ಆದಿತ್ಯವಾರ, 21-03-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಐಪಿಎಲ್ ನೂತನ ತಂಡಗಳಿಗೆ ಪುಣೆ, ಕೊಚ್ಚಿ ಸೇರ್ಪಡೆ
Latest news item ಕಿಂಗ್‌ಫಿಶರ್ ವಿಮಾನದಲ್ಲಿ ವಾರಸುದಾರರಿಲ್ಲದ ಬ್ಯಾಗ್‌ನಲ್ಲಿ ಕಚ್ಚಾ ಬಾಂಬ್ ಪತ್ತೆ
Latest news item ಮಯಾನಗರಿಯಲ್ಲಿ ತ್ರಿವಳಿ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ವಿಭಿನ್ನ ವಿಚಾರ ಸಂಕಿರಣ ಮತ್ತು ಕೃತಿ ಬಿಡುಗಡೆ: ಬರೆದವರೆಲ್ಲರೂ ಸಾಹಿತಿಗಳಾಗಲಾರರು : ಕೆ. ಸತ್ಯನಾರಾಯಣ
Latest news item ಮ೦ಗಳೂರು: ಕ೦ದಾಯ ಇಲಾಖೆಯಡಿಯಲ್ಲಿರುವ ಭೂಮಿಯನ್ನು ಗೋಮಾಳಕ್ಕೆ ಮೀಸಲು: `ನೈಸ್' ತಂದೆ ಮಕ್ಕಳ ವೃಥಾ ಆರೋಪ : ಯಡಿಯೂರಪ್ಪ
Latest news item ‘ಗೋಹತ್ಯೆ’ ಹಿಂದೆ ನರಹತ್ಯೆಯ ಕಾರ್ಯಸೂಚಿ: ದೇವನೂರು
Latest news item ಶಿಕ್ಷಣ, ಗ್ರಾಮೀಣ ಅಭಿವೃದ್ಧಿಗೆ ಪ್ರೋತ್ಸಾಹ: ಕಲ್ಲಡ್ಕದಲ್ಲಿ ಶ್ರೀರಾಮ ಯಜ್ಞದಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಯಡಿಯೂರಪ್ಪ
Latest news item ಮಂಗಳೂರು: ನಗರದ ವ್ಯಕ್ತಿಯೊಬ್ಬರನ್ನು ಅಪಹರಣ ನಡೆಸಿ ಸಾಲದ ಹಣಕ್ಕಾಗಿ ಬೆದರಿಕೆ ನೀಡುತ್ತಿದ್ದ 6ಮಂದಿ ಅರೋಪಿಗಳ ಬಂಧನ.
Latest news item ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ನೂತನ ಖಾಝಿ ’ತ್ವಾಖಾ ಅಹ್ಮದ್ ಮುಸ್ಲಿಯಾರ್’ ಅಧಿಕಾರ ಸ್ವೀಕಾರ.
Latest news item ಮಂಗಳೂರು: ಗೋಹತ್ಯೆ ನಿಷೇದ ಕಾನೂನಿಗೆ ವಿಧಾನ ಸಭೆ ಅಂಗೀಕರ : ನಗರದಲ್ಲಿ ಬಜರಂಗದಳ ವಿಜಯೋತ್ಸವ.
Latest news item ವೀರ ಕೇಸರಿ ಕಲಾವೃಂದ ಮುಂಬಯಿ ಇದರ ಮೂವತ್ತೊಂದನೆ ವಾರ್ಷಿಕೋತ್ಸವ ಸಂಭ್ರಮ
Latest news item ಭವ್ಯ ಮೆರವಣಿಗೆಯೊ೦ದಿಗೆ ಇ೦ದು ಉಡುಪಿ ಜಿಲ್ಲಾ ಸಾಹಿತ್ಯ ಸಮ್ಮೇಳನ ಉದ್ಘಾಟನೆ: ಸಾಹಿತ್ಯದಿಂದ ಬೆಳೆಯಬೇಕಾದುದು ದ್ವೇಷವಲ್ಲ, ಪ್ರೀತಿ, ಮಾನಯತೆ : ಉಡುಪಿ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಉಪಾಧ್ಯಾಯ
Latest news item ಕಂಧಮಾಲ್ ಪ್ರವೇಶಿಸಲು ಯತ್ನಿಸಿದ ತೊಗಾಡಿಯಾ ಬಂಧನ
Latest news item ದುಬಾಯಿ ಕರಾಮ ಸೆಂಟರ್ ಸಭಾಂಗಣದಲ್ಲಿ ನಡೆದ ಶ್ರೀ ಸತ್ಯನಾರಾಯಣ ಪೂಜೆಯಲ್ಲಿ ಕಿಕ್ಕಿರಿದು ಸೇರಿದ ಭಕ್ತ ಸಮೂಹ
Latest news item ತನ್ನ ಗೆಲುವಿಗೆ ಕಾರಣವಾದ ಬೈಂದೂರು ಅಭಿವೃದ್ಧಿಗೆ ಪ್ರಮುಖ ಆದ್ಯತೆ: ಸಂಸದ ರಾಘವೇಂದ್ರ
Latest news item ದಮಾಮ್: ಮಹಿಳೆಯರಿಗಾಗಿ ಆರೋಗ್ಯ ಜಾಗೃತಿ ಅಭಿಯಾನ
Latest news item ವಿರೋಧಗಳ ನಡುವೆ ಗೋಹತ್ಯೆ ನಿಷೇಧ ಕಾಯ್ದೆಗೆ ಅಂಗೀಕಾರ
Latest news item ಬಿ.ಜಯಶ್ರೀ ರಾಜ್ಯಸಭೆಗೆ ನಾಮನಿರ್ದೇಶನ
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ
Latest news item ದುಬೈ: ಅಗಲಿದ ಸಿ. ಅಶ್ವಥ್, ವಿಷ್ಣುವರ್ಧನರಿಗೆ ಧ್ವನಿ ಪ್ರತಿಷ್ಠಾನದ ಶೃದ್ಧಾಂಜಲಿ
Latest news item ನೆನಪು: ಅಭಿನವ ಭಾರ್ಗವ ಸಾಹಸ ಸಿಂಹ ವಿಷ್ಣುವರ್ಧನ್ ಗೆ ಕೊಲ್ಲಿರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿಗರ ಭಾವ ಪೂರ್ಣ ನಮನ...



 

 
ಆಯ್ದ ಪ್ರತಿಸ್ಪಂದನಗಳು

FIRST PREV
( Page 1 of 33 )
NEXT LAST
Ibrahim Hussain, Udipi, Karnataka
2010-03-21
ವಾರ್ತೆ:ಮಂಗಳೂರು: ಗೋಹತ್ಯೆ ನಿಷೇದ ಕಾನೂನಿಗೆ ವಿಧಾನ ಸಭೆ ಅಂಗೀಕರ : ನಗರದಲ್ಲಿ ಬಜರಂಗದಳ ವಿಜಯೋತ್ಸವ.
ಕಳೆದ ವಿಧಾನ ಸಭಾ ಚುನಾವಣಾ ಸಮಯದಲ್ಲಿ ಬಿಜೆಪಿ ಪಕ್ಷವು ರಾಜ್ಯವನ್ನು ಗುಜರಾತ್ ಮಾದರಿಯಾಗಿ ಮಾಡುತ್ತೇವೆಂದು ಪ್ರಚಾರ ಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಇವರು ಒಂದೊಂದಾಗಿ ಮರೆಯಲ್ಲಿರಿಸಿದ ಕಾರ್ಯಸೂಚಿಯನ್ನು ಕಾರ್ಯಗತಗೊಳಿಸುತ್ತಿದ್ದಾರೆ ಎಂಬುದರಲ್ಲಿ ಸಂಶಯವಿಲ್ಲ. ರಾಜ್ಯವು ಕಳೆದ 60 ವರ್ಷಗಳಲ್ಲಿ ಮಾಡದಷ್ಟು ಸಾಲಮಾಡಿ ಪ್ರತೀ ಪ್ರಜೆಯನ್ನು ಸಾಲಗಾರರನ್ನಾಗಿ ಮಾಡಿದ ಹೆಗ್ಗಳಿಕೆ ಇವರಿಗೆ. ಕಾನೂನು ಸುವ್ಯವಸ್ತೆ ಸಂಪೊರ್ಣ ಹದಕೆಟ್ಟಿದ್ದು, ಎಂದು ಕಾಣದಷ್ಟು ಮತೀಯ ಗಲಭೆ ಗಳು ಈ ರಾಜ್ಯವು ಬಿಜೆಪಿ ಆಡಳಿತದಲ್ಲಿ ಕಂಡಿರುತ್ತದೆ. ಗೋಹತ್ಯೆ ನಿಷೇದಕ್ಕೆ ಅಸ್ತು ನೀಡುರುವೂದಕ್ಕೆ ಆತಂಕವನ್ನು ಯಾರೂ ಪಡುವುದಿಲ್ಲ. ಬಿಜೆಪಿ ಆಡಳಿತವಿರುವ ಇತರ ರಾಜ್ಯಗಳಲ್ಲಿ ಇಂತಹ ಜನವಿರೋಧಿ ಮಸೂದೆಯನ್ನು ಮಂಡಿಸಿರುವುದು ಹೊಸತೇನಲ್ಲ. ಮತ್ತೆ ಗೋಮಾಂಸ ತಿನ್ನದಿದ್ದಲ್ಲಿ ಯಾರು ಸಾಯುದಿಲ್ಲ. ಇದರಿಂದ ಇತರ ಹೈನುಗಾರಿಕೆಗೆ ಲಾಭವಲ್ಲದೆ ನಷ್ಟವಿಲ್ಲ. ಮುಂದಿನ ಚುನಾವಣೆಯಲ್ಲಿ ಕ್ರಷಿಕರು ಮತ್ತು ಮಾಧ್ಯಮ ವರ್ಗದವರು ಇವರಿಗೆ ಸರಿಯಾದ ಉತ್ತರ ನೀಡಲಿದ್ದಾರೆ. ಅಂತು ಈ ಎಲ್ಲಾ ಬೆಳವಣಿಗೆಗಳ ಕಾರಣ ಪುರುಷನಾದ ಮಾಜಿ ಮುಖ್ಯ ಮಂತ್ರಿ ಕುಮಾರ ಸ್ವಾಮಿಯನ್ನು ಶ್ಲಾಘಿಸಬೇಕು, ಏಕೆಂದರೆ ಯೆಡ್ಡಿಯನ್ನು ಕೈಹಿಡಿದು ಅಧಿಕಾರದಲ್ಲಿ ಕುಳ್ಳಿರಿಸಿದ ಮಹಾನುಭಾವ. ಕಾದು ನೋಡುವ ಸಮಯವು ಒದಗಿಬಂದಿದೆ.

Dhanaraja Padubidri Devadiga, Abu Dhabi
2010-03-21
ವಾರ್ತೆ:ರಾಷ್ಟ್ರಪತಿಯವರಿಂದ ಮೊಯ್ಲಿಯವರಿಗೆ ಭಾರತೀಯ ಜ್ಞಾನಪೀಠದ ಪ್ರತಿಷ್ಠಿತ ಮೂರ್ತಿದೇವಿ ಪ್ರಶಸ್ತಿ ಪ್ರದಾನ
Dr.M.Verappa Moily is one of great personality in Indian Politics. His contribution is noble. May God bless him and his family long life, health and happiness.

Shashi Kumar S, Udupi / Mangalore
2010-03-20
ವಾರ್ತೆ:ದುಬೈ: ಚಾರಿಟಿಗಾಗಿ ರೂಪು ತಳೆದು ತುಳು ಸಂಸ್ಕೃತಿಯನ್ನು ಬೆಳೆಸುವ ಉದ್ದೇಶ: 'ನಮ ತುಳುವೆರ್’ ಯು.ಏ.ಇ' 2010 ವರ್ಷದ 'ಸಹಾಯಾರ್ಥ' ಕಾರ್ಯಕ್ರಮಗಳ ಘೋಷಣೆ
Good thinking,promoting tulu culture for noble cause is really good. Wishing all the best for S.P for taking initiative. But one thing i want to tell you,after some time, nama tuluveru should not be nama billawas tuluveru. Becuase if anyone sees the above photo, there is a lady in the centre, she is billawa & the person sitting left & right are also billawas & people standing behind her also billawas, major people are billawas in this. This is the community where all the people of different castes & religion from tulunadu works together. So, i hope the message is very clear to S.P in this. Best of luck.

Ronald, Udupi
2010-03-20
ವಾರ್ತೆ:ವಿರೋಧಗಳ ನಡುವೆ ಗೋಹತ್ಯೆ ನಿಷೇಧ ಕಾಯ್ದೆಗೆ ಅಂಗೀಕಾರ
Eating and possession of beef is a crime? State BJP govt has proved beyond doubt that it is communal, Fanatic and anti minority! They are imposing rule and law on food habits!?

Shrilatha S Hegde, Mangalore / Dubai
2010-03-20
ವಾರ್ತೆ:ದುಬಾಯಿ ಕರಾಮ ಸೆಂಟರ್ ಸಭಾಂಗಣದಲ್ಲಿ ನಡೆದ ಶ್ರೀ ಸತ್ಯನಾರಾಯಣ ಪೂಜೆಯಲ್ಲಿ ಕಿಕ್ಕಿರಿದು ಸೇರಿದ ಭಕ್ತ ಸಮೂಹ
Excellent photographs by Mr.Ashok B, keep up the good work.

Ronald, Udupi
2010-03-19
ವಾರ್ತೆ:ಮಂಗಳೂರು: ಭೂಗತ ದೊರೆಗಳೊಂದಿಗೆ ಸಂಪರ್ಕ ಆರೋಪದಲ್ಲಿ ಬಂಧಿತನಾಗಿದ್ದ ಪ್ರಸಾದ್ ಅತ್ತಾವರ್‌ಗೆ ಜಾಮೀನು - ಬಿಡುಗಡೆ
Only difference is change of advocate! System is working as usual! May be there is no scope for improvement!! Can we assume the bottom line... Pay Hafta, otherwise you will be in trouble!!! Vasooli has mighty power!!! Dedication of G. Hosur favours fearless life to common man who earns a deserved living and life! If you make it big in life why you need to part it!? Why these goons are not touching Ambani\'s or Mahajans or Ballary mine Gowdas? Why barking in the home yard alone?

ವಿಜಯ್ ಸುವರ್ಣ , ಕತಾರ್
2010-03-18
ವಾರ್ತೆ:ದುಬೈ: ಚಾರಿಟಿಗಾಗಿ ರೂಪು ತಳೆದು ತುಳು ಸಂಸ್ಕೃತಿಯನ್ನು ಬೆಳೆಸುವ ಉದ್ದೇಶ: 'ನಮ ತುಳುವೆರ್’ ಯು.ಏ.ಇ' 2010 ವರ್ಷದ 'ಸಹಾಯಾರ್ಥ' ಕಾರ್ಯಕ್ರಮಗಳ ಘೋಷಣೆ
ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ "ನಮ ತುಳುವೆರ್" ಬಳಗಕ್ಕೆ ಹ್ರತ್ಪೂರ್ವಕ ಅಭಿನಂದನೆಗಳು. . ತುಳು ಸಂಸ್ಕ್ರತಿಯನ್ನು ಉಳಿಸಿಬೆಳೆಸುವ ಉನ್ನತ ಉದ್ದೇಶವನ್ನೇ ಸದುದ್ದೇಶಗಳನ್ನೇ ಮೂಲಮಂತ್ರವನ್ನಾಗಿಸಿಕೊಂಡು ಮೈತಳೆದು ನಿಂತಿರುವ ನಿಮ್ಮ ಪ್ರತಿಯೊಂದು ಉದ್ದೇಶಗಳೂ ಸಫಲತೆಯ ಸನ್ಮಾರ್ಗದಲ್ಲಿ ಸಾಗುವಂತಾಗಲಿ ಎಂಬುದೇ ಸಮಸ್ತ ತುಳುವಿಗರ ಹ್ರತ್ಪೂರ್ವಕವಾದ ಹಾರೈಕೆ. ಹೆಚ್ಚಿನೆಡೆ ಗಳಲ್ಲಿ ನನ್ನ ಫೋಟೋ ಬರಬೇಕು, ನನ್ನ ಹೆಸರು ಬರಬೇಕು,,,,ನಾನೇ ಅಧ್ಯಕ್ಷ ನಾಗಬೇಕು ... ನಾನೇ ಅದಾಗಬೇಕು, ಇದಾಗಬೇಕು..ನನ್ನ ನಾಮಧೆಯವೇ... ನನ್ನ ಭಾವಚಿತ್ರವೇ ಮುಂಚೂಣಿಯಲ್ಲಿ ಇರಬೇಕು..ಎಂದೆಲ್ಲಾ ಕನವರಿಸುತ್ತಿರುವ, ಹಂಬಲಿಸುತ್ತಿರುವ , ಪದಾಧಿಕಾರೀ...ಕಾರ್ಯಕಾರೀ ಸಮಿತಿಗಳಿಂದ ತುಂಬಿರುವ ಸಂಘಟನೆಗಳೇ ತುಂಬಿರುವ ಈ ಸಂದರ್ಭದಲ್ಲಿ ಪದಾಧಿಕಾರಿಗಳನ್ನೇ ಒಳಗೊಂಡಿರದ "ನಮ ತುಳುವೆರ್" ನಿಜಕ್ಕೂ ಪ್ರಶಂಸನೀಯ ಸಂಸ್ಥೆ. ಸಮಾಜದ ಅಸ್ತಿರತೆಯನ್ನು ಗಮನಿಸಿ, ಅಶಕ್ತರ ಅಶಕ್ತತೆಯನ್ನು ಮನಗಂಡು, ಎಲ್ಲಿ ನಿಜವಾಗಿಯೂ " ಬೇಕು" ... ಆ "ಬೇಕಿ" ಗಾಗಿ ಸ್ಪಂಧಿಸುವ ನಿಮ್ಮ ಉತ್ಕ್ರಷ್ಟ ಯೋಚನೆ, ಯೋಜನೆ ನಿಜಕ್ಕೂ ಫಲದಾಯಕ ನಿಮ್ಮೆಲ್ಲಾ ಯೋಜನೆಗಳೂ ಯೋಚಿಸಿದಂತೆ ಮುನ್ನೆಡೆದು ಸಮಾಜದಲ್ಲಿ ಒಂದು ಅತ್ಯುತ್ಕ್ರಷ್ಟ ಸಂಸ್ಥೆಯಾಗಿ ಮುನ್ನಡೆಯುತ್ತಿರಲಿ ಎಂದು ಮನಃ ಪೂರ್ವಕವಾಗಿ ಹಾರೈಸುತ್ತೇನೆ.

Ibrahim Hussain, Udipi, Karnataka
2010-03-18
ವಾರ್ತೆ:ಉಡುಪಿ: ನೀರಾವರಿ ಇಲಾಖೆ ಹಾಗೂ ಸಬ್ ರಿಜಿಸ್ಟ್ರಾರ್ ಅಧಿಕಾರಿಗಳ ಮನೆಗೆ ಲೋಕಾಯುಕ್ತ ತ೦ಡದ ಮಿ೦ಚಿನ ದಾಳಿ:ಲಕ್ಷಾ೦ತರ ರೂಪಾಯಿ ಆಸ್ತಿ ಮುಟ್ಟುಗೋಲು.....
ಈ ಸಬ್ ರಿಜಿಸ್ತ್ರಾರ್ ಪರಮೇಶ್ವರ ಮನೆ ಸಾಲದ ಬಗ್ಗೆ ಕೊಡಬೇಕಾದ ಒಂದು ಕಾಗದ ಪತ್ರವನ್ನು ರಿಜಿಸ್ತ್ರಿಮಾಡಲು ನನ್ನನ್ನು ಸತಾಯಿಸಿ ಕೊನೆಗೆ ನನ್ನಿಂದ 1000 ರುಪಾಯಿಗಳ್ನ್ನು ಪಡೆದ ನಂತರವಷ್ಟೆ ರಿಜಿಸ್ತ್ರೀ ಮಾಡಿದ ಲಂಚಕೋರ ಭೂಪನಿವವನು. ಕೊನೆಗೂ ಇವನ ಮನೇಗೆ ಲೋಕಾಯುಕ್ತರು ಧಾಳಿ ಮಾಡಿದ್ದು ನನಗೆ ಸಂತಸವನ್ನು ತಂದಿದೆ. ಕಾನೂನು ಹೇಗೆ ಇವನನ್ನು ಶಿಕ್ಷಿಸುತ್ತದೆ ಎಂದು ಕಾದು ನೋಡಬೇಕಿದೆ.

Achu, Katipalla
2010-03-16
ವಾರ್ತೆ:ಮಂಗಳೂರು: ನಗರದಲ್ಲಿ ಎಸ್ಸೆಸೆಫ್ ಮೀಲಾದ್ ಸಂದೇಶ
Masha Allah good job done by SSF. Keep it up

ಆಫಾಖ್ ನಾಗುರು , ದುಬೈ
2010-03-16
ವಾರ್ತೆ:‘ಗಂಗೆಯಲ್ಲಿ ಮಿಂದು ಶುದ್ಧನಾಗುವೆ’: ನೋವು ಮರೆಯಲು ಹರಿದ್ವಾರ ಹೊಟೇಲಿನಲ್ಲಿ ನಿತ್ಯಾನಂದ ಧ್ಯಾನ!
ಈಗಾಗಲೆ ಈ ನಂಗಾ ಸ್ವಾಮಿಯ ಹಲವು ಕಾಮದ ಹಾಗು ಕೆನಡ ಮೂಲದ ವ್ಯಕ್ತಿಯ ಕೊಲೆಯ ಹಗರಣಗಳು ಬಹಿರಂಗಗೊಡರು ಮಾದ್ಯಮದವರು ಕೂಡ ಯಾವ ರೀತಿಯಲ್ಲಿ ಮರ್ಯಾದೆಯನ್ನು ಇಂಥಹ ನೀಚ ನಿತ್ಯ ನಂಗನಿಗೆ ನೀಡುತ್ತಿದ್ದಾರೆಂದು ಅರ್ಥವಾಗುತ್ತಿಲ್ಲ. ಸ್ವಾಮಿಜಿಗಳನ್ನು ಹಿಂದುಗಳಲ್ಲಿ ಪವಿತ್ರವಾದ ಪೀಟವನ್ನೇರಬೇಕಾದಲ್ಲಿ ತ್ಯಜಿಸಬೇಕಾಗಿದ್ದ \"ಕಾಮ\" ಇಂದಿನ ಪೀಟಕ್ಕೇರುವ ಸ್ವಾಮೀದೀಕ್ಷೆ ಪಡೆಯುವವರು ಪಾಲಿಸುವುದಿಲ್ಲವೆನ್ನುವುದಕ್ಕೆ ಈ ನೀಚನೆ ಸಾಕ್ಷಿ. ಈಗಾಗಲೆ ಕಾಮದಾಟಕ್ಕೆ ಹೆಸರುವಾಸಿಯಾದ ನಿತ್ಯಾನಂದನಿಂದ ಹಿಡಿದು ದೂರದ ದೆಹಲಿಯ ನೀಚ ಸ್ವಾಮಿಜಿಯವರ ಕರ್ಮಕಾಂಡವು ಜನತೆಯ ಮುಂದಿದೆ. ಮೊದಲು ನಿತ್ಯಾನಂದನಾಗಿದ್ದ ಈ ಕಾಮುಕ ಸ್ವಾಮಿ ಪೀಟವನ್ನೇರೀದ ನಂತರ ’ನಿತ್ಯಾ ನಂಗ ’ನಾಗಿದ್ದು ಸ್ವಾಮಿಜೀಯ ಹೆಸರಿಗೆ ಕಪ್ಪು ಚುಕ್ಕೆಯಾಗಿದೆ. ಇಂತಹ ಲೋಫರ್ ಸ್ವಾಮಿಜಿಗಳು ರಾತ್ರಿ ಹಗಲೆನ್ನದೆ ಬಾಡಿಗೆಯ ಹುಡುಗಿಯರನ್ನು ಆಶ್ರಮಕ್ಕೆ ಕರೆಸಿ ಮಜಾ ಉಡಾಯಿಸುವುದನ್ನು ಗಮನಿಸಿದರೆ ಇವರಿಗೆ ಸನ್ಯಾಸತ್ವದ ಪರಿಜ್ನಾನವೇ ಇಲ್ಲವೆನ್ನುವುದು ಅರಿವಾಗುತ್ತದೆ. ಮೊದಲಿಗೆ ತನ್ನ ಪ್ರಸಿದ್ದಿ ಸಹಿಸದೆ ಶತ್ರುಗಳು ತನ್ನ ವಿರುದ್ದ ವ್ಯವಸ್ತಿತ ಶಡ್ಯಂತ್ರ ರೂಪಿಸಿದ್ದಾರೇಂದು ಬೊಗಳಿದ ಈ ನೀಚ ಕೊನೆಯಲ್ಲಿ ಅನ್ಯರ ಜೊತೆ ಮಜಾ ಉಡಾಯಿಸಿದ್ದು ತಾನೆ ಎಂದು ಒಪ್ಪಿ ಈಗ ಒಮ್ಮೇಲೆ ಪಾಪ ವಿಮೋಚನೆಗೆ ಗಂಗೆಯಲ್ಲಿ ಸ್ನಾನ ಮಾಡಲು ಎರ್ಪಾಟು ನಡೆಸುತ್ತಿದ್ದಾನೆ. ಈ ನಿತ್ಯಾ ನಂಗನಿಂದ ಗಂಗೆಯ ನೀರು ಕೂಡ ಮಲೀನವಾಗಬಹುದು. ಸ್ವಾಮಿಜಿಯ ಹೆಸರಿಗೆ ಕಳಂಕ ತಂದ ಈ ನೀಚ ಗಂಗೆಯಲ್ಲಿ ಶುದ್ದಿಕರಣಗೊಳ್ಳುವುದಾದರೆ ಕೋರ್ಟ ಹಾಗು ಕಚೇರಿಯ ಉಪಯೋಗವಾದರು ಏನು??? ಇನ್ನು ಮುಂದೆ ಅತ್ಯಾಚಾರಿಗಳೆಲ್ಲರು ಗಂಗೆಯಲ್ಲಿ ಸ್ನಾನ ಮಾಡಿ ಶುದ್ದೀಕರಣಗೊಳ್ಳಬಹುದು. ಈ ರೀತಿಯಲ್ಲಿ ವಿಡಿಯೋದಲ್ಲಿ ಅಶ್ಲೀಲವಾಗಿ ವರ್ತಿಸಿದರು ಕೂಡ ಈ ನಿತ್ಯಾ ನಂಗನಿಗೆ ಇನ್ನು ಬಂದಿಸದೆ ಇರುವುದು ನಮ್ಮ ಕಾನುನು ಪಾಲಕರ ದ್ವಂದ್ವ ನಿಲುವಿಗೆ ಉದಾಹರಣೆಯಾಗಿದೆ. ಇವನು ಗಂಗೆಯಲ್ಲಿ ಸ್ನಾನ ಮಾಡಿ ಹಾಗು ಧ್ಯಾನದ ಮೂಲಕ ಶುದ್ದೀಕರಣಗೊಳ್ಳುದಾದರೆ ಇನ್ನು ಇಂತಹ ಅನೇಕ ಅತ್ಯಾಚಾರಿಗಳಿಗೆ ಶುದ್ದೀಕರಣಗೊಳ್ಳಲಿಕ್ಕಾಗಿ ಹೊಸ ಮಾರ್ಗವನ್ನು ತೋರಿಸಿದ ಹಾಗೆ ಎನ್ನುವುದು ಹಾಸ್ಯಾಸ್ಪದವಾಗಬಹುದು.

Ronald, Udupi
2010-03-16
ವಾರ್ತೆ:ಮ೦ಗಳೂರು: ಬೀಚ್‌ಗೆ ವಿಹಾರಕ್ಕೆ ಬ೦ದ ಸಾಮಾನ್ಯರಿಗೆ ಹಿಂದೂ ಸಂಘಟನೆಯ ಹೆಸರಿನಲ್ಲಿ ಕಿರುಕುಳ
\'Annake Nashta Bhoomige Bhara\'! is the true profile of Moral Policing Brigade!

Afaque Nagoor, Dubai
2010-03-16
ವಾರ್ತೆ:ಉಡುಪಿ: ಮಗಳ ಮೇಲೆ ಕಾಮುಕ ತಂದೆಯ ಅತ್ಯಾಚಾರ: ಆಕ್ರೋಶಿತ ಸಾರ್ವಜನಿಕರಿಂದ ಹಲ್ಲೆ; ಆರೋಪಿ ಪೊಲೀಸರ ವಶಕ್ಕೆ
ಊಹಿಸಲು ಅಸಾದ್ಯವಾದ ಒಬ್ಬ ತಂದೆಯಾದವನು ಯಾವ ರೀತಿಯಲ್ಲಿ ತನ್ನ ಸ್ವಂತ ಮಗಳನ್ನು ತನ್ನ ಲೈಂಗಿಕ ಬಯಕೆಯನ್ನು ತೀರಿಸಲು ಬಳಸಿಕೊಳ್ಳುತ್ತಾನೆನ್ನುವುದಕ್ಕೆ ಈ ಕಾಮುಕ ಶೇಷಪ್ಪನೇ ಸ್ಪಷ್ಟ ಉದಾಹರಣೆ. ದೂರದ ಪಾಶ್ಚಾತ್ಯ ರಾಷ್ಟ್ರದಲ್ಲಿ ನಡೆಯುತ್ತಿದ್ದ ಇಂತಹ ಅಮಾನವೀಯ ಕಾರ್ಯ ಕೇಳಿದ್ದೆವೇ ಆದರೆ ಇದು ನಮ್ಮ ಜಿಲ್ಲೆಯಲ್ಲಿಯು ನಡೆಯಬಹುದೆಂದು ಕನಸಿನಲ್ಲಿಯು ಊಹಿಸಿರಲಿಲ್ಲ. ತನ್ನ ಸ್ವಂತ ಮಗಳನ್ನು ಬಿಡದ ನೀಚ ಕಾಮುಕ ಶೇಷಪ್ಪನನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಿದರೆ ಇನ್ನು ಬಯಲಿಗೆ ಬರದ ಅದೆಷ್ಟೋ ಕಾಮುಕ ತಂದೆ ಶೇಷಪ್ಪನಂತಹವರಿಗೆ ಎಚ್ಚರಿಕೇಯ ಘಂಟೆಯಾಗಬಹುದು.

ಪ.ರಾಮಚಂದ್ರ , ರಾಸ್ ಲಫ್ಫಾನ್, ಕತಾರ್
2010-03-16
ವಾರ್ತೆ:ಮಂಗಳೂರು: ಹರೀಶ್ ಆದೂರ್‌ಗೆ ಪ.ಗೋ. ಪ್ರಶಸ್ತಿ
ಅಭಿನಂದನೆಗಳು

hassanmukka, mangalore/ksa
2010-03-16
ವಾರ್ತೆ:‘ಗಂಗೆಯಲ್ಲಿ ಮಿಂದು ಶುದ್ಧನಾಗುವೆ’: ನೋವು ಮರೆಯಲು ಹರಿದ್ವಾರ ಹೊಟೇಲಿನಲ್ಲಿ ನಿತ್ಯಾನಂದ ಧ್ಯಾನ!
ಪೊಲೀಸರಿಗೆ ಏನು ಕ್ರಮ ತೆಗೆದುಕೊಳ್ಲಿಕ್ಕೆ ಆಗದಿದ್ದರೆ ಪರವಾಗಿಲ್ಲ.ಜನರಿಗೆ ಬಿಟ್ಟು ಕೊಡ್ಲಿ.ಅವರೆ ವಿಚಾರಿಸಿಕೊಳ್ಳುತಾರೆ. ಇನ್ನು ಸ್ವಾಮಿ ಎಲ್ಲಾ ಮಾಡಿ ಶುದ್ದಿ ಮಾಡ್ತೆನೆ ಅನ್ತ ಗನ್ಗೆ ಯಲ್ಲಿ ಸ್ನಾನ ಮಾಡಿದ್ರೆ ಮತ್ತೆ ಕೊರ್ಟು ಕಚೇರಿ ಯಾಕೆ.ಎಲ್ಲರು ಹಾಗೆ ಮಾಡ್ಬಹುದಲ್ಲ!

M.E.Moolur, UDUPI/DUBAI
2010-03-16
ವಾರ್ತೆ:ದುಬೈ: ಚಾರಿಟಿಗಾಗಿ ರೂಪು ತಳೆದು ತುಳು ಸಂಸ್ಕೃತಿಯನ್ನು ಬೆಳೆಸುವ ಉದ್ದೇಶ: 'ನಮ ತುಳುವೆರ್’ ಯು.ಏ.ಇ' 2010 ವರ್ಷದ 'ಸಹಾಯಾರ್ಥ' ಕಾರ್ಯಕ್ರಮಗಳ ಘೋಷಣೆ
This is a very unique cooperative social service concept where the “Tuluver”, reaching beyond the boundaries of cast, creed and race joins together to serve the less privileged brothers and sisters of Tulunaad. Here the responsibility is not confined to a few office bearers, instead every one among the 51 is leader and every one is the follower as well. We must appreciate Mr.Shodhan for floating such a great idea and I am sure, this is going to be a very successful organization because of its innovative nature being “ Unity with diversity ”, provided all the members stand united and strive for its causes.- M.E.Moolur. ( Mohd.Ebrahim Moolur)

nazeem golden dubai, mangalore puttur
2010-03-15
ವಾರ್ತೆ:ಪುತ್ತೂರು: ಕಂಡಲ್ಲಿ ಕಸ ಎಸೆದವರಿಗೆ ಕಾದಿದೆ ಜೈಲು ಶಿಕ್ಷೆ
OUR PUTTUR IS ALWAYS GOOD ,KEEP IT UP SAME

Imran Manna, Udupi
2010-03-12
ವಾರ್ತೆ:ಕಾಲೇಜಿಗೆ ಅರ್‍ವತ್ತು, ಅಜ್ಜಿಗೆ ಎಂಬತ್ತು...!
ಈ ಅಜ್ಜಮ್ಮ MGM ನಲ್ಲಿ ವಿದ್ಯಾಭಾಸ ಮಾಡಿದ ಎಲ್ಲಾ ಹುಡುಗರ ದ್ರಷ್ಟಿಯಲ್ಲಿ ಸ್ವಂತ ತಾಯಿ ಯಾ ಸಮಾನ ಎಂದು ನಾನು ಹೇಳಬಯಸುತ್ತೇನೆ. ಆ ಕಾಲೇಜಿನ ದಿನ ಗಳನ್ನು ನಾವು ಯಾವತ್ತಿಗೂ ಮರೆಯುವಂತಿಲ್ಲ .ಪ್ರತಿ ದಿನ ಮಧ್ಯಾನ ಊಟ ಅಜ್ಜಮ್ಮ ನ ಮನೆ ( ಹೋಟೆಲ್ ) ಯಲ್ಲಿ . ಒಂದು ದಿನ ಹಣ ಇಲ್ಲ ಅಜ್ಜಮ ಎಂದರೆ ಈ ವನಸ್ ಮಲ್ಪುಲ ಮಗ ಕಾಸ್ ಎಲ್ಲೇ ಕೊರ್ಲೇ .ಎಂದು ನಮ್ಮನು ಸ್ವಂತ ಮಕ್ಕಳಂತೆ ಪೋಷಿಸುತ್ತಿದ್ದರು.ಅಜ್ಜಮ್ಮ ನೀವು ಇವತ್ತಿಗೂ ನಮ್ಮ ಹ್ರದಯದಲ್ಲಿ ವಿಶೇಷ ವಾದ ಸ್ಥಾನ ವನ್ನು ಹೊಂದಿದ್ದೀರಿ .ಅಲ್ಲ್ಹಹು ನಿಮಗೆ ಯಾವಾಗಲು ಸುಖವನ್ನು ದಯಪಾಲಿಸಲಿ ಎಂದು ಪ್ರಾರ್ತಿಸುತ್ತೇನೆ.ನಾಳೆ ಇಂದ ನಡೆಯಲಿರುವ MGM ವಾರ್ಷಿಕೊಸ್ಸವ ಕಾರ್ಯಕ್ರಮ ದಲ್ಲಿ ನಮ್ಮೆಲ್ಲರ ಪ್ರೀತಿಯ ಅಜ್ಜಮ್ಮ ರನ್ನು ಸನ್ಮಾನಿಸ ಬೇಕೆಂದು ಕತರ್ ನಲ್ಲಿ ನೆಲೆಸಿರುವ ಎಲ್ಲಾ MGM ಹಳೆಯ ವಿದ್ಯಾರ್ಥಿ ಗಳ ಪರವಾಗಿ ಕಾಲೇಜಿನ ಆಡಳಿತ ಮಂಡಳಿಯನ್ನು ಕಳಕಳಿಯಿಂದ ಬೇಡಿಕೊಳ್ಳುತ್ತಿದ್ದೇನೆ.ಮಂಜುನಾಥ್ ಶೆಟ್ಟಿ ರವರಿಗೆ ಧನ್ಯವಾದಗಳು Good Work Keep it up & God bless you: Old Students MGM College; Imran Manna , Sports Secretary, KMCA & EXCOM Tulu Koota Qatar. M. Iqbal Manna, Social Activist. Doha Qatar

ramesh, mysore
2010-03-12
ವಾರ್ತೆ:ಉಡುಪಿ: ರೈಲು ಸೇವೆ: ಮಾತು ತಪ್ಪಿದ ಸಚಿವ ಮುನಿಯಪ್ಪರಿಗೆ ನೋಟಿಸ್
ಸಾಮಾಜಿಕ ಕಾಳಜಿ ಈ ರೀತಿಯಲ್ಲಿ ವ್ಯಕ್ತಪಸಬೇಕಷ್ಟೇ, ರಾಜಕಾರಣಿಗಳು ಯಾವಾಗಲೂ ಸುಳ್ಳು ಭರವಸೆಗಳನ್ನು ಕೊಡುವುದರಲ್ಲಿ ಸಿದ್ದಹಸ್ತರು, ಕರ್ನಾಟಕದ ಪಾಲಿಗೆ ಕೇವಲ ಭರವಸೆಗಳಿಂದ ಕಾಯ್ದು ಕುಳಿತಿರಬೇಕು, ಕನ್ನಡಿಗರು ಈಗಲಾದರು ಎಚ್ಚೆತ್ತರೆ ಮಾತ್ರ ಕನ್ನಡಿಗರಿಗೆ ಕರ್ನಾಟಕಕ್ಕೆ ಉಳಿಗಾಲ, ಈ ವಿಚಾರಕ್ಕೆ ಒಕ್ಕೊರಲಿನ ಹೋರಾಟ ಅನಿವಾರ್ಯ.

ಪ.ರಾಮಚಂದ್ರ , ರಾಸ್ ಲಫ್ಫಾನ್, ಕತಾರ್
2010-03-10
ವಾರ್ತೆ:ಉಡುಪಿ: ರೈಲು ಸೇವೆ: ಮಾತು ತಪ್ಪಿದ ಸಚಿವ ಮುನಿಯಪ್ಪರಿಗೆ ನೋಟಿಸ್
ಸಂಸತ್ ಸದಸ್ಯರಾಗಿ, ಜನರ ಹಿತಾಸಕ್ತಿಗಾಗಿ ದುಡಿಯುವ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಕರ್ನಾಟಕ ರಾಜ್ಯದ ಜನತೆಯ ಪ್ರತಿನಿಧಿ, ಮಂತ್ರಿ ಮಂಡಲದಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಹಾಯಕ ರೈಲ್ವೆ ಸಚಿವ ಕೆ.ಎಚ್.ಮುನಿಯಪ್ಪ ಅವರ ಸಾಂವಿಧಾನಿಕ ಜವಾಬ್ದಾರಿಯನ್ನು ಸಾರ್ವಜನಿಕರ ಪರವಾಗಿ ನೋಟಿಸು ಜಾರಿಗೊಳಿಸಿ ನೆನಪು ಮಾಡಿಸಿದ ಕರಾವಳಿ ಕರ್ನಾಟಕದ ಹಿರಿಯ ನ್ಯಾಯವಾದಿ ಬೆನೆಡಿಕ್ಟ್ ನೊರೊನ್ಹ ಅವರಿಗೆ ವಂದನೆಗಳು.

hassanmukka, mangalore/ksa
2010-03-10
ವಾರ್ತೆ:ತಲಪಾಡಿಯಲ್ಲಿ ಪೊಲೀಸ್‌ ಲಾಠಿ ಚಾರ್ಚ್: ರಮಾನಾಥ ರೈ ಭೇಟಿ
visiting the victims is ok.but they have to get justice and help.Is it guaranteed? both should get benefitted.victims justice and politicians (political)mileage!

ಸಂತೋಷ್ , ಮಂಗಳೂರು
2010-03-10
ವಾರ್ತೆ:ಉಡುಪಿ: ಹಿಂದೂ ಯುವತಿಯನ್ನು ಮದುವೆಯಾದ ಕುಟು೦ಬಕ್ಕೆ ಚರ್ಚ್‍ನಿ೦ದ ಬಹಿಷ್ಕಾರ !
ಓ ಸರ್ವಶಕ್ತನಾದ ದೇವರೆ, ಅವರು ಮಾಡಿದ ತಪ್ಪನ್ನು ಕ್ಷಮಿಸಿ, ಅವರು ಏನು ಮಾಡುತಿದ್ದಾರೆಂದು ಅವರಿಗೆ ತಿಳಿಯದು, ಅವರಿಗೆ ಜ್ಞಾನ, ಸದ್ಬುದ್ದಿಯನ್ನು ಕೊಟ್ಟು ನಂಬಿದವರನ್ನು ಕೈಬಿಡದಂತೆ ನೋಡುವ ಶಕ್ತಿಯನ್ನು ಕೊಡಿ.

ರೋಶನ್, ಮಂಗಳೂರು
2010-03-10
ವಾರ್ತೆ:ಉಡುಪಿ: ರೈಲು ಸೇವೆ: ಮಾತು ತಪ್ಪಿದ ಸಚಿವ ಮುನಿಯಪ್ಪರಿಗೆ ನೋಟಿಸ್
ಶಹಬಾಸ್ ಬೆನೆಡಿಕ್ಟ್ ನೊರ‍ೊನ್ಹಾ ರವರೇ, ರೈಲ್ ಬಿಡುವ ರೈಲ್ವೆ ಸಚಿವರಿಗೆ ನೋಟಿಸ್ ಬಿಟ್ಟಿದ್ರಿ. ಸಚಿವರು ಇನ್ನಾದರೂ ರೈಲ್ ಬಿಡೋದು ಬಿಟ್ಟು ಪ್ರಯಾಣಿಕರ ಬೇಡಿಕೆ ಈಡೆರಿಸುವರೆ?

ಶ್ರೀನಿವಾಸ್, ಉಡುಪಿ
2010-03-10
ವಾರ್ತೆ:ಉಡುಪಿ ಕೃಷ್ಣ ಮಠದ ಊಟಕ್ಕೂ ಈಗ ಡ್ರೆಸ್‌ ಕೋಡ್‌?
ಶ್ರೀಕೃಷ್ಣ ಪರಮಾತ್ಮ ರುಕ್ಮಿಣಿ ಸತ್ಯಭಾಮೆಯೊಂದಿಗೆ ಊಟಕ್ಕೆ ಬಂದರೆ ಯಾವ ಡ್ರೆಸ್ ಕೋಡ್, ನಿಯಮದಂತೆ ಡ್ರೆಸ್ ಇಲ್ಲದಿದ್ದರೆ ಹೊಟ್ಟೆಗೆ ತಣ್ಣಿರುಬಟ್ಟೆ ಹಾಕಿಕೊಂಡು ವಾಪಸ್ಸಾ....

ಗಣೇಶ ರೈ , ಕೊಡಗು ಶಾರ್ಜಾ
2010-03-10
ವಾರ್ತೆ:ಮ೦ಗಳೂರು: `ಕೊ೦ಕಣ್ ಕೊಗುಲ್' ಎ೦ದೇ ಜನಪ್ರೀಯರಾಗಿದ್ದ ಗಾಯಕ ವಿಲ್ಫಿ ರೆಬಿ೦ಬಸ್ (67) ಇನ್ನಿಲ್ಲ
ಕೊಂಕಣಿ ತುಳು ಭಾಷೆಯನ್ನು ಜನ್ಮಭೂಮಿಯಿಂದ ವಿಶ್ವದಾದಂತ್ಯ ತನ್ನ ಸುಮಧುರ ಕಂಠಶ್ರೀಯಿಂದ ಸಂಗೀತದ ಸೇವೆಯನ್ನು ಮಾಡಿದ ಕೊಂಕಣ್ ಕೊಗಿಲೆಯ ಭೌತಿಕ ದೇಹ ಮರೆಯಾದರೂ, ಧ್ವನಿಸುರುಳಿಯ ಮೂಲಕ ತನ್ನ ಗುರುತನ್ನು ಬಿಟ್ಟು ಹೋಗಿದ್ದು ಜನಮಾನಸದಲ್ಲಿ ಮರೆಯದೆ ಉಳಿಯುವ ವಿಲ್ಫಿ ರೆಮಿಂಬಸ್ ರವರಿಗೆ ಸಮಸ್ತ ಕಲಾಭಿಮಾನಿಗಳ ಪರವಾಗಿ ಗೌರವ ಪೂರ್ವಕ ಅಂತಿಮ ನಮನಗಳು.

Satish Edneer, Edneer, Kasaragod / Bahrain
2010-03-09
ವಾರ್ತೆ:ಮ೦ಗಳೂರು: `ಕೊ೦ಕಣ್ ಕೊಗುಲ್' ಎ೦ದೇ ಜನಪ್ರೀಯರಾಗಿದ್ದ ಗಾಯಕ ವಿಲ್ಫಿ ರೆಬಿ೦ಬಸ್ (67) ಇನ್ನಿಲ್ಲ
May the soul rest in peace.

dhanajaya gurpur, manglore
2010-03-09
ವಾರ್ತೆ:ಕಾರ್ಕಳದ ವಿವಾಹಿತೆ ತನುಜಾ ಭಂಡಾರಿ ಆತ್ಮಹತ್ಯೆಗೆ ಶರುಣು?... ಇದು ನಿಯೋಜಿತ ಕೊಲೆ ಪ್ರಕರಣ: ತನುಜಾ ಕುಟುಂಬಸ್ಥರು
well, it is more or less good story. keep light on same news.

riyaz, qatar
2010-03-09
ವಾರ್ತೆ:ಉಡುಪಿ: ಆಶಾ ಕಾರ್ಯಕರ್ತರಿಗೆ ಸರಕಾರದಿಂದ ವಂಚನೆ: ಸಂಘದ ರಾಜ್ಯ ಉಪಾಧ್ಯಕ್ಷೆ ಆರೋಪ
BAD Politics is the cancer of our CULTURE

ಬದ್ರುದ್ದೀನ್ ಹೆಂತಾರ್, ದುಬೈ
2010-03-07
ವಾರ್ತೆ:ಕಾಸರಗೋಡು; ಮದುವೆ ಮು೦ಚೆ ಜನಿಸಿದ ಶಿಶು ಹತ್ಯೆ: ತಾಯಿ ಮಗಳಿಬ್ಬರ ಬಂಧನ
ಯಾವುದೋ ವಿಷಯವನ್ನು ಎಲ್ಲೋ ತಂದು ಏನೋ ಮಹಾ ಸಾಧನೆ ನಡೆಸಿದವನಂತೆ ವರ್ತಿಸುವುದು ಮಾನವನ ಸಹಜ ಗುಣ.ಅದಕ್ಕೆ ಭೇಷ್ ಅಂತ ಚಪ್ಪಾಳೆ ತಟ್ಟುವುದು ಮೂರ್ಖತನದ ಪರಮಾವಧಿ.ಬುರ್ಖಾ ವಿಶಯದಲ್ಲಿ ಚರ್ಚೆ ನಡೆದದ್ದು ನಿಜ ಆದರೆ ವೇಶ್ಯಾ ವೃತ್ತಿಯ ಬಗ್ಗೆ ಚರ್ಚೆ ನಡೆದೇ ಇಲ್ಲ.ಪ್ರತಿಕ್ರಿಯೆ ನೀಡುವವರು ಮೊದಲು ಪ್ರಕರಣವನ್ನು ಚೆನ್ನಾಗಿ ಓದಿ ಆ ಬಳಿಕ ಒಂದು ತೀರ್ಮಾನಕ್ಕೆ ಬರುವುದು ಒಳಿತು.ಬುರ್ಖಾ ಅಂದು,ಇಂದು ಇನ್ನು ಮುಂದೆಯೂ ಕೂಡಾ ಅತ್ಯಾಚಾರದಿಂದ ರಕ್ಷಿಸುವ ಕವಚ ಎನ್ನುವುದರಲ್ಲಿ ಎರಡು ಮಾತಿಲ್ಲ.ಮೇಲಿನ ಪ್ರಕರಣದಲ್ಲಿ ಅತ್ಯಾಚಾರ ನಡೆದಿಲ್ಲ.ತಾಯಿಯಾದವಳು ಮನೆಯ ಬಾಗಿಲು ತೆರೆದುಕೊಟ್ಟಿದ್ದಾಳೆ.ಮಗಳು ಮಲಗುವ ಕೋಣೆಯ ಬಾಗಿಲು ಮುಚ್ಹಿದ್ದಾಳೆ. ಯಾವನೋ ಫಟಿಂಗ ತಾಯಿಯ ಕೈಯಲ್ಲಿ ಹಣ ಮಗಳ ಮಡಿಲಿಗೆ ಮಲ್ಲಿಗೆ ಎಸೆದು ತನ್ನ ಕೆಲಸ ಸಲೀಸಾಗಿ ಮಾಡಿದ್ದಾನೆ.ಇಲ್ಲಿ ಒಂದು ವ್ಯವಹಾರ ನಡೆದದ್ದು ನಿಜ ಅದು ಎರಡು ಪಂಗಡಗಳ ಅನುಮತಿಯಿಂದ.ಇದು ಪ್ರಪಂಚದಲ್ಲಿ ಸರ್ವ ಸಾಮಾನ್ಯ. ಇಲ್ಲಿ ಬುರ್ಕಾಕ್ಕೆ ಯಾವುದೇ ಪ್ರಾಶಸ್ತ್ಯವಿಲ್ಲ.ಮುಖ್ಯವಾಗಿ ಮುಸ್ಲಿಂ ಮಹಿಳೆಯರು ಮನೆಯ ಒಳಗೆ ಬುರ್ಕಾ ಹಾಕುವ ಸಂಪ್ರದಾಯವಿಲ್ಲ.ಇನ್ನು ಬುರ್ಕಾವನ್ನೇ ತರಾಟೆಗೆ ತೆಗೆದುಕೊಳ್ಳುವುದಾದಲ್ಲಿ ಪವಿತ್ರವಾದ ಕಾವಿ ವಸ್ತ್ರವನ್ನು ಕೂಡಾ ತರಾಟೆಗೆ ತೆಗೆದುಕೊಳ್ಳಲೇ ಬೇಕು.ನಿತ್ಯಾನಂದ ಸ್ವಾಮಿ ಮತ್ತು ಅವನಂತ ಹಲವು ವಂಚಕ ಸ್ವಾಮಿಯವರ ಮೈಮೇಲೆ ಇರುವ ಕಾವಿ ಹಾಗೂ ಅತ್ಯಂತ ಉತ್ತಮವಾದ ಹಾಗೂ ಶಾಂತಿಪ್ರಿಯರಾದ ಸ್ವಾಮಿಗಳ ಮೈಮೇಲೆ ಇರುವ ಕಾವಿ ಬಟ್ಟೆಗೆ ಯಾವುದೇ ವೆತ್ಯಾಸವಿಲ್ಲ.ಅತ್ಯಾಚಾರ ಮಾಡುವಾಗಲೂ ನಿತ್ಯಾನಂದನ ಮೈಮೇಲೆ ಆ ಬಟ್ಟೆ ಇತ್ತು.ಬಟ್ಟೆ ಪವಿತ್ರವಾದದ್ದೇ,ಆದರೆ ಉಪಯೋಗಿಸುವವನಿಂದ ಅದರ ಮಹತ್ವ ಜಗತ್ತಿಗೆ ಪರಿಚಯಯವಾಗುತ್ತದೆ. ಸಕ್ಕರೆ ಪಾತ್ರೆಯ ಬಾಯಿ ತೆರೆದಿಟ್ಟದ್ದು ಮಾತ್ರವಲ್ಲ ಅದನ್ನು ಇರುವೆಗಳೀಗೆ ಬಡಿಸಿದ್ದು ಮೇಲಿನ ಪ್ರಕರಣ ಸಾಬೀತು ಪಡಿಸಿದ್ದರಿಂದ ಇಲ್ಲಿ ಪ್ರತಿಯೊಬ್ಬರೂ ಪ್ರತಿಕ್ರಯಿಸಬೇಕಾದದ್ದು ಅಪರಾಧಿಗಳೀಗೆ ನೀಡಬೇಕಾದ ಕಠಿಣವಾದ ಶಿಕ್ಷೆಯ ಬಗ್ಗೆಯಾದರೆ ಸಮಂಜಸವೆನಿಸಬಹುದು.ಇಲ್ಲಿ ನಡೆದಿರುವ ವ್ಯಭಿಚಾರ, ತಾಯಿಯ ಪ್ರತ್ಯಕ್ಷ ಅನುಮತಿ, ಅಕ್ರಮ ಗರ್ಭಧಾರಣೆ, ವಿವಾಹದ ಸುಳ್ಳು ವಾಗ್ದಾನ, ಮುಗ್ಧ ಮಗುವಿನ ಕೊಲೆ, ಪ್ರಕರಣವನ್ನು ಮುಚ್ಚಿಟ್ಟ ಆರೋಪ ಹೀಗೆ ಹಲವು ಕೇಸುಗಳನ್ನು ಅಪರಾಧಿಗಳ ಮೇಲೆ ಹೊರಿಸಿ ಜೈಲಿಗೆ ತಳ್ಳಲು ಪೋಲೀಸರಲ್ಲಿ ಫಿರ್ಯಾದು ನೀಡ ಬೇಕೇ ವಿನಹ ಒಂದು ಧರ್ಮದ ಆಚರಣೆಯ ಬಗ್ಗೆ ಗೂಬೆ ಕೂರಿಸಿದರೆ ಸುಮ್ಮನೆ ಕೈಕಟ್ಟಿ ಕುಳಿತುಕೊಳ್ಳಲು ಸಾದ್ಯವಿಲ್ಲ.ದಿನಪತ್ರಿಕೆಯಲ್ಲಿ ದಿನಾಲೂ ಬರುವ ಕಾಣೆಯಾಗಿದ್ದಾರೆ ಎಂಬ ವಿವರವನ್ನು ಕೂಡಾ ಓದಿ ಆ ಪ್ರಕರಣಕ್ಕೂ ಮೇಲಿನ ಪ್ರಕರಣಕ್ಕೂ ಇರುವ ಸಂಬಂದವನ್ನು ಮನದಟ್ಟು ಮಾಡಿ ಒಂದು ತೀರ್ಮಾನಕ್ಕೆ ಬರುವುದು ಒಳಿತು.

HASSANMUKKA, MANGALORE
2010-03-07
ವಾರ್ತೆ:ಕಾಸರಗೋಡು; ಮದುವೆ ಮು೦ಚೆ ಜನಿಸಿದ ಶಿಶು ಹತ್ಯೆ: ತಾಯಿ ಮಗಳಿಬ್ಬರ ಬಂಧನ
ಯಾವುದೆ ಪ್ರಕರಣಕ್ಕೆ ಕೊಮು ಬಣ್ಣ ಯಾಕೆ ಕೊಡುತೀರಿ. ತಪ್ಪು ಯಾರು ಮಾದಿದರೂ ತಪ್ಪೆ.ಅದರಲ್ಲಿ ಬುರ್ಖದ ತಪ್ಪಿಲ್ಲ.ಆವರು ದರ್ಮ ಬುರ್ಖದಲ್ಲಲ್ಲ ಇರುವುದು.ದರ್ಮ ಅಂದರೆ ಜೀವನ ಶೈಲಿ. ಆವರ ಜೀವನ ಶೈಲಿ ಇಸ್ಲಾಮ್ನ ದಲ್ಲ.

ವಿಜಯ್ ಸುವರ್ಣ , ಕತಾರ್
2010-03-07
ವಾರ್ತೆ:ಸ್ವಾಮಿ ನಿತ್ಯಾನಂದನ ಕಾಮಲೀಲೆಗೆ ಬಿಡದಿಯ ಧ್ಯಾನಪೀಠದ ಕೊಠಡಿ!; ನಿತ್ಯಾನಂದನ ರಾಸಲೀಲೆ ಚಿತ್ರೀಕರಣ ಮಾಡಿದ್ದು ನಾನೇ: ಲೆನಿನ್
ಇಂತಹಾ ಸ್ವಾಮೀಜಿಗಳು ಇಂದು ನಮ್ಮಲ್ಲಿ ಗಲ್ಲಿಗಲ್ಲಿಗಳಲ್ಲೂ ಕಾಣಸಿಗುತ್ತಾರೆ. ಕೆಲವರು ಸ್ವಯಂ ಘೋಷಿತ ಸ್ವಾಮೀಜಿಗಳಾದರೆ ಕೆಲವರು ಸ್ವಯಂ ಘೋಷಿತ ಗುರೂಜಿಗಳು. ಈ ಸ್ವಾಮೀಜಿಗಳಾಗಲೀ, ಗುರೂಜಿಗಳಾಗಲೀ ಸಮಾಜದಲ್ಲಿ ಬಡ ಜನರು ಯಾ ಮಧ್ಯಮ ವರ್ಗದ ಜನರು ಜೀವಿಸುವಂತೆ ಜೀವಿಸುವ ಜೀವನ ಶೈಲಿಯನ್ನು ಅನುಸರಿಸುವುದನ್ನು ನಾವ್ಯಾರೂ ಎಲ್ಲಿಯೂ ಕಂಡದ್ದಿಲ್ಲ. ಸಾಮಾನ್ಯವಾಗಿ ಇಂತಹಾ ನಾಮಧೇಯವನ್ನು ಅಲಂಕರಿಸಿದ ಪ್ರತಿಯೊಬ್ಬ ಸ್ವಾಮೀಜಿ / ಗುರೂಜಿಗಳೂ ಶ್ರೀಮಂತ ಜೀವನ ಪದ್ದತಿಯನ್ನು ರೂಢಿಸಿಕೊಂಡು ಜೀವನ ಸಾಗಿಸುವವರೇ ಆಗಿರುವುದು ನಮ್ಮ ಗಮನಕ್ಕೆ ಬರುತ್ತದೆ. ತನ್ನ ಇಡೀ ವಂಶದಲ್ಲಿ ಯಾವುದೇ ರೀತಿಯ ಆಸ್ತಿ ಪಾಸ್ತಿಗಳು ಅಥವಾ ಸುಧ್ರಡವೆನಿಸುವ ಆರ್ಥಿಕ ವ್ಯವಸ್ಥೆಯೇ ಇಲ್ಲದಿರುವ ವ್ಯಕ್ತಿಯೊಬ್ಬ ಕವಡೆ ಹಾಕಲು ಕುಳಿತ ಅಥವಾ ಸ್ವಾಮೀಜಿ ಎಂದು ಘೋಷಿಸಿಕೊಂಡ ಕೆಲವೇ ಸಮಯದಲ್ಲಿ ಕಾರು, ಬಂಗಲೆ ಮತ್ತು ಇತರ ಐಷಾರಾಮೀ ವಸ್ತುಗಳ ಒಡೆಯನಾಗುತ್ತಾನೆ. ಹೇಗೆ??? ಯಾರು ಇಂತವರನ್ನು ಪೋಷಿಸುವವರು? ಉತ್ತರ... ನಾವೇ...ಸಾಮಾನ್ಯ ಜನರು....!! ಇಂದಿನ ದಿನಗಳಲ್ಲಿ ದಿಡೀರ್ ಶ್ರೀಮಂತನಾಗಲು ಇದಕ್ಕಿಂತ ಬೇರೆ ಮಾರ್ಗ ಖಂಡಿತಾ ಇಲ್ಲ. ಚುರುಕಾದ ನಾಲಿಗೆ ಹೊಂದಿದ್ದು, ಮಾತಾಡುವ ಕಲೆ ಚೆನ್ನಾಗಿ ತಿಳಿದಿದ್ದು ಸುಲಭವಾಗಿ ಜನರನ್ನು ಮಂಕು ಮಾಡಲು ಗೊತ್ತಿದ್ದರೆ ಇಂದು ಈ ಮಾರ್ಗವೇ ಹಣ ಮಾಡಲು ಸುಲಭ ಮಾರ್ಗವೆಂದು ಇಂತಹಾ ಕೆಲವು ಮಂದಿ ಈ ಮಾರ್ಗವನ್ನು ಅನುಸರಿಸಿ ಆಗರ್ಭ ಶ್ರೀಮಂತರಾಗಿ ಸಹಜವಾಗಿಯೇ ಶ್ರೀಮಂತ ರಲ್ಲಿರುವ ಪ್ರತಿಯೊಂದು ಸುಗುಣಗಳೂ ಇವರಲ್ಲಿ ಅಡಕವಾಗುತ್ತದೆ. ಇವರಿಗೆ ರಂಭೆ ಅಪ್ಸರೆಯರ ಅವಶ್ಯಕತೆಗಳೂ ಬೇಕು, ಮದಿರಾ ಮಂದರೆಯರೂ ಬೇಕು... ಅದರೊಂದಿಗೆ ಅವರ ಮಾರ್ಗಕ್ಕೆ ಅಡ್ಡ ಬರುವರನ್ನು ಇತಿಶ್ರೀ ಮಾಡುವ ಕಲೆಯನ್ನೂ ಇವರು ಕರಗತ ಮಾಡಿಕೊಂಡಿರುತ್ತಾರೆ. ಇಂದು ನಮ್ಮ ಮದ್ಯೆದಲ್ಲಿಯೇ ಇರುವ ಸ್ವಘೋಷಿತ ಸ್ವಾಮೀಜಿಗಳ ಮತ್ತು ಗುರೂಜಿಗಳ ಗತ ಜೀವನವನ್ನು ಸ್ವಲ್ಪ ಅಗೆದರೆ ಏನೇನೋ ಕೊಳೆತವಾಸನೆಗಳೇ ಹರಡಿಬರಬಹುದಲ್ಲದೆ ಕಿಂಚಿತ್ ಸುವಾಹನೆ ಅಲ್ಲಿ ಖಂಡಿತಾ ಮೂಗಿಗೆ ಬಡಿಯಲಾದರು. ಇಂತವರ ಏಳಿಗೆಗಾಗಿ ಮಂತ್ರಿಮಾಗದರು, ಚಿತ್ರತಾರೆಯರಿಂದ ಹಿಡಿದು ಶ್ರೀಮಂತ ವರ್ಗವೇ ಸಾಲುಗಟ್ಟಿ ನಿಂತಿರುತ್ತಾರೆ. ವಿಪರ್ಯಾಸವೆಂದರೆ ವಿದ್ಯಾವಂತ ಜನರೇ ಇಂತವರ ಪೋಷಕರಾಗಿರುವುದು!!! ಎಲ್ಲಿಯ ತನಕ ಸುಲಭದಲ್ಲಿ ಮೂರ್ಖರಾಗುವ ಮಂದಿ ನಮ್ಮಲ್ಲಿರುತ್ತಾರೋ... ಮೂರ್ಖರನ್ನಾಗಿಸುವ ಮಂದಿಗಳಿಗೆ ಕೂಡಾ ನಮ್ಮಲ್ಲಿ ಕೊರತೆಯಿರುವುದಿಲ್ಲ. ಬ್ರಹ್ಮ ನಮ್ಮ ಹಣೆಯಲ್ಲಿ ಒಮ್ಮೆ ಬರೆದಾದ ನಂತರ ಯಾವ ಸ್ವಾಮಿಯಾಗಲೀ ಯಾವ ಗುರೂಜಿಯಾಗಲೀ ಆ ಬರಹವನ್ನು ತಿದ್ದಿ ಬರೆಯಲಾಗುವುದಿಲ್ಲ. ನಮ್ಮ ಹಣೆಬರಹವಿರುವುದೇ ನಮ್ಮ ಕೈಯಲ್ಲಿ...ನಾವು ಮಾಡುವ ಕರ್ಮಧರ್ಮಗಳೇ ನಮ್ಮ ಹಣೆಯ ಬರಹ!! ಸ್ವಚಿಂತನೆಗಳಿಂದ, ಸತ್ಕಾರ್ಯ ಸತ್ಕರ್ಮಗಳಿಂದ ನಮ್ಮನ್ನು ನಾವು ಸರಿಯಾದ ಮಾರ್ಗಗಳಿಗೆ ಕೊಂಡುಹೋಗ ಬಹುದಲ್ಲದೆ ಅನ್ಯಮಾರ್ಗ ಇದಕ್ಕೆ ಖಂಡಿತಾ ಇಲ್ಲ. ನಾನು ಕಂಡಂತೆ ಇಂತಹಾ ಸ್ವಾಮಿ ಗುರೂಜಿಗಳನ್ನು ಅನುಸರಿಸುವುದು ಹಿಂದೂ ಧರ್ಮದವರು ಮಾತ್ರವಲ್ಲ... ಇತರ ಎಲ್ಲಾ ಧರ್ಮದವರೂ ಇಂತಹಾ ಡೋಂಗಿ ಗಳ ಪೋಷಣೆಗೆ ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ಕಾರಣರಾಗಿರುವುದು ಎಲ್ಲೆಡೆಯಲ್ಲೂ ಕಂಡುಬರುತ್ತದೆ. ಇಂತಹಾ ಗೋಮುಖವ್ಯಾಘ್ರರನ್ನು ಪೋಷಿಸಿ ಸಮಾಜದ ಸರ್ವನಾಶ ವಾಗುವ ಮೊದಲು ಎಚ್ಚೆತ್ತು ಕೊಳ್ಳುವುದು ಉತ್ತಮ.


 

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri