್ ಮತ್ತು ಸ್ಮಿತಾ ವಿದಾಯ: ಕ್ಯಾಮೆರಾ ಕಣ್ಣಿನ ದೃಷ್ಠಿ ದುಬಾಯಿನಿಂದ ಮಂಗಳೂರಿನತ್ತ...
Latest news item ಬಹರೈನ್ ಕನ್ನಡ ಸ೦ಘದ ಸ೦ಭ್ರಮದ ವಾರ್ಷಿಕೋತ್ಸವ
Latest news item ಮ್ಯಾಂಗಲೂರ್ ಕೊಂಕಣರ ಮಡಿಲಿಗೆ ಮತ್ತೊಮ್ಮೆ ಕೂಸಮ್ಮ ಶಂಬು ಶೆಟ್ಟಿ ಥ್ರೋಬಾಲ್ ಪ್ರಶಸ್ತಿ
Latest news item ದುಬೈ: ಅಗಲಿದ ಸಿ. ಅಶ್ವಥ್, ವಿಷ್ಣುವರ್ಧನರಿಗೆ ಧ್ವನಿ ಪ್ರತಿಷ್ಠಾನದ ಶೃದ್ಧಾಂಜಲಿ
Latest news item ನೆನಪು: ಅಭಿನವ ಭಾರ್ಗವ ಸಾಹಸ ಸಿಂಹ ವಿಷ್ಣುವರ್ಧನ್ ಗೆ ಕೊಲ್ಲಿರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿಗರ ಭಾವ ಪೂರ್ಣ ನಮನ...



 

 
ಆಯ್ದ ಪ್ರತಿಸ್ಪಂದನಗಳು

FIRST PREV
( Page 1 of 32 )
NEXT LAST
Imran Manna, Udupi
2010-03-12
ವಾರ್ತೆ:ಕಾಲೇಜಿಗೆ ಅರ್‍ವತ್ತು, ಅಜ್ಜಿಗೆ ಎಂಬತ್ತು...!
ಈ ಅಜ್ಜಮ್ಮ MGM ನಲ್ಲಿ ವಿದ್ಯಾಭಾಸ ಮಾಡಿದ ಎಲ್ಲಾ ಹುಡುಗರ ದ್ರಷ್ಟಿಯಲ್ಲಿ ಸ್ವಂತ ತಾಯಿ ಯಾ ಸಮಾನ ಎಂದು ನಾನು ಹೇಳಬಯಸುತ್ತೇನೆ. ಆ ಕಾಲೇಜಿನ ದಿನ ಗಳನ್ನು ನಾವು ಯಾವತ್ತಿಗೂ ಮರೆಯುವಂತಿಲ್ಲ .ಪ್ರತಿ ದಿನ ಮಧ್ಯಾನ ಊಟ ಅಜ್ಜಮ್ಮ ನ ಮನೆ ( ಹೋಟೆಲ್ ) ಯಲ್ಲಿ . ಒಂದು ದಿನ ಹಣ ಇಲ್ಲ ಅಜ್ಜಮ ಎಂದರೆ ಈ ವನಸ್ ಮಲ್ಪುಲ ಮಗ ಕಾಸ್ ಎಲ್ಲೇ ಕೊರ್ಲೇ .ಎಂದು ನಮ್ಮನು ಸ್ವಂತ ಮಕ್ಕಳಂತೆ ಪೋಷಿಸುತ್ತಿದ್ದರು.ಅಜ್ಜಮ್ಮ ನೀವು ಇವತ್ತಿಗೂ ನಮ್ಮ ಹ್ರದಯದಲ್ಲಿ ವಿಶೇಷ ವಾದ ಸ್ಥಾನ ವನ್ನು ಹೊಂದಿದ್ದೀರಿ .ಅಲ್ಲ್ಹಹು ನಿಮಗೆ ಯಾವಾಗಲು ಸುಖವನ್ನು ದಯಪಾಲಿಸಲಿ ಎಂದು ಪ್ರಾರ್ತಿಸುತ್ತೇನೆ.ನಾಳೆ ಇಂದ ನಡೆಯಲಿರುವ MGM ವಾರ್ಷಿಕೊಸ್ಸವ ಕಾರ್ಯಕ್ರಮ ದಲ್ಲಿ ನಮ್ಮೆಲ್ಲರ ಪ್ರೀತಿಯ ಅಜ್ಜಮ್ಮ ರನ್ನು ಸನ್ಮಾನಿಸ ಬೇಕೆಂದು ಕತರ್ ನಲ್ಲಿ ನೆಲೆಸಿರುವ ಎಲ್ಲಾ MGM ಹಳೆಯ ವಿದ್ಯಾರ್ಥಿ ಗಳ ಪರವಾಗಿ ಕಾಲೇಜಿನ ಆಡಳಿತ ಮಂಡಳಿಯನ್ನು ಕಳಕಳಿಯಿಂದ ಬೇಡಿಕೊಳ್ಳುತ್ತಿದ್ದೇನೆ.ಮಂಜುನಾಥ್ ಶೆಟ್ಟಿ ರವರಿಗೆ ಧನ್ಯವಾದಗಳು Good Work Keep it up & God bless you: Old Students MGM College; Imran Manna , Sports Secretary, KMCA & EXCOM Tulu Koota Qatar. M. Iqbal Manna, Social Activist. Doha Qatar

ramesh, mysore
2010-03-12
ವಾರ್ತೆ:ಉಡುಪಿ: ರೈಲು ಸೇವೆ: ಮಾತು ತಪ್ಪಿದ ಸಚಿವ ಮುನಿಯಪ್ಪರಿಗೆ ನೋಟಿಸ್
ಸಾಮಾಜಿಕ ಕಾಳಜಿ ಈ ರೀತಿಯಲ್ಲಿ ವ್ಯಕ್ತಪಸಬೇಕಷ್ಟೇ, ರಾಜಕಾರಣಿಗಳು ಯಾವಾಗಲೂ ಸುಳ್ಳು ಭರವಸೆಗಳನ್ನು ಕೊಡುವುದರಲ್ಲಿ ಸಿದ್ದಹಸ್ತರು, ಕರ್ನಾಟಕದ ಪಾಲಿಗೆ ಕೇವಲ ಭರವಸೆಗಳಿಂದ ಕಾಯ್ದು ಕುಳಿತಿರಬೇಕು, ಕನ್ನಡಿಗರು ಈಗಲಾದರು ಎಚ್ಚೆತ್ತರೆ ಮಾತ್ರ ಕನ್ನಡಿಗರಿಗೆ ಕರ್ನಾಟಕಕ್ಕೆ ಉಳಿಗಾಲ, ಈ ವಿಚಾರಕ್ಕೆ ಒಕ್ಕೊರಲಿನ ಹೋರಾಟ ಅನಿವಾರ್ಯ.

ಪ.ರಾಮಚಂದ್ರ , ರಾಸ್ ಲಫ್ಫಾನ್, ಕತಾರ್
2010-03-10
ವಾರ್ತೆ:ಉಡುಪಿ: ರೈಲು ಸೇವೆ: ಮಾತು ತಪ್ಪಿದ ಸಚಿವ ಮುನಿಯಪ್ಪರಿಗೆ ನೋಟಿಸ್
ಸಂಸತ್ ಸದಸ್ಯರಾಗಿ, ಜನರ ಹಿತಾಸಕ್ತಿಗಾಗಿ ದುಡಿಯುವ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಕರ್ನಾಟಕ ರಾಜ್ಯದ ಜನತೆಯ ಪ್ರತಿನಿಧಿ, ಮಂತ್ರಿ ಮಂಡಲದಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಹಾಯಕ ರೈಲ್ವೆ ಸಚಿವ ಕೆ.ಎಚ್.ಮುನಿಯಪ್ಪ ಅವರ ಸಾಂವಿಧಾನಿಕ ಜವಾಬ್ದಾರಿಯನ್ನು ಸಾರ್ವಜನಿಕರ ಪರವಾಗಿ ನೋಟಿಸು ಜಾರಿಗೊಳಿಸಿ ನೆನಪು ಮಾಡಿಸಿದ ಕರಾವಳಿ ಕರ್ನಾಟಕದ ಹಿರಿಯ ನ್ಯಾಯವಾದಿ ಬೆನೆಡಿಕ್ಟ್ ನೊರೊನ್ಹ ಅವರಿಗೆ ವಂದನೆಗಳು.

hassanmukka, mangalore/ksa
2010-03-10
ವಾರ್ತೆ:ತಲಪಾಡಿಯಲ್ಲಿ ಪೊಲೀಸ್‌ ಲಾಠಿ ಚಾರ್ಚ್: ರಮಾನಾಥ ರೈ ಭೇಟಿ
visiting the victims is ok.but they have to get justice and help.Is it guaranteed? both should get benefitted.victims justice and politicians (political)mileage!

ಸಂತೋಷ್ , ಮಂಗಳೂರು
2010-03-10
ವಾರ್ತೆ:ಉಡುಪಿ: ಹಿಂದೂ ಯುವತಿಯನ್ನು ಮದುವೆಯಾದ ಕುಟು೦ಬಕ್ಕೆ ಚರ್ಚ್‍ನಿ೦ದ ಬಹಿಷ್ಕಾರ !
ಓ ಸರ್ವಶಕ್ತನಾದ ದೇವರೆ, ಅವರು ಮಾಡಿದ ತಪ್ಪನ್ನು ಕ್ಷಮಿಸಿ, ಅವರು ಏನು ಮಾಡುತಿದ್ದಾರೆಂದು ಅವರಿಗೆ ತಿಳಿಯದು, ಅವರಿಗೆ ಜ್ಞಾನ, ಸದ್ಬುದ್ದಿಯನ್ನು ಕೊಟ್ಟು ನಂಬಿದವರನ್ನು ಕೈಬಿಡದಂತೆ ನೋಡುವ ಶಕ್ತಿಯನ್ನು ಕೊಡಿ.

ರೋಶನ್, ಮಂಗಳೂರು
2010-03-10
ವಾರ್ತೆ:ಉಡುಪಿ: ರೈಲು ಸೇವೆ: ಮಾತು ತಪ್ಪಿದ ಸಚಿವ ಮುನಿಯಪ್ಪರಿಗೆ ನೋಟಿಸ್
ಶಹಬಾಸ್ ಬೆನೆಡಿಕ್ಟ್ ನೊರ‍ೊನ್ಹಾ ರವರೇ, ರೈಲ್ ಬಿಡುವ ರೈಲ್ವೆ ಸಚಿವರಿಗೆ ನೋಟಿಸ್ ಬಿಟ್ಟಿದ್ರಿ. ಸಚಿವರು ಇನ್ನಾದರೂ ರೈಲ್ ಬಿಡೋದು ಬಿಟ್ಟು ಪ್ರಯಾಣಿಕರ ಬೇಡಿಕೆ ಈಡೆರಿಸುವರೆ?

ಶ್ರೀನಿವಾಸ್, ಉಡುಪಿ
2010-03-10
ವಾರ್ತೆ:ಉಡುಪಿ ಕೃಷ್ಣ ಮಠದ ಊಟಕ್ಕೂ ಈಗ ಡ್ರೆಸ್‌ ಕೋಡ್‌?
ಶ್ರೀಕೃಷ್ಣ ಪರಮಾತ್ಮ ರುಕ್ಮಿಣಿ ಸತ್ಯಭಾಮೆಯೊಂದಿಗೆ ಊಟಕ್ಕೆ ಬಂದರೆ ಯಾವ ಡ್ರೆಸ್ ಕೋಡ್, ನಿಯಮದಂತೆ ಡ್ರೆಸ್ ಇಲ್ಲದಿದ್ದರೆ ಹೊಟ್ಟೆಗೆ ತಣ್ಣಿರುಬಟ್ಟೆ ಹಾಕಿಕೊಂಡು ವಾಪಸ್ಸಾ....

ಗಣೇಶ ರೈ , ಕೊಡಗು ಶಾರ್ಜಾ
2010-03-10
ವಾರ್ತೆ:ಮ೦ಗಳೂರು: `ಕೊ೦ಕಣ್ ಕೊಗುಲ್' ಎ೦ದೇ ಜನಪ್ರೀಯರಾಗಿದ್ದ ಗಾಯಕ ವಿಲ್ಫಿ ರೆಬಿ೦ಬಸ್ (67) ಇನ್ನಿಲ್ಲ
ಕೊಂಕಣಿ ತುಳು ಭಾಷೆಯನ್ನು ಜನ್ಮಭೂಮಿಯಿಂದ ವಿಶ್ವದಾದಂತ್ಯ ತನ್ನ ಸುಮಧುರ ಕಂಠಶ್ರೀಯಿಂದ ಸಂಗೀತದ ಸೇವೆಯನ್ನು ಮಾಡಿದ ಕೊಂಕಣ್ ಕೊಗಿಲೆಯ ಭೌತಿಕ ದೇಹ ಮರೆಯಾದರೂ, ಧ್ವನಿಸುರುಳಿಯ ಮೂಲಕ ತನ್ನ ಗುರುತನ್ನು ಬಿಟ್ಟು ಹೋಗಿದ್ದು ಜನಮಾನಸದಲ್ಲಿ ಮರೆಯದೆ ಉಳಿಯುವ ವಿಲ್ಫಿ ರೆಮಿಂಬಸ್ ರವರಿಗೆ ಸಮಸ್ತ ಕಲಾಭಿಮಾನಿಗಳ ಪರವಾಗಿ ಗೌರವ ಪೂರ್ವಕ ಅಂತಿಮ ನಮನಗಳು.

Satish Edneer, Edneer, Kasaragod / Bahrain
2010-03-09
ವಾರ್ತೆ:ಮ೦ಗಳೂರು: `ಕೊ೦ಕಣ್ ಕೊಗುಲ್' ಎ೦ದೇ ಜನಪ್ರೀಯರಾಗಿದ್ದ ಗಾಯಕ ವಿಲ್ಫಿ ರೆಬಿ೦ಬಸ್ (67) ಇನ್ನಿಲ್ಲ
May the soul rest in peace.

dhanajaya gurpur, manglore
2010-03-09
ವಾರ್ತೆ:ಕಾರ್ಕಳದ ವಿವಾಹಿತೆ ತನುಜಾ ಭಂಡಾರಿ ಆತ್ಮಹತ್ಯೆಗೆ ಶರುಣು?... ಇದು ನಿಯೋಜಿತ ಕೊಲೆ ಪ್ರಕರಣ: ತನುಜಾ ಕುಟುಂಬಸ್ಥರು
well, it is more or less good story. keep light on same news.

riyaz, qatar
2010-03-09
ವಾರ್ತೆ:ಉಡುಪಿ: ಆಶಾ ಕಾರ್ಯಕರ್ತರಿಗೆ ಸರಕಾರದಿಂದ ವಂಚನೆ: ಸಂಘದ ರಾಜ್ಯ ಉಪಾಧ್ಯಕ್ಷೆ ಆರೋಪ
BAD Politics is the cancer of our CULTURE

ಬದ್ರುದ್ದೀನ್ ಹೆಂತಾರ್, ದುಬೈ
2010-03-07
ವಾರ್ತೆ:ಕಾಸರಗೋಡು; ಮದುವೆ ಮು೦ಚೆ ಜನಿಸಿದ ಶಿಶು ಹತ್ಯೆ: ತಾಯಿ ಮಗಳಿಬ್ಬರ ಬಂಧನ
ಯಾವುದೋ ವಿಷಯವನ್ನು ಎಲ್ಲೋ ತಂದು ಏನೋ ಮಹಾ ಸಾಧನೆ ನಡೆಸಿದವನಂತೆ ವರ್ತಿಸುವುದು ಮಾನವನ ಸಹಜ ಗುಣ.ಅದಕ್ಕೆ ಭೇಷ್ ಅಂತ ಚಪ್ಪಾಳೆ ತಟ್ಟುವುದು ಮೂರ್ಖತನದ ಪರಮಾವಧಿ.ಬುರ್ಖಾ ವಿಶಯದಲ್ಲಿ ಚರ್ಚೆ ನಡೆದದ್ದು ನಿಜ ಆದರೆ ವೇಶ್ಯಾ ವೃತ್ತಿಯ ಬಗ್ಗೆ ಚರ್ಚೆ ನಡೆದೇ ಇಲ್ಲ.ಪ್ರತಿಕ್ರಿಯೆ ನೀಡುವವರು ಮೊದಲು ಪ್ರಕರಣವನ್ನು ಚೆನ್ನಾಗಿ ಓದಿ ಆ ಬಳಿಕ ಒಂದು ತೀರ್ಮಾನಕ್ಕೆ ಬರುವುದು ಒಳಿತು.ಬುರ್ಖಾ ಅಂದು,ಇಂದು ಇನ್ನು ಮುಂದೆಯೂ ಕೂಡಾ ಅತ್ಯಾಚಾರದಿಂದ ರಕ್ಷಿಸುವ ಕವಚ ಎನ್ನುವುದರಲ್ಲಿ ಎರಡು ಮಾತಿಲ್ಲ.ಮೇಲಿನ ಪ್ರಕರಣದಲ್ಲಿ ಅತ್ಯಾಚಾರ ನಡೆದಿಲ್ಲ.ತಾಯಿಯಾದವಳು ಮನೆಯ ಬಾಗಿಲು ತೆರೆದುಕೊಟ್ಟಿದ್ದಾಳೆ.ಮಗಳು ಮಲಗುವ ಕೋಣೆಯ ಬಾಗಿಲು ಮುಚ್ಹಿದ್ದಾಳೆ. ಯಾವನೋ ಫಟಿಂಗ ತಾಯಿಯ ಕೈಯಲ್ಲಿ ಹಣ ಮಗಳ ಮಡಿಲಿಗೆ ಮಲ್ಲಿಗೆ ಎಸೆದು ತನ್ನ ಕೆಲಸ ಸಲೀಸಾಗಿ ಮಾಡಿದ್ದಾನೆ.ಇಲ್ಲಿ ಒಂದು ವ್ಯವಹಾರ ನಡೆದದ್ದು ನಿಜ ಅದು ಎರಡು ಪಂಗಡಗಳ ಅನುಮತಿಯಿಂದ.ಇದು ಪ್ರಪಂಚದಲ್ಲಿ ಸರ್ವ ಸಾಮಾನ್ಯ. ಇಲ್ಲಿ ಬುರ್ಕಾಕ್ಕೆ ಯಾವುದೇ ಪ್ರಾಶಸ್ತ್ಯವಿಲ್ಲ.ಮುಖ್ಯವಾಗಿ ಮುಸ್ಲಿಂ ಮಹಿಳೆಯರು ಮನೆಯ ಒಳಗೆ ಬುರ್ಕಾ ಹಾಕುವ ಸಂಪ್ರದಾಯವಿಲ್ಲ.ಇನ್ನು ಬುರ್ಕಾವನ್ನೇ ತರಾಟೆಗೆ ತೆಗೆದುಕೊಳ್ಳುವುದಾದಲ್ಲಿ ಪವಿತ್ರವಾದ ಕಾವಿ ವಸ್ತ್ರವನ್ನು ಕೂಡಾ ತರಾಟೆಗೆ ತೆಗೆದುಕೊಳ್ಳಲೇ ಬೇಕು.ನಿತ್ಯಾನಂದ ಸ್ವಾಮಿ ಮತ್ತು ಅವನಂತ ಹಲವು ವಂಚಕ ಸ್ವಾಮಿಯವರ ಮೈಮೇಲೆ ಇರುವ ಕಾವಿ ಹಾಗೂ ಅತ್ಯಂತ ಉತ್ತಮವಾದ ಹಾಗೂ ಶಾಂತಿಪ್ರಿಯರಾದ ಸ್ವಾಮಿಗಳ ಮೈಮೇಲೆ ಇರುವ ಕಾವಿ ಬಟ್ಟೆಗೆ ಯಾವುದೇ ವೆತ್ಯಾಸವಿಲ್ಲ.ಅತ್ಯಾಚಾರ ಮಾಡುವಾಗಲೂ ನಿತ್ಯಾನಂದನ ಮೈಮೇಲೆ ಆ ಬಟ್ಟೆ ಇತ್ತು.ಬಟ್ಟೆ ಪವಿತ್ರವಾದದ್ದೇ,ಆದರೆ ಉಪಯೋಗಿಸುವವನಿಂದ ಅದರ ಮಹತ್ವ ಜಗತ್ತಿಗೆ ಪರಿಚಯಯವಾಗುತ್ತದೆ. ಸಕ್ಕರೆ ಪಾತ್ರೆಯ ಬಾಯಿ ತೆರೆದಿಟ್ಟದ್ದು ಮಾತ್ರವಲ್ಲ ಅದನ್ನು ಇರುವೆಗಳೀಗೆ ಬಡಿಸಿದ್ದು ಮೇಲಿನ ಪ್ರಕರಣ ಸಾಬೀತು ಪಡಿಸಿದ್ದರಿಂದ ಇಲ್ಲಿ ಪ್ರತಿಯೊಬ್ಬರೂ ಪ್ರತಿಕ್ರಯಿಸಬೇಕಾದದ್ದು ಅಪರಾಧಿಗಳೀಗೆ ನೀಡಬೇಕಾದ ಕಠಿಣವಾದ ಶಿಕ್ಷೆಯ ಬಗ್ಗೆಯಾದರೆ ಸಮಂಜಸವೆನಿಸಬಹುದು.ಇಲ್ಲಿ ನಡೆದಿರುವ ವ್ಯಭಿಚಾರ, ತಾಯಿಯ ಪ್ರತ್ಯಕ್ಷ ಅನುಮತಿ, ಅಕ್ರಮ ಗರ್ಭಧಾರಣೆ, ವಿವಾಹದ ಸುಳ್ಳು ವಾಗ್ದಾನ, ಮುಗ್ಧ ಮಗುವಿನ ಕೊಲೆ, ಪ್ರಕರಣವನ್ನು ಮುಚ್ಚಿಟ್ಟ ಆರೋಪ ಹೀಗೆ ಹಲವು ಕೇಸುಗಳನ್ನು ಅಪರಾಧಿಗಳ ಮೇಲೆ ಹೊರಿಸಿ ಜೈಲಿಗೆ ತಳ್ಳಲು ಪೋಲೀಸರಲ್ಲಿ ಫಿರ್ಯಾದು ನೀಡ ಬೇಕೇ ವಿನಹ ಒಂದು ಧರ್ಮದ ಆಚರಣೆಯ ಬಗ್ಗೆ ಗೂಬೆ ಕೂರಿಸಿದರೆ ಸುಮ್ಮನೆ ಕೈಕಟ್ಟಿ ಕುಳಿತುಕೊಳ್ಳಲು ಸಾದ್ಯವಿಲ್ಲ.ದಿನಪತ್ರಿಕೆಯಲ್ಲಿ ದಿನಾಲೂ ಬರುವ ಕಾಣೆಯಾಗಿದ್ದಾರೆ ಎಂಬ ವಿವರವನ್ನು ಕೂಡಾ ಓದಿ ಆ ಪ್ರಕರಣಕ್ಕೂ ಮೇಲಿನ ಪ್ರಕರಣಕ್ಕೂ ಇರುವ ಸಂಬಂದವನ್ನು ಮನದಟ್ಟು ಮಾಡಿ ಒಂದು ತೀರ್ಮಾನಕ್ಕೆ ಬರುವುದು ಒಳಿತು.

HASSANMUKKA, MANGALORE
2010-03-07
ವಾರ್ತೆ:ಕಾಸರಗೋಡು; ಮದುವೆ ಮು೦ಚೆ ಜನಿಸಿದ ಶಿಶು ಹತ್ಯೆ: ತಾಯಿ ಮಗಳಿಬ್ಬರ ಬಂಧನ
ಯಾವುದೆ ಪ್ರಕರಣಕ್ಕೆ ಕೊಮು ಬಣ್ಣ ಯಾಕೆ ಕೊಡುತೀರಿ. ತಪ್ಪು ಯಾರು ಮಾದಿದರೂ ತಪ್ಪೆ.ಅದರಲ್ಲಿ ಬುರ್ಖದ ತಪ್ಪಿಲ್ಲ.ಆವರು ದರ್ಮ ಬುರ್ಖದಲ್ಲಲ್ಲ ಇರುವುದು.ದರ್ಮ ಅಂದರೆ ಜೀವನ ಶೈಲಿ. ಆವರ ಜೀವನ ಶೈಲಿ ಇಸ್ಲಾಮ್ನ ದಲ್ಲ.

ವಿಜಯ್ ಸುವರ್ಣ , ಕತಾರ್
2010-03-07
ವಾರ್ತೆ:ಸ್ವಾಮಿ ನಿತ್ಯಾನಂದನ ಕಾಮಲೀಲೆಗೆ ಬಿಡದಿಯ ಧ್ಯಾನಪೀಠದ ಕೊಠಡಿ!; ನಿತ್ಯಾನಂದನ ರಾಸಲೀಲೆ ಚಿತ್ರೀಕರಣ ಮಾಡಿದ್ದು ನಾನೇ: ಲೆನಿನ್
ಇಂತಹಾ ಸ್ವಾಮೀಜಿಗಳು ಇಂದು ನಮ್ಮಲ್ಲಿ ಗಲ್ಲಿಗಲ್ಲಿಗಳಲ್ಲೂ ಕಾಣಸಿಗುತ್ತಾರೆ. ಕೆಲವರು ಸ್ವಯಂ ಘೋಷಿತ ಸ್ವಾಮೀಜಿಗಳಾದರೆ ಕೆಲವರು ಸ್ವಯಂ ಘೋಷಿತ ಗುರೂಜಿಗಳು. ಈ ಸ್ವಾಮೀಜಿಗಳಾಗಲೀ, ಗುರೂಜಿಗಳಾಗಲೀ ಸಮಾಜದಲ್ಲಿ ಬಡ ಜನರು ಯಾ ಮಧ್ಯಮ ವರ್ಗದ ಜನರು ಜೀವಿಸುವಂತೆ ಜೀವಿಸುವ ಜೀವನ ಶೈಲಿಯನ್ನು ಅನುಸರಿಸುವುದನ್ನು ನಾವ್ಯಾರೂ ಎಲ್ಲಿಯೂ ಕಂಡದ್ದಿಲ್ಲ. ಸಾಮಾನ್ಯವಾಗಿ ಇಂತಹಾ ನಾಮಧೇಯವನ್ನು ಅಲಂಕರಿಸಿದ ಪ್ರತಿಯೊಬ್ಬ ಸ್ವಾಮೀಜಿ / ಗುರೂಜಿಗಳೂ ಶ್ರೀಮಂತ ಜೀವನ ಪದ್ದತಿಯನ್ನು ರೂಢಿಸಿಕೊಂಡು ಜೀವನ ಸಾಗಿಸುವವರೇ ಆಗಿರುವುದು ನಮ್ಮ ಗಮನಕ್ಕೆ ಬರುತ್ತದೆ. ತನ್ನ ಇಡೀ ವಂಶದಲ್ಲಿ ಯಾವುದೇ ರೀತಿಯ ಆಸ್ತಿ ಪಾಸ್ತಿಗಳು ಅಥವಾ ಸುಧ್ರಡವೆನಿಸುವ ಆರ್ಥಿಕ ವ್ಯವಸ್ಥೆಯೇ ಇಲ್ಲದಿರುವ ವ್ಯಕ್ತಿಯೊಬ್ಬ ಕವಡೆ ಹಾಕಲು ಕುಳಿತ ಅಥವಾ ಸ್ವಾಮೀಜಿ ಎಂದು ಘೋಷಿಸಿಕೊಂಡ ಕೆಲವೇ ಸಮಯದಲ್ಲಿ ಕಾರು, ಬಂಗಲೆ ಮತ್ತು ಇತರ ಐಷಾರಾಮೀ ವಸ್ತುಗಳ ಒಡೆಯನಾಗುತ್ತಾನೆ. ಹೇಗೆ??? ಯಾರು ಇಂತವರನ್ನು ಪೋಷಿಸುವವರು? ಉತ್ತರ... ನಾವೇ...ಸಾಮಾನ್ಯ ಜನರು....!! ಇಂದಿನ ದಿನಗಳಲ್ಲಿ ದಿಡೀರ್ ಶ್ರೀಮಂತನಾಗಲು ಇದಕ್ಕಿಂತ ಬೇರೆ ಮಾರ್ಗ ಖಂಡಿತಾ ಇಲ್ಲ. ಚುರುಕಾದ ನಾಲಿಗೆ ಹೊಂದಿದ್ದು, ಮಾತಾಡುವ ಕಲೆ ಚೆನ್ನಾಗಿ ತಿಳಿದಿದ್ದು ಸುಲಭವಾಗಿ ಜನರನ್ನು ಮಂಕು ಮಾಡಲು ಗೊತ್ತಿದ್ದರೆ ಇಂದು ಈ ಮಾರ್ಗವೇ ಹಣ ಮಾಡಲು ಸುಲಭ ಮಾರ್ಗವೆಂದು ಇಂತಹಾ ಕೆಲವು ಮಂದಿ ಈ ಮಾರ್ಗವನ್ನು ಅನುಸರಿಸಿ ಆಗರ್ಭ ಶ್ರೀಮಂತರಾಗಿ ಸಹಜವಾಗಿಯೇ ಶ್ರೀಮಂತ ರಲ್ಲಿರುವ ಪ್ರತಿಯೊಂದು ಸುಗುಣಗಳೂ ಇವರಲ್ಲಿ ಅಡಕವಾಗುತ್ತದೆ. ಇವರಿಗೆ ರಂಭೆ ಅಪ್ಸರೆಯರ ಅವಶ್ಯಕತೆಗಳೂ ಬೇಕು, ಮದಿರಾ ಮಂದರೆಯರೂ ಬೇಕು... ಅದರೊಂದಿಗೆ ಅವರ ಮಾರ್ಗಕ್ಕೆ ಅಡ್ಡ ಬರುವರನ್ನು ಇತಿಶ್ರೀ ಮಾಡುವ ಕಲೆಯನ್ನೂ ಇವರು ಕರಗತ ಮಾಡಿಕೊಂಡಿರುತ್ತಾರೆ. ಇಂದು ನಮ್ಮ ಮದ್ಯೆದಲ್ಲಿಯೇ ಇರುವ ಸ್ವಘೋಷಿತ ಸ್ವಾಮೀಜಿಗಳ ಮತ್ತು ಗುರೂಜಿಗಳ ಗತ ಜೀವನವನ್ನು ಸ್ವಲ್ಪ ಅಗೆದರೆ ಏನೇನೋ ಕೊಳೆತವಾಸನೆಗಳೇ ಹರಡಿಬರಬಹುದಲ್ಲದೆ ಕಿಂಚಿತ್ ಸುವಾಹನೆ ಅಲ್ಲಿ ಖಂಡಿತಾ ಮೂಗಿಗೆ ಬಡಿಯಲಾದರು. ಇಂತವರ ಏಳಿಗೆಗಾಗಿ ಮಂತ್ರಿಮಾಗದರು, ಚಿತ್ರತಾರೆಯರಿಂದ ಹಿಡಿದು ಶ್ರೀಮಂತ ವರ್ಗವೇ ಸಾಲುಗಟ್ಟಿ ನಿಂತಿರುತ್ತಾರೆ. ವಿಪರ್ಯಾಸವೆಂದರೆ ವಿದ್ಯಾವಂತ ಜನರೇ ಇಂತವರ ಪೋಷಕರಾಗಿರುವುದು!!! ಎಲ್ಲಿಯ ತನಕ ಸುಲಭದಲ್ಲಿ ಮೂರ್ಖರಾಗುವ ಮಂದಿ ನಮ್ಮಲ್ಲಿರುತ್ತಾರೋ... ಮೂರ್ಖರನ್ನಾಗಿಸುವ ಮಂದಿಗಳಿಗೆ ಕೂಡಾ ನಮ್ಮಲ್ಲಿ ಕೊರತೆಯಿರುವುದಿಲ್ಲ. ಬ್ರಹ್ಮ ನಮ್ಮ ಹಣೆಯಲ್ಲಿ ಒಮ್ಮೆ ಬರೆದಾದ ನಂತರ ಯಾವ ಸ್ವಾಮಿಯಾಗಲೀ ಯಾವ ಗುರೂಜಿಯಾಗಲೀ ಆ ಬರಹವನ್ನು ತಿದ್ದಿ ಬರೆಯಲಾಗುವುದಿಲ್ಲ. ನಮ್ಮ ಹಣೆಬರಹವಿರುವುದೇ ನಮ್ಮ ಕೈಯಲ್ಲಿ...ನಾವು ಮಾಡುವ ಕರ್ಮಧರ್ಮಗಳೇ ನಮ್ಮ ಹಣೆಯ ಬರಹ!! ಸ್ವಚಿಂತನೆಗಳಿಂದ, ಸತ್ಕಾರ್ಯ ಸತ್ಕರ್ಮಗಳಿಂದ ನಮ್ಮನ್ನು ನಾವು ಸರಿಯಾದ ಮಾರ್ಗಗಳಿಗೆ ಕೊಂಡುಹೋಗ ಬಹುದಲ್ಲದೆ ಅನ್ಯಮಾರ್ಗ ಇದಕ್ಕೆ ಖಂಡಿತಾ ಇಲ್ಲ. ನಾನು ಕಂಡಂತೆ ಇಂತಹಾ ಸ್ವಾಮಿ ಗುರೂಜಿಗಳನ್ನು ಅನುಸರಿಸುವುದು ಹಿಂದೂ ಧರ್ಮದವರು ಮಾತ್ರವಲ್ಲ... ಇತರ ಎಲ್ಲಾ ಧರ್ಮದವರೂ ಇಂತಹಾ ಡೋಂಗಿ ಗಳ ಪೋಷಣೆಗೆ ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ಕಾರಣರಾಗಿರುವುದು ಎಲ್ಲೆಡೆಯಲ್ಲೂ ಕಂಡುಬರುತ್ತದೆ. ಇಂತಹಾ ಗೋಮುಖವ್ಯಾಘ್ರರನ್ನು ಪೋಷಿಸಿ ಸಮಾಜದ ಸರ್ವನಾಶ ವಾಗುವ ಮೊದಲು ಎಚ್ಚೆತ್ತು ಕೊಳ್ಳುವುದು ಉತ್ತಮ.

Dimello, Nagoor
2010-03-07
ವಾರ್ತೆ:ಕಾಸರಗೋಡು; ಮದುವೆ ಮು೦ಚೆ ಜನಿಸಿದ ಶಿಶು ಹತ್ಯೆ: ತಾಯಿ ಮಗಳಿಬ್ಬರ ಬಂಧನ
ಪಾಂಚಜನ್ಯ ಹಾಗು ಅಮಾನವ ಇನ್ನೊಬ್ಬರ ವಿರುದ್ದ ಬೆರಳು ತೋರಿಸುವ ಮೊದಲು ಸ್ವಲ್ಪವಾದರು ಮಾನವೀಯತೆಯಿಂದ ಯೋಚಿಸಿ. ಪ್ರಪಂಚದಲ್ಲಿರುವ ಎಲ್ಲ ಧರ್ಮದಲ್ಲಿಯು ಒಳ್ಳೆಯವರು ಹಾಗು ಕೆಟ್ಟವರು ಇದ್ದೆ ಇರುತ್ತಾರೆ. ಯಾರಾದರು ಕೆಟ್ಟದನು ಮಾಡಿದರೆ ಅವರು ಅನುಸರಿಸುವ ಧರ್ಮ ಅದನ್ನು ಭೋಧಿಸುತ್ತದೆ ಎನ್ನುದು ಅದರ ಅರ್ಥವಲ್ಲ. ನಿಮಗೆ ಸೇರಿದ ಕಾಮ ಸ್ವಾಮಿ ನಿತ್ಯಾನಂದ ಕಾಮ ತೀರಿಸಿಕೊಳ್ಳಲು ಚಿತ್ರ ನಟಿಯರನ್ನು, ತನ್ನ ಭಕ್ತರನ್ನು ಹಾಗು ಮುಗ್ದ ಯುವತಿಯರನ್ನು ಬಳಸಿಕೊಳ್ಳುತ್ತಿರುವುದು ಈಗಾಗಲೆ ಬಹಿರಂಗಗೊಂಡಿದೆ. ಇದರ ಅರ್ಥ ಹಿಂದು ಧರ್ಮ ಸ್ವಾಮಿಜಿಯವರನ್ನು ಅನ್ಯರ ಜೊತೆ ಕಾಮವನ್ನು ನಡೆಸುವುದನ್ನು ಭೋಧಿಸುತ್ತದೆ ಎಂದು ಹೇಳಿದರೆ ಅದು ಖಂಡಿತವಾಗಿಯು ತಪ್ಪಾಗಬಹುದು. ಮೊದಲು ಮುಗ್ದ ಜನತೆಯನ್ನು ಮೋಸ ಮಾಡುವ ಇಂತಹ ಕಾಮ ಸ್ವಾಮಿಗಳು ಹಾಗು ರಾಮ ಸೇನೆಯ ದೊಡ್ದ ಮಂಗ ಪ್ರಸಾದ ಅತ್ತಾವರ ಇವರ ಬಗ್ಗೆ ತಮ್ಮ ಅಭಿಪ್ರಾಯವನ್ನು ಸೂಚಿಸಿ. ಇನ್ನಾದರು ಎಚ್ಚೆತ್ತುಕೊಂಡು ಇತರ ಧರ್ಮದವರನ್ನು ಹಿಯಾಳಿಸಿ ಬರೆಯುದನ್ನು ಬಿಟ್ಟುಬಿಡಿ ಶಾಂತಿಯುತ ಹಾಗು ಜಾತ್ಯಾತೀತ ನಾಡನ್ನು ಕಟ್ಟಲು ಸಹಕರಿಸಿ.

panchajanya, kuwait
2010-03-07
ವಾರ್ತೆ:ಕಾಸರಗೋಡು; ಮದುವೆ ಮು೦ಚೆ ಜನಿಸಿದ ಶಿಶು ಹತ್ಯೆ: ತಾಯಿ ಮಗಳಿಬ್ಬರ ಬಂಧನ
shahabbas manava.....burkha haaki enu prayojana....?oorige bandavalu neerige baradiruvale.....?

ಮಾನವ , ವಿಶಾಲ ಕರ್ನಾಟಕ
2010-03-06
ವಾರ್ತೆ:ಕಾಸರಗೋಡು; ಮದುವೆ ಮು೦ಚೆ ಜನಿಸಿದ ಶಿಶು ಹತ್ಯೆ: ತಾಯಿ ಮಗಳಿಬ್ಬರ ಬಂಧನ
ಬುರ್ಖಾ ಧರಿಸುವ ಬಗ್ಗೆ ಇದೇ ಮಾಧ್ಯಮದಲ್ಲಿ ಸಕ್ಕರೆಯಿದ್ದಲ್ಲಿ ಇರುವೆ ಬರುವುದು ಸಹಜ ಸಕ್ಕರೆಯನ್ನು ಸರಿಯಾಗಿ ಮುಚ್ಚಿಟ್ಟರೆ ಇರುವೆ ಹತ್ತಿರ ಕೂಡಾ ಸುಳಿಯುವುದಿಲ್ಲ ಎಂದು ಬರೆದುದನ್ನು ಓದಿದ ನೆನಪಾಗುತ್ತಿದೆ. ಒಳ್ಳೆಯ ಉದಾಹರಣೆಯನ್ನೇನೋ ಕೊಟ್ಟಿದ್ದರು ಅಂದುಕೊಂಡಿದ್ದೆ. ಆದರೆ, ಇಂದಿನ ಈ ಪ್ರಕರಣ ಓದುವಾಗ ಸಕ್ಕರೆಯನ್ನು ಎಷ್ಟು ಗಟ್ಟಿಯಾಗಿ ಮುಚ್ಚಿಟ್ಟರೂ ಇರುವೆ ಹೇಗಾದರೂ ಧಾಳಿ ಇಟ್ಟೇ ಇಡುತ್ತದೆ ಎಂಬುದೂ ತಿಳಿಯುತ್ತದೆ. ಈ ಪ್ರಕರಣದಲ್ಲಿ ಇದು ಇರುವೆಯ ತಪ್ಪೋ ಅಥವಾ ಸಕ್ಕರೆಯ ತಪ್ಪೋ ತಿಳಿಯಲು ಸಾಧ್ಯವಾಗುತ್ತಲಿಲ್ಲ. ಸಕ್ಕರೆಯನ್ನು ಯಾವ ರೀತಿ ಮುಚ್ಚಿಟ್ಟರೂ ಮುಚ್ಚಿಟ್ಟಿದರ ಒಳಗೆ ಯಾವ ರೀತಿಯ ಸಕ್ಕರೆ ಎಷ್ಟು ಸಿಹಿಯ ಸಕ್ಕರೆ ಇರಬಹುದು ಎನ್ನುವುದನ್ನು ಕೆಲವಾದರೂ ಇರುವೆಗಳು ಖಂಡಿತವಾಗಿಯೂ ಊಹಿಸಿಯೇ ಊಹಿಸುತ್ತವೆ. ಹೆಣ್ಣು ಗಂಡಿನ ನಡುವೆ ನಡೆಯುವ ಕಾಮದಾಟದಲ್ಲಿ ಬರೇ ಗಂಡಿನ ತಪ್ಪು ಮಾತ್ರವೆನ್ನುವುದು ಪ್ರತಿಯೊಂದು ಸಂದರ್ಭದಲ್ಲೂ ಸರಿಯೆನಿಸುವುದಿಲ್ಲ. ಕೆಲವಾರು ಸಂದರ್ಭದಲ್ಲಿ ಹೆಣ್ಣು ಗಂಡು ಇಬ್ಬರ ಒಪ್ಪಂದ ಇದ್ದೇ \"ಕಾರ್ಯ\" ಜರಗಿರುತ್ತದೆ ಎಂಬುದು ಸ್ಪಷ್ಟವಾಗಿ ತಿಳಿದು ಬರುತ್ತದೆ. ಎರಡು ಕೈಗಳು ಸೇರಿದರೆ ಮಾತ್ರ ಚಪ್ಪಾಳೆ ಯಾಗುತ್ತದೆ ಎಂಬುದೂ ಸತ್ಯ ತಾನೇ? ಯಾವುದೇ ಜಾತಿ, ಧರ್ಮವಾಗಿರಲಿ ಎಲ್ಲರ ರಕ್ತವೂ ಬರೇ ಕೆಂಪು ಕೆಂಪೇ ಆಗಿರುವಂತೆ, ಈ \" ಕಾಮ\" ಎನ್ನುವುದೂ ಹಾಗೇನೆ ಇದಕ್ಕೂ ಜಾತಿ, ಧರ್ಮ, ಸಮಯ ಸಂದರ್ಭ, ರೂಪ, ವಿರೂಪ, ಏನೂ ಇರುವುದಿಲ್ಲ. ಎಷ್ಟೇ ಮುಚ್ಚಿಟ್ಟರೂ \"ಒಳಗೇನಿದೆ\" ಎಂಬುದು ಬುದ್ದಿ ಇರುವ ಮಾನವನಿಗೆ ತಿಳಿದೇ ಇದೆ.

Rons Bantwal, Mumbai
2010-03-06
ವಾರ್ತೆ:ಮುಂಬಯಿಗರು ಹಣ್ಣು-ನೆರಳು ಕೊಡುವ ವಿಶಾಲವಾದ ವೃಕ್ಷಗಳಂತೆ: ಕೊಂಡೆವೂರು ಶ್ರೀ
Dear Sir There is no Photos attached in this News Thanks Have a Good Day regards R.B.I, Mumbai { THERE IS SERVER PROBLEM...PLS REFRESH PAGE AGAIN & AGAIN - REGRET INCONVENIENCE TO EACH & EVERY ONE)

HASSANMUKKA, MANGALORE/KSA
2010-03-05
ವಾರ್ತೆ:ನಿತ್ಯಾನಂದ ಸ್ವಾಮಿ ಮಹಿಮೆಯ ತಮಿಳು ನಟಿ ರಂಜಿತಾಳಂತೆ..!; | ಆ ವೀಡಿಯೋ ನನ್ನದಲ್ಲ: ನಿತ್ಯಾನಂದ ಸ್ವಾಮೀಜಿ
ನಮ್ಮಲ್ಲಿ ಜಾತಿ ವ್ಯವಸ್ಥೆ ಇದೆ .ಈ ಸ್ವಾಮಿಗಳಲ್ಲಿ ಕೂಡ ಜಾತಿ ವ್ಯವಸ್ಥೆ ಇದೆ .ಈ ಸ್ವಾಮಿ ತಮಿಳ್ ನಾಡಿನ ಕೆಳಗಿನ ಜಾತಿಗೆ ಸೇರಿರಬೇಕು .ಆದುದರಿಂದ heಗಾದರೂ ಮಾಡಿ iವನನ್ನು ಮುಗಿಸಬೇಕು ಅಂತ ಮೇಲ್ಜಾತಿ ಸ್ವಾಮಿಗಳು,ಮೇಲ್ಜಾತಿ ರಾಜಕಾರಣಿಗಳು,ಮೇಲ್ಜಾತಿ ಅಧಿಕಾರಿಗಳು ,ಭೂಗಳ್ಳರು ಮತ್ತು ಮಾಡಿದ ಸಂಚು ಆಗಿರಬಹುದು .ಏಕೆಂದರೆ 90 -95 ಶತಮಾನ ಎಲ್ಲ ಸ್ವಾಮಿಗಳು ಈ ಕೆಲಸದಲ್ಲಿ ತೊಡ ದಗಿದವರೇ ಆಗಿರುತಾರೆ.ಎದು ಅವರ ಬದುಕುವ ಕಲೆ .ಇಂಗ್ಲಿಷ್ನಲ್ಲಿ "ಆರ್ಟ್ ಆಫ್ ಲಿವಿಂಗ್ " ಅಂತಾರೆ.ರಾಜಕಾರಣಿಗಳ ಕೃಪಾ ಕಟಶ ಇದ್ದಾರೆ ಎಲ್ಲ ಸರಿ ಹೋಗುತದೆ.ಆದರೆ ಸ್ವಾಮಿ ಮಾತ್ರ ಜನಿವಾರ ಹಾಕಬೇಕು. ಜನಿವಾರ ಹಾಕಿದ ಸ್ವಾಮಿಗಳು ಇದುವರೆಗೆ ಸಿಕ್ಕಿ ಬಿದ್ದದಿಲ್ಲ .ಏಕೆ? ಈಗಲಾದರೂ ಜನ ಮೂಡನಂಬಿಕೆ ಯನ್ನು ಬಿಟ್ಟು ,ಅವರು ನಂಬಿಕೊಂಡು ಬಂದಿರುವ ಧರ್ಮದ ಸರಿಯಾದ ಧರ್ಮ ಗ್ರಂಥ ವನ್ನು ಓದಿ ಅದರಲ್ಲಿ ಏನು ಹೇಳಿದೆ ಅಂತ ತಿಳಿದು ತಮ್ಮ ಬದುಕನ್ನು ಸಾರ್ಥಕ ಗೊಳಿಸಲಿ ಎಂದು ಹಾರೈಕೆ .

ಬದ್ರುದ್ದೀನ್ ಹೆಂತಾರ್, ದುಬೈ
2010-03-04
ವಾರ್ತೆ:ಪರಮಹಂಸ ನಿತ್ಯಾನಂದ ಸ್ವಾಮೀಜಿ ಕಾಮಕಾಂಡ: ಬಿಡದಿ ಪ್ರಕ್ಷುಬ್ಧ
ಮುಹಮ್ಮದ್ ಉಡುಪಿ ನೀವು www.baraha.com ನ್ನು ಡೌನ್ ಲೋಡ್ ಮಾಡಿ ಆ ಬಳಿಕ ಬರಹ ಪ್ಯಾಡ್ ನಲ್ಲಿ ಸುಲಲಿತವಾಗಿ ಕನ್ನಡವನ್ನು ಬರೆದು ಬೇಕಾದ ಕಡೇಗೆ ಪೇಸ್ಟ್ ಮಾಡಬಹುದು. ಸ್ವಾಮಿಯ ರಾಸಲೀಲೆಯನ್ನು ಅವಲೋಕನ ಮಾಡುವದಕ್ಕಿಂತ ಮೊದಲು ನಮ್ಮ ಹೆಂಗಸರನ್ನು ಮೊದಲು ಹದ್ದು ಬಸ್ತಿನಲ್ಲಿಡಲು ಕಲಿಯಬೇಕು. ಸಕ್ಕರೆಯ ಬಳಿ ಇರುವೆ ಬರಲೇ ಬೇಕು.ಇದು ಪ್ರಕೃತಿ ನಿಯಮ. ಸಕ್ಕರೆಯನ್ನು ಸರಿಯಾಗಿ ಮುಚ್ಹಿಟ್ಟರೆ ಅದರ ಬಳಿಗೆ ಇರುವೆ ಗಮನ ಸಹ ಹರಿಸಲಾರದು.ಹಿಂದೆಯೂ ಹಲವಾರು ಸಂಭವಗಳಿಂದ ನಾವು ಪಾಠ ಕಲಿಯಲಿಲ್ಲ. ಇನ್ನಾದರೂ ಕಳ್ಳ ಸ್ವಾಮಿ, ಕಳ್ಳ ಶೈಕ್,ಮ್ಯಾಜಿಕ್ ಪಾದ್ರಿಗಳ ಬಗ್ಗೆ ಎಚ್ಚರ ವಹಿಸಿದರೆ ನಮ್ಮ ಮಹಿಳೆಯರನ್ನು ಇಂತಹ ಅನಾಹುತಗಳಿಂದ ರಕ್ಷಿಸಲು ಸಾದ್ಯ.

hassanmukka, mangalore/ksa
2010-03-04
ವಾರ್ತೆ:ಪರಮಹಂಸ ನಿತ್ಯಾನಂದ ಸ್ವಾಮೀಜಿ ಕಾಮಕಾಂಡ: ಬಿಡದಿ ಪ್ರಕ್ಷುಬ್ಧ
One can say for sure, mosailing in the same boat as this swaaaaami. If this is not the case, why these Holi!people have privacy or create contonnemen like re than 95% of so-called godmen are atmosphere in their ashramas.they should be accessible to everyone from common man to the rich and local to international visitors.Why young women have easy access to his ashram? It is high time that police peolpe sgould make surprise check to see the allmost all mutts and see their art of living!

sadhiq kapu, dubai
2010-03-04
ವಾರ್ತೆ:ಬೆ೦ಗಳೂರು: ಗೋಹತ್ಯೆ: ಸಾರ್ವಜನಿಕರ ಪ್ರತಿಭಟನೆಯ ಹಿನ್ನಲೆಯಲ್ಲಿ ಮಸೂದೆ ವಾಪಸ್
Yeddy Ki Jai Ho!!!!!!!

Asif Kudur, Sharjah, U.A.E., Sharjah
2010-03-04
ವಾರ್ತೆ:'ಪರ್ದಾ ಹೈ ಪರ್ದಾ' ಲೇಖನದ ವಿರುದ್ಧ ಪ್ರತಿಭಟನೆ: ಶಿವಮೊಗ್ಗ, ಹಾಸನ ಉದ್ರಿಕ್ತ; ಗೋಲಿಬಾರ್‌ಗೆ 2 ಬಲಿ
ಶ್ರೀಮತಿ ರೇಶ್ಮಾರವರ ಪ್ರತಿಕ್ರಿಯೆಯನ್ನು ಓದುವಾಗ ತುಂಬಾ ಬೇಸರವಾಯಿತು.ಅವರು ಪರೋಕ್ಷವಾಗಿ ಇಸ್ಲಾಂ ಮಹಿಳೆಯರ ಸ್ವಾತಂತ್ರ್ಯವನ್ನು ಕಿತ್ತುಕೊಂಡಿದೆ ಎನ್ನುವ ವಿಷಯವನ್ನು ಉಧಾಹರಣೆಯ ಮುಖಾಂತರ ಉಲ್ಲೇಖಿಸಿದ್ದಾರೆ... ಇಂದು ಮಹಿಳೆಯರ ಮೇಲೆ ನಡೆಯುತ್ತಿರುವ ಲೈಂಗಿಕ ಶೋಷಣೆಯಿಂದ ಮುಕ್ತಿಗೊಳಿಸಲು ದೇವರು ಈ ಪರ್ದಾ ವ್ಯವಸ್ಥೆಯನ್ನು ಬುದ್ದಿವುಳ್ಳ ಮಹಿಳೆಯರಿಗೆ ನೀಡಿದ ವರದಾನವಾಗಿದೆ.ಪರ್ದಾ ವ್ಯವಸ್ಥೆಯನ್ನು ತಸ್ಲಿಮ ನಸ್ರಿನ್ ವಿರೋಧಿಸಿರೂದು ಸ್ತ್ರೀ ಶೋಷಣೆಯಿಂದ ಮುಕ್ತಿಗೊಳಿಸಲಿಕ್ಕಾಗಿ ಅಲ್ಲ ಬದಲಾಗಿ ತನ್ನ ಬಾಬ್ ಕಟ್ ಕೂದಲನ್ನು ಮತ್ತು ತನ್ನ ದೇಹವನ್ನು ಪರ್ದಾಧರಿಸಿ ಇತರರಿಗೆ ತೋರಿಸಲು ಸಾಧ್ಯವಿಲ್ಲ ಎನ್ನುವ ಒಂದೇ ಒಂದು ಕಾರಣದಿಂದಾಗಿದೆ. ಮಹಿಳೆಯರ ಮೇಲಿನ ಅತ್ಯಾಚಾರ ದಿನದಿಂದ ದಿನಕ್ಕೆ ಹೆಚ್ಚಲು ಕಾರಣ ಅವರು ಧರಿಸುವ ವಸ್ತ್ರದ ಕಾರಣದಿಂದ, ಅದಕ್ಕೆ ಅವರೇ ಹೊಣೆಗಾರರಾಗಿದ್ದಾರೆ ಎನ್ನೂದನ್ನು ಅಮೇರಿಕದ ಸಮೀಕ್ಷೆಯೊಂದು ಇತ್ತೀಚೆಗೆ ತಿಳಿಸಿದೆ..ಮಹಿಳೆಗೆ ಇಸ್ಲಾಂ ರಕ್ಷಣೆ ನೀಡಿದೆ ಎಂಬುವುದನ್ನು ನಮಗೆ ಇದರಿಂದ ತಿಳಿಯಲು ಸಾಧ್ಯವಾಗಿದೆ..ರ‍ೇಶ್ಮಾ ರವರು ಹೇಳಿದಂತೆ ಒಬ್ಬ ಪುರುಷನಿಗೆ, ಮಹಿಳೆ ತಾಯಿಯಾಗಿ, ಪತ್ನಿಯಾಗಿ, ಮಗಳಾಗಿ, ಸೋದರಿಯಾಗಿ ಯಾವ ರೀತಿ ಸಮಾಜದಲ್ಲಿ ಸುಖ ದುಖಗಳನ್ನು ಹಂಚಿಕೊಳ್ಳುತ್ತಾಳೋ ಅದೇ ರೀತಿ ಇನ್ನೊಂದೆಡೆ ತನ್ನ ಅಶ್ಲೀಲತೆಯನ್ನು, ನಗ್ನತೆಯಿಂದ ಯುವಕರನ್ನು ಹಾಳುಗೊಳಿಸುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾಳೆ... ಅಷ್ಟೇ ಯಾಕೆ ನಿನ್ನೆ ಆಸ್ಟ್ರೇಲಿಯಾದಲ್ಲಿ ನಡೆದ ಛಾಯಾಚಿತ್ರ ಕಾರ್ಯಕ್ರಮದಲ್ಲಿ ಸಾವಿರಾರು ಮಹಿಳೆಯರು ನಗ್ನರಾಗಿ ನಿಂತು ತಮ್ಮ ನಗ್ನತೆಯನ್ನು ಪ್ರದರ್ಶಿಸುವ ಮುಖಾಂತರ ಮಹಿಳಾ ಸಮಾಜ ತಲೆತಗ್ಗಿಸುವ ಕೆಲಸ ಮಾಡಿದ್ದಾರೆ.ಒಂದೆಡೆ ನಗ್ನತೆ,ಅಶ್ಲೀಲತೆ,ಕೆಡುಕು,ಮಹಿಳೆಯ ಮೇಲಿನ ಅತ್ಯಾಚಾರ ಹೆಚ್ಚುತ್ತಿದ್ದರೆ, ಇನ್ನೊಂದೆಡೆ ಮಹಿಳಾ ಸಮಾಜಕ್ಕೆ ವರದಾನದಂತಿರುವ ಪರ್ದಾವ್ಯವಸ್ಥೆಯನ್ನು ವಿರೋಧಿಸೂದಾದರೆ ರೇಶ್ಮಾರಂತಹ ಬುದ್ದಿವಂತ ಮಹಿಳೆಯರು ಚಿಂತಸಬೇಕಾಗಿದೆ....ಯಾವುದು ಸರಿ ಯಾವುದು ತಪ್ಪು...?

ಪ.ರಾಮಚಂದ್ರ , ರಾಸ್ ಲಫ್ಫಾನ್,ಕತಾರ್
2010-03-03
ವಾರ್ತೆ:ಉಡುಪಿ: ಕ್ರಷ್ಣ ಮಠಕ್ಕೆ ಭೇಟಿ ನೀಡೀದ ಬೆ೦ಗಳೂರಿನ 55 ಅ೦ಧವಿದ್ಯಾರ್ಥಿಗಳು: ಎಲ್ಲಿರುವೆ ಮುದ್ದುಕೃಷ್ಣ ಬಾಬಾಬಾ... ಅಂಧವಿದ್ಯಾರ್ಥಿಗಳ ಅಂತರಂಗದ ಆಹ್ವಾನ...
ಶ್ರೀ.ಜಿ.ಜನಾರ್ದನ್ ಮತ್ತು ಶ್ರೀ. ರವಿಶಂಕರ್ ಬೆಟ್ಟಂಪಾಡಿ ಅವರಂತಹ ಸಹೃದಯ ಮಾನವೀಯತೆಯ ವ್ಯಕ್ತಿತ್ವಗಳ ಪೀಳಿಗೆ ನಮ್ಮ ನಾಡಿನಲ್ಲಿ ಇನ್ನೂ ಮುಂದೆ ಪ್ರವರ್ಧಿಸಲಿ.

ವಿಜಯ್ ಸುವರ್ಣ , ಕತಾರ್
2010-03-03
ವಾರ್ತೆ:ಮ೦ಗಳೂರು ವಿಮಾನ ನಿಲ್ದಾಣಕ್ಕೆ `ತುಳುನಾಡು ವಿಮಾನ ನಿಲ್ದಾಣ' ಎ೦ದು ಹೆಸರಿಡಿ: ಕೆ.ಡಬ್ಲ್ಯು.ಎ.ಆರ್.
ಮಂಗಳೂರಿನ ವಿಮಾನ ನಿಲ್ದಾಣಕ್ಕೆ "ತುಳುನಾಡು ವಿಮಾನ ನಿಲ್ದಾಣ" ಎಂಬ ಹೆಸರೇ ಅತ್ಯಂತ ಸೂಕ್ತವಾದ ಅನ್ವರ್ಥನಾಮ. ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರು ಕೂಡಾ ಪ್ರಪ್ರಥಮವಾಗಿ ಇದೆ ಹೆಸರನ್ನೂ ಸೂಚಿಸಿದ್ದಾರೆ. ತುಳುನಾಡಿನ ನೈಜತೆಯನ್ನು ಸಹಜವಾಗಿ ಪ್ರತಿಬಿಂಬಿಸುವ ಹೆಸರು ಇದಾಗಿದ್ದು ಸರ್ವ ತುಳುವಿಗರೂ ಒಕ್ಕೊರಲಿನಿಂದ ಈ ಬಗ್ಗೆ ಒತ್ತಾಯ ಸಲ್ಲಿಸಿ ಇದೇ ಹೆಸರು "ನಮ್ಮ ಊರಿನ " ವಿಮಾನ ನಿಲ್ದಾಣದ ಮೇಲೆ ರಾರಾಜಿಸುವಂತಾಗುವಂತೆ ಮಾಡುವುದು ಮಾತ್ರವಲ್ಲದೆ ವಿಶ್ವದಾದ್ಯಂತ ಪ್ರತಿಯೊಂದು ವಿಮಾನ ನಿಲ್ದಾಣಗಳಲ್ಲಿನ ವಿಮಾನಗಳ ಹಾರಾಟದ ಸಮಯ ಸೂಚನಾ ಫಲಕಗಳ ಮೇಲೆ "ತುಳುನಾಡು ವಿಮಾನ ನಿಲ್ದಾಣ, ಮಂಗಳೂರು" ಎಂಬಂತೆ ತೇಲಿ ಬರುತ್ತಾ " ತುಳುನಾಡು" ಎಂಬ ಹೆಸರು ಪ್ರಪಂಚದಾದ್ಯಂತ ಪ್ರಜ್ವಲಿಸುವಂತಾಗಬೇಕು. ತುಳುವಿಗರು ಬೇರಾವುದಕ್ಕೂ "ಆಗಲೇಬೇಕು" ಎಂದು ಹಠಹಿಡಿದವರಲ್ಲ. ಆದರೆ ಇದು ತುಳುನಾಡಿನ ಹಾಗೂ ತುಳುವಿಗರ ಸ್ವಾಭಿಮಾನದ ಪ್ರಶ್ನೆ. ಅದ್ದುದರಿಂದ ಈ ಬಗ್ಗೆ ಪ್ರತಿಯೊಬ್ಬ ತುಳುವಿಗನೂ ತನ್ನತನವನ್ನು ತೋರ್ಪಡಿಸುವ ಅಗತ್ಯವಿದೆ. " ತುಳುನಾಡು" ಎಂಬ ಈ ಪವಿತ್ರ ನೆಲ ತುಳುನಾಡಿನಲ್ಲಿ ಹುಟ್ಟಿರುವ ಪ್ರತಿಯೊಬ್ಬನಿಗೂ ಸೇರಿದುದು. ಆದ್ದರಿಂದ ಈ ವಿಷಯದಲ್ಲಿ ಜಾತಿ, ಮತ ಧರ್ಮಗಳನ್ನು ಪಕ್ಕದಲ್ಲಿರಿಸಿ ಪ್ರತಿಯೊಬ್ಬರೂ ಒಗ್ಗಟ್ಟಿನಿಂದ, ಒಮ್ಮತದಿಂದ ಇದೇ ಹೆಸರನ್ನು ಅನುಮೋದಿಸಿ ದಲ್ಲಿ ಪ್ರಯತ್ನಕ್ಕೆ ಫಲ ಖಂಡಿತಾ ಲಭಿಸಿ ತುಳುನಾಡಿನ ಪತಾಕೆ ಆಕಾಶದೆತ್ತರದಲ್ಲಿ ಹಾರಾಡು ವಂತಾಗುವುದಂತೂ ಖಂಡಿತಾ...

Abdu salam, mangalore
2010-03-03
ವಾರ್ತೆ:'ಪರ್ದಾ ಹೈ ಪರ್ದಾ' ಲೇಖನದ ವಿರುದ್ಧ ಪ್ರತಿಭಟನೆ: ಶಿವಮೊಗ್ಗ, ಹಾಸನ ಉದ್ರಿಕ್ತ; ಗೋಲಿಬಾರ್‌ಗೆ 2 ಬಲಿ
ಶ್ರೀಮತಿ ರೇಶ್ಮರವರು ತಮ್ಮ ಪ್ರತಿಕ್ರಿಯೆಯಲ್ಲಿ ಸ್ತ್ರೀ ಸಮಾನತೆಯ ಬಗ್ಗೆ ಮಾತನಾಡಿದ್ದಾರೆ,ಸ್ತ್ರೀಯು ಪುರುಶ ಸಮಾನಳೆ೦ದು ತಮಗೆ ಈಗ ತಾನೇ ಆರಿವು ಬ೦ದ೦ತಿದೆ.ಹಾಗೂ ಸ್ತ್ರೀ ಸಮಾನತೆಯ ಬಗ್ಗೆ ತಸ್ಲೀಮ ಎ೦ಬ ತಲೆಹಿಡುಕಿ ಬರಹಗಾರ್ತಿ ಬರೆದಿರುವ ಲೇಖನದ ಬಗ್ಗೆ ತಮಗೆ ಗೌರವ ತೋರುತ್ತಾ ಇದೆ.ಮಾತ್ರವಲ್ಲ ಕೇವಲ ಭಾರತದಲ್ಲೇ ಸಹಸ್ರ ಸಾವಿರ ಬುದ್ದಿಜೀವಿಗಳಾದ ಸ್ತ್ರೀಯರು ವಿವಿದ ರ೦ಗಗಳಲ್ಲಿ ಮೆರೆಯುವಾಗ ಕೇವಲ ತಸ್ಲೀಮರ ಬುದ್ಧಿಗೆ ತಾವು ತಲೆ ಬಾಗಿದ ತಮ್ಮ ಜ್ನ್ಹಾನಕ್ಕೆ ಭೇಶ್ ಎನ್ನಲೇಬೇಕು.ಆದರೆ ಪ್ರವಾದಿ ಮುಹಮ್ಮದ್(ಸ ಅ)ರವರು ೧೪೦೦ ವರ್ಶಗಳ ಹಿ೦ದೆ ಸ್ತ್ರೀಯು ಪುರುಶ ಸಮಾನಳೆ೦ದು ಸಾರಿದ್ದಾರೆ ಮಾತ್ರವಲ್ಲ ಅ೦ತಹ ಕಟ್ಟುಪಡನ್ನು ಇಲ್ಲವಾಗಿಸಿದ್ದಾರೆ. ಸ್ತ್ರೀಯು ಪರ್ದ ಧರಿಸಬೇಕೆ೦ಬುವುದು ಕೇವಲ ಇಸ್ಲಾಮಿನಲ್ಲಿ ಮಾತ್ರ ಕಲ್ಪಿಸಿರುವುದಲ್ಲ ಹಿ೦ದುಗಳ ಪವಿತ್ರ ಗ್ರ೦ತವಾಗಿರುವ ರುಗ್ವೇದ,ಭವಿಶ್ಯಪುರಾಣ,ರಾಮಯಣ ಗಳಲ್ಲಿ ಕೂಡಾ ಪರ್ದ ಹಾಕಬೇಕೆ೦ದು ಆಜ್ನಾಪಿಸಿದೆ ಅದನ್ನು ಸ್ವಲ್ಪ ತಾಲ್ಮೆ ವಹಿಸಿ ಓದಿದರೆ ಗಡಿಬಿಡಿಯ ಪ್ರತಿಕ್ರಿಯೆಗೆ ಕಡಿವಾನ ಹಾಕಬಹುದು. ಗಲ್ಫ್ ರಾಷ್ಟ್ರದಲ್ಲಿರುವ ಆಫೀಸಿನಲ್ಲಿ ಕೆಲಸ ಮಾಡುವ ಮಹಿಳೆಯರನ್ನು ಮಾತ್ರ ತಾವು ಕ೦ಡಿದ್ದಿರಿ ಆದರೆ ಹೊರಗೆ ಶೊಪಿ೦ಗ್ ಮಾಡುವಾಗ ಏನೆಲ್ಲಾ ಅವಾ೦ತರ ನಡೆಯುತ್ತದೆ೦ದು ಯಾರಿಗೂ ವಿವರಿಸುವ ಅಗತ್ಯವಿಲ್ಲ

ಆನಂದ ಪೂಜಾರಿ , ಬೆಳ್ತಂಗಡಿ
2010-03-03
ವಾರ್ತೆ:ಮಂಗಳೂರು: ತಸ್ಲಿಮರ ವಿವಾದಾಸ್ಪದ ಲೇಖನ ವಿರುದ್ಧ ನಡೆದ ಗಲಭೆ ನಿಯಂತ್ರಿಸುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲ- ಪೂಜಾರಿ. - ತಸ್ಲಿಮರನ್ನು ಗಡಿಪಾರು ಮಾಡುವಂತೆ ಒತ್ತಾಯ.
ಪೂಜಾರಿಯವರು ಕಾಂಗ್ರೆಸ್ ಪಕ್ಷದಲ್ಲಿ ಒಬ್ಬ ಅತಿ ನಿಷ್ಟಾವಂತ ರಾಜಕಾರಣಿ ಎಂಬುದರಲ್ಲಿ ಮಾತೆರಡಿಲ್ಲ. ಇತರ ಅದೆಷ್ಟೋ ರಾಜಕಾರಣಿಗಳು ಮಂಗಗಳಂತೆ ಆ ಪಕ್ಷ ಈ ಪಕ್ಷ ಎಂದು ಹಾರಾಡುತ್ತಿದ್ದರೂ ಜನಾರ್ಧನ ಪೂಜಾರಿಯವರು ಅದೇನೇ ಆಗಲಿ ಅದೇ ಪಕ್ಷದಲ್ಲಿ ಅಂಟಿಕೊಂಡು ನಿಂತಿದ್ದಾರೆ. ಅವರ ಸ್ವಾಮೀ ಭಕ್ತಿತನಕ್ಕೆ, ನಿಷ್ಟಾವಂತ ತನಕ್ಕೆ ಆ ದ್ರಷ್ಟಾಂತ ಒಂದೇ ಸಾಕೆನಿಸುತ್ತದೆ. ಆದರೆ ಬೇಸರವೆನಿಸುವುದೆಂದರೆ ಆ ಪಕ್ಷ ಅವರ ಸ್ವಾಮಿ ಭಕ್ತಿತ್ವವನ್ನು ಮನಗಾಣಲಿಲ್ಲ. ಅದರ ಪ್ರತಿಫಲವನ್ನು ಅವರಿಗೆ ಯಾವ ರೂಪದಲ್ಲೂ ನೀಡಲು ಆ ಪಕ್ಷ ಮನಸ್ಸು ಮಾಡಲಿಲ್ಲ. ಚುನಾವಣೆಯಲ್ಲಿ ಸೀಟು ಕೊಡಲಿಲ್ಲವೆಂಬ ಒಂದೇ ಕಾರಣದಿಂದ ಪಕ್ಷದ ವಿರುದ್ದ ಬಂಡೆದ್ದು ಪಕ್ಷದ ಹಿರಿಯ ನಾಯಕರುಗಳಿಗೆ ಬಾಯಿಗೆ ಬಂದಂತೆ ಬೈದು ಬಂಡಾಯ ತೋರಿದ ಅದೇ ಪಕ್ಷದ ರಾಜಕಾರಣಿಗಳು ಇಂದು ಬೇರೆ ರಾಜ್ಯಗಳಲ್ಲಿ ರಾಜ್ಯಪಾಲರಾಗಿ ರಾಜ್ಯವಾಳುತ್ತಿದ್ದಾರೆ... ಪಕ್ಷಪಾತವೆನ್ನುವುದಕ್ಕೆ ಇದಕ್ಕಿಂತ ಬೇರೆ ನಿದರ್ಶನ ಬೇಕಿಲ್ಲವಾದರೂ ಪಕ್ಷದ ಹಿರಿಯ ರಾಜಕಾರಿಣಿ ಜನಾರ್ಧನ ಪೂಜಾರಿಯವರಿಗೆ ಇದು ಅರ್ಥವಾಗಿಲ್ಲದಿರುವುದು ಆಶ್ಚರ್ಯವಾಗಿದೆ. ಶ್ರೀ ಪೂಜಾರಿಯವರು ತನ್ನ ರಾಜಕಾರಣದ ಜೀವನದಲ್ಲಿ ಮಾಡಿದ ಮಾಡುತ್ತಿರುವ ದೊಡ್ಡ ತಪ್ಪು ಎಂದರೆ ತನ್ನ ಜಾತಿಬಾಂಧವರನ್ನು ಕಡೆಗಣಿಸಿದ್ದು... ಮುಂಬಯಿಯಲ್ಲಿ ಬಿಲ್ಲವ ಸಂಘಕ್ಕೊಂದು ಸ್ಥಳದ ಕೊಡುಗೆ ಮತ್ತು ಮಂಗಳೂರಿನಲ್ಲಿ ಒಂದು ದೇವಸ್ಥಾನದ ಏಳಿಗೆಗಾಗಿ ಮಾಡಿದ ಪ್ರಯತ್ನ ಹೊರತುಪಡಿಸಿದರೆ ಜಾತಿ ಬಾಂಧವರಿಗಾಗಿ ಮಾಡಿದ್ದು ಬಹುತೇಕ ಶೂನ್ಯ. ಇತರ ಜಾತಿಯ ರಾಜಕಾರಣಿಗಳು ತಮ್ಮವರನ್ನು ಗುರುತಿಸಿಕೊಳ್ಳುವಂತೆ, ತನ್ನ ಜಾತಿಬಾಂಧವರನ್ನು ಪೂಜಾರಿಯವರು ಸರಿಯಾಗಿ ಗುರುತಿಸಿಕೊಂಡಿದ್ದರೆ ಇಂದು ಅವರು ಭಾರತ ರಾಜಕಾರಣದ ಅತ್ಯುನ್ನತ ಪಧವಿಯಲ್ಲಿರುತ್ತಿದ್ದರು ಎಂಬುದು ಜಾತಿ ಬಾಂಧವರ ಅಂಬೋಣ. ಏನೇ ಇರಲಿ... ತನ್ನ ಪಕ್ಷ ತನ್ನ ನಿಷ್ಟಾ ವಂತತೆಯನ್ನು ಗುರುತಿಸದಿದ್ದಲ್ಲಿ ಏನಂತೆ... ಸಮಯ ಸಂದರ್ಭ ಬಂದಾಗಲೆಲ್ಲಾ ತನ್ನ ಪಕ್ಷಕ್ಕಾಗಿ ಗುರ್ರೆನ್ನುವುದನ್ನು ಪೂಜಾರಿಯವರು ಮರೆತಿಲ್ಲ. ಈಗ ತಸ್ಲೀಮಾ ನಸ್ರೀನ್ ರವರ ವಿಷಯದಲ್ಲಿಯೂ ಮತ್ತೊಮ್ಮೆ ಗುರ್ರ್ ಎಂದಿದ್ದಾರೆ...\"ಜೈ ಪೂಜಾರಿಯವರಿಗೆ\".

ಸಂತೋಷ್, ಮಂಗಳೂರು
2010-03-03
ವಾರ್ತೆ:ಮ೦ಗಳೂರು ವಿಮಾನ ನಿಲ್ದಾಣಕ್ಕೆ `ತುಳುನಾಡು ವಿಮಾನ ನಿಲ್ದಾಣ' ಎ೦ದು ಹೆಸರಿಡಿ: ಕೆ.ಡಬ್ಲ್ಯು.ಎ.ಆರ್.
ತುಳು ನಾಡಿನಲ್ಲಿ ತುಳು ಭಾಷೆಯನ್ನು ಸರ್ವ ಧರ್ಮಿಯರು ಹಲವು ಶತಮಾನಗಳಿಂದ ಗೌರವಿಸಿ, ಬೆಳೆಸಿ, ಉಳಿಸಿಕೊಂಡು ಬಂದಿದ್ದಾರೆ. ತುಳು ಭಾಷೆ ಶಾಶ್ವತ ವಾಗಿರಬೇಕಾದರೆ ತುಳು ನಾಡಿನಲ್ಲಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ’ತುಳುನಾಡು ವಿಮಾನ ನಿಲ್ದಾಣ’ ಹೆಸರು ಸೂಕ್ತ. ಜಗತ್ತಿನ ಯಾವುದೇ ಕಡೆಗಳಿಂದ ತುಳು ನಾಡಿಗೆ ಬರುವ ತುಳುವರು ಅಭಿಮಾನದಿಂದ ಬಂದು ಇಳಿಯುವ ಕನಸು ನನಸಾಗಲಿ. ಕರಾವಳಿ ವೆಲ್ ಫೇರ್ ಅಸೋಸಿಯೇಶನ್ ರಿಯಾದ್ ಮನವಿಗೆ ಮನ್ನಣೆ ದೊರೆಯಲಿ ಎಂದು ನಮ್ಮ ಹಾರೈಕೆಗಳು.

hassanmukka, mangalore/ksa
2010-03-02
ವಾರ್ತೆ:ಒಬ್ಬ ಹಿಂದೂ ಅಲ್ಲದವನು ಭಾರತೀಯನಾಗಲಾರ: ಆರೆಸ್ಸೆಸ್
By geographical definition it is correct to say that people living in hindusthan is called 'Hindu' irrespective of his way of life or you name it 'religion'. Even in saudi arabia local people call indians as "Hindi".There is no big deal in it.Need of the hour is to treat all indians as humans.It is better for Mr.Bhagavath to tell his followers give importance to human lives and their properties than to animals.

ವಿಜಯ್ ಸುವರ್ಣ , ಕತಾರ್
2010-03-02
ವಾರ್ತೆ:ಉಡುಪಿ: ಕ್ರಷ್ಣ ಮಠಕ್ಕೆ ಭೇಟಿ ನೀಡೀದ ಬೆ೦ಗಳೂರಿನ 55 ಅ೦ಧವಿದ್ಯಾರ್ಥಿಗಳು: ಎಲ್ಲಿರುವೆ ಮುದ್ದುಕೃಷ್ಣ ಬಾಬಾಬಾ... ಅಂಧವಿದ್ಯಾರ್ಥಿಗಳ ಅಂತರಂಗದ ಆಹ್ವಾನ...
ನಿಜವಾಗಿಯೂ ಇದೊಂದು ಹ್ರದಯಸ್ಪರ್ಶಿಯಾದ ಪರಿಚಯದ ಲೇಖನ. ದ್ರಷ್ಟಿವಂಚಿತ ರಾಗಿರುವವರ ಪ್ರತ್ಯಕ್ಷ ಪರಿಚಯವನ್ನು ದ್ರಷ್ಟಿಹೊಂದಿರುವವರಿಗೆ ಮಾಡಿಕೊಡುವ ಲೇಖನ. ಅಂಗವಿಕಲ ರನ್ನು ಕಂಡು ಅಪಹಾಸ್ಯಮಾಡುವವರಿಗೂ ನಮ್ಮಲ್ಲಿ ಕಡಿಮೆಯಿಲ್ಲ. ಈ ಕಣ್ಣಿಲ್ಲ ದಿರುವ ಬಾಲಕ ಬಾಲಕಿಯರನ್ನು ಕಂಡಾಗ ಏನಿದು ಪರಮಾತ್ಮನ ಪರೀಕ್ಷೆ ಎನಿಸದಿರದು. ಯಾಕೆ ಈ ಅಮಾಯಕ ಮಕ್ಕಳಿಗೆ ಅವರು ಮಾಡದಿರುವ ಅನ್ಯಾಯಕ್ಕೆ ಪಾಪಕ್ಕೆ ಯಾವ ರೀತಿಯ ಶಿಕ್ಷೆಯಿದು? ಏನಿದು ಜಗನಿಯಾಮಕನ ಲೀಲೆ?? ಏನು ಆತನ ಪರೀಕ್ಷೆ?? ಯಾರು ಅರಿಯಬಲ್ಲರು... ಏನೇ ಆಗಲಿ ಇಂತಹಾ ಮಕ್ಕಳನ್ನು ಆಧರಿಸಿ ಅವರ ಊರುಗೊಲಾಗಿರುವ ಶ್ರೀಯುತ ಜನಾರ್ಧನ್ ರವರಿಗೂ ಅವರ ಚಾರಿಟೇಬಲ್ ಟ್ರಸ್ಟ್ ಗೂ ಖಂಡಿತವಾಗಿಯೂ ಸೆಲ್ಯೂಟ್ ಸಲ್ಲಿಸಲೇ ಬೇಕು. ಪ್ರತಿಫಲಾಪೇಕ್ಷೆ ಇಲ್ಲದೆ ಪ್ರಚಾರವನ್ನೂ ಬಯಸದೆ ಸದ್ದಿಲ್ಲದೇ ಸಂಕಷ್ಟಕ್ಕೊಳಗಾಗಿರುವ ಅಮಾಯಕರ ಸೇವೆ ಸಲ್ಲಿಸುತ್ತಿರುವ ಇವರಂತವರಿಗೆ ಪರಮಾತ್ಮನು ಯಥೇಷ್ಟ ಸುಖ ಸಮ್ರದ್ಧಿಯನ್ನು ಸದಾಕಾಲ ಕರುಣಿಸಲಿ ಎಂಬುದೇ ಹ್ರದಯಾಂತ ರಾಳದ ಹಾರೈಕೆ.


 

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri